ETV Bharat / state

ಯಾರ ಬಳಿ ಜನ ಇದ್ದಾರೆ ಎಂಬುದು ಎಲೆಕ್ಷನ್ ಬಳಿಕ ಗೊತ್ತಾಗಲಿದೆ: ಕೆ.ಜೆ.ಜಾರ್ಜ್

ಕೆ. ಆರ್​. ಪುರಂನ ಕಾಂಗ್ರೆಸ್​ ಅಭ್ಯರ್ಥಿ ನಾರಾಯಣಸ್ವಾಮಿ ಭಟ್ಟರ ಹಳ್ಳಿಯ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಪ್ರಚಾರವನ್ನು ಆರಂಭಿಸಿದ್ರು. ಅವರಿಗೆ ಮಾಜಿ ಸಚಿವ ಕೆ. ಜೆ. ಜಾರ್ಜ್​ ಸಾಥ್​ ನೀಡಿದ್ರು.

author img

By

Published : Nov 22, 2019, 5:34 PM IST

ಕಾಂಗ್ರೆಸ್​ ಅಭ್ಯರ್ಥಿ ನಾರಾಯಣಸ್ವಾಮಿಯಿಂದ ಪೂಜೆ

ಬೆಂಗಳೂರು: ಕೆ.ಆರ್.ಪುರಂ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಅವರು‌ ಕೆ.ಆರ್. ಪುರಂನ ಭಟ್ಟರ ಹಳ್ಳಿಯ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು.

ಮಾಜಿ‌ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕೆ.ಆರ್.ಪುರಂನಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ನಮ್ಮ ಅಭ್ಯರ್ಥಿ ಪರ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆ.ಆರ್.ಪುರಂನಲ್ಲಿ ಕಾಂಗ್ರೆಸ್ ಈ ಬಾರಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು‌.

ಕಾಂಗ್ರೆಸ್​​ಗೆ ಟೇಬಲ್ ಹಾಕಲು ಜನ ಇಲ್ಲ ಎಂಬ ಸಚಿವ ಆರ್. ಅಶೋಕ್ ಹೇಳಿಕೆಗೆ ಕಿಡಿಕಾರಿದ ಅವರು ಅಶೋಕ್ ಅವರು ಹಗಲು ಕನಸು ಕಾಣುತ್ತಿದ್ದಾರೆ. ಮುಂದಿನ ತಿಂಗಳು 9ರಂದು ಎಲ್ಲವೂ ಗೊತ್ತಾಗಲಿದೆ. ಕಾಂಗ್ರೆಸ್​​ಗೆ ಜನ ಇದ್ದರಾ? ಬಿಜೆಪಿ ಬಳಿ ಜನ ಇದ್ದರಾ ಅಂತ. ಆಗ ಅಶೋಕ್ ಕನಸು‌‌ ಕನಸಾಗಿ ಉಳಿಯುತ್ತೆ ಎಂದರು.

ಕಾಂಗ್ರೆಸ್​ ಅಭ್ಯರ್ಥಿ ನಾರಾಯಣಸ್ವಾಮಿಯಿಂದ ಪೂಜೆ

ಕಾಂಗ್ರೆಸ್​​ನ ಎಲ್ಲಾ ನಾಯಕರು ಒಟ್ಟಾಗಿ ಇದ್ದೇವೆ. ಯಾವುದೇ ಭಿನ್ನಾಭಿಪ್ರಾಯ ನಮ್ಮಲ್ಲಿ ಇಲ್ಲ. ಇಡೀ ಕಾಂಗ್ರೆಸ್ ನಾರಾಯಣಸ್ವಾಮಿ ಪರ ಇದ್ದಾರೆ. ಕಾಂಗ್ರೆಸ್​ನಲ್ಲಿ ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ.‌ ಬಿಜೆಪಿ ಅವರ ಮಾತು ಕೇಳಬೇಡಿ. ಚುನಾವಣಾ ಫಲಿತಾಂಶ ಬಂದ ನಂತ ಬಿಜೆಪಿ ಸರ್ಕಾರವೇ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದ್ರು.

