ETV Bharat / state

ಬೆಂಗಳೂರು ನಗರ ಪೊಲೀಸ್​​​ ಆಯುಕ್ತರಾಗಿ ಅಲೋಕ್​​​ ಕುಮಾರ್​​​ ನೇಮಕ

ಸಿಸಿಬಿಯ ಹೆಚ್ಚುವರಿ ಆಯುಕ್ತರಾಗಿ ಸಾಕಷ್ಟು ಹೆಸರು ಮಾಡಿದ್ದ ಅಲೋಕ್​ ಕುಮಾರ್​ ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

author img

By

Published : Jun 17, 2019, 11:53 AM IST

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಲೋಕ್​ ಕುಮಾರ್​ ನೇಮಕ

ಬೆಂಗಳೂರು: ಅಲೋಕ್ ಕುಮಾರ್​ ಅವರ ಹೆಸರನ್ನ ಕೇಳಿದ್ರೆ ಅಂಡರ್​ವರ್ಲ್ಡ್​ ಡಾನ್​ಗಳು​ ಶೇಕ್ ಆಗ್ತಿದ್ರು. ಅಂತಹ ಖಡಕ್ ಅಧಿಕಾರಿಯನ್ನೇ ಸಿಎಂ ಕುಮಾರಸ್ವಾಮಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯಕ್ತರನ್ನಾಗಿ‌ ನೇಮಿಸಿದ್ರು. ಇದೀಗ ರಾಜ್ಯ ಸರ್ಕಾರ ಮತ್ತೆ ಅಲೋಕ್ ಕುಮಾರ್​ರನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದೆ.

ಅಲೋಕ್​ ಕುಮಾರ್​ ​ ಬಿಹಾರ್ ಮೂಲದವರಾಗಿದ್ದು, 1994ರ ಕರ್ನಾಟಕ ಕೇಡರ್​ನ ಐಪಿಎಸ್​ ಅಧಿಕಾರಿಯಾಗಿದ್ದಾರೆ. ಪೊಲೀಸ್​ ಇಲಾಖೆಯಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿರುವ ಅಲೋಕ್ ಕುಮಾರ್​ ಅವರಿಗೆ ಈಗ ಹೊಸ ಜವಾಬ್ದಾರಿ ಸಿಕ್ಕಿದೆ. ಅಲೋಕ್​ ಸಿಸಿಬಿಯ ಹೆಚ್ಚುವರಿ ಆಯುಕ್ತರಾಗಿ ಸಿಲಿಕಾನ್ ಸಿಟಿ, ಹಾಗೇ ರಾಜ್ಯದಲ್ಲೇ ದೊಡ್ಡ ಹೆಸ್ರು ಮಾಡಿದ್ದಾರೆ. ಇದಾದ ಬೆನ್ನಲ್ಲೇ ಎಡಿಜಿಪಿಯಾಗಿ ಬಡ್ತಿ ಪಡೆದ ಮೊದಲ ದಿನವೇ ನಗರ ಪೊಲೀಸ್ ಆಯುಕ್ತರ ಹುದ್ದೆಗೆ ರಾಜ್ಯ ಸರ್ಕಾರ ಇವರನ್ನ ಆಯ್ಕೆ ಮಾಡಿದೆ.

