ETV Bharat / state

ಬಾಲಕಿ ಮೇಲೆ‌ ಅತ್ಯಾಚಾರಕ್ಕೆ ಯತ್ನ ಆರೋಪ: ವೃದ್ಧನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದ ಸಂತ್ರಸ್ತೆಯ ಕುಟುಂಬ

ಒಣಗಿದ ಬಟ್ಟೆ ತೆಗೆಯಲು ಬಂದ ಅಪ್ರಾಪ್ತೆಗೆ ಮತ್ತು ಬರುವ ಔಷಧಿ ನೀಡಿ, ವೃದ್ಧನೋರ್ವ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಈ ವಿಷಯ ತಿಳಿದ ಬಾಲಕಿ ಮನೆಯವರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

author img

By

Published : Dec 12, 2022, 2:14 PM IST

Updated : Dec 12, 2022, 2:38 PM IST

ಬೆಂಗಳೂರು
ಬೆಂಗಳೂರು
ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್

ಬೆಂಗಳೂರು: ಮತ್ತು ಬರುವ ಔಷಧಿ ನೀಡಿ ಶಾಲಾ ಬಾಲಕಿ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಆರೋಪದಡಿ 73 ವರ್ಷದ ವೃದ್ಧನನ್ನು ಥಳಿಸಿ, ಬಾಲಕಿ ಮನೆಯವರೇ ಕೊಲೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಕುಪ್ಪಣ್ಣ ಮೃತ ವೃದ್ಧ. ಹಲವು ವರ್ಷಗಳಿಂದ ನಗರದ ಬಾಬುಸಾಪಾಳ್ಯದಲ್ಲಿ ಇವರು ವಾಸವಾಗಿದ್ದ. ಜೀವನಕ್ಕಾಗಿ ಗಾರೆ ಕೆಲಸ‌ ಮಾಡುತ್ತಿದ್ದರು. ವೃದ್ಧನ ಮನೆಯ ಸಮೀಪದಲ್ಲೇ ಬಾಲಕಿಯ ಮನೆಯಿದ್ದು, ಭಾನುವಾರ ಸಂಜೆ ಒಣಗಲು ಹಾಕಿದ್ದ ಶಾಲಾ ಸಮವಸ್ತ್ರ ತೆಗೆದುಕೊಳ್ಳಲು ಬಂದಾಗ ಕುಪ್ಪಣ್ಣ ಬಾಲಕಿಯನ್ನು ಮಾತನಾಡಿಸಿದ್ದಾರೆ ಎನ್ನಲಾಗ್ತಿದೆ. ಬಳಿಕ ಪಾನೀಯದಲ್ಲಿ‌ ಮತ್ತು ಬರುವ ಔಷಧಿ‌ ಮಿಶ್ರಣ ಮಾಡಿ ಕುಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ‌. ಬಾಲಕಿ ಅರೆಪ್ರಜ್ಞೆಯಲ್ಲಿ ಇರುವಾಗ ಮನೆಗೆ ಕರೆದೊಯ್ದು ಆತ್ಯಾಚಾರವೆಸಗಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಸಂಜೆ ಹೊರಹೋಗಿದ್ದ 16 ವರ್ಷದ ಮಗಳು ಮನೆಗೆ ಬರದಿದ್ದನ್ನು ಕಂಡು ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ. ಅಂತಿಮವಾಗಿ ವೃದ್ಧನ ಮನೆಯಲ್ಲಿ ಬಂದು ನೋಡಿದಾಗ ಬಾಲಕಿ ವಿವಸ್ತ್ರಳಾಗಿ ಇರುವುದು ಕಂಡು ಬಂದಿತ್ತು. ನಡೆದಿರುವ ವಿಷಯವನ್ನ ಪೋಷಕರಿಗೆ ಬಾಲಕಿ ತಿಳಿಸಿದ್ದಾಳೆ. ಅಕ್ರೋಶಗೊಂಡ ಮನೆಯವರು ವೃದ್ಧನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ

ನಂತರ ಹೆಣ್ಣೂರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಮನೆ ಬಳಿ ನೋಡಿದಾಗ ವೃದ್ಧ ಮೃತಪಟ್ಟ ಸ್ಥಿತಿಯಲ್ಲಿದ್ದ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್

ಬೆಂಗಳೂರು: ಮತ್ತು ಬರುವ ಔಷಧಿ ನೀಡಿ ಶಾಲಾ ಬಾಲಕಿ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಆರೋಪದಡಿ 73 ವರ್ಷದ ವೃದ್ಧನನ್ನು ಥಳಿಸಿ, ಬಾಲಕಿ ಮನೆಯವರೇ ಕೊಲೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಕುಪ್ಪಣ್ಣ ಮೃತ ವೃದ್ಧ. ಹಲವು ವರ್ಷಗಳಿಂದ ನಗರದ ಬಾಬುಸಾಪಾಳ್ಯದಲ್ಲಿ ಇವರು ವಾಸವಾಗಿದ್ದ. ಜೀವನಕ್ಕಾಗಿ ಗಾರೆ ಕೆಲಸ‌ ಮಾಡುತ್ತಿದ್ದರು. ವೃದ್ಧನ ಮನೆಯ ಸಮೀಪದಲ್ಲೇ ಬಾಲಕಿಯ ಮನೆಯಿದ್ದು, ಭಾನುವಾರ ಸಂಜೆ ಒಣಗಲು ಹಾಕಿದ್ದ ಶಾಲಾ ಸಮವಸ್ತ್ರ ತೆಗೆದುಕೊಳ್ಳಲು ಬಂದಾಗ ಕುಪ್ಪಣ್ಣ ಬಾಲಕಿಯನ್ನು ಮಾತನಾಡಿಸಿದ್ದಾರೆ ಎನ್ನಲಾಗ್ತಿದೆ. ಬಳಿಕ ಪಾನೀಯದಲ್ಲಿ‌ ಮತ್ತು ಬರುವ ಔಷಧಿ‌ ಮಿಶ್ರಣ ಮಾಡಿ ಕುಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ‌. ಬಾಲಕಿ ಅರೆಪ್ರಜ್ಞೆಯಲ್ಲಿ ಇರುವಾಗ ಮನೆಗೆ ಕರೆದೊಯ್ದು ಆತ್ಯಾಚಾರವೆಸಗಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಸಂಜೆ ಹೊರಹೋಗಿದ್ದ 16 ವರ್ಷದ ಮಗಳು ಮನೆಗೆ ಬರದಿದ್ದನ್ನು ಕಂಡು ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ. ಅಂತಿಮವಾಗಿ ವೃದ್ಧನ ಮನೆಯಲ್ಲಿ ಬಂದು ನೋಡಿದಾಗ ಬಾಲಕಿ ವಿವಸ್ತ್ರಳಾಗಿ ಇರುವುದು ಕಂಡು ಬಂದಿತ್ತು. ನಡೆದಿರುವ ವಿಷಯವನ್ನ ಪೋಷಕರಿಗೆ ಬಾಲಕಿ ತಿಳಿಸಿದ್ದಾಳೆ. ಅಕ್ರೋಶಗೊಂಡ ಮನೆಯವರು ವೃದ್ಧನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ

ನಂತರ ಹೆಣ್ಣೂರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಮನೆ ಬಳಿ ನೋಡಿದಾಗ ವೃದ್ಧ ಮೃತಪಟ್ಟ ಸ್ಥಿತಿಯಲ್ಲಿದ್ದ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

Last Updated : Dec 12, 2022, 2:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.