ಹೊಸಕೋಟೆ (ಬೆಂಗಳೂರು ಗ್ರಾಮಾಂತರ) : ಆಲೂಗಡ್ಡೆ ತುಂಬಿದ್ದ ಟ್ರ್ಯಾಕ್ಟರ್ಅನ್ನು ತಡೆದು, ವಾಪಸ್ ಕಳಿಸಿರುವ ಘಟನೆ ಹೊಸಕೋಟೆ ಟೋಲ್ ಬಳಿ ನಡೆದಿದೆ.
ರೈತ ಮುನಿರಾಮಪ್ಪ 80 ಮೂಟೆ ಆಲೂಗಡ್ಡೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ವಾಹನ ತಡೆದ ಪೊಲೀಸರ ಬಳಿ ರೈತರು ಟ್ರ್ಯಾಕ್ಟರ್ ಬಿಡುವಂತೆ ಬೇಡಿಕೊಂಡರೂ, ವಾಪಸ್ ಹೋಗುವಂತೆ ಸೂಚಿಸಿದ್ದರು. ಬಳಿಕ ಕೆಲಕಾಲ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ:ರೈತರ ಪರೇಡ್ಗೆ ಮಂಗಳಮುಖಿಯರ ಸಾಥ್: 300ಕ್ಕೂ ಹೆಚ್ಚು ರೈತರಿಗೆ ತಿಂಡಿ ವ್ಯವಸ್ಥೆ
ಬಳಿಕ ಇದೇ ಮಾರ್ಗದಲ್ಲಿ ಬಂದ ವಿದ್ಯುತ್ ಕಂಬ ತುಂಬಿದ ಟ್ರ್ಯಾಕ್ಟರ್ಅನ್ನೂ ಪೊಲೀಸರು ವಾಪಸ್ ಕಳಿಸಿದರು.