ETV Bharat / state

ರಂಗಭೂಮಿ ಕಲಾವಿದೆ ಮೇಲೆ‌ ಆ್ಯಸಿಡ್ ದಾಳಿ : ಮೂವರ ಬಂಧನ

ನಂದಿನಿ ಲೇಔಟ್​ನ ಗಣೇಶ ಬ್ಲಾಕ್​​​ನಲ್ಲಿ ವಾಸವಾಗಿರುವ ದೇವಿ, ಈ ಹಿಂದೆ ಬಿಎಂಟಿಸಿಯಲ್ಲಿ ‌ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯ ಕಾರಣಕ್ಕಾಗಿ ಹುದ್ದೆಯನ್ನು ತ್ಯಜಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿ‌ ಕ್ಷೇತ್ರದಲ್ಲಿ ನಟಿಯಾಗಿ ತೊಡಗಿಸಿಕೊಂಡಿದ್ದರು..

author img

By

Published : Mar 20, 2022, 12:30 PM IST

Acid attack on drama artist
ರಂಗಭೂಮಿ ಕಲಾವಿದೆ ಮೇಲೆ‌ ಆ್ಯಸಿಡ್ ದಾಳಿ

ಬೆಂಗಳೂರು : ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದ ಸಂಬಂಧ ನಂದಿನಿಲೇಔಟ್​​ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ರಮೇಶ್, ಸ್ವಾತಿ ಹಾಗೂ ಯೋಗೇಶ್ ಎಂಬುವರನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ದೇವಿಯವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

accused
ಆರೋಪಿಗಳು

ನಂದಿನಿ ಲೇಔಟ್​ನ ಗಣೇಶ ಬ್ಲಾಕ್​​​ನಲ್ಲಿ ವಾಸವಾಗಿರುವ ದೇವಿ, ಈ ಹಿಂದೆ ಬಿಎಂಟಿಸಿಯಲ್ಲಿ ‌ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯ ಕಾರಣಕ್ಕಾಗಿ ಹುದ್ದೆಯನ್ನು ತ್ಯಜಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿ‌ ಕ್ಷೇತ್ರದಲ್ಲಿ ನಟಿಯಾಗಿ ತೊಡಗಿಸಿಕೊಂಡಿದ್ದರು.

ಮಾರ್ಚ್‌ 18ರಂದು ಮನೆಯ ಮುಂದಿನ ಜಗಲಿಯಲ್ಲಿ ಮಲಗಿದ್ದ ದೇವಿಯನ್ನು ಗುರಿಯಾಗಿಸಿಕೊಂಡು ಪರಿಚಯಸ್ಥ ಆರೋಪಿಗಳೇ‌ ಈ ದುಷ್ಕೃತ್ಯ ಎಸಗಿದ್ದಾರೆ. ಘಟನೆಯ ಕುರಿತಂತೆ ನಿಖರವಾದ ಕಾರಣ ತಿಳಿದು ಬಂದಿಲ್ಲ.‌

ಬೆಂಗಳೂರು : ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದ ಸಂಬಂಧ ನಂದಿನಿಲೇಔಟ್​​ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ರಮೇಶ್, ಸ್ವಾತಿ ಹಾಗೂ ಯೋಗೇಶ್ ಎಂಬುವರನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ದೇವಿಯವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

accused
ಆರೋಪಿಗಳು

ನಂದಿನಿ ಲೇಔಟ್​ನ ಗಣೇಶ ಬ್ಲಾಕ್​​​ನಲ್ಲಿ ವಾಸವಾಗಿರುವ ದೇವಿ, ಈ ಹಿಂದೆ ಬಿಎಂಟಿಸಿಯಲ್ಲಿ ‌ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯ ಕಾರಣಕ್ಕಾಗಿ ಹುದ್ದೆಯನ್ನು ತ್ಯಜಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿ‌ ಕ್ಷೇತ್ರದಲ್ಲಿ ನಟಿಯಾಗಿ ತೊಡಗಿಸಿಕೊಂಡಿದ್ದರು.

ಮಾರ್ಚ್‌ 18ರಂದು ಮನೆಯ ಮುಂದಿನ ಜಗಲಿಯಲ್ಲಿ ಮಲಗಿದ್ದ ದೇವಿಯನ್ನು ಗುರಿಯಾಗಿಸಿಕೊಂಡು ಪರಿಚಯಸ್ಥ ಆರೋಪಿಗಳೇ‌ ಈ ದುಷ್ಕೃತ್ಯ ಎಸಗಿದ್ದಾರೆ. ಘಟನೆಯ ಕುರಿತಂತೆ ನಿಖರವಾದ ಕಾರಣ ತಿಳಿದು ಬಂದಿಲ್ಲ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.