ETV Bharat / state

ಕಿಡ್ನಾಪ್, ಸುಲಿಗೆಗೆ ಸಾಥ್ ನೀಡಿದ ಆರೋಪ: ಪ್ರೊಬೇಷನರಿ ಪಿಎಸ್ಐ ಸಹಿತ ನಾಲ್ವರ ಬಂಧನ

ಕಿಡ್ನಾಪ್ ಹಾಗೂ ಸುಲಿಗೆ ಮಾಡಲು ಸಾಥ್ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರೊಬೇಷನರಿ ಪಿಎಸ್ಐ ಸಹಿತ ನಾಲ್ವರನ್ನು ಬಂಧಿಸಲಾಗಿದೆ.

author img

By ETV Bharat Karnataka Team

Published : Nov 20, 2023, 2:29 PM IST

Arrest of four people including probationary PSI
ಕಿಡ್ನಾಪ್, ಸುಲಿಗೆಗೆ ಸಾಥ್ ನೀಡಿದ ಆರೋಪ: ಪ್ರೊಬೇಷನರಿ ಪಿಎಸ್ಐ ಸಹಿತ ನಾಲ್ವರ ಬಂಧನ

ಬೆಂಗಳೂರು: ಅಪಹರಣ ಹಾಗೂ ಸುಲಿಗೆಗೆ ಬೆಂಬಲ ನೀಡಿದ ಆರೋಪದಡಿ ಪ್ರೊಬೇಷನರಿ ಪಿಎಸ್ಐ, ಕಾನ್ಸ್‌ಟೆಬಲ್, ಗೃಹರಕ್ಷಕ ದಳದ ಮಾಜಿ ಸಿಬ್ಬಂದಿ ಸಹಿತ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರೊಬೇಷನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್, ಕಾನ್ಸ್‌ಟೆಬಲ್ ಅಲ್ಲಾಭಕ್ಷ್, ಮಾಜಿ ಹೋಮ್ ಗಾರ್ಡ್ ರಾಜ್ ಕಿಶೋರ್ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಹಿಂದೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ಧಾರೂಢಗೆ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಂದರ್ಭದಲ್ಲಿ ಹೋಮ್ ಗಾರ್ಡ್ ರಾಜ್ ಕಿಶೋರ್ ಪರಿಚಯವಾಗಿತ್ತು. ಇಬ್ಬರ ನಡುವಿನ ಸ್ನೇಹದಿಂದ ಇದೇ ವರ್ಷ ಜುಲೈನಲ್ಲಿ ರಾಜ್​​ ಕಿಶೋರ್, ಪಿಎಸ್​ಐ ಸಿದ್ಧಾರೂಢ ಬಿಜ್ಜಣ್ಣನವರ್ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಬಂದಿದ್ದ. ಈ ವೇಳೆ ಸಿದ್ಧಾರೂಢ ತನ್ನ​ ಬೈಕ್ ಸ್ಟಾರ್ಟ್ ಮಾಡಲು ಯತ್ನಿಸುತ್ತಿದ್ದುದನ್ನು ಕಂಡ ರಾಜ್​ ಕಿಶೋರ್​ ''ತಾನೇ ರಿಪೇರಿ ಮಾಡಿಸುತ್ತೇನೆ'' ಹೇಳಿದ್ದ.

ಅಲ್ಲದೆ ಸಿದ್ಧಾರೂಢನ ನಂಬಿಕೆ ಗಳಿಸಿಕೊಂಡು ''ನನ್ನ ಅಣ್ಣನಿಗೆ, ಕಾರ್ತಿಕ್​ ಎಂಬಾತ ಹಣ ನೀಡಬೇಕು, ನೀವು ಬಂದರೆ ಹಣ ಕೊಡಿಸಬಹುದು ಸರ್​​'' ಎಂದು ಮನವಿ ಮಾಡಿದ್ದ. ರಾಜ್​ ಕಿಶೋರ್​ನ ಮಾತು ನಂಬಿದ್ದ ಸಿದ್ಧಾರೂಢ ಆತನೊಂದಿಗೆ ಸೇರಿ ಜೊತೆಯಲ್ಲಿ‌ ಕಾನ್ಸ್‌ಟೆಬಲ್ ಅಲ್ಲಾಭಕ್ಷ್ ನನ್ನ ಕರೆದುಕೊಂಡು ಕಾರ್ತಿಕ್ ಇದ್ದ ಸ್ಥಳಕ್ಕೆ ಹೋಗಿದ್ದ. ಬಳಿಕ ಕಾರ್ತಿಕ್​ನನ್ನು ಹೆಚ್​ಎಸ್​ಆರ್ ಲೇಔಟ್​​ನಿಂದ ಕರೆದೊಯ್ದಿದ್ದ ಮೂವರು, ಕೆ.ಜಿ ಹಳ್ಳಿಗೆ ಕರೆದುಕೊಂಡು ಹೋಗಿ ​ಒಂದೂವರೆ ಕೋಟಿ ಕ್ರಿಪ್ಟೊ ಕರೆನ್ಸಿ ಮತ್ತು 20 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದರು. ಇದರಿಂದ ಬೆದರಿದ್ದ ಕಾರ್ತಿಕ್​ ಆರೋಪಿಗಳ ಅಕೌಂಟ್​ಗೆ ವರ್ಗಾವಣೆ ಮಾಡಿದ್ದ.