ಕ್ಷೇತ್ರದ ಅಭ್ಯರ್ಥಿ ನಾರಾಯಣಸ್ವಾಮಿ ಮಾತನಾಡಿ ಕಾಂಗ್ರೆಸ್​ಗೆ ಅಲ್ಲ, ಬಿಜೆಪಿಗೆ ಟೇಬಲ್ ಹಾಕಲು ಜನರಿಲ್ಲ. ಎರಡು ಚುನಾವಣೆಯಲ್ಲಿ ಬಿಜೆಪಿ ಸೋತಿತ್ತು. ಅವರ ಅನುಭವವನ್ನು ಅಶೋಕ್ ಹೇಳಿಕೊಂಡಿದ್ದಾರೆ.‌ ಅವರಿಗೆ ಟೇಬಲ್ ಹಾಕಲು ಜನರು ಇರಲಿಲ್ಲ. ಕೆ.ಆರ್. ಪುರಂನಲ್ಲಿ ಕಾಂಗ್ರೆಸ್ ಅಲೆ ಎದ್ದಿದೆ. ಡಿಸೆಂಬರ್ 9 ಕ್ಕೆ ಜನರು ಬಿಜೆಪಿಯವರಿಗೆ ಉತ್ತರ ಕೊಡ್ತಾರೆ ಎಂದರು.

ಬೆಂಗಳೂರು: ಕೆ.ಆರ್.ಪುರಂ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಅವರು‌ ಕೆ.ಆರ್. ಪುರಂನ ಭಟ್ಟರ ಹಳ್ಳಿಯ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು.

ಮಾಜಿ‌ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕೆ.ಆರ್.ಪುರಂನಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ನಮ್ಮ ಅಭ್ಯರ್ಥಿ ಪರ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆ.ಆರ್.ಪುರಂನಲ್ಲಿ ಕಾಂಗ್ರೆಸ್ ಈ ಬಾರಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು‌.

ಕಾಂಗ್ರೆಸ್​​ಗೆ ಟೇಬಲ್ ಹಾಕಲು ಜನ ಇಲ್ಲ ಎಂಬ ಸಚಿವ ಆರ್. ಅಶೋಕ್ ಹೇಳಿಕೆಗೆ ಕಿಡಿಕಾರಿದ ಅವರು ಅಶೋಕ್ ಅವರು ಹಗಲು ಕನಸು ಕಾಣುತ್ತಿದ್ದಾರೆ. ಮುಂದಿನ ತಿಂಗಳು 9ರಂದು ಎಲ್ಲವೂ ಗೊತ್ತಾಗಲಿದೆ. ಕಾಂಗ್ರೆಸ್​​ಗೆ ಜನ ಇದ್ದರಾ? ಬಿಜೆಪಿ ಬಳಿ ಜನ ಇದ್ದರಾ ಅಂತ. ಆಗ ಅಶೋಕ್ ಕನಸು‌‌ ಕನಸಾಗಿ ಉಳಿಯುತ್ತೆ ಎಂದರು.

ಕಾಂಗ್ರೆಸ್​ ಅಭ್ಯರ್ಥಿ ನಾರಾಯಣಸ್ವಾಮಿಯಿಂದ ಪೂಜೆ

ಕಾಂಗ್ರೆಸ್​​ನ ಎಲ್ಲಾ ನಾಯಕರು ಒಟ್ಟಾಗಿ ಇದ್ದೇವೆ. ಯಾವುದೇ ಭಿನ್ನಾಭಿಪ್ರಾಯ ನಮ್ಮಲ್ಲಿ ಇಲ್ಲ. ಇಡೀ ಕಾಂಗ್ರೆಸ್ ನಾರಾಯಣಸ್ವಾಮಿ ಪರ ಇದ್ದಾರೆ. ಕಾಂಗ್ರೆಸ್​ನಲ್ಲಿ ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ.‌ ಬಿಜೆಪಿ ಅವರ ಮಾತು ಕೇಳಬೇಡಿ. ಚುನಾವಣಾ ಫಲಿತಾಂಶ ಬಂದ ನಂತ ಬಿಜೆಪಿ ಸರ್ಕಾರವೇ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದ್ರು.

