ETV Bharat / state

ಬಸವನಗುಡಿ ಕಡ್ಲೆಕಾಯಿ ಪರಿಷೆಗೆ ಹರಿದು ಬಂದ ಜನಸಾಗರ - ದೊಡ್ಡ ಬಸವನ ದರ್ಶನ ಪಡೆದು ಕಡಲೆಕಾಯಿ ತಿಂದು

ಮೂರು ದಿನಗಳಿಂದ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡ್ಲೆಕಾಯಿ ಪರಿಷೆಗೆ ಇಂದು ಅಧಿಕೃತವಾಗಿ ತೆರೆ ಬಿದ್ದಿದ್ದು, ಕಾರ್ತಿಕ ಮಾಸದ ಕಡೆಯ ಸೋಮವಾರ ಪ್ರತಿ ವರ್ಷ ನಡೆಯುವ ಕಡ್ಲೆಕಾಯಿ ಪರಿಷೆಗೆ ಈ ಬಾರಿಯೂ ಜನಸಾಗರವೇ ಹರಿದುಬಂದಿದೆ.

kn_bng_04_kadalekayiparishe_end_video_ka10018
ಬಸವನಗುಡಿ ಕಡಲೆಕಾಯಿ ಪರಿಷೆ ನೋಡ ಬನ್ನಿ ಬಲು ಚೆಂದ....
author img

By

Published : Nov 26, 2019, 11:00 PM IST

ಬೆಂಗಳೂರು: ಮೂರು ದಿನಗಳಿಂದ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡ್ಲೆಕಾಯಿ ಪರಿಷೆಗೆ ಇಂದು ಅಧಿಕೃತವಾಗಿ ತೆರೆ ಬಿದ್ದಿದ್ದು, ಕಾರ್ತಿಕ ಮಾಸದ ಕಡೆಯ ಸೋಮವಾರ ಪ್ರತಿ ವರ್ಷ ನಡೆಯುವ ಕಡ್ಲೆಕಾಯಿ ಪರಿಷೆಗೆ ಈ ಬಾರಿಯೂ ಜನಸಾಗರವೇ ಹರಿದುಬಂದಿದೆ.

ಬಸವನಗುಡಿ ಕಡಲೆಕಾಯಿ ಪರಿಷೆ

ಪ್ರತಿ ವರ್ಷದಂತೆ ಈ ಬಾರಿಯೂ ಬಸವನಗುಡಿ ಕಡ್ಲೆಕಾಯಿ ಪರಿಷೆ ಅದ್ಧೂರಿಯಾಗಿ ನಡೆದಿದ್ದು, ಬಸವನ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಸವನಗುಡಿಯ ರಸ್ತೆಯ ಇಕ್ಕೆಲಗಳಲ್ಲಿ ಕಡ್ಲೆಕಾಯಿ ರಾಶಿ ಒಂದು ಕಡೆಯಾದರೆ, ಜಾತ್ರೆಯ ಸಂಭ್ರಮ ಮತ್ತೊಂದು ಕಡೆ. ಎರಡು ದಿನಗಳಿಂದ ನಡೆಯುತ್ತಿರುವ ಕಡ್ಲೆಕಾಯಿ ಪರಿಷೆಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ, ದೊಡ್ಡ ಬಸವನ ದರ್ಶನ ಪಡೆದು ಕಡ್ಲೆಕಾಯಿ ತಿಂದು ಮನೆಯತ್ತ ಹೆಜ್ಜೆ ಹಾಕಿದರು.

ಒಂದು ಸೇರು ಕಡ್ಲೆಕಾಯಿಯನ್ನು 20ರಿಂದ 40 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನು ಬೇಯಿಸಿದ ಕಡ್ಲೆಕಾಯಿಗೆ ಐವತ್ತು ರೂಪಾಯಿ ನಿಗದಿಪಡಿಸಲಾಗಿತ್ತು. ಕಡ್ಲೆಕಾಯಿಯನ್ನು ಮಾತ್ರ ಒಂದು ವಾರದ ತನಕ ಮಾರಾಟ ಮಾಡಲಾಗುತ್ತದೆ ಎಂದು ವರ್ತಕರು ತಿಳಿಸಿದ್ದಾರೆ.

