ETV Bharat / state

ಬಿಜೆಪಿ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳೇನು? ಶೋಭಾ ಕರಂದ್ಲಾಜೆ ಏನ್ ಹೇಳಿದ್ರು?

author img

By

Published : Jul 14, 2019, 7:41 PM IST

ಬಿಜೆಪಿ ರಾಜಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಬಿಜೆಪಿ ಶಾಸಕರ ಸಭೆ ನಡೆಯಿತು. ಸಭೆಯಲ್ಲಿ ನಾಳೆ ನಡೆಯಲಿರುವ ಅಧಿವೇಶನದಲ್ಲಿ ಸಭಾಧ್ಯಕ್ಷರ ಕಾರ್ಯಾವಳಿಗೆ ಪೂರಕವಾಗಿ ಸದನದಲ್ಲಿ ಭಾಗಿಯಾಗಲು ನಿರ್ಧರಿಸಲಾಯಿತು. ಸಿಎಂ ಬಹುಮತ ಸಾಬೀತಿಗೆ ದಿನಾಂಕ ನಿಗದಿ ಮಾಡುವಂತೆ ಸ್ಪೀಕರ್‌ಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು: ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಡ ರೆಸಾರ್ಟ್‌ನಲ್ಲಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಪ್ರಸ್ತುತ ರಾಜಕೀಯ ಆಗು ಹೋಗುಗಳ ಬಗ್ಗೆ ಶಾಸಕರ ಜೊತೆ 3 ಸುತ್ತಿನ ಮಾತಕತೆ ನಡೆಸಿದರು.

ಸಭೆಯಲ್ಲಿ ನಾಳೆ ನಡೆಯಲಿರುವ ಅಧಿವೇಶನದಲ್ಲಿ ಸಭಾಧ್ಯಕ್ಷರ ಕಾರ್ಯಾವಳಿಗೆ ಪೂರಕವಾಗಿ ಸದನದಲ್ಲಿ ಭಾಗಿಯಾಗಲು ನಿರ್ಧರಿಸಲಾಯಿತು. ಸಿಎಂ ಬಹುಮತ ಸಾಬೀತಿಗೆ ದಿನಾಂಕ ನಿಗದಿ ಮಾಡುವಂತೆ ಸ್ಪೀಕರ್‌ಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಸಿಎಂ ಬಂಡ ಧೈರ್ಯದಿಂದ ಬಹುಮತ ಸಾಬೀತು ಮಾಡುವುದಾಗಿ ಹೇಳಿದ್ದಾರೆ. ಅವರು ನಾಳೆಯೇ ಬಹುಮತ ಸಾಬೀತು ಮಾಡ್ತೀನಿ ಅಂತಾ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಿ. ಇಲ್ಲವಾದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಸರ್ಕಾರ ಬದುಕಿಲ್ಲ. ಹಲವಾರು ಸಮಸ್ಯೆಗಳಿವೆ, ಸ್ಥಿರವಾದ ಸರ್ಕಾರ ಬರಲು ಕುಮಾರಸ್ವಾಮಿ ಅವಕಾಶ ಮಾಡಿ ಕೊಡಬೇಕು. ಇಲ್ಲ ಬಹುಮತ ಸಾಬೀತಿಗೆ ದಿನ ನಿಗದಿ ಮಾಡಬೇಕು. ಮೈತ್ರಿ ಪಕ್ಷಗಳ ಬಳಿ ಬಹುಮತ ಸಾಬೀತು ಮಾಡಲು ಸಾಧ್ಯವಿಲ್ಲ. ರಾಜೀನಾಮೆ ಅಂಗೀಕರಿಸುವಂತೆ 15 ಶಾಸಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ

ಬಿಜೆಪಿ ಶಾಸಕರ ಗೈರು:

