ETV Bharat / state

ಒಂದೇ ಮೆಸೇಜ್​ಗೆ ಹರಿದು ಬಂದ ಜನ... ಕ್ಷೇತ್ರದಲ್ಲಿ'ಬೈರತಿ' ಶಕ್ತಿ ಪ್ರದರ್ಶನ! - K R puram MLA Bhairathi basavaraju

ಶಾಸಕ ಬೈರತಿ ಬಸವರಾಜು ಅವರು ಅನರ್ಹಗೊಂಡ ಬಳಿಕ ತಮ್ಮ ಮನೆ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಷೇತ್ರದ ಕಾರ್ಯಕರ್ತರೊಂದಿಗೆ ಶಕ್ತಿ ಪ್ರದರ್ಶನ ನಡೆಸಿದರು.

ಅನರ್ಹ ಶಾಸಕ ಬೈರತಿ ಬಸವರಾಜ್
author img

By

Published : Jul 30, 2019, 9:20 PM IST

ಬೆಂಗಳೂರು: ತಮ್ಮ ಮನೆ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಷೇತ್ರದ ಕಾರ್ಯಕರ್ತರೊಂದಿಗೆ ಅನರ್ಹ ಶಾಸಕ ಬೈರತಿ ಬಸವರಾಜು ಶಕ್ತಿ ಪ್ರದರ್ಶನ ನಡೆಸಿದರು. ಕೇವಲ ವಾಟ್ಸಪ್ ಮೂಲಕ ಕಳಿಸಿದ್ದ ಮೆಸೇಜ್​ ನೋಡಿ ಕ್ಷೇತ್ರದ ಸಾವಿರಾರು ಕಾರ್ಯಕರ್ತರು, ಪಾಲಿಕೆ ಸದಸ್ಯರು ಆಗಮಿಸಿ ಬಸವರಾಜು ಅವರಿಗೆ ಬೆಂಬಲ ಸೂಚಿಸಿ ಅಚ್ಚರಿ ಮೂಡಿಸಿದರು.

ಈ ವೇಳೆ ಮಾತನಾಡಿದ ಅವರು, ಒಂದು ಸಣ್ಣ ಸಂದೇಶವನ್ನು ಕಾರ್ಯಕರ್ತರಿಗೆ ಕಳುಹಿಸಿದ್ದೆ, ಅದನ್ನು ನೋಡಿ ಇಂದು ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ನಮ್ಮ ಕಾರ್ಯಕರ್ತರ ಮಾತು ಕೇಳಿ ಸಂತೋಷವಾಗಿದೆ ಎಂದರು.

ಅನರ್ಹ ಶಾಸಕ ಬೈರತಿ ಬಸವರಾಜ್

ಕೆಲ ಹಿರಿಯ ನಾಯಕರ ಮಾತು ಕೇಳಿ ಈ ಪರಿಸ್ಥಿತಿಗೆ ಬಂದಿದ್ದೇವೆ. ಈ ಬಗ್ಗೆ ಆದಷ್ಟು ಬೇಗ ಅನರ್ಹಗೊಂಡ ಎಲ್ಲಾ 16 ಶಾಸಕರೂ ಸೇರಿ ಸುದ್ದಿಗೋಷ್ಠಿ ನಡೆಸಿ, ನಾಯಕರ ಬಂಡವಾಳ ಬಯಲು ಮಾಡುತ್ತೇವೆ. ಅನರ್ಹತೆ ಕುರಿತಾದ ದಾಖಲೆಗಳು ದೊರೆತ ಕೂಡಲೇ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸುತ್ತೇವೆ. ಇಡೀ ಕ್ಷೇತ್ರ ನನ್ನೊಂದಿಗಿದೆ. ಇದು ನನಗೆ ಇನ್ನಷ್ಟು ಬಲ ತಂದಿದೆ. ಸಾರ್ವಜನಿಕರ ಸೇವೆಗಾಗಿ ಅವರೊಂದಿಗೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ತಿಳಿಸಿದರು.

ಬೆಂಗಳೂರು: ತಮ್ಮ ಮನೆ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಷೇತ್ರದ ಕಾರ್ಯಕರ್ತರೊಂದಿಗೆ ಅನರ್ಹ ಶಾಸಕ ಬೈರತಿ ಬಸವರಾಜು ಶಕ್ತಿ ಪ್ರದರ್ಶನ ನಡೆಸಿದರು. ಕೇವಲ ವಾಟ್ಸಪ್ ಮೂಲಕ ಕಳಿಸಿದ್ದ ಮೆಸೇಜ್​ ನೋಡಿ ಕ್ಷೇತ್ರದ ಸಾವಿರಾರು ಕಾರ್ಯಕರ್ತರು, ಪಾಲಿಕೆ ಸದಸ್ಯರು ಆಗಮಿಸಿ ಬಸವರಾಜು ಅವರಿಗೆ ಬೆಂಬಲ ಸೂಚಿಸಿ ಅಚ್ಚರಿ ಮೂಡಿಸಿದರು.

ಈ ವೇಳೆ ಮಾತನಾಡಿದ ಅವರು, ಒಂದು ಸಣ್ಣ ಸಂದೇಶವನ್ನು ಕಾರ್ಯಕರ್ತರಿಗೆ ಕಳುಹಿಸಿದ್ದೆ, ಅದನ್ನು ನೋಡಿ ಇಂದು ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ನಮ್ಮ ಕಾರ್ಯಕರ್ತರ ಮಾತು ಕೇಳಿ ಸಂತೋಷವಾಗಿದೆ ಎಂದರು.

