ETV Bharat / state

ಸಿಗರೇಟು ಕೇಳುವ ನೆಪದಲ್ಲಿ ವಾಗ್ವಾದ: ಬೇಕರಿಗೆ ಸಿಬ್ಬಂದಿಗೆ ಹಲ್ಲೆ- ಸಿಸಿಟಿವಿ ದೃಶ್ಯ

ಸಿಗರೇಟ್​ ಕೇಳುವ ನೆಪದಲ್ಲಿ ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಎಚ್​ಎಎಲ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

author img

By

Published : Dec 9, 2022, 5:40 PM IST

ಬೇಕರಿ ಧೂಳಿಪಟ ಮಾಡಿದ ಗ್ಯಾಂಗ್
ಬೇಕರಿ ಧೂಳಿಪಟ ಮಾಡಿದ ಗ್ಯಾಂಗ್

ಬೆಂಗಳೂರು: ಸಿಗರೇಟ್​ ಕೇಳುವ ಕಾರಣಕ್ಕೆ ವಾಗ್ವಾದಕ್ಕಿಳಿದ ದುಷ್ಕರ್ಮಿಗಳು ಬೇಕರಿಯೊಂದರ ಸಿಬ್ಬಂದಿಗೆ ಮನಬಂದಂತೆ ಹಲ್ಲೆ‌‌ ನಡೆಸಿದ್ದಾರೆ. ಈ ಘಟನೆ ಕುಂದಲಹಳ್ಳಿಯಲ್ಲಿ ನಿನ್ನೆ (ಗುರುವಾರ) ನಡೆದಿದೆ.‌ ಆರೋಪಿಗಳ ಗ್ಯಾಂಗ್ ಕಳೆದ ರಾತ್ರಿ ಸಿಗರೇಟು ಕೇಳುವ ನೆಪದಲ್ಲಿ ಬೇಕರಿಗೆ ಬಂದಿದೆ.‌ ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಸಿಬ್ಬಂದಿ ಮೇಲೆ‌ ಗಲಾಟೆ ಮಾಡಿದ್ದಾರೆ. ಊರು ಬಿಟ್ಟು ಊರಿಗೆ ಬಂದಿದ್ದೀರಾ? ಎಂದೆಲ್ಲಾ ತಗಾದೆ ತೆಗೆದಿದ್ದಾರೆ. ನೋಡು ನೋಡುತ್ತಿದ್ದಂತೆಯೇ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆಯನ್ನೂ ನಡೆಸಿದ್ದಾರೆ.‌ ಹೆಚ್ಎ​​ಎಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಸಿಗರೇಟ್​ ಕೇಳುವ ಕಾರಣಕ್ಕೆ ವಾಗ್ವಾದಕ್ಕಿಳಿದ ದುಷ್ಕರ್ಮಿಗಳು ಬೇಕರಿಯೊಂದರ ಸಿಬ್ಬಂದಿಗೆ ಮನಬಂದಂತೆ ಹಲ್ಲೆ‌‌ ನಡೆಸಿದ್ದಾರೆ. ಈ ಘಟನೆ ಕುಂದಲಹಳ್ಳಿಯಲ್ಲಿ ನಿನ್ನೆ (ಗುರುವಾರ) ನಡೆದಿದೆ.‌ ಆರೋಪಿಗಳ ಗ್ಯಾಂಗ್ ಕಳೆದ ರಾತ್ರಿ ಸಿಗರೇಟು ಕೇಳುವ ನೆಪದಲ್ಲಿ ಬೇಕರಿಗೆ ಬಂದಿದೆ.‌ ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಸಿಬ್ಬಂದಿ ಮೇಲೆ‌ ಗಲಾಟೆ ಮಾಡಿದ್ದಾರೆ. ಊರು ಬಿಟ್ಟು ಊರಿಗೆ ಬಂದಿದ್ದೀರಾ? ಎಂದೆಲ್ಲಾ ತಗಾದೆ ತೆಗೆದಿದ್ದಾರೆ. ನೋಡು ನೋಡುತ್ತಿದ್ದಂತೆಯೇ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆಯನ್ನೂ ನಡೆಸಿದ್ದಾರೆ.‌ ಹೆಚ್ಎ​​ಎಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಟಿವಿ ದೃಶ್ಯ

ಇದನ್ನೂ ಓದಿ: ಶಿವಮೊಗ್ಗ: ಡೀಸೆಲ್ ಕಳ್ಳರ ಹಿಡಿದು ಪೊಲೀಸರಿಗೊಪ್ಪಿಸಿದ ಜನರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.