ವೃತ್ತಿ ಬದುಕಿನ ಮೊದಲ ಹುದ್ದೆಯಾಗಿ ಬೆಳಗಾವಿಯ ಎಸ್​ಪಿಯಾಗಿ ಆಯ್ಕೆಯಾದ ಅಲೋಕ್​ಕುಮಾರ್​, ನಂತರ ಚಿತ್ರದುರ್ಗ ಮತ್ತು ಕಲಬುರಗಿ ಜಿಲ್ಲೆ ಎಸ್ಪಿಯಾದ್ರು. ಅದಾದ ಬಳಿಕ 2006ರಲ್ಲಿ ಸಿಲಿಕಾನ್ ಸಿಟಿಗೆ ಆಗಮಿಸಿದ ಅಲೋಕ್​ ಕುಮಾರ್​ಗೆ ನಗರದಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಹುದ್ದೆ ನೀಡಲಾಯ್ತು. ಬಳಿಕ ಉಡುಪಿ-ಕಾರ್ಕಳ ರೇಂಜ್​ನ ನಕ್ಸಲ್ ನಿಗ್ರಹ ದಳದ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ರು. ದಕ್ಷಿಣ ವಿಭಾಗದಲ್ಲಿ ಡಿಸಿಪಿಯಾಗಿದ್ದ ಅಲೋಕ್​ ಕುಮಾರ್​ ರೌಡಿಗಳ ಪಾಲಿಗೆ, ಸಮಾಜಘಾತುಕರ ಪಾಲಿಗೆ ಸಿಂಹಸ್ವಪ್ನವಾಗಿದ್ರು. ಇದನ್ನ ಗಮನಿಸಿದ ರಾಜ್ಯ ಸರ್ಕಾರ ಅವರನ್ನ ಮತ್ತೆ ಬೆಂಗಳೂರಿಗೆ ಕರೆಸಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿತು. ನಂತರ ಹಲವು ಹುದ್ದೆಗಳನ್ನು ನಿಭಾಯಿಸಿ ಸಿಸಿಬಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್​ ಕುಮಾರ್‌ ಈಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಬೆಂಗಳೂರು: ಅಲೋಕ್ ಕುಮಾರ್​ ಅವರ ಹೆಸರನ್ನ ಕೇಳಿದ್ರೆ ಅಂಡರ್​ವರ್ಲ್ಡ್​ ಡಾನ್​ಗಳು​ ಶೇಕ್ ಆಗ್ತಿದ್ರು. ಅಂತಹ ಖಡಕ್ ಅಧಿಕಾರಿಯನ್ನೇ ಸಿಎಂ ಕುಮಾರಸ್ವಾಮಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯಕ್ತರನ್ನಾಗಿ‌ ನೇಮಿಸಿದ್ರು. ಇದೀಗ ರಾಜ್ಯ ಸರ್ಕಾರ ಮತ್ತೆ ಅಲೋಕ್ ಕುಮಾರ್​ರನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದೆ.

ಅಲೋಕ್​ ಕುಮಾರ್​ ​ ಬಿಹಾರ್ ಮೂಲದವರಾಗಿದ್ದು, 1994ರ ಕರ್ನಾಟಕ ಕೇಡರ್​ನ ಐಪಿಎಸ್​ ಅಧಿಕಾರಿಯಾಗಿದ್ದಾರೆ. ಪೊಲೀಸ್​ ಇಲಾಖೆಯಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿರುವ ಅಲೋಕ್ ಕುಮಾರ್​ ಅವರಿಗೆ ಈಗ ಹೊಸ ಜವಾಬ್ದಾರಿ ಸಿಕ್ಕಿದೆ. ಅಲೋಕ್​ ಸಿಸಿಬಿಯ ಹೆಚ್ಚುವರಿ ಆಯುಕ್ತರಾಗಿ ಸಿಲಿಕಾನ್ ಸಿಟಿ, ಹಾಗೇ ರಾಜ್ಯದಲ್ಲೇ ದೊಡ್ಡ ಹೆಸ್ರು ಮಾಡಿದ್ದಾರೆ. ಇದಾದ ಬೆನ್ನಲ್ಲೇ ಎಡಿಜಿಪಿಯಾಗಿ ಬಡ್ತಿ ಪಡೆದ ಮೊದಲ ದಿನವೇ ನಗರ ಪೊಲೀಸ್ ಆಯುಕ್ತರ ಹುದ್ದೆಗೆ ರಾಜ್ಯ ಸರ್ಕಾರ ಇವರನ್ನ ಆಯ್ಕೆ ಮಾಡಿದೆ.

