ಬೆಂಗಳೂರು : ಅನಧಿಕೃತವಾಗಿ ಶೇಖರಣೆ ಮಾಡಿದ್ದ ಪಾನ್ ಮಸಾಲ ಹಾಗೂ ತಂಬಾಕು ತಯಾರಿಸುತ್ತಿದ್ದ ಗೋಡೌನ್ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲಾಕ್ಡೌನ್ ವೇಳೆ ಅಧಿಕಾರಿಗಳು ಈ ದಂಧೆಯ ಮೇಲೆ ನಿಗಾ ವಹಿಸದ ಕಾರಣ ಚಿಕ್ಕಾಬಳ್ಳಾಪುರ, ತುಮಕೂರು, ಸಿರಾ ಸೇರಿ ಹಲವೆಡೆ ಆರೋಪಿಗಳು ಅನಧಿಕೃತವಾಗಿ ಪಾನ್ ಮಸಾಲಾ ಹಾಗೂ ತಂಬಾಕು ಶೇಕರಣೆ ಮಾಡಿಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತಾದ ಮಾಹಿತಿ ಪಡೆದ ವಾಣಿಜ್ಯ ತೆರಿಗೆ ವಿಭಾಗದ ಹೆಚ್ಚುವರಿ ಆಯುಕ್ತ ನಿತೀಶ್ ಪಾಟೀಲ್ ಹಾಗೂ ತಂಡ ಗೋಡೌನ್ ಮೇಲೆ ದಾಳಿ ಮಾಡಿ ಕೋಟ್ಯಂತರ ರೂ. ಮೌಲ್ಯದ ದಾಸ್ತಾನುಗಳ ಮೇಲೆ ದಂಡ ವಿಧಿಸಿದ್ದಾರೆ.
ಪಾನ್ ಮಸಾಲ ಹಾಗೂ ತಂಬಾಕು ತಯಾರಿ ಮಾಡಲು ಅನುಮತಿ ನೀಡಿದ್ದು ಯಾರು?, ಇದರ ಮಾಲೀಕರು ಯಾರು ಎಂಬುದರ ಕುರಿತು ತನಿಖೆ ಮುಂದುವರೆದಿದೆ.