ETV Bharat / state

ಮೈತ್ರಿ ಸರ್ಕಾರ ಉಳಿಯುತ್ತದೆ: ವಿಶ್ವಾಸದಲ್ಲಿ ಡಿ ಕೆ ಸುರೇಶ್

ಕಾಂಗ್ರೆಸ್​​​ - ಜೆಡಿಎಸ್​​ ಮೈತ್ರಿ ಸರ್ಕಾರ ಪತನವಾಗುವ ಎಲ್ಲ ರೀತಿಯ ಲಕ್ಷಣಗಳು ಗೋಚರಿಸುತ್ತಿದ್ದು, ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

author img

By

Published : Jul 8, 2019, 12:10 PM IST

ಸಂಸದ ಡಿ.ಕೆ. ಸುರೇಶ್

ಬೆಂಗಳೂರು: ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ತನ್ನ ಅಧಿಕಾರ ಅವಧಿ ಪೂರ್ಣಗೊಳಿಸುತ್ತದೆ ಎಂದು ಸಂಸದ ಡಿ.ಕೆ. ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್ ನಿವಾಸದಲ್ಲಿ ಈ ಟಿವಿ ಭಾರತ್​​ ಜೊತೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸಲು ಎಲ್ಲ ನಾಯಕರು ಪ್ರಯತ್ನ ನಡೆಸಿದ್ದಾರೆ. ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಪಕ್ಷ ಹರಸಾಹಸಪಡುತ್ತಿರುವುದು ಸತ್ಯ. ಬಿಜೆಪಿ ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಇದೇ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ ಎಂದು ಹರಿಹಾಯ್ದರು.

ಸಂಸದ ಡಿ.ಕೆ. ಸುರೇಶ್

ಇನ್ನು ಸದ್ಯಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಅವರೇ ಮುಂದುವರೆಯುತ್ತಾರೆ. ಮುಖ್ಯಮಂತ್ರಿಯ ಬದಲಾವಣೆ ಸಾಧ್ಯವಿಲ್ಲ ಎಂದು ಸಿಎಂ ಬದಲಾವಣೆ ಕೂಗಿಗೆ ತೆರೆ ಎಳೆದರು.

ಮೈತ್ರಿ ಸರ್ಕಾರಕ್ಕೆ ಎದುರಾದ ಆತಂಕ ಎರಡು ದಿನಗಳಲ್ಲಿ ನಿವಾರಣೆ:

ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಆತಂಕ ಇನ್ನೆರಡು ದಿನಗಳಲ್ಲಿ ನಿವಾರಣೆಯಾಗಲಿದೆ ಎಂದು ಸಂಸದ ಡಿಕೆ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಕೆಲ ಶಾಸಕರು ರಾಜೀನಾಮೆ ನೀಡುತ್ತಾರೆ ಅನ್ನುವುದು ಮಾಧ್ಯಮಗಳ ವರದಿ. ಅತೃಪ್ತರ ಮನವೊಲಿಸಲು ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನ ಬಿಜೆಪಿಯವರ ಆಪರೇಷನ್ ಕಮಲ ಅಂತಿರೋ, ಆಪರೇಷನ್ ಮೋದಿ ಅಥವಾ ಆಪರೇಷನ್ ಶಾ ಅಂತಿರೋ ಗೊತ್ತಿಲ್ಲ ಎಂದರು.

ಈ ರೀತಿಯ ವಾತಾವರಣ ದೇಶದಲ್ಲಿ ಯಾವುತ್ತೂ ಆಗಿರಲಿಲ್ಲ. ಬಿಜೆಪಿ ನಾಯಕರ ಉದ್ದೇಶವನ್ನು ಮಾಧ್ಯಮಗಳು ರಾಜ್ಯದ ಜನತೆಗೆ ತಿಳಿಸಬೇಕು. ಅಧಿಕಾರ ಇರುತ್ತೇ ಹೋಗುತ್ತೇ. ಆದ್ರೆ ಪ್ರಜಾಪ್ರಭುತ್ವವನ್ನ ನಾವು ಗೌರವಿಸಬೇಕು ಎಂದರು.

ಬೆಂಗಳೂರು: ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ತನ್ನ ಅಧಿಕಾರ ಅವಧಿ ಪೂರ್ಣಗೊಳಿಸುತ್ತದೆ ಎಂದು ಸಂಸದ ಡಿ.ಕೆ. ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್ ನಿವಾಸದಲ್ಲಿ ಈ ಟಿವಿ ಭಾರತ್​​ ಜೊತೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸಲು ಎಲ್ಲ ನಾಯಕರು ಪ್ರಯತ್ನ ನಡೆಸಿದ್ದಾರೆ. ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಪಕ್ಷ ಹರಸಾಹಸಪಡುತ್ತಿರುವುದು ಸತ್ಯ. ಬಿಜೆಪಿ ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಇದೇ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ ಎಂದು ಹರಿಹಾಯ್ದರು.