ಬೆಂಗಳೂರು: ಮೂರು ದಿನಗಳಿಂದ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡ್ಲೆಕಾಯಿ ಪರಿಷೆಗೆ ಇಂದು ಅಧಿಕೃತವಾಗಿ ತೆರೆ ಬಿದ್ದಿದ್ದು, ಕಾರ್ತಿಕ ಮಾಸದ ಕಡೆಯ ಸೋಮವಾರ ಪ್ರತಿ ವರ್ಷ ನಡೆಯುವ ಕಡ್ಲೆಕಾಯಿ ಪರಿಷೆಗೆ ಈ ಬಾರಿಯೂ ಜನಸಾಗರವೇ ಹರಿದುಬಂದಿದೆ.

ಬಸವನಗುಡಿ ಕಡಲೆಕಾಯಿ ಪರಿಷೆ

ಪ್ರತಿ ವರ್ಷದಂತೆ ಈ ಬಾರಿಯೂ ಬಸವನಗುಡಿ ಕಡ್ಲೆಕಾಯಿ ಪರಿಷೆ ಅದ್ಧೂರಿಯಾಗಿ ನಡೆದಿದ್ದು, ಬಸವನ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಸವನಗುಡಿಯ ರಸ್ತೆಯ ಇಕ್ಕೆಲಗಳಲ್ಲಿ ಕಡ್ಲೆಕಾಯಿ ರಾಶಿ ಒಂದು ಕಡೆಯಾದರೆ, ಜಾತ್ರೆಯ ಸಂಭ್ರಮ ಮತ್ತೊಂದು ಕಡೆ. ಎರಡು ದಿನಗಳಿಂದ ನಡೆಯುತ್ತಿರುವ ಕಡ್ಲೆಕಾಯಿ ಪರಿಷೆಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ, ದೊಡ್ಡ ಬಸವನ ದರ್ಶನ ಪಡೆದು ಕಡ್ಲೆಕಾಯಿ ತಿಂದು ಮನೆಯತ್ತ ಹೆಜ್ಜೆ ಹಾಕಿದರು.

ಒಂದು ಸೇರು ಕಡ್ಲೆಕಾಯಿಯನ್ನು 20ರಿಂದ 40 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನು ಬೇಯಿಸಿದ ಕಡ್ಲೆಕಾಯಿಗೆ ಐವತ್ತು ರೂಪಾಯಿ ನಿಗದಿಪಡಿಸಲಾಗಿತ್ತು. ಕಡ್ಲೆಕಾಯಿಯನ್ನು ಮಾತ್ರ ಒಂದು ವಾರದ ತನಕ ಮಾರಾಟ ಮಾಡಲಾಗುತ್ತದೆ ಎಂದು ವರ್ತಕರು ತಿಳಿಸಿದ್ದಾರೆ.

Intro:


Body:ಮೂರು ದಿನಗಳಿಂದ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆಗೆ ಇಂದು ಅಧಿಕೃತವಾಗಿ ತೆರೆ ಬಿದ್ದಿದೆ.

