ETV Bharat / state

ಅಂಬೇಡ್ಕರ್​​​​ ಮುಗಿಸಿದಂತೆ ನಮ್ಮನ್ನೆಲ್ಲ ನಮ್ಮವರೇ ಮುಗಿಸಿದರು: ಬಿ.ಶ್ರೀರಾಮುಲು

ಎಸ್ಟಿ ಸಮುದಾಯಕ್ಕಾಗಿ ಕೆಲಸ ಮಾಡಿದವರು ಚುನಾವಣೆಯಲ್ಲಿ ಸೋತಿದ್ದಾರೆ, ಏನು ಕೆಲಸ ಮಾಡದವರು ಶಾಸಕರಾಗಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

author img

By ETV Bharat Karnataka Team

Published : Sep 11, 2023, 4:39 PM IST

Updated : Sep 11, 2023, 4:55 PM IST

ವಿಚಾರ ಸಂಕಿರ್ಣ
ವಿಚಾರ ಸಂಕಿರ್ಣ

ಬೆಂಗಳೂರು: ಎಸ್ಟಿ ಸಮುದಾಯಕ್ಕಾಗಿ ಕೆಲಸ ಮಾಡಿದವರು ಸೋತಿದ್ದಾರೆ ಏನು ಮಾಡದವರು ಶಾಸಕರಾಗಿದ್ದಾರೆ. ಅಂಬೇಡ್ಕರ್​ ಮುಗಿಸಿದಂತೆ ನಮ್ಮನ್ನೆಲ್ಲಾ ನಮ್ಮವರೇ ಮುಗಿಸಿದರು, ಒಮ್ಮೊಮ್ಮೆ ರಾಜಕೀಯ ಬಿಟ್ಟು ಬಿಡೋಣ ಅನಿಸುತ್ತದೆ ಎಂದು ಸೋಲಿನ ಕುರಿತು ಮಾಜಿ ಸಚಿವ ಬಿ.ಶ್ರೀರಾಮುಲು ಅತೀವ ಬೇಸರ ಹೊರಹಾಕಿದ್ದಾರೆ.

ಸಿಟಿಜೆನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಎಸ್ಸಿ ಎಸ್ಟಿ ಮೀಸಲು ಹಣ ಮುಳುಗಿಸುತ್ತಿರುವ ರಾಜ್ಯ ಸರ್ಕಾರ ಹೆಸರಿನ ವಿಚಾರ ಸಂಕಿರ್ಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸರಕಾರ ಎಸ್​ಸಿ- ಎಸ್​ಟಿ ಮೀಸಲಾತಿ ಹೆಚ್ಚಳ ಮಾಡಿತ್ತು. ಆದರೆ, ಇಲ್ಲಿ ವೇದಿಕೆ ಮೇಲೆ ಕುಳಿತ ನಾವೆಲ್ಲ ಸೋತಿದ್ದೇವೆ. ಏನು ಮಾಡದವರು ಅಧಿಕಾರಕ್ಕೆ ಬಂದರು. ಶ್ರೀರಾಮುಲು, ಗೋವಿಂದ ಕಾರಜೋಳ ಎಲ್ಲರನ್ನೂ ಸೋಲಿಸಿದರು. ಅಂಬೇಡ್ಕರ್​ ಅವರನ್ನು ಮುಗಿಸಿದಂತೆ ನಮ್ಮನ್ನೆಲ್ಲ ನಮ್ಮವರೇ ಮುಗಿಸಿದರು. ಹೋದಲ್ಲಿ ಬಂದಲ್ಲಿ ನಮ್ಮವರೇ ಜನ ಉಗಿತಾರೆ. ಕಣ್ಣೀರು ಹಾಕಬೇಕಿದೆ ಅಷ್ಟೇ ಎಂದು ಸೋಲಿನ ಕುರಿತು ಅತೃಪ್ತಿ ಹೊರಹಾಕಿದರು.

ಸೋತವರು ನಾವು ತಲೆ ಬಾಗುತ್ತೇವೆ. ಎಸ್ ಟಿ ಸಮುದಾಯವರೆಲ್ಲಾ ನಮ್ಮ ಪಾರ್ಟಿಯಲ್ಲಿ ಸೋತರು, ಎಲ್ಲ ಮಾಡಿ ನಾವು ಸೋತೆವು, ಹಾಗಾದರೆ ನಾವು ಏನು ಮಾಡಲೇ ಬಾರದಿತ್ತಾ? ಇದನ್ನೆಲ್ಲಾ ನೋಡಿದರೆ ರಾಜಕೀಯ ಬಿಟ್ಟು ಬಿಡೋಣ ಅನಿಸುತ್ತದೆ. ಒಳ ಮೀಸಲಾತಿ ಮಾಡಿದೆವು. ಇನ್ನೂ ಏನು ಮಾಡೋಕೆ ಆಗತ್ತದೆ? ಇಲ್ಲಿ ಗೆದ್ದವರಿಗೆ ಬೆಲೆ, ಸೋತವರಿಗೆ ಬೆಲೆ ಇಲ್ಲ. ನಮ್ಮ ಎಸ್ ಟಿ ಸಮುದಾಯಕ್ಕೆ ಒಂದು ರೀತಿಯ ಶಾಪ, ಇಲ್ಲಿ ಕೆಲಸ ಮಾಡಿದವರು ಸೋತಿದ್ದಾರೆ ಏನು ಮಾಡದವರು ಶಾಸಕ ಆಗಿದ್ದಾರೆ ಎಂದು ಸೋಲಿನ ಬಗ್ಗೆ ಶ್ರೀರಾಮಲು ಭಾವನಾತ್ಮಕವಾಗಿ ಮಾತನಾಡಿದರು‌.

