ETV Bharat / state

ಭಾಸ್ಕರ್ ರಾವ್ ಆಯ್ಕೆ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದ ಅಲೋಕ್ ಕುಮಾರ್ ಅರ್ಜಿ ಹಿಂತೆಗೆತ ​ - ನೂತನ ಕಮಿಷನರ್ ಭಾಸ್ಕರ್ ರಾವ್

ಅವಧಿ ಮುಗಿಯುವ ಮುನ್ನವೇ ನಗರ ಪೊಲೀಸ್ ಆಯುಕ್ತರಾಗಿದ್ದ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಸಿಎಟಿ ಅಲೋಕ್ ಕುಮಾರ್ ಮೆಟ್ಟಿಲೇರಿದ್ದರು. ಇದೀಗ ಅವರು ತಾವು ಸಲ್ಲಿಸಿದ್ದ ಅರ್ಜಿ ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಭಾಸ್ಕರ್ ರಾವ್ ಹಾಗೂ ಅಲೋಕ್ ಕುಮಾರ್
author img

By

Published : Aug 16, 2019, 12:38 PM IST

ಬೆಂಗಳೂರು: ನೂತನ ಕಮಿಷನರ್ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ನಿರ್ಗಮಿತ ಕಮಿಷನರ್ ಅಲೋಕ್ ಕುಮಾರ್ ಸಿಎಟಿಗೆ ಅರ್ಜಿ ಹಾಕಿದ್ದರು. ಆದರೆ ಇಂದು ಅವರು ಅರ್ಜಿಯನ್ನ ಹಿಂಪಡೆಯುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗ್ತಿದೆ.

ಅವಧಿ ಮುಗಿಯುವ ಮುನ್ನವೇ ನಗರ ಪೊಲೀಸ್ ಆಯುಕ್ತರಾಗಿದ್ದ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಸಿಎಟಿ ಮೆಟ್ಟಿಲೇರಿದ್ದರು. ಕಳೆದ ವಿಚಾರಣೆ ವೇಳೆ ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿಯು ನೂತನ ಆಯುಕ್ತ ಭಾಸ್ಕರ್ ರಾವ್‌ ಹಾಗೂ ಇತರೆ ಪ್ರತಿವಾದಿಗಳಿಗೆ ಅಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿತ್ತು. ಹೀಗಾಗಿ ಆಗಸ್ಟ್ 13 ಕ್ಕೆ‌ ಆಕ್ಷೇಪಣೆಯನ್ನು ಪ್ರತಿವಾದಿಗಳು ಸಲ್ಲಿಸಿದ್ದರು.

ನಂತರ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 14 ಕ್ಕೆ ಕೈಗೆತ್ತಿಕೊಂಡಾಗ ಸರ್ಕಾರದ ಪರ ವಕೀಲರು ವಾದ ಮಾಡಲು ಸಮಾಯವಾಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಆ.16( ಇಂದಿ)ಗೆ ಮುಂದೂಡಲಾಗಿತ್ತು.

ಇಂದು ಸಿಎಟಿ ದ್ವಿಸದಸ್ಯ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ಸರ್ಕಾರದ ಪರ ವಾದ ಮಂಡನೆಗೆ ಖುದ್ದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಹಾಜರಾಗಿದ್ದರು‌. ಆದರೆ ಇದೇ ಸಮಯಕ್ಕೆ ಬೆಂಗಳೂರು ನಗರ ನಿರ್ಗಮಿತ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅರ್ಜಿ ಹಿಂಪಡೆಯುವುದಾಗಿ ತಿಳಿಸಿದ ಕಾರಣ ಪ್ರಕರಣ ಇತ್ಯರ್ಥ ಮಾಡಿ ದ್ವಿಸದಸ್ಯ ಪೀಠ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ನೂತನ ಕಮಿಷನರ್ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ನಿರ್ಗಮಿತ ಕಮಿಷನರ್ ಅಲೋಕ್ ಕುಮಾರ್ ಸಿಎಟಿಗೆ ಅರ್ಜಿ ಹಾಕಿದ್ದರು. ಆದರೆ ಇಂದು ಅವರು ಅರ್ಜಿಯನ್ನ ಹಿಂಪಡೆಯುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗ್ತಿದೆ.

ಅವಧಿ ಮುಗಿಯುವ ಮುನ್ನವೇ ನಗರ ಪೊಲೀಸ್ ಆಯುಕ್ತರಾಗಿದ್ದ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಸಿಎಟಿ ಮೆಟ್ಟಿಲೇರಿದ್ದರು. ಕಳೆದ ವಿಚಾರಣೆ ವೇಳೆ ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿಯು ನೂತನ ಆಯುಕ್ತ ಭಾಸ್ಕರ್ ರಾವ್‌ ಹಾಗೂ ಇತರೆ ಪ್ರತಿವಾದಿಗಳಿಗೆ ಅಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿತ್ತು. ಹೀಗಾಗಿ ಆಗಸ್ಟ್ 13 ಕ್ಕೆ‌ ಆಕ್ಷೇಪಣೆಯನ್ನು ಪ್ರತಿವಾದಿಗಳು ಸಲ್ಲಿಸಿದ್ದರು.