ಕ್ಷೇತ್ರದ ಅಭ್ಯರ್ಥಿ ನಾರಾಯಣಸ್ವಾಮಿ ಮಾತನಾಡಿ ಕಾಂಗ್ರೆಸ್​ಗೆ ಅಲ್ಲ, ಬಿಜೆಪಿಗೆ ಟೇಬಲ್ ಹಾಕಲು ಜನರಿಲ್ಲ. ಎರಡು ಚುನಾವಣೆಯಲ್ಲಿ ಬಿಜೆಪಿ ಸೋತಿತ್ತು. ಅವರ ಅನುಭವವನ್ನು ಅಶೋಕ್ ಹೇಳಿಕೊಂಡಿದ್ದಾರೆ.‌ ಅವರಿಗೆ ಟೇಬಲ್ ಹಾಕಲು ಜನರು ಇರಲಿಲ್ಲ. ಕೆ.ಆರ್. ಪುರಂನಲ್ಲಿ ಕಾಂಗ್ರೆಸ್ ಅಲೆ ಎದ್ದಿದೆ. ಡಿಸೆಂಬರ್ 9 ಕ್ಕೆ ಜನರು ಬಿಜೆಪಿಯವರಿಗೆ ಉತ್ತರ ಕೊಡ್ತಾರೆ ಎಂದರು.

Intro:



ಬೆಂಗಳೂರು: ನಾವು ತಿನ್ನುವ ಅನ್ನ ಗೊಬ್ಬರದಿಂದಲೇ.. ಗೊಬ್ಬರವನ್ನು ಹೀಯಾಳಿಸುವ ಮೂಲಕ ರೈತರನ್ನು ಕೇವಲವಾಗಿ ಕಂಡಿದ್ದೀರಿ. ಪ್ರಚಾರಕ್ಕಾಗಿ ದಿನಕ್ಕೊಂದು ಹೇಳಿಕೆ ನೀಡುವುದು ಸಮತೋಲನವಿಲ್ಲದ ತಮ್ಮ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟ್ಚೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಯಾಗಿ ಟ್ವೀಟ್ ಮೂಲಕವೇ ಉತ್ತರ ನೀಡಿರುವ ಡಿವಿಎಸ್,
ವೃಕ್ಷಕೆಲ್ಲಿಯದು ಹೂವಿನ ಹಬ್ಬ? ಗೊಬ್ಬರದ
ಜೀವವನೆ ಹೀರಿ ಕೊಬ್ಬಿಹ ಹೂವೆ, ಕಬ್ಬಕ್ಕೆ
ನೀಂ ಮಾತ್ರ ವಸ್ತುವೇಂ? ನಿನ್ನಂತೆ ಗೊಬ್ಬರಂ
ಕಬ್ಬಕ್ಕೆ ಸಾಮಗ್ರಿಯಾಗಬಾರದೆ ಹೇಳು?
ಹಳಿಯದಿರೊ;
ಇಂದೋ ನಾಳೆಯೋ ನೀನು ಕೆಳಗುರುಳಿ
ಗೊಬ್ಬರದೊಳೊಂದಾಗುವಾ ಮುಂದೆ ಕಾದಿಹುದು.....ಎಂದು ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳ ಮೂಲಕ ಟಾಂಗ್ ನೀಡಿದ್ದಾರೆ.

ನಾನು ಗೊಬ್ಬರ ಹೌದು ಆದರೆ
ಸ್ವಪಕ್ಷೀಯರ ರಕ್ತ ಹೀರಿದ ಪಿಎಫ್ಐ ನ ಸಮರ್ಥಕ ನೀವಲ್ಲವೇ? ಎಂದು ಸಿದ್ದರಾಮಯ್ಯ ವಿರುದ್ಧ ಸದಾನದಗೌಡ ಟ್ವೀಟ್ ಮೂಲಕ ಟೀಕಾಪ್ರಹಾರ ನಡೆಸಿದ್ದಾರೆ.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.