ETV Bharat / state

ಈರುಳ್ಳಿ ಖರೀದಿಗಾಗಿ ಎಪಿಎಂಸಿಗೆ ಬಂದಿದ್ದ ವ್ಯಕ್ತಿಯ ಕೊಲೆ! - nelamangala murder

ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಗೆಂದು ಬಂದಿದ್ದ ಆಟೋ ಚಾಲಕನೊಬ್ಬ ಕೊಲೆಯಾಗಿದ್ದಾನೆ.

murder
murder
author img

By

Published : Oct 17, 2020, 10:59 PM IST

ನೆಲಮಂಗಲ (ಬೆಂ.ಗ್ರಾ): ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಗೆಂದು ಬಂದಿದ್ದ ವ್ಯಕ್ತಿ ಕೊಲೆಯಾಗಿದ್ದು, ಕೊಲೆಗೆ ಕಾರಣ ನಿಗೂಢವಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ನರಸಿಪುರದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಆಟೋ ಚಾಲಕ ರಾಮ್ ರಾವ್ ಕೊಲೆಯಾಗಿದ್ದಾನೆ.

ವ್ಯಕ್ತಿಯ ಕೊಲೆ

ಮೃತ ವ್ಯಕ್ತಿ ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸೇತುಪಾಳ್ಳದ ನಿವಾಸಿಯಾಗಿದ್ದು, ಈರುಳ್ಳಿ ಖರೀದಿಗೆಂದು ಆಟೋದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದ .

ಈ ಸಮಯದಲ್ಲಿ ದುಷ್ಕರ್ಮಿಗಳು ಆಟೋ ಚಾಲಕನ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ (ಬೆಂ.ಗ್ರಾ): ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಗೆಂದು ಬಂದಿದ್ದ ವ್ಯಕ್ತಿ ಕೊಲೆಯಾಗಿದ್ದು, ಕೊಲೆಗೆ ಕಾರಣ ನಿಗೂಢವಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ನರಸಿಪುರದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಆಟೋ ಚಾಲಕ ರಾಮ್ ರಾವ್ ಕೊಲೆಯಾಗಿದ್ದಾನೆ.

ವ್ಯಕ್ತಿಯ ಕೊಲೆ

ಮೃತ ವ್ಯಕ್ತಿ ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸೇತುಪಾಳ್ಳದ ನಿವಾಸಿಯಾಗಿದ್ದು, ಈರುಳ್ಳಿ ಖರೀದಿಗೆಂದು ಆಟೋದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದ .

ಈ ಸಮಯದಲ್ಲಿ ದುಷ್ಕರ್ಮಿಗಳು ಆಟೋ ಚಾಲಕನ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.