ETV Bharat / state

ಪ್ರತಿಭಟನೆಗಳು ಶಾಂತಿಯುತವಾಗಿರಬೇಕು: ಸಿದ್ದಲಿಂಗ ಸ್ವಾಮೀಜಿ - Inauguration of Christ Jayanti CMI Public School

ನಮ್ಮ ದೇಶದ ಸಂವಿಧಾನದಲ್ಲಿ ಪ್ರತಿಭಟಿಸುವ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ. ಆದರೆ, ಪ್ರತಿಭಟನೆಗಳು ಶಾಂತಿಯುತವಾಗಿರಬೇಕು ಎಂದು ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.

ಸಿದ್ದಲಿಂಗ ಸ್ವಾಮೀಜಿ, Siddhalinga Swamiji
ಸಿದ್ದಲಿಂಗ ಸ್ವಾಮೀಜಿ
author img

By

Published : Dec 19, 2019, 6:11 AM IST

Updated : Dec 19, 2019, 7:39 AM IST

ದೊಡ್ಡಬಳ್ಳಾಪುರ: ನಮ್ಮ ದೇಶದ ಸಂವಿಧಾನದಲ್ಲಿ ಪ್ರತಿಭಟಿಸುವ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ. ಆದರೆ ಪ್ರತಿಭಟನೆ ಶಾಂತಿಯುತವಾಗಿರಬೇಕು ಎಂದು ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದ್ದಾರೆ.

ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಮಹಾಸ್ವಾಮೀಜಿ

ಸ್ವಾಮೀಜಿಯವರು ದೊಡ್ಡಬಳ್ಳಾಪುರ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿನ ಕ್ರಿಸ್ತ್​​​ ಜಯಂತಿ ಸಿಎಂಐ ಪಬ್ಲಿಕ್ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಳಿಕ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವರು ಶಾಂತಿಯುತ ಪ್ರತಿಭಟನೆ ಮಾಡಬೇಕು ಎಂದರು.

ಭಾರತದಂತಹ ದೇಶ ಜಗತಿನಲ್ಲಿಯೇ ಇಲ್ಲ, ಇಷ್ಟೊಂದು ಜನಸಂಖ್ಯೆ, ಇಷ್ಟೊಂದು ಜಾತಿ ಇರುವ ಮತ್ತು ಬೇರೆ ಬೇರೆ ಭಾಷೆಗಳನ್ನ ಮಾತನಾಡುವ ಜನರಿರುವ ದೇಶವನ್ನು ನೋಡಲು ಸಾಧ್ಯವೇ ಇಲ್ಲ. ಪ್ರತಿಭಟನಾಕಾರರು ಶಾಂತಿಯುತ ಪ್ರತಿಭಟನೆ ನಡೆಸಿದರೆ ಒಳ್ಳೆಯದು. ಸಾರ್ವಜನಿಕ ಅಸ್ತಿ ಪಾಸ್ತಿಗೆ ಹಾನಿಯಾಗದಂತೆ ಹೋರಾಟ ಮಾಡುವುದು ಉತ್ತಮ ಎಂದು ಹೇಳಿದರು.