ಸುಪ್ರೀಂಕೋರ್ಟ್ ತೀರ್ಪು ಏನಾಗಬಹುದು ಎಂಬುದನ್ನು ತಿಳಿಯಲು ಕೆಲ ಮುಖಂಡರು ದೆಹಲಿಗೆ ಹೋಗಿದ್ದಾರೆ. ಹೀಗಾಗಿ, ಇಂದಿನ ಸಭೆಗೆ ಆರ್.ಅಶೋಕ್ ಗೈರಾಗಿದ್ದಾರೆ. ಈಶ್ವರಪ್ಪನವರೂ ಕೂಡಾ ಅವರ ವೈಯುಕ್ತಿಕ ಕೆಲಸದಲ್ಲಿದ್ದಾರೆ. ಸಂಬಂಧಿ ವಿಧಿವಶರಾಗಿದ್ದರಿಂದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇವತ್ತಿನ ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂದು ಶೋಭಾ ಕರಂದ್ಲಾಜೆ ಇದೇ ವೇಳೆ ಸ್ಪಷ್ಟನೆ ನೀಡಿದರು.

ಬೆಂಗಳೂರು: ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಡ ರೆಸಾರ್ಟ್‌ನಲ್ಲಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಪ್ರಸ್ತುತ ರಾಜಕೀಯ ಆಗು ಹೋಗುಗಳ ಬಗ್ಗೆ ಶಾಸಕರ ಜೊತೆ 3 ಸುತ್ತಿನ ಮಾತಕತೆ ನಡೆಸಿದರು.

ಸಭೆಯಲ್ಲಿ ನಾಳೆ ನಡೆಯಲಿರುವ ಅಧಿವೇಶನದಲ್ಲಿ ಸಭಾಧ್ಯಕ್ಷರ ಕಾರ್ಯಾವಳಿಗೆ ಪೂರಕವಾಗಿ ಸದನದಲ್ಲಿ ಭಾಗಿಯಾಗಲು ನಿರ್ಧರಿಸಲಾಯಿತು. ಸಿಎಂ ಬಹುಮತ ಸಾಬೀತಿಗೆ ದಿನಾಂಕ ನಿಗದಿ ಮಾಡುವಂತೆ ಸ್ಪೀಕರ್‌ಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಸಿಎಂ ಬಂಡ ಧೈರ್ಯದಿಂದ ಬಹುಮತ ಸಾಬೀತು ಮಾಡುವುದಾಗಿ ಹೇಳಿದ್ದಾರೆ. ಅವರು ನಾಳೆಯೇ ಬಹುಮತ ಸಾಬೀತು ಮಾಡ್ತೀನಿ ಅಂತಾ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಿ. ಇಲ್ಲವಾದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಸರ್ಕಾರ ಬದುಕಿಲ್ಲ. ಹಲವಾರು ಸಮಸ್ಯೆಗಳಿವೆ, ಸ್ಥಿರವಾದ ಸರ್ಕಾರ ಬರಲು ಕುಮಾರಸ್ವಾಮಿ ಅವಕಾಶ ಮಾಡಿ ಕೊಡಬೇಕು. ಇಲ್ಲ ಬಹುಮತ ಸಾಬೀತಿಗೆ ದಿನ ನಿಗದಿ ಮಾಡಬೇಕು. ಮೈತ್ರಿ ಪಕ್ಷಗಳ ಬಳಿ ಬಹುಮತ ಸಾಬೀತು ಮಾಡಲು ಸಾಧ್ಯವಿಲ್ಲ. ರಾಜೀನಾಮೆ ಅಂಗೀಕರಿಸುವಂತೆ 15 ಶಾಸಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ

ಬಿಜೆಪಿ ಶಾಸಕರ ಗೈರು:

ಸುಪ್ರೀಂಕೋರ್ಟ್ ತೀರ್ಪು ಏನಾಗಬಹುದು ಎಂಬುದನ್ನು ತಿಳಿಯಲು ಕೆಲ ಮುಖಂಡರು ದೆಹಲಿಗೆ ಹೋಗಿದ್ದಾರೆ. ಹೀಗಾಗಿ, ಇಂದಿನ ಸಭೆಗೆ ಆರ್.ಅಶೋಕ್ ಗೈರಾಗಿದ್ದಾರೆ. ಈಶ್ವರಪ್ಪನವರೂ ಕೂಡಾ ಅವರ ವೈಯುಕ್ತಿಕ ಕೆಲಸದಲ್ಲಿದ್ದಾರೆ. ಸಂಬಂಧಿ ವಿಧಿವಶರಾಗಿದ್ದರಿಂದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇವತ್ತಿನ ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂದು ಶೋಭಾ ಕರಂದ್ಲಾಜೆ ಇದೇ ವೇಳೆ ಸ್ಪಷ್ಟನೆ ನೀಡಿದರು.