ನಂತರ ಮಾತನಾಡಿದ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಅಂಬೇಡ್ಕರ್ ನೀಡಿದ ಸಂವಿಧಾನದಿಂದ ದೇಶದ ಪ್ರಧಾನಿ ಆದೆ ಎಂದವರು ಪ್ರಧಾನಿ ಮೋದಿ ಮಾತ್ರ. ಈ ದೇಶದ ಧರ್ಮ ಗ್ರಂಥ ಸಂವಿಧಾನ ಎಂದು ಮೋದಿ ಹೇಳಿದರು. ಆದರೆ, ಜವಾಹರ್ ಲಾಲ್ ನೆಹರು ಹಾಗೆ ಹೇಳಿದ್ದರಾ? ಇಂದಿರಾ ಗಾಂಧಿ ಹೇಳಿದ್ದಾರಾ? ರಾಜೀವ್ ಗಾಂಧಿ ಹೇಳಿದ್ದರಾ? ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿನಾ ಪ್ರಧಾನಿ ಮಾಡುತ್ತೇವೆ ಎಂದು ಓಡಾಡ್ತಾ ಇದ್ದಾರೆ. ರಾಹುಲ್ ಗಾಂಧಿ ಹೊರದೇಶಕ್ಕೆ ಹೋಗಿ ಭಾರತವನ್ನೇ ಬೈದು ಬರ್ತಾರೆ. ಅವರನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ ಎಂದು INDIA ಕೂಟವನ್ನು ಟೀಕಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ, ಮಾಜಿ ಸಚಿವರಾದ ಎನ್.ಮಹೇಶ್ ಮಾಜಿ ಶಾಸಕರಾದ ಹರ್ಷವರ್ಧನ, ಬಸವರಾಜ್ ದಡೇಸುಗೂರು, ಪಿ ರಾಜೀವ್, ಸೋಮಲಿಂಗಪ್ಪ, ಸಂಪಂಗಿ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಭಾಗಿಯಾಗಿದ್ದರು.

ಇದನ್ನೂ ಓದಿ: ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಎಸ್ಟಿ ಸಮುದಾಯಕ್ಕಾಗಿ ಕೆಲಸ ಮಾಡಿದವರು ಸೋತಿದ್ದಾರೆ ಏನು ಮಾಡದವರು ಶಾಸಕರಾಗಿದ್ದಾರೆ. ಅಂಬೇಡ್ಕರ್​ ಮುಗಿಸಿದಂತೆ ನಮ್ಮನ್ನೆಲ್ಲಾ ನಮ್ಮವರೇ ಮುಗಿಸಿದರು, ಒಮ್ಮೊಮ್ಮೆ ರಾಜಕೀಯ ಬಿಟ್ಟು ಬಿಡೋಣ ಅನಿಸುತ್ತದೆ ಎಂದು ಸೋಲಿನ ಕುರಿತು ಮಾಜಿ ಸಚಿವ ಬಿ.ಶ್ರೀರಾಮುಲು ಅತೀವ ಬೇಸರ ಹೊರಹಾಕಿದ್ದಾರೆ.

ಸಿಟಿಜೆನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಎಸ್ಸಿ ಎಸ್ಟಿ ಮೀಸಲು ಹಣ ಮುಳುಗಿಸುತ್ತಿರುವ ರಾಜ್ಯ ಸರ್ಕಾರ ಹೆಸರಿನ ವಿಚಾರ ಸಂಕಿರ್ಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸರಕಾರ ಎಸ್​ಸಿ- ಎಸ್​ಟಿ ಮೀಸಲಾತಿ ಹೆಚ್ಚಳ ಮಾಡಿತ್ತು. ಆದರೆ, ಇಲ್ಲಿ ವೇದಿಕೆ ಮೇಲೆ ಕುಳಿತ ನಾವೆಲ್ಲ ಸೋತಿದ್ದೇವೆ. ಏನು ಮಾಡದವರು ಅಧಿಕಾರಕ್ಕೆ ಬಂದರು. ಶ್ರೀರಾಮುಲು, ಗೋವಿಂದ ಕಾರಜೋಳ ಎಲ್ಲರನ್ನೂ ಸೋಲಿಸಿದರು. ಅಂಬೇಡ್ಕರ್​ ಅವರನ್ನು ಮುಗಿಸಿದಂತೆ ನಮ್ಮನ್ನೆಲ್ಲ ನಮ್ಮವರೇ ಮುಗಿಸಿದರು. ಹೋದಲ್ಲಿ ಬಂದಲ್ಲಿ ನಮ್ಮವರೇ ಜನ ಉಗಿತಾರೆ. ಕಣ್ಣೀರು ಹಾಕಬೇಕಿದೆ ಅಷ್ಟೇ ಎಂದು ಸೋಲಿನ ಕುರಿತು ಅತೃಪ್ತಿ ಹೊರಹಾಕಿದರು.

