ETV Bharat / state

ಮದುವೆ ಮಾಡಿಕೊಂಡಾಗಿದೆ: ಗಂಡೋ, ಹೆಣ್ಣೋ ಒಟ್ಟಿನಲ್ಲಿ ಮಗುವಾದ್ರೆ ಸಾಕು ಅಂದ್ರು ಶಾಸಕ ಆನಂದ ಸಿಂಗ್ - ಶಾಸಕ ಆನಂದ ಸಿಂಗ್

ವಿಜಯನಗರ ಕ್ಷೇತ್ರದ ಶಾಸಕ ಆನಂದ್​ ಸಿಂಗ್​ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಮಾರ್ಮಿಕವಾಗಿ ಮಾತನಾಡಿರುವ ಅವರು, ಮದುವೆ ಮಾಡಿಕೊಂಡಾಗಿದೆ, ಮಗು ಗಂಡೋ, ಹೆಣ್ಣೋ ಒಟ್ಟಿನಲ್ಲಿ ಮಗು ಆದ್ರೆ ಸಾಕು ಎಂದು ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವುದು ದೇಶದ ಒಳಿತಿಗಾಗಿ ಎಂದಿದ್ದಾರೆ.

MLA Anand Singh expressed confidence in becoming a minister
ಸಚಿವನಾಗುವ ವಿಶ್ವಾಸ ವ್ಯಕ್ತಪಡಿಸಿದ ಶಾಸಕ ಆನಂದ ಸಿಂಗ್
author img

By

Published : Dec 26, 2019, 12:10 PM IST

Updated : Dec 26, 2019, 1:46 PM IST

ಹೊಸಪೇಟೆ: ಬಿಜೆಪಿ ನಾಯಕರು ವಿಜಯ ನಗರ ಉಪ ಚುನಾವಣೆಯಲ್ಲಿ ಶಾಸಕ ಆನಂದ ಸಿಂಗ್ ಗೆದ್ದ 24 ಗಂಟೆಗಳಲ್ಲಿ ಅವರನ್ನು ಸಚಿವರನ್ನಾಗಿ ಮಾಡುವ‌ ಭರವಸೆ ನೀಡಿದ್ದರು. ಆದರೆ, ಈರೆಗೂ ಸಚಿವರಾಗಿಲ್ಲ ಏಕೆ ಎಂದು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಶಾಸಕ ಆನಂದ್​ ಸಿಂಗ್​ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ಆನಂದ್​ ಸಿಂಗ್​ ಮಾರ್ಮಿಕ ಪ್ರತಿಕ್ರಿಯೆ

ನಗರದಲ್ಲಿ ಮಾತನಾಡಿದ ಅವರು, ಮದುವೆ ಮಾಡಿಕೊಂಡಾಗಿದೆ. ಗಂಡೋ, ಹೆಣ್ಣೋ ಒಟ್ಟಿನಲ್ಲಿ ಮಗುವಾದ್ರೆ ಸಾಕು ಎನ್ನುತ್ತ ಸಚಿವ ಸ್ಥಾನ ಕೊಡಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ರು.

ಇನ್ನು, ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವುದು ದೇಶದ ಒಳಿತಿಗಾಗಿ. ಇದರ ಬಗ್ಗೆ ನಾನು ಹೆಚ್ಚೇನು ತಿಳಿದುಕೊಂಡಿಲ್ಲ. ಆದರೆ, ದೇಶದಲ್ಲಿರುವ ಪ್ರಜೆಗಳಿಗೆ ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಈ ಕಾಯ್ದೆಯನ್ನು ಏಕೆ ವಿರೋಧಿಸಲಾಗ್ತಿದೆ ಅನ್ನೋದು ಸಹ ತಿಳಿಯುತ್ತಿಲ್ಲ ಎಂದರು.