Intro:

ಬಿಜೆಪಿ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯವೇನು? ಶೋಭಾ ಕರಂದ್ಲಾಜೆ ಏನ್ ಹೇಳಿದ್ರು?

ಬೆಂಗಳೂರು: ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಡ ರೆಸಾರ್ಟ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ಶಾಸಕರ ಜೊತೆ 3 ಸುತ್ತಿನ ಸಭೆನಡೆಸಿದ್ದು ನಾಳೆ ನಡೆಯಲಿರುವ ಅಧಿವೇಶನಕನದಲ್ಲಿ ಸಭಾದ್ಯಕ್ಷರ ಕಾರ್ಯಾವಳಿಗೆ ಪೂರಕವಾಗಿ ಸದನದಲ್ಲಿ ಭಾಗಿಯಾಗಲು ಸಭೆಯಲ್ಲಿ ನಿರ್ಧಾರಿಸಿ, ಸಿಎಂ ಬಹುಮತ ಸಾಬೀತಿಗೆ ದಿನಾಂಕ ನಿಗಧಿ ಮಾಡಿ ಎಂದು ಸ್ಪೀಕರ್ ಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶೋಭ ಕರಂದ್ಲಾಜೆ ಸಿಎಂ ಬಂಡ ಧೈರ್ಯದಿಂದ ಬಹುಮತ ಸಾಬೀತು ಮಾಡುವುದಾಗಿ ಹೇಳಿದ್ದಾರೆ. ಅವರು ನಾಳೆಯೇ ಬಹುಮತ ಸಾಬೀತು ಮಾಡ್ತೀನಿ ಅಂತ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಿ. ಇಲ್ಲವಾದರೆ, ಸಿಎಂ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

Body:ರಾಜ್ಯದಲ್ಲಿ ಸರ್ಕಾರ ಬದುಕಿಲ್ಲ. ರಾಜ್ಯದಲ್ಲಿ ಸಮಸ್ಯೆಗಳಿವೆ, ಸ್ಥಿರವಾದ ಸರ್ಕಾರ ಬರಲು ಕುಮಾರಸ್ವಾಮಿ ಅವಕಾಶ ಮಾಡಿ ಕೊಡಬೇಕು.ಇಲ್ಲ ಬಹುಮತ ಸಾಬೀತಿಗೆ ನಿಗದಿ ಮಾಡಬೇಕು. ಮೈತ್ರಿ ಪಕ್ಷಗಳ ಬಳಿ ಬಹುಮತ ಸಾಬೀತು ಮಾಡಲು ಸಾಧ್ಯವಿಲ್ಲ.ರಾಜೀನಾಮೆ ಅಂಗೀಕರಿಸುವಂತೆ 15 ಶಾಸಕರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

Conclusion:ಬಿಜೆಪಿ ಶಾಸಕರ ಗೈರು: ಸುಪ್ರೀಂ ಕೋರ್ಟ್ ತೀರ್ಪು ಏನಾಗಬಹುದು ಎಂಬುದನ್ನು ತಿಳಿಯಲು ಕೆಲ ನಾಯಕರು ಮುಖಂಡರು ದೆಹಲಿಗೆ ಹೋಗಿದ್ದಾರೆ. ಹೀಗಾಗಿ, ಇಂದಿನ ಸಭೆಗೆ ಆರ್.ಅಶೋಕ್ ಗೈರಾಗಿದ್ದಾರೆ. ಈಶ್ವರಪ್ಪನವರೂ ಕೂಡಾ ಅವರ ವಯಕ್ತಿಕ ಕೆಲಸದಲ್ಲಿದಾರೆ. ಇನ್ನು, ಜಗದೀಶ್ ಶೆಟ್ಟರ್ ಅವರ ಸಂಭಂಧಿಕರೊಬ್ಬರು ತೀರಿ ಹೋದ ಕಾರಣ ಇವತ್ತಿನ ಸಭೆಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.