ETV Bharat / state

ವಿಮಾನದಲ್ಲಿ ತಾಂತ್ರಿಕ ದೋಷ... ಪಾಪು ಅಂತ್ಯಕ್ರಿಯೆಗೆ ಕಾರಿನಲ್ಲೇ ತೆರಳಿದ ಸಚಿವರು

ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಪರಿಣಾಮ ಸಚಿವರು ಕಾರಿನಲ್ಲೇ ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆಗೆ ತೆರಳಿದರು.

author img

By

Published : Mar 17, 2020, 4:38 PM IST

senior-journalist-patil-puttappa-passes-away
ಪಾಪು ಅಂತ್ಯಕ್ರಿಯೆಗೆ ಕಾರಿನಲ್ಲೇ ತೆರಳಿದ ಸಚಿವರು

ದೇವನಹಳ್ಳಿ: ಹಿರಿಯ ಸಾಹಿತಿ, ಪತ್ರಕರ್ತ ಪಾಟೀಲ್ ಪುಟ್ಟಪ್ಪ ನಿಧನರಾದ ಹಿನ್ನೆಲೆ ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಿದರು.

ಆದರೆ, ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ವಿಮಾನದ ಬದಲಿಗೆ ಕಾರಿನ ಮೂಲಕವೇ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.

ವಿಮಾನ ನಿಲ್ದಾಣದಲ್ಲಿ ಸಚಿವರು

ಸಚಿವರು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಂಡಿಗೋ ವಿಮಾನದಲ್ಲಿ ಹುಬ್ಬಳ್ಳಿ ಹೋಗಬೇಕಿತ್ತು. ರನ್ ವೇಯಲ್ಲಿ ಇರುವಾಗ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇಂಡಿಗೋ ಸಂಸ್ಥೆ ಹುಬ್ಬಳ್ಳಿ ಪ್ರಯಾಣ ರದ್ದುಗೊಳಿಸಿದೆ. ಆಗ ಕಾರಿನಲ್ಲೇ ವಿಮಾನ ನಿಲ್ದಾಣದಿಂದ ಪಾಪು ಅಂತ್ಯಕ್ರಿಯೆಗೆ ತೆರಳಿದರು.

ದೇವನಹಳ್ಳಿ: ಹಿರಿಯ ಸಾಹಿತಿ, ಪತ್ರಕರ್ತ ಪಾಟೀಲ್ ಪುಟ್ಟಪ್ಪ ನಿಧನರಾದ ಹಿನ್ನೆಲೆ ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಿದರು.

ಆದರೆ, ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ವಿಮಾನದ ಬದಲಿಗೆ ಕಾರಿನ ಮೂಲಕವೇ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.

ವಿಮಾನ ನಿಲ್ದಾಣದಲ್ಲಿ ಸಚಿವರು

ಸಚಿವರು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಂಡಿಗೋ ವಿಮಾನದಲ್ಲಿ ಹುಬ್ಬಳ್ಳಿ ಹೋಗಬೇಕಿತ್ತು. ರನ್ ವೇಯಲ್ಲಿ ಇರುವಾಗ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇಂಡಿಗೋ ಸಂಸ್ಥೆ ಹುಬ್ಬಳ್ಳಿ ಪ್ರಯಾಣ ರದ್ದುಗೊಳಿಸಿದೆ. ಆಗ ಕಾರಿನಲ್ಲೇ ವಿಮಾನ ನಿಲ್ದಾಣದಿಂದ ಪಾಪು ಅಂತ್ಯಕ್ರಿಯೆಗೆ ತೆರಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.