ಬಳಿಕ ನಗರದ ತಾಲೂಕು ಕ್ರೀಡಾಂಗಣದಲ್ಲಿ‌ ನಡೆದ ಶ್ರೀ ಮಹಾಸತ್ ಚಂಡಿಕಾ ಯಜ್ಞ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ಹೊಸಪೇಟೆ: ಬಿಜೆಪಿ ನಾಯಕರು ವಿಜಯ ನಗರ ಉಪ ಚುನಾವಣೆಯಲ್ಲಿ ಶಾಸಕ ಆನಂದ ಸಿಂಗ್ ಗೆದ್ದ 24 ಗಂಟೆಗಳಲ್ಲಿ ಅವರನ್ನು ಸಚಿವರನ್ನಾಗಿ ಮಾಡುವ‌ ಭರವಸೆ ನೀಡಿದ್ದರು. ಆದರೆ, ಈರೆಗೂ ಸಚಿವರಾಗಿಲ್ಲ ಏಕೆ ಎಂದು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಶಾಸಕ ಆನಂದ್​ ಸಿಂಗ್​ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ಆನಂದ್​ ಸಿಂಗ್​ ಮಾರ್ಮಿಕ ಪ್ರತಿಕ್ರಿಯೆ

ನಗರದಲ್ಲಿ ಮಾತನಾಡಿದ ಅವರು, ಮದುವೆ ಮಾಡಿಕೊಂಡಾಗಿದೆ. ಗಂಡೋ, ಹೆಣ್ಣೋ ಒಟ್ಟಿನಲ್ಲಿ ಮಗುವಾದ್ರೆ ಸಾಕು ಎನ್ನುತ್ತ ಸಚಿವ ಸ್ಥಾನ ಕೊಡಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ರು.

ಇನ್ನು, ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವುದು ದೇಶದ ಒಳಿತಿಗಾಗಿ. ಇದರ ಬಗ್ಗೆ ನಾನು ಹೆಚ್ಚೇನು ತಿಳಿದುಕೊಂಡಿಲ್ಲ. ಆದರೆ, ದೇಶದಲ್ಲಿರುವ ಪ್ರಜೆಗಳಿಗೆ ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಈ ಕಾಯ್ದೆಯನ್ನು ಏಕೆ ವಿರೋಧಿಸಲಾಗ್ತಿದೆ ಅನ್ನೋದು ಸಹ ತಿಳಿಯುತ್ತಿಲ್ಲ ಎಂದರು.

ಬಳಿಕ ನಗರದ ತಾಲೂಕು ಕ್ರೀಡಾಂಗಣದಲ್ಲಿ‌ ನಡೆದ ಶ್ರೀ ಮಹಾಸತ್ ಚಂಡಿಕಾ ಯಜ್ಞ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

Intro: ಜನೇವರಿ 14 ನೇ ತಾರೀಖಿನ ನಂತರ ಸಚಿವನಾಗು ಆಕಾಂಕ್ಷೆಯಲ್ಲಿ ಶಾಸಕ ಆನಂದ ಸಿಂಗ್.

ಹೊಸಪೇಟೆ : ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ತಂದಿರುವು ದೇಶದ ಒಳಿತಿಗಾಗಿ. ದೇಶದಲ್ಲಿರುವ ಪ್ರಜೆಗಳಿಗೆ ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಆದರೆ ಈ ಕಾಯ್ದೆಯನ್ನು ಯಾಕೆ? ವಿರೋಧ ಮಾಡುತ್ತಿದ್ದಾರೆ ಎನ್ನುವುದು ತಿಳಿತಾಯಿಲ್ಲ. ಮಾಧ್ಯಮದವರು ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಜನರಿಗೆ ತಿಳಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದೇಶದ ಜನರ ಹಿತಕ್ಕಾಗಿ ಈ ಕಾಯ್ದೆಯನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಮಾತನಾಡುವುದಕ್ಕೆ ನಾನು ಅಷ್ಟೊಂದು ತಿಳಿದುಕೊಂಡಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.


Body: ನಗರದ ತಾಲೂಕು ಕ್ರೀಡಾಂಗಣದಲ್ಲಿ‌ ಇಂದು ಸಂಜೆ ಶಾಸಕ ಆನಂದ ಸಿಂಗ್ ಶ್ರೀ ಮಹಾಸತ್ ಚಂಡಿಕಾ ಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಾವುದೇ ದುಷ್ಟ ಶಕ್ತಿಗಳು ಸಮೀಪ ಸುಳಿಯದಂತೆ ಚಂಡಿಕಾ ಯಜ್ಞ ಪೂಜೆಯನ್ನು‌ ಸಲ್ಲಿಸಿದರು. ಬಳಿಕ ನಗರದ ಪ್ರಾರಡೈಸ್ ಖಾಸಗಿ ಹೊಟೇಲನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಆನಂದ ಸಿಂಗ್ ಅವರು ಮಾತನಾಡಿದರು.