ವೃತ್ತಿ ಬದುಕಿನ ಮೊದಲ ಹುದ್ದೆಯಾಗಿ ಬೆಳಗಾವಿಯ ಎಸ್​ಪಿಯಾಗಿ ಆಯ್ಕೆಯಾದ ಅಲೋಕ್​ಕುಮಾರ್​, ನಂತರ ಚಿತ್ರದುರ್ಗ ಮತ್ತು ಕಲಬುರಗಿ ಜಿಲ್ಲೆ ಎಸ್ಪಿಯಾದ್ರು. ಅದಾದ ಬಳಿಕ 2006ರಲ್ಲಿ ಸಿಲಿಕಾನ್ ಸಿಟಿಗೆ ಆಗಮಿಸಿದ ಅಲೋಕ್​ ಕುಮಾರ್​ಗೆ ನಗರದಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಹುದ್ದೆ ನೀಡಲಾಯ್ತು. ಬಳಿಕ ಉಡುಪಿ-ಕಾರ್ಕಳ ರೇಂಜ್​ನ ನಕ್ಸಲ್ ನಿಗ್ರಹ ದಳದ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ರು. ದಕ್ಷಿಣ ವಿಭಾಗದಲ್ಲಿ ಡಿಸಿಪಿಯಾಗಿದ್ದ ಅಲೋಕ್​ ಕುಮಾರ್​ ರೌಡಿಗಳ ಪಾಲಿಗೆ, ಸಮಾಜಘಾತುಕರ ಪಾಲಿಗೆ ಸಿಂಹಸ್ವಪ್ನವಾಗಿದ್ರು. ಇದನ್ನ ಗಮನಿಸಿದ ರಾಜ್ಯ ಸರ್ಕಾರ ಅವರನ್ನ ಮತ್ತೆ ಬೆಂಗಳೂರಿಗೆ ಕರೆಸಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿತು. ನಂತರ ಹಲವು ಹುದ್ದೆಗಳನ್ನು ನಿಭಾಯಿಸಿ ಸಿಸಿಬಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್​ ಕುಮಾರ್‌ ಈಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

Intro:ಕರ್ನಾಟಕದ ಪೊಲೀಸ್ ಇಲಾಖೆಯ ಟೈಗರ್ ಎಂದೆ ಹೆಸರುವಾಸಿ
ಅಧಿಕಾರಾವಧಿಯಲ್ಲಿ ಇವ್ರು ಮಾಡಿದ ಸಾಧನೆ ಏನ್ ಗೊತ್ತಾ..

ಭವ್ಯ

ಅಲೋಕ್ ಕುಮಾರು ಹೆಸರನ್ನ ಕೇಳಿದ್ರೆ ಅಂಡರ್ವರ್ಡ್ ಡಾನ್ಗಳು ಶೇಕ್ ಆಗ್ತಿದ್ರು. ಅಂತಾ ಖಡಕ್ ಅಧಿಕಾರಿಯನ್ನೇ  ಸಿಎಂ  ಕುಮಾರಸ್ವಾಮಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯಕ್ತರನ್ನಾಗಿ‌ ನೇಮಿಸಿದ್ರು. ಇದೀಗ ರಾಜ್ಯ ಸರ್ಕಾರ ಮತ್ತೆ ಅಲೋಕ್ ಕುಮಾರ್ ಅವ್ರನ್ನ ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದೆ..


ಮೂಲತ"ಬಿಹಾರ್ ಮೂಲದವರಾಗಿದ್ದು 1994ರ ಕರ್ನಾಟಕ ಕೇಡರ್​ನ ಐಪಿಎಸ್​ ಅಲ ಖಡಕ್ ಅಧಿಕಾರಿಯಂತ್ಲೇ ಹೆಸ್ರು ಮಾಡಿದವರು. ಹಲವು ಹುದ್ದೆಗಳನ್ನು ಅಲಂಕರಿಸಿರುವ ಅಲೋಕ್ ಕುಮಾರ್ಗೆ ಈಗ ಹೊಸ ಜವಾಬ್ದಾರಿ ಸಿಕ್ಕಿದೆ. ಅಲೋಕ್​ ಸಿಸಿಬಿಯ ಹೆಚ್ಚುವರಿ ಆಯುಕ್ತರಾಗಿ ಸಿಲಿಕಾನ್ ಸಿಟಿ ಹಾಗೆ ರಾಜ್ಯದಲ್ಲೇ ದೊಡ್ಡ ಹೆಸ್ರು ಮಾಡಿದ್ರು.. ಇದಾದ ಬೆನ್ನಲ್ಲೇ ಎಡಿಜಿಪಿಯಾಗಿ ಬಡ್ತಿ ಪಡೆದ ಮೊದಲ ದಿನವೇ ನಗರ ಪೊಲೀಸ್ ಆಯುಕ್ತರ ಹುದ್ದೆಗೆ ರಾಜ್ಯ ಸರ್ಕಾರ ಇವರನ್ನ ಆಯ್ಕೆ ಮಾಡಿದೆ.

ಬದುಕಿನ ಹಾದಿ ಹೇಗಿತ್ತು..