ಜನಮರುಳೋ ಜಾತ್ರೆ ಮರುಳೋ ಎಂಬಂತಿತ್ತು ಬಸವನಗುಡಿಯ ಕಡಲೆಕಾಯಿ ಪರಿಷೆ. ಕಾರ್ತಿಕ ಮಾಸದ ಕಡೆಯ ಸೋಮವಾರ ಪ್ರತಿವರ್ಷ ನಡೆಯುವ ಕಡಲೆಕಾಯಿ ಪರಿಷೆಗೆ ಈ ಬಾರಿಯೂ ಭಾರಿ ಸಂಖ್ಯೆಯಲ್ಲಿ ಜನಸಾಗರವೇ ಹರಿದುಬಂದಿತ್ತು.
ಬಸವನ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಬಸವನಗುಡಿಯ ರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ ರಾಶಿ ಒಂದು ಕಡೆಯಾದರೆ, ಜಾತ್ರೆಯ ಸಂಭ್ರಮ ಮತ್ತೊಂದು ಕಡೆ.
ಕಡ್ಲೆಕಾಯಿ ಪರಿಷೆ ಎಂದರೆ ಕೇಳಬೇಕಾ ಇಲ್ಲಿ ಎಲ್ಲವೂ ಇರಲಿದೆ. ಕಾಂಕ್ರೀಟ್ ನಗರ ಬೆಂಗಳೂರಿನಲ್ಲಿ ಇಂತಹ ಒಂದು ಪರಷೆ ನಡೆದರೆ ಸಾಕು ಜನಸಾಗರವೇ ಅಲ್ಲಿ ಹರಿದು ಬರಲಿದೆ.
ಮಕ್ಕಳು, ಮಹಿಳೆಯರು, ಕಾಲೇಜು ಯುವಕ-ಯುವತಿಯರಿಗೆ ಏನು ಬೇಕು ಎಲ್ಲಾ ಒಂದೇ ಕಡೆ ಮಾರಾಟ ಮಾಡಲಾಗುತ್ತಿತ್ತು.
ಎರಡು ದಿನಗಳಿಂದ ನಡೆಯುತ್ತಿರುವ ಕಡಲೆಕಾಯಿ ಪರಿಷೆಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ, ದೊಡ್ಡ ಬಸವನ ದರ್ಶನ ಪಡೆದು ಕಡಲೆಕಾಯಿ ತಿಂದು ಮನೆಯತ್ತ ಹೆಜ್ಜೆಹಾಕಿದರು.
ಮಕ್ಕಳಿಗೆ ಆಟಿಕೆ, ಮಹಿಳೆಯರಿಗೆ ಬೇಕಾದ ವಸ್ತುಗಳು, ತಿಂಡಿತಿನಿಸು, ಕಡ್ಲೇಕಾಯಿ ಕೊಳ್ಳಲು ತಿನ್ನಲು ಸಾಕಷ್ಟಿದ್ದವು.
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕಡಲೆಕಾಯಿ ಪರಿಷೆ ಎಂದು ಮುಕ್ತಾಯಗೊಂಡಿದೆ ಆದರೂ ನಾಳೆ ಹಾಗೂ ನಾಡಿದ್ದು ಜಾತ್ರೆಯ ಸಂಭ್ರಮ ಇನ್ನೂ ಇರಲಿದೆ.
ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಲ್ಪಟ್ಟ ರಸ್ತೆಯಲ್ಲಿ ಗುಂಪುಗುಂಪಾಗಿ ಸಾಗುತ್ತಿದ್ದ ಜನರು ರಸ್ತೆಯ ಮಧ್ಯೆ ಫೋಟೋ ಕ್ಲಿಕ್ಕಿಸಿ ಕೊಳ್ಳುವುದು ನೋಡಿದ್ದನ್ನು ಖರೀದಿಸುವುದು ಸಾಮಾನ್ಯವಾಗಿತ್ತು ಆಟಿಕೆಗಳು ಕರಕುಶಲ ವಸ್ತುಗಳು ತಿಂಡಿ-ತಿನಿಸುಗಳ ವ್ಯಾಪಾರ ಜೋರಾಗಿತ್ತು.

ಒಂದು ಸೇರು ಕಡಲೇಕಾಯಿ ₹20 40 ರೂಪಾಯಿ ವರೆಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನು ಬೇಯಿಸಿದ ಕಡಲಿಗೆ ಐವತ್ತು ರೂಪಾಯಿ ನಿಗದಿಪಡಿಸಲಾಗಿತ್ತು.

ಕಡಲೆಕಾಯಿಯನ್ನು ಮಾತ್ರ ಒಂದು ವಾರದ ತನಕ ಮಾರಾಟ ಮಾಡಲಾಗುತ್ತದೆ.
ಕಳೆದ ಮೂರು ದಿನಗಳಿಂದ ಪರೀಕ್ಷೆಗೆ ಎರಡು ಲಕ್ಷಕ್ಕೂ ಹೆಚ್ಚು ಜನ ಆಗಮಿಸಿ ದರ್ಶನ ಪಡೆದು, ಕಡ್ಲೆಕಾಯ್ ಖರೀದಿಸಿದ್ದಾರೆ ಎನ್ನಲಾಗಿದೆ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.