ಶಾಸಕ ಆನಂದ ಸಿಂಗ್ ಗೆದ್ದ 24 ಗಂಟೆಗಳಲ್ಲಿ ಆನಂದ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹಾಗೂ ಮುಖಂಡರು ವಿಜಯ ನಗರ ಉಪ ಚುನಾವಣೆಯಲ್ಲಿ‌ ಭರವಸೆಯನ್ನು ನೀಡಿದ್ದರು. ಈ ವರಗೆ ಸಚಿವ ಆಗಲಿಲ್ಲ ಎಂದು ಪತ್ರಕರ್ತ ಪ್ರಶ್ನೆಗೆ ಉತ್ತರವನ್ನು‌ ನೀಡಿದರು.ಮದುವೆಯನ್ನು ಮಾಡಿಕೊಂಡಿದೆ ಗಂಡು ಮತ್ತು ಹೆಣ್ಣಾಗಲಿ ಮಗುವಾದರೆ ಸಾಕು ಎಂದರು.ಮುಂದಿನ ವರ್ಷದ ಜನೇವರಿ 14 ನೇ ನಂತರ ಅಥವಾ ಹಂಪಿ ಉತ್ಸವ ದಿನದಂದ ಮುಖ್ಯ ಮಂತ್ರಿಗಳು ಸಚಿವ ಸಂಪುಟದ ಬಗ್ಗೆ ಮಾತನಾಡಬಹುದು ಸ್ವಲ್ಪ ಹೆಚ್ಚು ದಿನ ಕಡಿಮೆ ಆಗಬಹುದು ಒಟ್ಟಿನಲ್ಲಿ ಸಚಿವನಾಗುವು ವಿಶ್ವಾಸ ಮತ್ತು ನಂಬಿಕೆ ನನಗೆ. ಪತ್ರಿಕಾ ಮಿತ್ರರಿಗೆ ಎಲ್ಲ ಪ್ರಶ್ನೆಗೆ ಉತ್ತರ ಸಿಗಲಿದೆ ಎಂದು ವಿಶ್ವಾಸವನ್ನು ಸೂಚಿಸಿದರು.

ಹಂಪಿ‌ ಉತ್ಸವಕ್ಕೆ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಹಾಗೂ ಜಿಲ್ಲಾ ಸಚಿವ ಲಕ್ಷ್ಮಣ ಸವದಿ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರಿಗೆ ಸಂಪೂರ್ಣವಾದ ಜವಾಬ್ದಾರಿಯಿದೆ ಅವರು ಉತ್ಸವದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಡಿಮೆ ಸಮಯದಲ್ಲಿ ಎಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತಿದ್ದಾರೆ ಎಂದರು.

ವಿಜಯ ನಗರ ಜಿಲ್ಲೆಯಾಗುವುದಕ್ಕೆ ಜಿಲ್ಲೆಯ ಶಾಸಕರು ಯಾವುದೇ ರೀತಿಯ ವಿರೋಧವನ್ನು ಮಾಡಿಲ. ಅಖಂಡ ಜಿಲ್ಲೆಯಾಗಿ ಉಳಿಯಬೇಕು ಎನ್ನುವುದು ಎಲ್ಲರ ಆಸೆಯವಾಗಿದೆ. ಅದರ ಬಗ್ಗೆ ಅನಿಸಿಕೆ ಮತ್ತು‌ ಅಭಿಪ್ರಾಯಗಳನ್ನು ಶಾಸಕರು ವ್ಯಕ್ತ ಪಡಿಸಿದ್ದಾರೆ. ಹಂಪಿ ಉತ್ಸವದಲ್ಲಿ ಅಥವಾ ಜನೇವರಿ 14 ತಾರೀಖಿನಂದ ಎಲ್ಲ ಪ್ರಶ್ನೆಗೆ ಉತ್ತರ ಸಿಗರಲಿದೆ ಎಂದು ವಿಶ್ವಾಸವನ್ನು ವ್ಯಕ್ತ ಪಡಿಸಿದರು.





Conclusion:KN_HPT_4_ANANDASING_SPEECH_INPRESSMEET_KA10028
Last Updated : Dec 26, 2019, 1:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.