ETV Bharat / state

ದಸರಾ ರಜೆಗೆ ಬಂದ ಸೊಸೆ ನೀರು ಪಾಲು.. ಕಾಪಾಡಲು ಹೋದ ಮಾವನೂ ಕೆರೆಗೆ ಹಾರ..

ದಸರಾ ಹಬ್ಬಕ್ಕೆಂದು ಮಾವನ ಮನೆಗೆ ಬಂದ ಬಾಲಕಿ, ಕಾಲು ಜಾರಿ ಕೆರೆ ನೀರಿನಲ್ಲಿ ಮುಳುಗಿದ್ದು, ಇವಳನ್ನು ರಕ್ಷಿಸಲು ಹೋದ ಸೋದರ ಮಾವ ಸಹ ನೀರಿನಲ್ಲಿ ಸಿಲುಕಿ ಸಾವನ್ನಪ್ಷಿರುವ ಘಟನೆ ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

author img

By

Published : Oct 8, 2019, 9:08 PM IST

ದಸರಾ ರಜೆಗೆಂದು ಬಂದ ಸೊಸೆ ನೀರು ಪಾಲು

ದೊಡ್ಡಬಳ್ಳಾಪುರ : ದಸರಾ ಹಬ್ಬಕ್ಕೆಂದು ಮಾವನ ಮನೆಗೆ ಬಂದ ಬಾಲಕಿ ಕಾಲು ಜಾರಿ ಕೆರೆಯಲ್ಲಿ ಮುಳುಗಿದ್ದು, ಅವಳನ್ನು ರಕ್ಷಿಸಲು ಹೋದ ಸೋದರ ಮಾವ ಸಹ ನೀರಿನಲ್ಲಿ ಸಿಲುಕಿ ಸಾವನ್ನಪ್ಷಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮಂಜುನಾಥ್(22) ಮತ್ತು ಈತನ ಮಾವನ ಮಗಳು ಸಿಂಚನಾ(7) ಇಬ್ಬರೂ ಊರಿನ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ದೈವಿಗಳು. ಯಲಹಂಕ ಬಳಿಯ ಕಣ್ಣೂರಿನಿಂದ ಕಮಲಾಪುರದ ಅಜ್ಜಿ ಮನೆಯಲ್ಲಿ ಹಬ್ಬ ಮಾಡಬೇಕೆಂದು ಸಂಭ್ರಮದಿಂದ ದೊಡ್ಡಮ್ಮನ ಜೊತೆ ಬಂದಿದ್ದ ಸಿಂಚನಾ, ಮಂಗಳವಾರ ಬೆಳಗ್ಗೆ ಮಾವ ಮಂಜುನಾಥ್ ಜೊತೆ ಕೆರೆ ಬಳಿ ಬಹಿರ್ದೆಸೆಗೆಂದು ಹೋಗಿದ್ದಾಳೆ. ಕೆರೆಯ ಹೊಂಡದ ದಡದಲ್ಲಿ ನಿಂತಿದ್ದ ಸಿಂಚನಾ ಕಾಲುಜಾರಿ ನೀರಿಗೆ ಬಿದ್ದು ಮುಳುಗಿದ್ದಾಳೆ. ಈ ದೃಶ್ಯ ನೋಡಿದ ಮಂಜುನಾಥ್ ಸಿಂಚನಾಳನ್ನು ಕಾಪಾಡಲು ನೀರಿಗಿಳಿದ್ದಾನೆ. ಆದರೆ, ಆತ ಸಹ ಹೂಳಿನಲ್ಲಿ ಸಿಲುಕಿದ್ರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ದಸರಾ ರಜೆಗೆಂದು ಬಂದ ಸೊಸೆ ನೀರು ಪಾಲು..

