ETV Bharat / state

ಗಲಭೆ ಕೇಸ್: ಕಾರ್ಪೊರೇಟರ್ ಫೋನ್ ಸಂಪರ್ಕದಲ್ಲಿದ್ದವರ ವಿಚಾರಣೆ ನಡೆಸುತ್ತಿರುವ ಸಿಸಿಬಿ - ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಕಾರ್ಪೊರೇಟರ್​ ವಿಚಾರಣೆ

ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟರ್​​ ಜಾಕೀರ್​​ ಮತ್ತು ಮಾಜಿ ಮೇಯರ್​​ ಸಂಪತ್​​ ರಾಜ್​ ಅವರ ವಿಚಾರಣೆ ನಡೆಯುತ್ತಿದೆ. ಸದ್ಯ ಗಲಭೆ ದಿನ ಈ ಇಬ್ಬರ ಫೋನ್​​ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿರುವ ಸಿಸಿಬಿ, ನೋಟಿಸ್​​ ನೀಡಿ ಕಚೇರಿಗೆ ಕರೆಯಿಸಿದ್ದು ವಿಚಾರಣೆ ಒಳಪಡಿಸಿದ್ದಾರೆ. ​

bangalore-violence-case-ccb-inquiring-corporators
ಸಿಸಿಬಿ
author img

By

Published : Aug 24, 2020, 7:25 PM IST

ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಫ್ರೇಜರ್ ಟೌನ್ ಕಾರ್ಪೊರೇಟರ್ ಜಾಕೀರ್ ಜೊತೆ ಫೋನ್ ಸಂಪರ್ಕದಲ್ಲಿದ್ದವರಿಗೂ ನೊಟೀಸ್ ನೀಡಿ ಸಿಸಿಬಿ ವಿಚಾರಣೆ ನಡೆಸುತ್ತಿದೆ.

ಗಲಭೆ ದಿನ ಸಂಪತ್ ರಾಜ್ ಹಾಗೂ ಜಾಕೀರ್ ಜೊತೆ ಹೆಚ್ಚು ಬಾರಿ‌ ಫೋನ್ ಸಂಪರ್ಕದಲ್ಲಿದ್ದವರನ್ನು ಸಿಸಿಬಿ ಪೊಲೀಸರು ಕರೆಯಿಸಿದ್ದಾರೆ. ಸದ್ಯ ಗಲಭೆಯಲ್ಲಿ ಅವರ ಪಾತ್ರದ ಕುರಿತು ತಾಂತ್ರಿಕ ಆಯಾಮದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ನಾಳೆ ಇನ್ನಷ್ಟು ಮಂದಿಯನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಸಹಚರರ ಹೇಳಿಕೆಗಳು ಕಾರ್ಪೊರೇಟರ್​ಗಳಿಗೆ ಕಂಟಕವಾಗಲಿದೆಯಾ ಪ್ರಶ್ನೆ ಮೂಡಿದೆ. ಇನ್ನೊಂದೆಡೆ ಇಬ್ಬರು ಕಾರ್ಪೊರೇಟರ್​ಗಳು ಸೇರಿದಂತೆ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿಗಳ ಮೊಬೈಲ್​ಗಳನ್ನು ಈಗಾಗಲೇ ಎಫ್​ಎಸ್​ಎಲ್​ಗೆ ರವಾನಿಸಿದ್ದು, ನಾಳೆ ವರದಿ ಬರಲಿದೆ. ವರದಿ ಆಧಾರದ ಮೇಲೆ ಸಿಸಿಬಿ ಕ್ರಮ‌ ಕೈಗೊಳ್ಳಲಿದೆ.

ಗಲಭೆ ದಿನದಿಂದ ಹಲವರೊಂದಿಗೆ ಇಂಟರ್​ನೆಟ್ ಕಾಲ್, ವಾಟ್ಸಾಪ್ ಮಾಡಿದ್ದ ಶಂಕೆ ಮೇರೆಗೆ ಇತ್ತೀಚೆಗಷ್ಟೇ ಇಬ್ಬರು ಕಾರ್ಪೊರೇಟರ್​ಗಳನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು.

ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಫ್ರೇಜರ್ ಟೌನ್ ಕಾರ್ಪೊರೇಟರ್ ಜಾಕೀರ್ ಜೊತೆ ಫೋನ್ ಸಂಪರ್ಕದಲ್ಲಿದ್ದವರಿಗೂ ನೊಟೀಸ್ ನೀಡಿ ಸಿಸಿಬಿ ವಿಚಾರಣೆ ನಡೆಸುತ್ತಿದೆ.

ಗಲಭೆ ದಿನ ಸಂಪತ್ ರಾಜ್ ಹಾಗೂ ಜಾಕೀರ್ ಜೊತೆ ಹೆಚ್ಚು ಬಾರಿ‌ ಫೋನ್ ಸಂಪರ್ಕದಲ್ಲಿದ್ದವರನ್ನು ಸಿಸಿಬಿ ಪೊಲೀಸರು ಕರೆಯಿಸಿದ್ದಾರೆ. ಸದ್ಯ ಗಲಭೆಯಲ್ಲಿ ಅವರ ಪಾತ್ರದ ಕುರಿತು ತಾಂತ್ರಿಕ ಆಯಾಮದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ನಾಳೆ ಇನ್ನಷ್ಟು ಮಂದಿಯನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಸಹಚರರ ಹೇಳಿಕೆಗಳು ಕಾರ್ಪೊರೇಟರ್​ಗಳಿಗೆ ಕಂಟಕವಾಗಲಿದೆಯಾ ಪ್ರಶ್ನೆ ಮೂಡಿದೆ. ಇನ್ನೊಂದೆಡೆ ಇಬ್ಬರು ಕಾರ್ಪೊರೇಟರ್​ಗಳು ಸೇರಿದಂತೆ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿಗಳ ಮೊಬೈಲ್​ಗಳನ್ನು ಈಗಾಗಲೇ ಎಫ್​ಎಸ್​ಎಲ್​ಗೆ ರವಾನಿಸಿದ್ದು, ನಾಳೆ ವರದಿ ಬರಲಿದೆ. ವರದಿ ಆಧಾರದ ಮೇಲೆ ಸಿಸಿಬಿ ಕ್ರಮ‌ ಕೈಗೊಳ್ಳಲಿದೆ.

ಗಲಭೆ ದಿನದಿಂದ ಹಲವರೊಂದಿಗೆ ಇಂಟರ್​ನೆಟ್ ಕಾಲ್, ವಾಟ್ಸಾಪ್ ಮಾಡಿದ್ದ ಶಂಕೆ ಮೇರೆಗೆ ಇತ್ತೀಚೆಗಷ್ಟೇ ಇಬ್ಬರು ಕಾರ್ಪೊರೇಟರ್​ಗಳನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.