ಅನರ್ಹ ಶಾಸಕ ಬೈರತಿ ಬಸವರಾಜ್

ಕೆಲ ಹಿರಿಯ ನಾಯಕರ ಮಾತು ಕೇಳಿ ಈ ಪರಿಸ್ಥಿತಿಗೆ ಬಂದಿದ್ದೇವೆ. ಈ ಬಗ್ಗೆ ಆದಷ್ಟು ಬೇಗ ಅನರ್ಹಗೊಂಡ ಎಲ್ಲಾ 16 ಶಾಸಕರೂ ಸೇರಿ ಸುದ್ದಿಗೋಷ್ಠಿ ನಡೆಸಿ, ನಾಯಕರ ಬಂಡವಾಳ ಬಯಲು ಮಾಡುತ್ತೇವೆ. ಅನರ್ಹತೆ ಕುರಿತಾದ ದಾಖಲೆಗಳು ದೊರೆತ ಕೂಡಲೇ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸುತ್ತೇವೆ. ಇಡೀ ಕ್ಷೇತ್ರ ನನ್ನೊಂದಿಗಿದೆ. ಇದು ನನಗೆ ಇನ್ನಷ್ಟು ಬಲ ತಂದಿದೆ. ಸಾರ್ವಜನಿಕರ ಸೇವೆಗಾಗಿ ಅವರೊಂದಿಗೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ತಿಳಿಸಿದರು.

Intro:ಫೈಲ್ : ಬಿ‌ಎ ಬಸವರಾಜ್ ಬಲ ಪ್ರದರ್ಶನ ಎವಿಬಿ.

ದಿನಾಂಕ : 30-07-19,ಕೆಆರ್ ಪುರ.




ಅನರ್ಹ ಶಾಸಕ ಬೈರತಿ ಬಸವರಾಜು ಕ್ಷೇತ್ರದ ಕಾರ್ಯಕರ್ತರೊಂದಿಗೆ ಶಕ್ತಿ ಪ್ರದರ್ಶನ.


ಅನರ್ಹಗೊಂಡ ನಂತರ ಬೈರತಿ ಬಸವರಾಜ್ ಬೈರತಿಯ ತಮ್ಮ ಮನೆ ಮುಂದೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಶಕ್ತಿ ಪ್ರದರ್ಶನ ನಡೆಸಿದರು. ಕೇವಲ ವಾಟ್ಸಪ್ ಮೂಲಕ ಕಳಿಸಿದ್ದ ಎಸ್ ಎಂ ಎಸ್ ನೋಡಿ ಕ್ಷೇತ್ರದ ಸಾವಿರಾರು ಕಾರ್ಯಕರ್ತರು, ಪಾಲಿಕೆ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ನಿಜ ಹೇಳಬೇಕೆಂದರೆ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನದಂತಿತ್ತು.




Body:ಒಂದು ಸಣ್ಣ ಸಂದೇಶವನ್ನು ಕಾರ್ಯಕರ್ತರಿಗೆ ಕಲಿಸಿದ್ದೆ ಅದನ್ನು ನೋಡಿ ಇಂದು ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡೀದ್ದಾರೆ. ಅಲ್ಲದೆ ಸ್ವತಂತ್ರವಾಗಿ ಇಲ್ಲ ಯಾವುದೇ ಪಕ್ಷದಿಂದ ಸ್ಪರ್ಧಿಸಿದರು ಬೆಂಬಲ ಸೂಚಿಸುವ ಮಾತನಾಡಿದ್ದರೆ. ನಮ್ಮ ಕಾರ್ಯಕರ್ತರ ಮಾತು ಕೇಳಿ ಸಂತೋಷವಾಯಿತು. Conclusion:ಕೆಲ ಹಿರಿಯ ನಾಯಕರ ಮಾತನ್ನು ಕೇಳಿ ಈ ಪರಿಸ್ಥಿತಿಗೆ ಬಂದಿದ್ದೇವೆ ಈ ಬಗ್ಗೆ ಆದಷ್ಟು ಬೇಗ ಅನರ್ಹಗೊಂಡ ಎಲ್ಲಾ 16 ಶಾಸಕರೂ ಸೇರಿ ಪತ್ರಿಕಾಗೋಷ್ಠಿ ನಡೆಸಿ ನಾಯಕರುಗಳ ಬಂಡವಾಳ ಬಯಲು ಮಾಡುತ್ತೇವೆ, ಅನರ್ಹದ ದಾಖಲೆಗಳು ದೊರೆತ ಕೂಡಲೇ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇವೆ, ಇಡೀ ಕ್ಷೇತ್ರ ನನ್ನೊಂದಿಗಿದೆ ಇದು ನನಗೆ ಇನ್ನಷ್ಟು ಬಲ ಬಂದಿದೆ, ಸಾರ್ವಜನಿಕರ ಸೇವೆಗಾಗಿ ಅವರೊಂದಿಗೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ತಿಳಿಸಿದ್ರು..

ಬೈಟ್ : ಬೈರತಿ ಬಸವರಾಜ, ಅನರ್ಹ ಕೆಆರ್ ಪುರ ಶಾಸಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.