ಮನೆಯಿಂದ ಹೋಗಿ ಅರ್ಧಗಂಟೆಯಾದರೂ ಇಬ್ಬರೂ ಬಾರದಿದ್ದರಿಂದಾಗಿ ಅನುಮಾನಗೊಂಡ ಕುಟುಂಬದ ಸದಸ್ಯರು ಕೆರೆ ಬಳಿ ಬಂದು ನೋಡಿದಾಗ ದಡದಲ್ಲಿ ಚಪ್ಪಲಿ ಕಾಣಿಸಿದೆ. ಊರಿನ ಹುಡುಗರು ನೀರಿಗಿಳಿದು ನೋಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ದೊಡ್ಡಬಳ್ಳಾಪುರ : ದಸರಾ ಹಬ್ಬಕ್ಕೆಂದು ಮಾವನ ಮನೆಗೆ ಬಂದ ಬಾಲಕಿ ಕಾಲು ಜಾರಿ ಕೆರೆಯಲ್ಲಿ ಮುಳುಗಿದ್ದು, ಅವಳನ್ನು ರಕ್ಷಿಸಲು ಹೋದ ಸೋದರ ಮಾವ ಸಹ ನೀರಿನಲ್ಲಿ ಸಿಲುಕಿ ಸಾವನ್ನಪ್ಷಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮಂಜುನಾಥ್(22) ಮತ್ತು ಈತನ ಮಾವನ ಮಗಳು ಸಿಂಚನಾ(7) ಇಬ್ಬರೂ ಊರಿನ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ದೈವಿಗಳು. ಯಲಹಂಕ ಬಳಿಯ ಕಣ್ಣೂರಿನಿಂದ ಕಮಲಾಪುರದ ಅಜ್ಜಿ ಮನೆಯಲ್ಲಿ ಹಬ್ಬ ಮಾಡಬೇಕೆಂದು ಸಂಭ್ರಮದಿಂದ ದೊಡ್ಡಮ್ಮನ ಜೊತೆ ಬಂದಿದ್ದ ಸಿಂಚನಾ, ಮಂಗಳವಾರ ಬೆಳಗ್ಗೆ ಮಾವ ಮಂಜುನಾಥ್ ಜೊತೆ ಕೆರೆ ಬಳಿ ಬಹಿರ್ದೆಸೆಗೆಂದು ಹೋಗಿದ್ದಾಳೆ. ಕೆರೆಯ ಹೊಂಡದ ದಡದಲ್ಲಿ ನಿಂತಿದ್ದ ಸಿಂಚನಾ ಕಾಲುಜಾರಿ ನೀರಿಗೆ ಬಿದ್ದು ಮುಳುಗಿದ್ದಾಳೆ. ಈ ದೃಶ್ಯ ನೋಡಿದ ಮಂಜುನಾಥ್ ಸಿಂಚನಾಳನ್ನು ಕಾಪಾಡಲು ನೀರಿಗಿಳಿದ್ದಾನೆ. ಆದರೆ, ಆತ ಸಹ ಹೂಳಿನಲ್ಲಿ ಸಿಲುಕಿದ್ರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ದಸರಾ ರಜೆಗೆಂದು ಬಂದ ಸೊಸೆ ನೀರು ಪಾಲು..

ಮನೆಯಿಂದ ಹೋಗಿ ಅರ್ಧಗಂಟೆಯಾದರೂ ಇಬ್ಬರೂ ಬಾರದಿದ್ದರಿಂದಾಗಿ ಅನುಮಾನಗೊಂಡ ಕುಟುಂಬದ ಸದಸ್ಯರು ಕೆರೆ ಬಳಿ ಬಂದು ನೋಡಿದಾಗ ದಡದಲ್ಲಿ ಚಪ್ಪಲಿ ಕಾಣಿಸಿದೆ. ಊರಿನ ಹುಡುಗರು ನೀರಿಗಿಳಿದು ನೋಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Intro:ದಸರಾ ರಜೆಗೆಂದು ಬಂದ ಸೊಸೆ ನೀರು ಪಾಲಾದ್ಳು

ಸೊಸೆ ರಕ್ಷಿಸಲು ಹೋದ ಸೋದರಮಾವ ಸಹ ಕೆರೆ ಹೂಳಿನಲ್ಲಿ ಸಿಲುಕಿ ಸತ್ತ.
Body:ದೊಡ್ಡಬಳ್ಳಾಪುರ : ದಸರಾ ಹಬ್ಬಕೆಂದು ಮಾವನ ಮನೆಗೆ ಬಂದ ಬಾಲಕಿ, ಬೆಳಗ್ಗೆ ಶೌಚಾಲಯಕ್ಕೆಂದು ಕೆರೆಗೆ ಹೋದಾಗ. ಕಾಲು ಜಾರಿ ನೀರಿನಲ್ಲಿ ಮುಳುಗುತ್ತಿದ್ದಾಳೆ. ಸೊಸೆಯನ್ನು ರಕ್ಷಿಸಲು ಹೋದ ಸೋದರ ಮಾವ ಸಹ ನೀರಿನ ಮುಳುಗಿ ಸಾವನ್ನಪ್ಷಿದ್ದಾನೆ. ಇಬ್ಬರ ಸಾಲಿನಲ್ಲಿ ಹಬ್ಬದ ಖುಷಿಯಲ್ಲಿದ್ದ ಊರಿನಲ್ಲಿ ಸೂತಕದ ಛಾಯೆ ಆವರಿಸಿದೆ.

