ETV Bharat / state

ಅನಧಿಕೃತ ಒಎಫ್​ಸಿ ಕೇಬಲ್​ಗಳನ್ನು ತೆರವು ಮಾಡುತ್ತಾ ಬಿಬಿಎಂಪಿ?

author img

By

Published : Sep 28, 2019, 5:46 PM IST

ನಗರದ ಫುಟ್​​ಪಾತ್ ಹಾಗೂ ಮರಗಳ ಮೇಲೆ ಅಪಾಯಕಾರಿ ರೀತಿಯಲ್ಲಿ ಜೋತು ಬಿದ್ದಿರುವ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್​ಸಿ) ಗಳನ್ನು ತೆರವು ಮಾಡಲಾಗುತ್ತಿದೆ ಎಂದು ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

ಓಎಫ್​ಸಿ ಕೇಬಲ್​

ಬೆಂಗಳೂರು: ಅನಧಿಕೃತ ಒಎಫ್​ಸಿ ಕೇಬಲ್​ಗಳ ಸಮಸ್ಯೆ ಮಿತಿಮೀರುತ್ತಿದ್ದರೂ ಪಾಲಿಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಟ್ವೀಟ್ ಮಾಡಿದ್ದು, ನಿಜಕ್ಕೂ ಒಎಫ್​ಸಿ ಕಿರಿಕಿರಿಯಿಂದ ಸಿಲಿಕಾನ್ ಸಿಟಿ ಪಾದಾಚಾರಿಗಳಿಗೆ ಮುಕ್ತಿ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಮರದಲ್ಲಿ ಜೋತಾಡುತ್ತಿರುವ ಒಎಫ್​ಸಿ ಕೇಬಲ್​ ವೈರ್​ಗಳು

ನಗರದ ಫುಟ್​​ಪಾತ್ ಹಾಗೂ ಮರಗಳ ಮೇಲೆ ಅಪಾಯಕಾರಿ ರೀತಿಯಲ್ಲಿ ಜೋತು ಬಿದ್ದಿರುವ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್​​ಸಿ)ಗಳನ್ನು ತೆರವು ಮಾಡಲಾಗುತ್ತಿದೆ ಎಂದು ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

ವಿವಿಧ ರೀತಿಯ ಅಂತರ್ಜಾಲ ಸೇವೆ, ದೂರವಾಣಿ ಸಂಪರ್ಕಗಳನ್ನು ನೀಡುವ ಕೇಬಲ್​ಗಳನ್ನು ಕಾನೂನು ಬಾಹಿರವಾಗಿ ನಗರಗಳಲ್ಲಿ ಅಳವಡಿಸಲಾಗಿದೆ. ನೆಲದಡಿಯಲ್ಲಿ ಕಾನೂನು ರೀತಿಯಲ್ಲಿ ಅಳವಡಿಸಬೇಕಾದ ಕೇಬಲ್​ಗಳನ್ನು ಜನರ, ವಾಹನ ಸವಾರರ ಪ್ರಾಣಕ್ಕೆ ಕುತ್ತು ಬರುವ ರೀತಿ ಅಳವಡಿಸಿರುತ್ತಾರೆ. ರಸ್ತೆಗಳು, ಮರಗಳ ಮೇಲೆ ಕೇಬಲ್​​ಗಳು ಜೋತು ಬಿದ್ದಿವೆ. ಎಷ್ಟೋ ಸಾರಿ ಬೈಕ್ ಸವಾರರ ಮೇಲೆ ಬಿದ್ದು ಪ್ರಾಣಕ್ಕೆ ಕುತ್ತು ಬಂದಿರುವ ಉದಾಹರಣೆಗಳೂ ಇವೆ. ಇಷ್ಟಾದರೂ ಅನಧಿಕೃತ ಕೇಬಲ್​​ಗಳನ್ನು ತೆಗೆಯಲು ಬಿಬಿಎಂಪಿ ವಿಫಲವಾಗಿತ್ತು. ಇದೀಗ ನೂತನ ಆಯುಕ್ತರು ಟ್ವೀಟ್ ಮಾಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿದ್ದ ಅಪಾಯಕಾರಿ ಮತ್ತು ಅನಧಿಕೃತ ಒಎಫ್​ಸಿ ಕೇಬಲ್​​ಗಳನ್ನು ತೆರವುಗೊಳಿಸಲಾಗಿದೆ.