Intro:ಪೌರತ್ವ ತಿದ್ದುಪಡೆ ಕಾಯ್ದೆ ಜಾರಿ ಹಿನ್ನಲೆ ದೇಶದಲ್ಲಿ ಗಲಭೆ-ಗಲಾಟೆ
ಶಾಂತಿಯುತ ಪ್ರತಿಭಟನೆ ಉತ್ತಮ- ಸಿದ್ದಲಿಂಗ ಮಹಾಸ್ವಾಮಿಯವರು
Body:ದೊಡ್ಡಬಳ್ಳಾಪುರ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡೆ ಕಾಯ್ದೆ ದೇಶದಲ್ಲಿ ಗಲಭೆ-ಗಲಾಟೆಗಳಿಗೆ ಕಾರಣವಾಗಿದೆ. ಪೌರತ್ವ ಕಾಯ್ದೆಗೆ ಪ್ರತಿಕ್ರಿಯೆ ನೀಡಿದ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗಾ ಮಹಾಸ್ವಾಮಿಗಳು ಶಾಂತಿಯುತ ಪ್ರತಿಭಟನೆಯ ಮೂವಕ ಕಾಯ್ದೆಯನ್ನ ವಿರೋಧಿಸುವ ಹಕ್ಕನ್ನು ಸವಿಂಧಾನವೇ ನೀಡಿದೆ ಎಂದರು.
ದೊಡ್ಡಬಳ್ಳಾಪುರ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿನ ಕ್ರಿಸ್ತು ಜಯಂತಿ ಸಿಎಂಐ ಪಬ್ಲಿಕ್ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಮಹಸ್ವಾಮಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವರು ಶಾಂತಿಯುತ ಪ್ರತಿಭಟನೆ ಮಾಡುವುದು ಒಳ್ಳೇಯದೆಂದು ಹೇಳಿದರು. ನಮ್ಮ ದೇಶದಂಥ ದೇಶ ಜಗತಿನಲ್ಲಿಯೇ ಇಲ್ಲ, ನೀವು ಯಾವುದೇ ದೇಶಕ್ಕೆ ಹೋದರೆ ನೀವು ಇಷ್ಟೊಂದು ಜನಸಂಖ್ಯೆ ಇಷ್ಟೊಂದು ಜಾತಿ ಇರುವ ಮತ್ತು ಬೇರೆ ಬೇರೆ ಭಾಷೆಗಳನ್ನ ಮಾತನಾಡುವ ಜನರಿರುವ ದೇಶವನ್ನು ನೋಡಲು ಸಾಧ್ಯವೇ ಇಲ್ಲ , ಬಹಳ ಹಿಂದಿನಿಂದಲೂ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿರುವ ಹೆಮ್ಮೆ ಭಾರತ ದೇಶಕ್ಕಿದೆ, ಪ್ರತಿಯೊಬ್ಬರು ಈ ದೇಶದ ಪ್ರಜೆಗಳಾಗಿ ಬದುಕ ಬೇಕೆಂಬ ಅಪೇಕ್ಷೆ ಹಾಗೆಯೇ ಹೊರಗಡೆಯಿಂದ ತೊಂದರೆ ಅನುಭವಿಸಿ ಬಂದವರಿಗೂ ಅವಕಾಶ ಕೊಡಬೇಕೆನ್ನುವ ಕಾರಣಕ್ಕೆ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತರಲಾಗಿದೆ. ಇದರ ಸಾಧಕ ಭಾದಕಗಳನ್ನ ನೋಡಿಕೊಂಡು ಬದಲಾವಣೆ ಮಾಡುವುದ್ದಾಗಿ ಕೇಂದ್ರ ಸರ್ಕಾರ ಹೇಳಿದೆ. ಅದರಿಂದ ಕಾನೂನುನ್ನ ಕೈಗೆ ತೆಗೆದುಕೊಳ್ಳುವ ಬದಲಿಗೆ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ ಒಳ್ಳೆಯದು. ನಮ್ಮ ಸವಿಂಧಾನದಲ್ಲಿ ವಿರೋಧಿಸುವುದಕ್ಕೂ ಅವಕಾಶ ನೀಡಲಾಗಿದೆ. ಅದರಿಂದ ಮತ್ತೊಬ್ಬರ ಅಸ್ತಿ ಪಾಸ್ತಿಗೆ ಹಾನಿಯಾಗದಂತೆ ಹೋರಾಟ ಮಾಡುವುದು ಉತ್ತಮವೆಂದರು .

ಬೈಟ್ : ಸಿದ್ದಲಿಂಗಾ ಮಹಾಸ್ವಾಮಿ, ಪೀಠಾಧ್ಯಕ್ಷರು, ಸಿದ್ದಗಂಗಾ ಮಠ


Conclusion:
Last Updated : Dec 19, 2019, 7:39 AM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.