ಸೋತವರು ನಾವು ತಲೆ ಬಾಗುತ್ತೇವೆ. ಎಸ್ ಟಿ ಸಮುದಾಯವರೆಲ್ಲಾ ನಮ್ಮ ಪಾರ್ಟಿಯಲ್ಲಿ ಸೋತರು, ಎಲ್ಲ ಮಾಡಿ ನಾವು ಸೋತೆವು, ಹಾಗಾದರೆ ನಾವು ಏನು ಮಾಡಲೇ ಬಾರದಿತ್ತಾ? ಇದನ್ನೆಲ್ಲಾ ನೋಡಿದರೆ ರಾಜಕೀಯ ಬಿಟ್ಟು ಬಿಡೋಣ ಅನಿಸುತ್ತದೆ. ಒಳ ಮೀಸಲಾತಿ ಮಾಡಿದೆವು. ಇನ್ನೂ ಏನು ಮಾಡೋಕೆ ಆಗತ್ತದೆ? ಇಲ್ಲಿ ಗೆದ್ದವರಿಗೆ ಬೆಲೆ, ಸೋತವರಿಗೆ ಬೆಲೆ ಇಲ್ಲ. ನಮ್ಮ ಎಸ್ ಟಿ ಸಮುದಾಯಕ್ಕೆ ಒಂದು ರೀತಿಯ ಶಾಪ, ಇಲ್ಲಿ ಕೆಲಸ ಮಾಡಿದವರು ಸೋತಿದ್ದಾರೆ ಏನು ಮಾಡದವರು ಶಾಸಕ ಆಗಿದ್ದಾರೆ ಎಂದು ಸೋಲಿನ ಬಗ್ಗೆ ಶ್ರೀರಾಮಲು ಭಾವನಾತ್ಮಕವಾಗಿ ಮಾತನಾಡಿದರು‌.

ನಂತರ ಮಾತನಾಡಿದ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಅಂಬೇಡ್ಕರ್ ನೀಡಿದ ಸಂವಿಧಾನದಿಂದ ದೇಶದ ಪ್ರಧಾನಿ ಆದೆ ಎಂದವರು ಪ್ರಧಾನಿ ಮೋದಿ ಮಾತ್ರ. ಈ ದೇಶದ ಧರ್ಮ ಗ್ರಂಥ ಸಂವಿಧಾನ ಎಂದು ಮೋದಿ ಹೇಳಿದರು. ಆದರೆ, ಜವಾಹರ್ ಲಾಲ್ ನೆಹರು ಹಾಗೆ ಹೇಳಿದ್ದರಾ? ಇಂದಿರಾ ಗಾಂಧಿ ಹೇಳಿದ್ದಾರಾ? ರಾಜೀವ್ ಗಾಂಧಿ ಹೇಳಿದ್ದರಾ? ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿನಾ ಪ್ರಧಾನಿ ಮಾಡುತ್ತೇವೆ ಎಂದು ಓಡಾಡ್ತಾ ಇದ್ದಾರೆ. ರಾಹುಲ್ ಗಾಂಧಿ ಹೊರದೇಶಕ್ಕೆ ಹೋಗಿ ಭಾರತವನ್ನೇ ಬೈದು ಬರ್ತಾರೆ. ಅವರನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ ಎಂದು INDIA ಕೂಟವನ್ನು ಟೀಕಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ, ಮಾಜಿ ಸಚಿವರಾದ ಎನ್.ಮಹೇಶ್ ಮಾಜಿ ಶಾಸಕರಾದ ಹರ್ಷವರ್ಧನ, ಬಸವರಾಜ್ ದಡೇಸುಗೂರು, ಪಿ ರಾಜೀವ್, ಸೋಮಲಿಂಗಪ್ಪ, ಸಂಪಂಗಿ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಭಾಗಿಯಾಗಿದ್ದರು.

ಇದನ್ನೂ ಓದಿ: ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ: ಸಿಎಂ ಸಿದ್ದರಾಮಯ್ಯ

Last Updated : Sep 11, 2023, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.