ವಿಶೇಷ ಕಾರ್ಯಾಚರಣೆ ಸೆಪ್ಟೆಂಬರ್ ಕೊನೆಯವರೆಗೂ ನಡೆಯಲಿದೆ. ಮಹದೇವಪುರ ಹಾಗೂ ಯಲಹಂಕ ವಲಯಗಳಿಗೆ ಈ ಕಾರ್ಯಾಚರಣೆಯನ್ನು ಅಕ್ಟೋಬರ್​ವರೆಗೆ ವಿಸ್ತರಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು: ಅನಧಿಕೃತ ಒಎಫ್​ಸಿ ಕೇಬಲ್​ಗಳ ಸಮಸ್ಯೆ ಮಿತಿಮೀರುತ್ತಿದ್ದರೂ ಪಾಲಿಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಟ್ವೀಟ್ ಮಾಡಿದ್ದು, ನಿಜಕ್ಕೂ ಒಎಫ್​ಸಿ ಕಿರಿಕಿರಿಯಿಂದ ಸಿಲಿಕಾನ್ ಸಿಟಿ ಪಾದಾಚಾರಿಗಳಿಗೆ ಮುಕ್ತಿ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಮರದಲ್ಲಿ ಜೋತಾಡುತ್ತಿರುವ ಒಎಫ್​ಸಿ ಕೇಬಲ್​ ವೈರ್​ಗಳು

ನಗರದ ಫುಟ್​​ಪಾತ್ ಹಾಗೂ ಮರಗಳ ಮೇಲೆ ಅಪಾಯಕಾರಿ ರೀತಿಯಲ್ಲಿ ಜೋತು ಬಿದ್ದಿರುವ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್​​ಸಿ)ಗಳನ್ನು ತೆರವು ಮಾಡಲಾಗುತ್ತಿದೆ ಎಂದು ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

ವಿವಿಧ ರೀತಿಯ ಅಂತರ್ಜಾಲ ಸೇವೆ, ದೂರವಾಣಿ ಸಂಪರ್ಕಗಳನ್ನು ನೀಡುವ ಕೇಬಲ್​ಗಳನ್ನು ಕಾನೂನು ಬಾಹಿರವಾಗಿ ನಗರಗಳಲ್ಲಿ ಅಳವಡಿಸಲಾಗಿದೆ. ನೆಲದಡಿಯಲ್ಲಿ ಕಾನೂನು ರೀತಿಯಲ್ಲಿ ಅಳವಡಿಸಬೇಕಾದ ಕೇಬಲ್​ಗಳನ್ನು ಜನರ, ವಾಹನ ಸವಾರರ ಪ್ರಾಣಕ್ಕೆ ಕುತ್ತು ಬರುವ ರೀತಿ ಅಳವಡಿಸಿರುತ್ತಾರೆ. ರಸ್ತೆಗಳು, ಮರಗಳ ಮೇಲೆ ಕೇಬಲ್​​ಗಳು ಜೋತು ಬಿದ್ದಿವೆ. ಎಷ್ಟೋ ಸಾರಿ ಬೈಕ್ ಸವಾರರ ಮೇಲೆ ಬಿದ್ದು ಪ್ರಾಣಕ್ಕೆ ಕುತ್ತು ಬಂದಿರುವ ಉದಾಹರಣೆಗಳೂ ಇವೆ. ಇಷ್ಟಾದರೂ ಅನಧಿಕೃತ ಕೇಬಲ್​​ಗಳನ್ನು ತೆಗೆಯಲು ಬಿಬಿಎಂಪಿ ವಿಫಲವಾಗಿತ್ತು. ಇದೀಗ ನೂತನ ಆಯುಕ್ತರು ಟ್ವೀಟ್ ಮಾಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿದ್ದ ಅಪಾಯಕಾರಿ ಮತ್ತು ಅನಧಿಕೃತ ಒಎಫ್​ಸಿ ಕೇಬಲ್​​ಗಳನ್ನು ತೆರವುಗೊಳಿಸಲಾಗಿದೆ.

ವಿಶೇಷ ಕಾರ್ಯಾಚರಣೆ ಸೆಪ್ಟೆಂಬರ್ ಕೊನೆಯವರೆಗೂ ನಡೆಯಲಿದೆ. ಮಹದೇವಪುರ ಹಾಗೂ ಯಲಹಂಕ ವಲಯಗಳಿಗೆ ಈ ಕಾರ್ಯಾಚರಣೆಯನ್ನು ಅಕ್ಟೋಬರ್​ವರೆಗೆ ವಿಸ್ತರಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

Intro:ಅನಧಿಕೃತ ಓಎಫ್ ಸಿ ಕೇಬಲ್ ಗಳನ್ನು ತೆರವು ಮಾಡುತ್ತಾ ಬಿಬಿಎಂಪಿ??


