ETV Bharat / state

ಕೃಷಿ ಮಾರಾಟ ಮಂಡಳಿ ಹಣ ದುರ್ಬಳಕೆ ಪ್ರಕರಣ: ಇಬ್ಬರು ಮಧ್ಯವರ್ತಿಗಳ ಬಂಧನ - ಕೃಷಿ ಮಾರಾಟ ಮಂಡಳಿಯ ಹಗರಣ

ಕೃಷಿ ಮಾರಾಟ ಮಂಡಳಿಯ ಹಗರಣ ಬಯಲಿಗೆ ಬಂದಿದ್ದು, ಇದೀಗ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಮಧ್ಯವರ್ತಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Accused
ಆರೋಪಿಗಳನ್ನು ಬಂಧಿಸಿ ಕರೆದೊಯ್ಯುತ್ತಿರುವುದು
author img

By

Published : Feb 10, 2020, 8:49 PM IST

ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯ 48 ಕೋಟಿ ರೂಪಾಯಿ ದುರ್ಬಳಕೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.

ಲಕ್ಷ್ಮಣ್ ಹಾಗೂ ಸಿರಿಲ್ ಎಂಬುವರು ಬಂಧಿತ ಆರೋಪಿಗಳು. ನಗರದ ಆಂಧ್ರ ಬ್ಯಾಂಕ್​ನಲ್ಲಿ ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್, ಈ ಹಿಂದೆ ರಾಜ್ಯ ಲೋಕಾಯುಕ್ತ ಕಚೇರಿಯಲ್ಲಿ ಐದು ವರ್ಷಗಳ ಕಾಲ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

ಆರೋಪಿಗಳನ್ನು ಬಂಧಿಸಿ ಕರೆದೊಯ್ಯುತ್ತಿರುವುದು

ಆರೋಪಿ ಲಕ್ಷ್ಮಣ್​ ರಾಜ್ಯ ಕೃಷಿ ಮಾರಾಟ ಮಂಡಳಿಯು ರಾಜಾಜಿನಗರದ ಆಂಧ್ರ ಬ್ಯಾಂಕ್​​ನಲ್ಲಿದ್ದ ಕೃಷಿ ಆವರ್ತನ ನಿಧಿ ನೂರು ಕೋಟಿ ರೂಪಾಯಿ ಹಣವನ್ನು ಉತ್ತರಹಳ್ಳಿಯ ಸಿಂಡಿಕೇಟ್ ಬ್ಯಾಂಕ್​ನಲ್ಲಿ ಠೇವಣಿ ಇರಿಸುವುದಾಗಿ ಹೇಳಿ ದುರ್ಬಳಕೆ ಮಾಡಿದ್ದರು.‌ ಇನ್ನು ಸತ್ಯಾಂಶವನ್ನು ಲಕ್ಷ್ನಣ್​​ ಒಪ್ಪಿಕೊಂಡಿದ್ದು, ಕಮಿಷನ್​ ಆಸೆಗಾಗಿ ಈ ರೀತಿ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯ 48 ಕೋಟಿ ರೂಪಾಯಿ ದುರ್ಬಳಕೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.

ಲಕ್ಷ್ಮಣ್ ಹಾಗೂ ಸಿರಿಲ್ ಎಂಬುವರು ಬಂಧಿತ ಆರೋಪಿಗಳು. ನಗರದ ಆಂಧ್ರ ಬ್ಯಾಂಕ್​ನಲ್ಲಿ ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್, ಈ ಹಿಂದೆ ರಾಜ್ಯ ಲೋಕಾಯುಕ್ತ ಕಚೇರಿಯಲ್ಲಿ ಐದು ವರ್ಷಗಳ ಕಾಲ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

ಆರೋಪಿಗಳನ್ನು ಬಂಧಿಸಿ ಕರೆದೊಯ್ಯುತ್ತಿರುವುದು

ಆರೋಪಿ ಲಕ್ಷ್ಮಣ್​ ರಾಜ್ಯ ಕೃಷಿ ಮಾರಾಟ ಮಂಡಳಿಯು ರಾಜಾಜಿನಗರದ ಆಂಧ್ರ ಬ್ಯಾಂಕ್​​ನಲ್ಲಿದ್ದ ಕೃಷಿ ಆವರ್ತನ ನಿಧಿ ನೂರು ಕೋಟಿ ರೂಪಾಯಿ ಹಣವನ್ನು ಉತ್ತರಹಳ್ಳಿಯ ಸಿಂಡಿಕೇಟ್ ಬ್ಯಾಂಕ್​ನಲ್ಲಿ ಠೇವಣಿ ಇರಿಸುವುದಾಗಿ ಹೇಳಿ ದುರ್ಬಳಕೆ ಮಾಡಿದ್ದರು.‌ ಇನ್ನು ಸತ್ಯಾಂಶವನ್ನು ಲಕ್ಷ್ನಣ್​​ ಒಪ್ಪಿಕೊಂಡಿದ್ದು, ಕಮಿಷನ್​ ಆಸೆಗಾಗಿ ಈ ರೀತಿ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.