ವೃತ್ತಿ ಬದುಕಿನ ಮೊದಲ ಹುದ್ದೆಯಾಗಿ ಬೆಳಗಾವಿಯ ಎಸ್​ಪಿಯಾಗಿ ಆಯ್ಕೆಯಾದ ಅಲೋಕ್​ಕುಮಾರ್​, ನಂತರ ಚಿತ್ರದುರ್ಗ ಮತ್ತು ಗುಲ್ಬರ್ಗಾ ಜಿಲ್ಲೆ ಎಸ್ಪಿಯಾದ್ರು.. ಅದಾದ ಬಳಿಕ 2006ರಲ್ಲಿ ಸಿಲಿಕಾನ್ ಸಿಟಿಗೆ ಆಗಮಿಸಿದ ಅಲೋಕ್​ಕುಮಾರ್​ಗೆ ನಗರದಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಸ್ಥಾನ. ಬಳಿಕ ಉಡುಪಿ- ಕಾರ್ಕಳ ರೇಂಜ್​ನ ನಕ್ಸಲ್ ನಿಗ್ರಹದಳದ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ರು.. ದಕ್ಷಿಣ ವಿಭಾಗದಲ್ಲಿ ಡಿಸಿಪಿಯಾಗಿದ್ದ ಅಲೋಕ್​ಕುಮಾರ್​ ರೌಡಿಗಳ ಪಾಲಿಗೆ, ಸಮಾಜ ಘಾತುಕರ ಪಾಲಿಗೆ ಸಿಂಹಸ್ವಪ್ನರಾಗಿದ್ರು.. ಇದನ್ನ ಗಮನಿಸಿದ ರಾಜ್ಯ ಸರ್ಕಾರ ಅವರನ್ನ ಮತ್ತೆ ಬೆಂಗಳೂರಗೆ ಕರೆಯಿಸಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿತು.. ನಂತರ ಉತ್ತರ ವಲಯ ಐಜಿಯಾಗಿ ಕಾರ್ಯನಿರ್ವಹಿಸಿದ ಅಲೋಕ್​ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದು ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆಗೆ. ಈ ವೇಳೆ ವೇಶ್ಯಾವಾಟಿಕೆ, ಬಡ್ಡಿ ದಂಧೆ, ಲೈವ್ ಬ್ಯಾಂಡ್​ಗಳ ವಿರುದ್ಧ ದಾಳಿ ಮಾಡಿ ಸಿಟಿಯಲ್ಲಿ ರೌಡಿ ಚಟುವಟಿಕೆ ಬ್ರೇಕ್ ಹಾಕಲು ರೌಡಿ ಪರೇಡ್ ದಾಳಿ‌ನಡೆಸಿದ್ರು

ಇನ್ನು ಅಲೋಕ್ ಕುಮಾರ್ ಮೇಲೆ ಕೆಲ ಆರೋಪಗಳು ಕೂಡ ಕೇಳಿ ಬಂದ್ವು..‌ನಕ್ಸಲ್​ ನಿಗ್ರಹ ದಳದ ಎಸ್ಪಿಯಾಗಿದ್ದಾಗ ವಿದ್ಯಾರ್ಥಿಗಳಿಗೆ ನಕ್ಸಲ್​ ನಂಟಿನ ಶಂಕೆಯ ಹಿನ್ನೆಲೆ ಶಿಕ್ಷೆ ಕೊಟ್ಟ ಆರೋಪ‌ಹಾಗೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚುವರಿ ಆಯುಕ್ತರಾಗಿದ್ದ ವೇಳೆ ಅಕ್ರಮ ಲಾಟರಿ ದಂಧೆಗೆ ಕೈ ಜೋಡಿಸಿದ ಆರೋಪ‌ಕೇಳಿಬಂದಿತ್ತು.
ನಂತರ ಅಕ್ಟೋಬರ್ 2015ರಲ್ಲಿ ಅಲೋಕ್ ಕುಮಾರ್ ಅಮಾನತು ರದ್ದಾಗಿ ಮೊದಲು ತರಬೇತಿ ವಿಭಾಗದ ಐಜಿಪಿಯನ್ನಾಗಿ ನೇಮಿಸಲಾಗಿತ್ತು. ನಂತ್ರ ಹಲವು ಹುದ್ದೆಗಳನ್ನು ನಿಭಾಯಿಸಿ ಸಿಸಿಬಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್​ ಕುಮಾರ್‌ಗೆ ಈಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ ನಿರ್ವಹಿಸಲಿದ್ದಾರೆ‌..
Body:KN_BNG_03_17_ALOk KUMAR_7204498_BHAVYAConclusion:KN_BNG_03_17_ALOk KUMAR_7204498_BHAVYA

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.