ಬಳಿಕ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ದೂರು ದಾಖಲಿಸಿದ್ದ. ಬಳಿಕ ಪ್ರಕರಣ ಕೆ.ಜಿ. ಹಳ್ಳಿ ಠಾಣೆಯಿಂದ ಸಿಸಿಬಿಗೆ ವರ್ಗಾವಣೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ಖಾತೆಯಿಂದ 20 ಲಕ್ಷ ರೂ. ಹಣ ಮತ್ತು ಕ್ರಿಪ್ಟೊ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ. ಇದೇ ಪ್ರಕರಣದಲ್ಲಿ ಈ ಮೊದಲು ಬಂಧಿತರಾಗಿದ್ದ ವಂಶಿ ಕೃಷ್ಣ, ವಿನೋದ್ ನಾಯಕ ಹಾಗೂ ಕಿರಣ್​ ಎಂಬಾತ ಜಾಮೀನು‌ ಪಡೆದಿದ್ದು, ಜಾಮೀನು ಆದೇಶ ರದ್ದು ಮಾಡುವಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಪ್ರಕರಣದಲ್ಲಿ ನಾಲ್ವರು ಅರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ್ದ ಓರ್ವ ಪಿಎಸ್​ಐ, ಕಾನ್ಸ್‌ಟೇಬಲ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಸುಮಾರು ಒಂದೂವರೆ ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ಮತ್ತು ಇಪತ್ತು ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ. ಇನ್ನೂ ತನಿಖೆಯ ಅಗತ್ಯವಿದ್ದು, ತನಿಖೆ ನಡೆಸಲಾಗುತ್ತಿದೆ'' ಎಂದು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಮುರುಘಾಶ್ರೀ ವಿರುದ್ಧ ಮತ್ತೆ ಬಂಧನ ವಾರೆಂಟ್: ದಾವಣಗೆರೆ ವಿರಕ್ತ ಮಠದತ್ತ ಭಕ್ತರ ದಂಡು

ಬೆಂಗಳೂರು: ಅಪಹರಣ ಹಾಗೂ ಸುಲಿಗೆಗೆ ಬೆಂಬಲ ನೀಡಿದ ಆರೋಪದಡಿ ಪ್ರೊಬೇಷನರಿ ಪಿಎಸ್ಐ, ಕಾನ್ಸ್‌ಟೆಬಲ್, ಗೃಹರಕ್ಷಕ ದಳದ ಮಾಜಿ ಸಿಬ್ಬಂದಿ ಸಹಿತ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರೊಬೇಷನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್, ಕಾನ್ಸ್‌ಟೆಬಲ್ ಅಲ್ಲಾಭಕ್ಷ್, ಮಾಜಿ ಹೋಮ್ ಗಾರ್ಡ್ ರಾಜ್ ಕಿಶೋರ್ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಹಿಂದೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ಧಾರೂಢಗೆ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಂದರ್ಭದಲ್ಲಿ ಹೋಮ್ ಗಾರ್ಡ್ ರಾಜ್ ಕಿಶೋರ್ ಪರಿಚಯವಾಗಿತ್ತು. ಇಬ್ಬರ ನಡುವಿನ ಸ್ನೇಹದಿಂದ ಇದೇ ವರ್ಷ ಜುಲೈನಲ್ಲಿ ರಾಜ್​​ ಕಿಶೋರ್, ಪಿಎಸ್​ಐ ಸಿದ್ಧಾರೂಢ ಬಿಜ್ಜಣ್ಣನವರ್ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಬಂದಿದ್ದ. ಈ ವೇಳೆ ಸಿದ್ಧಾರೂಢ ತನ್ನ​ ಬೈಕ್ ಸ್ಟಾರ್ಟ್ ಮಾಡಲು ಯತ್ನಿಸುತ್ತಿದ್ದುದನ್ನು ಕಂಡ ರಾಜ್​ ಕಿಶೋರ್​ ''ತಾನೇ ರಿಪೇರಿ ಮಾಡಿಸುತ್ತೇನೆ'' ಹೇಳಿದ್ದ.