ಫ್ಲೋ..

ಎಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದ್ದರೆ ಆ ಊರಲ್ಲಿ ಮಾತ್ರ ಸೂತಕ ಛಾಯೆ ಆವರಿಸುತ್ತು..ಅದಕ್ಕೆ ಕಾರಣ ಹಬ್ಬಕ್ಕೆಂದು ನೆಂಟರ ಮನೆಗೆ ಬಂದಿದ್ದ ಆ ಪುಟ್ಟ ಬಾಲಕಿ ಕೆರೆ ನೀರಿಗೆ ಬಲಿಯಾದರೆ ಆ ಊರಲ್ಲಿ ಮನೆಮಗನಂತಿದ್ದ ಹುಡುಗ ಮಗುವನ್ನು ಕಾಪಾಡಲು ಹೋಗಿ ಉಸಿರುಬಿಟ್ಟ..
ಹೌದು..ದಸರಾ ಹಬ್ಬದಂದು ಆ ಊರಲ್ಲಿ ಸಾಕ್ಷಾತ್ ಶ್ಮಶಾನಮೌನ ಆವರಿಸಿದೆ. ಇನ್ನೂ ಇಬ್ಬರ ಸಾವು ಕಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತು.

ಬೈಟ್ ಕೃಷ್ಣಪ್ಪ-ಮೃತ ಬಾಲಕಿ ತಂದೆ


ದೊಡ್ಡಬಳ್ಳಾಪುರ ತಾಲೂಕು ಕಮಲಾಪುರದಲ್ಲಿ ಊರಮಂದಿಯೆಲ್ಲಾ ಮಂಗಳವಾರ ಬೆಳಿಗ್ಗೆ ದಸರಾ ಹಬ್ಬದ ಸಂಭ್ರಮದಲ್ಲಿದ್ದರೆ ಒಂದು ಸುದ್ದಿ ಬರಸಿಲಿಡಿನಂತೆ ಬಡಿಯಿತು.
ಊರಿನ ಯುವಕ ಮಂಜುನಾಥ್(22) ಮತ್ತು ಈತನ ಮಾವನ ಮಗಳು ಸಿಂಚನ(7) ಇಬ್ಬರೂ ಊರಿನ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಯಲಹಂಕ ಬಳಿಯ ಕಣ್ಣೂರಿನಿಂದ ಕಮಲಾಪುರದ ಅಜ್ಜಿಮನೆಯಲ್ಲಿ ಹಬ್ಬ ಮಾಡಬೇಕೆಂದು ಸಂಭ್ರಮದಿಂದ ದೊಡ್ಡಮ್ಮನ ಜೊತೆ ಬಂದಿದ್ದಳು ಸಿಂಚನ.
ಮಂಗಳವಾರ ಬೆಳಿಗ್ಗೆ ಮಾವ ಮಂಜುನಾಥ್ ಜೊತೆ ಕೆರೆ ಬಳಿ ಬಹಿರ್ದೆಸೆಗೆಂದು ಬಂದಿದ್ದಳು. ಕೆರೆಯ ಹೊಂಡದ ದಡದಲ್ಲಿ ನಿಂತಿದ್ದ ಸಿಂಚನ ಕಾಲುಜಾರಿ ನೀರಿಗೆ ಬಿದ್ದು ಮುಳುಗಿದ್ದಾಳೆ.ಈ ದೃಶ್ಯ ವನ್ನು ನೋಡಿದ ಮಂಜುನಾಥ್ ಸಿಂಚನಳನ್ನು ಕಾಪಾಡಲು ನೀರಿಗಿಳಿದ ಆದರೆ ಆತ ಸಹ ಹೂಳಿನಲ್ಲಿ ಸಿಕ್ಕಿಕೊಂಡು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮನೆಯಿಂದ ಹೋಗಿ ಅರ್ಧಗಂಟೆಯಾದರೂ ಇಬ್ಬರೂ ಬಾರದಿದ್ದರಿಂದ ಅನುಮಾನದಿಂದ ಕುಟುಂಬ ಸದಸ್ಯರು ಕೆರೆ ಬಳಿ ಬಂದು ನೋಡಿದಾಗ ದಡದಲ್ಲಿ ಚಪ್ಪಲಿ ಕಾಣಿಸಿದೆ.ಊರಿನ ಹುಡುಗರು ನೀರಿಗಿಳಿದು ನೋಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ.

ಬೈಟ್ ಬೈಟ್-ಪ್ರವೀಣ್ ಕುಮಾರ್-ಗ್ರಾಮದ ಯುವಕ

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿದ್ದರು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದು,ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.