ಬೆಂಗಳೂರು- ಅನಧಿಕೃತ ಓಎಫ್ ಸಿ ಕೇಬಲ್ ಗಳ ಸಮಸ್ಯೆ ಮಿತಿಮೀರುತ್ತಿದ್ದರೂ, ಪಾಲಿಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಟ್ವೀಟ್ ಮಾಡಿದ್ದು, ನಿಜಕ್ಕೂ ಓಎಫ್ ಸಿ ಕಿರಿಕಿರಿಯಿಂದ ಸಿಲಿಕಾನ್ ಸಿಟಿ ಪಾದಾಚಾರಿಗಳಿಗೆ ಮುಕ್ತಿ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ.
ನಗರದ ಫುಟ್ ಪಾತ್, ಮರಗಳ ಮೇಲೆ ಅಪಾಯಕಾರಿ ರೀತಿಯಲ್ಲಿ ಜೋತುಬಿದ್ದಿರುವ ಆಪ್ಟಿಕಲ್ ಫೈಬರ್ ಕೇಬಲ್ (ಓಎಫ್ ಸಿ) ಗಳನ್ನು ತೆರವು ಮಾಡಲಾಗುತ್ತಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.
ವಿವಿಧ ರೀತಿಯ ಅಂತರ್ಜಾಲ ಸೇವೆ, ದೂರವಾಣಿ ಸಂಪರ್ಕಗಳನ್ನು ನೀಡುವ ಕೇಬಲ್ ಗಳನ್ನು ಕಾನೂನುಬಾಹಿರವಾಗಿ ನಗರಗಳಲ್ಲಿ ಅಳವಡಿಸಲಾಗಿದೆ. ನೆಲದಡಿಯಲ್ಲಿ ಕಾನೂನು ರೀತಿಯಲ್ಲಿ ಅಳವಡಿಸಬೇಕಾದ ಕೇಬಲ್ ಗಳು ಜನರ , ವಾಹನ ಸವಾರರ ಪ್ರಾಣಕ್ಕೆ ಕುತ್ತು ಬರುವ ರೀತಿ ಅಳವಡಿಸಿರುತ್ತಾರೆ. ರಸ್ತೆಗಳು, ಮರಗಳ ಮೇಲೆ ಕೇಬಲ್ ಗಳು ಜೋತು ಬಿದ್ದಿವೆ. ಎಷ್ಟೋ ಸಾರಿ ಬೈಕ್ ಸವಾರರ ಮೇಲೆ ಬಿದ್ದು ಪ್ರಾಣಕ್ಕೆ ಕುತ್ತು ಬಂದಿರುವ ಉದಾಹರಣೆಯೂ ಇದೆ. ಇಷ್ಟಾದರೂ ಅನಧಿಕೃತ ಕೇಬಲ್ ಗಳನ್ನು ತೆಗೆಯಲು ಬಿಬಿಎಂಪಿ ವಿಫಲವಾಗಿತ್ತು. ಇದೀಗ ನೂತನ ಆಯುಕ್ತರು ಟ್ವೀಟ್ ಮಾಡಿದ್ದು ' ಪಾಲಿಕೆ ವ್ಯಾಪ್ತಿಯಲ್ಲಿದ್ದ ಅಪಾಯಕಾರಿ ಮತ್ತು ಅನಧಿಕೃತ ಓಎಫ್ ಸಿ ಕೇಬಲ್ ಗಳನ್ನು ತೆರವುಗೊಳಿಸಲಾಗಿದೆ.'
ವಿಶೇಷ ಕಾರ್ಯಾಚರಣೆ ಸೆಪ್ಟೆಂಬರ್ ಕೊನೆಯವರೆಗೂ ನಡೆಯಲಿದೆ. ಮಹದೇವಪುರ ಹಾಗೂ ಯಲಹಂಕ ವಲಯಗಳಿಗೆ ಈ ಕಾರ್ಯಾಚರಣೆಯನ್ನು ಅಕ್ಟೋಬರ್ ವರೆಗೆ ವಿಸ್ತರಿಸಲಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.


ಸೌಮ್ಯಶ್ರೀ
Kn_bng_01_commissioner_ofc_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.