ಅಲ್ಲದೆ ಸಿದ್ಧಾರೂಢನ ನಂಬಿಕೆ ಗಳಿಸಿಕೊಂಡು ''ನನ್ನ ಅಣ್ಣನಿಗೆ, ಕಾರ್ತಿಕ್​ ಎಂಬಾತ ಹಣ ನೀಡಬೇಕು, ನೀವು ಬಂದರೆ ಹಣ ಕೊಡಿಸಬಹುದು ಸರ್​​'' ಎಂದು ಮನವಿ ಮಾಡಿದ್ದ. ರಾಜ್​ ಕಿಶೋರ್​ನ ಮಾತು ನಂಬಿದ್ದ ಸಿದ್ಧಾರೂಢ ಆತನೊಂದಿಗೆ ಸೇರಿ ಜೊತೆಯಲ್ಲಿ‌ ಕಾನ್ಸ್‌ಟೆಬಲ್ ಅಲ್ಲಾಭಕ್ಷ್ ನನ್ನ ಕರೆದುಕೊಂಡು ಕಾರ್ತಿಕ್ ಇದ್ದ ಸ್ಥಳಕ್ಕೆ ಹೋಗಿದ್ದ. ಬಳಿಕ ಕಾರ್ತಿಕ್​ನನ್ನು ಹೆಚ್​ಎಸ್​ಆರ್ ಲೇಔಟ್​​ನಿಂದ ಕರೆದೊಯ್ದಿದ್ದ ಮೂವರು, ಕೆ.ಜಿ ಹಳ್ಳಿಗೆ ಕರೆದುಕೊಂಡು ಹೋಗಿ ​ಒಂದೂವರೆ ಕೋಟಿ ಕ್ರಿಪ್ಟೊ ಕರೆನ್ಸಿ ಮತ್ತು 20 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದರು. ಇದರಿಂದ ಬೆದರಿದ್ದ ಕಾರ್ತಿಕ್​ ಆರೋಪಿಗಳ ಅಕೌಂಟ್​ಗೆ ವರ್ಗಾವಣೆ ಮಾಡಿದ್ದ.

ಬಳಿಕ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ದೂರು ದಾಖಲಿಸಿದ್ದ. ಬಳಿಕ ಪ್ರಕರಣ ಕೆ.ಜಿ. ಹಳ್ಳಿ ಠಾಣೆಯಿಂದ ಸಿಸಿಬಿಗೆ ವರ್ಗಾವಣೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ಖಾತೆಯಿಂದ 20 ಲಕ್ಷ ರೂ. ಹಣ ಮತ್ತು ಕ್ರಿಪ್ಟೊ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ. ಇದೇ ಪ್ರಕರಣದಲ್ಲಿ ಈ ಮೊದಲು ಬಂಧಿತರಾಗಿದ್ದ ವಂಶಿ ಕೃಷ್ಣ, ವಿನೋದ್ ನಾಯಕ ಹಾಗೂ ಕಿರಣ್​ ಎಂಬಾತ ಜಾಮೀನು‌ ಪಡೆದಿದ್ದು, ಜಾಮೀನು ಆದೇಶ ರದ್ದು ಮಾಡುವಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಪ್ರಕರಣದಲ್ಲಿ ನಾಲ್ವರು ಅರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ್ದ ಓರ್ವ ಪಿಎಸ್​ಐ, ಕಾನ್ಸ್‌ಟೇಬಲ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಸುಮಾರು ಒಂದೂವರೆ ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ಮತ್ತು ಇಪತ್ತು ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ. ಇನ್ನೂ ತನಿಖೆಯ ಅಗತ್ಯವಿದ್ದು, ತನಿಖೆ ನಡೆಸಲಾಗುತ್ತಿದೆ'' ಎಂದು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಮುರುಘಾಶ್ರೀ ವಿರುದ್ಧ ಮತ್ತೆ ಬಂಧನ ವಾರೆಂಟ್: ದಾವಣಗೆರೆ ವಿರಕ್ತ ಮಠದತ್ತ ಭಕ್ತರ ದಂಡು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.