ಸಂಸದ ಡಿ.ಕೆ. ಸುರೇಶ್

ಇನ್ನು ಸದ್ಯಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಅವರೇ ಮುಂದುವರೆಯುತ್ತಾರೆ. ಮುಖ್ಯಮಂತ್ರಿಯ ಬದಲಾವಣೆ ಸಾಧ್ಯವಿಲ್ಲ ಎಂದು ಸಿಎಂ ಬದಲಾವಣೆ ಕೂಗಿಗೆ ತೆರೆ ಎಳೆದರು.

ಮೈತ್ರಿ ಸರ್ಕಾರಕ್ಕೆ ಎದುರಾದ ಆತಂಕ ಎರಡು ದಿನಗಳಲ್ಲಿ ನಿವಾರಣೆ:

ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಆತಂಕ ಇನ್ನೆರಡು ದಿನಗಳಲ್ಲಿ ನಿವಾರಣೆಯಾಗಲಿದೆ ಎಂದು ಸಂಸದ ಡಿಕೆ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಕೆಲ ಶಾಸಕರು ರಾಜೀನಾಮೆ ನೀಡುತ್ತಾರೆ ಅನ್ನುವುದು ಮಾಧ್ಯಮಗಳ ವರದಿ. ಅತೃಪ್ತರ ಮನವೊಲಿಸಲು ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನ ಬಿಜೆಪಿಯವರ ಆಪರೇಷನ್ ಕಮಲ ಅಂತಿರೋ, ಆಪರೇಷನ್ ಮೋದಿ ಅಥವಾ ಆಪರೇಷನ್ ಶಾ ಅಂತಿರೋ ಗೊತ್ತಿಲ್ಲ ಎಂದರು.

ಈ ರೀತಿಯ ವಾತಾವರಣ ದೇಶದಲ್ಲಿ ಯಾವುತ್ತೂ ಆಗಿರಲಿಲ್ಲ. ಬಿಜೆಪಿ ನಾಯಕರ ಉದ್ದೇಶವನ್ನು ಮಾಧ್ಯಮಗಳು ರಾಜ್ಯದ ಜನತೆಗೆ ತಿಳಿಸಬೇಕು. ಅಧಿಕಾರ ಇರುತ್ತೇ ಹೋಗುತ್ತೇ. ಆದ್ರೆ ಪ್ರಜಾಪ್ರಭುತ್ವವನ್ನ ನಾವು ಗೌರವಿಸಬೇಕು ಎಂದರು.

Intro:Chitchat backpackBody:ಮೈತ್ರಿ ಸರ್ಕಾರ ಉಳಿಯುತ್ತದೆ ಎಂಬ ಕಾನ್ಫಿಡೆನ್ಸ್ ಇದೆ: ಡಿ ಕೆ ಸುರೇಶ್


ಬೆಂಗಳೂರು: ಮೈತ್ರಿ ಸರ್ಕಾರ ಉಳಿಯುತ್ತದೆ ಎಂಬ ಕಾನ್ಫಿಡೆನ್ಸ್ ಇದೆ ಎಂದು ಸಂಸದ ಡಿಕೆ ಸುರೇಶ್ ಈಟಿವಿ ಭಾರತ್ ಗೆ ತಿಳಿಸಿದರು.


ಉಪಮುಖ್ಯಮಂತ್ರಿ ಗೃಹದಲ್ಲಿ ನಡೆಯುತ್ತಿರುವ ಉಪಹಾರ ಕೂಟದಲ್ಲಿ ಭಾಗವಹಿಸಿದ ಸಂಸದ ಡಿಕೆ ಸುರೇಶ್ ಒಳಗೆ ಇರುವಂತ ಸಚಿವರು ರಾಜೀನಾಮೆ ಕೊಡುವುದಕ್ಕೆ ಸಿದ್ಧರಾಗಿದ್ದಾರೆ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ ಎಂದು ತಿಳಿಸಿದರು.


ಸರ್ಕಾರ ಉಳಿಯುತ್ತದೆ ಎಂಬ ಕಾನ್ಫಿಡೆನ್ಸ್ ಇದೆ, ಈ ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಪಕ್ಷ ಹರಸಾಹಸಪಡುತ್ತಿದೆ ಇದು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗದೆ ದೇಶದಲ್ಲಿ ಇದೇ ಪರಿಸ್ಥಿತಿ ಬಿಜೆಪಿ ಪಕ್ಷ ನಿರ್ಮಾಣ ಮಾಡುತ್ತಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.


ಈ ಸದ್ಯಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ ಸದ್ಯಕ್ಕೆ ಮುಖ್ಯಮಂತ್ರಿಯ ಬದಲಾವಣೆ ಇಲ್ಲ ಇದರ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಸಂಸದ ಡಿಕೆ ಸುರೇಶ್ ಹೇಳಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.