ನಂತರ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 14 ಕ್ಕೆ ಕೈಗೆತ್ತಿಕೊಂಡಾಗ ಸರ್ಕಾರದ ಪರ ವಕೀಲರು ವಾದ ಮಾಡಲು ಸಮಾಯವಾಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಆ.16( ಇಂದಿ)ಗೆ ಮುಂದೂಡಲಾಗಿತ್ತು.

ಇಂದು ಸಿಎಟಿ ದ್ವಿಸದಸ್ಯ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ಸರ್ಕಾರದ ಪರ ವಾದ ಮಂಡನೆಗೆ ಖುದ್ದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಹಾಜರಾಗಿದ್ದರು‌. ಆದರೆ ಇದೇ ಸಮಯಕ್ಕೆ ಬೆಂಗಳೂರು ನಗರ ನಿರ್ಗಮಿತ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅರ್ಜಿ ಹಿಂಪಡೆಯುವುದಾಗಿ ತಿಳಿಸಿದ ಕಾರಣ ಪ್ರಕರಣ ಇತ್ಯರ್ಥ ಮಾಡಿ ದ್ವಿಸದಸ್ಯ ಪೀಠ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

Intro:ನೂತನ ಕಮಿಷನರ್ ಭಾಸ್ಕರ್ ರಾವ್ ಆಯ್ಕೆ ಪ್ರಶ್ನಿಸಿ ಅರ್ಜಿ
ಸಿಎಟಿಗೆ ಸಲ್ಲಿಸಿದ್ದ ‌ಅರ್ಜಿ ಹಿಂಪಡೆದ ಅಲೋಕ್ ಕುಮಾರ್

ನೂತನ ಕಮಿಷನರ್ ಭಾಸ್ಕರ್ ರಾವ್ ಅವರನ್ನ ನೇಮಕ ಮಾಡಿ ರಾಜ್ಯ ಸರಕಾರ ಹೊರಡಿಸಿದ ಆದೇಶವನ್ನ ಪ್ರಶ್ನೀಸಿ ನಿರ್ಗಮಿತ ಅಲೋಕ್ ಕುಮಾರ್ ಸಿಎಟಿಗೆ ಅರ್ಜಿ ಹಾಕಿದ್ದರು. ಆದರೆ
ಇಂದು ಅಲೋಕ್ ಕುಮಾರ್ ಅರ್ಜಿಯನ್ನ ಹಿಂಪಡೆಯುವುದಾಗಿ ನ್ಯಾಯಲಕ್ಕೆ ತಿಳಿಸಿದ್ದಾರೆ.

ಅವಧಿ ಮುಗಿಯುವ ಮುನ್ನವೇ ನಗರ ಪೊಲೀಸ್ ಆಯುಕ್ತರಾಗಿದ್ದ ತಮ್ಮ ವರ್ಗಾವಣೆಯನ್ನ ಪ್ರಶ್ನಿಸಿ ಸಿಎಟಿ ಮೆಟ್ಟಿಲೇರಿದ್ದರುಅಲೋಕ್ ಕುಮಾರ್ . ಕಳೆದ ವಿಚಾರಣೆ ವೇಳೆ ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿ ನೂತನ ಆಯುಕ್ತ ಭಾಸ್ಕರ್ ರಾವ್‌ ಹಾಗು ಇತರೆ ಪ್ರತಿವಾದಿಗಳಿಗೆ ಅಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿತ್ತು. ಹೀಗಾಗಿ ಆಗಸ್ಟ್ ೧೩ಕ್ಕೆ‌ ಆಕ್ಷೇಪಣೆ ಸಲ್ಲಿಸಿದ್ದರು ಪ್ರತಿವಾದಿಗಳು.

ನಂತ್ರ ನ್ಯಾಯಲಯ ವಿಚಾರಣೆಯನ್ನು ಆಗಸ್ಟ್ ೧೪ಕ್ಕೆ ಕೈಗೆತ್ತಿಕೊಂಡಾಗ ಸರ್ಕಾರದ ಪರ ವಕೀಲರು ವಾದ ಮಾಡಲು ಸಮಾಯವಾಕಾಶ ಕೇಳಿದ ಹಿನ್ನೆಲೆ ಇಂದಿಗೆ ಮುಂದೂಡಲಾಗಿತ್ತು.
ಇಂದು ಸಿಎಟಿ ದ್ವಿಸದಸ್ಯ‌ ಪೀಠ ವಿಚಾರಣೆ ಕೈಗೆತ್ತಿಕೊಂಡಾಗ
ಸರ್ಕಾರದ ಪರ ವಾದ ಮಂಡನೆ ಗೆ ಖುದ್ದು ಅಡ್ವೋಕೇಟ್ ಜನೆರಲ್ ಪ್ರಭುಲಿಂಗ ನಾವಡಗಿ ಹಾಜರಾಗಿದ್ರು‌ .ಆದ್ರೆ ವೇಳೆ
ಬೆಂಗಳೂರು ನಗರ ನಿರ್ಗಮಿತ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅರ್ಜಿ ಹಿಂಪಡೆಯುವುದಾಗಿ ತಿಳಿಸಿದ ಕಾರಣ ಪ್ರಕರಣ ಇತ್ಯರ್ಥ ಮಾಡಿ ದ್ವೀಸದಸ್ಯ ಪೀಠ ಆದೇಶ ಹೊರಡಿಸಿದೆBody:KN_BNG_03_ALOK_BASKRAO_7204498Conclusion:KN_BNG_03_ALOK_BASKRAO_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.