ETV Bharat / state

ಕಿರುಕುಳ ಕೊಡುತ್ತಿದ್ದ ಮಗನನ್ನು ಡಂಬಲ್ಸ್​ನಿಂದ ಹೊಡೆದು ಕೊಂದ ತಂದೆ

author img

By

Published : Nov 26, 2022, 9:30 PM IST

ಕುಡಿದು ಬಂದು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ ಮಗನನ್ನು ತಂದೆಯೊಬ್ಬ ಡಂಬಲ್ಸ್​​ನಿಂದ ಹೊಡೆದು ಕೊಲೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ದೇವಾಲಪುರದಲ್ಲಿ ನಡೆದಿದೆ.

father-kills-son-by-hitting-with-dumbbells-at-hoskote
ಕಿರುಕುಳ ಕೊಡುತ್ತಿದ್ದ ಮಗನನ್ನು ಡಂಬಲ್ಸ್​ನಿಂದ ಹೊಡೆದು ಕೊಂದ ತಂದೆ

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಕುಡಿದು ಬಂದು ನಿತ್ಯ ಕಿರುಕುಳ‌ ಕೊಡುತ್ತಿದ್ದ ಮಗನನ್ನು ತಂದೆಯೊಬ್ಬ ಡಂಬಲ್ಸ್​​ನಿಂದ ಹೊಡೆದು ಹತ್ಯೆಗೈದಿರುವ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವಾಲಪುರ ಗ್ರಾಮದಲ್ಲಿ ನಡೆದಿದೆ. ತ್ಯಾಗರಾಜ(38) ತಂದೆಯಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು,ಮುನಿಸ್ವಾಮಿ ಮಗನನ್ನು ಕೊಲೆ ಮಾಡಿದ ಆರೋಪಿ.

ಮೃತ ತ್ಯಾಗರಾಜ ಪ್ರತಿ ನಿತ್ಯ ಕುಡಿದು ಬಂದು ತಂದೆ ಮುನಿಸ್ವಾಮಿ ಜೊತೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಮುನಿಸ್ವಾಮಿ ಮಗಳ ಮನೆಗೆ ಬಂದು ಆಶ್ರಯ ಪಡೆದಿದ್ದ. ಬಳಿಕ ಅಲ್ಲಿಗೂ ಬಂದು ಹಣ ಕೊಡುವಂತೆ ಮುನಿಸ್ವಾಮಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇದರಿಂದ ರೋಸಿ ಹೋದ ಮುನಿಸ್ವಾಮಿ ಡಂಬಲ್ಸ್ ನಿಂದ ಹೊಡೆದು ತ್ಯಾಗರಾಜನನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಅಲ್ಲದೇ ಮೃತ ತ್ಯಾಗರಾಜ್ ಈ ಹಿಂದೆ ತಂದೆಗೆ ಹಲವು ಬಾರಿ ಹಲ್ಲೇ ನಡೆಸಿದ್ದನಂತೆ. ಅಲ್ಲದೆ ತಂದೆ ತಾಯಿ ಕೂಲಿ ಮಾಡಿ ತಂದ ಹಣವನ್ನು ಕಸಿದುಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಸದ್ಯ ಕೊಲೆ‌ ಮಾಡಿದ ಮುನಿಸ್ವಾಮಿ ಪೊಲೀಸರಿಗೆ ಶರಣಾಗಿದ್ದು,ಘಟನೆ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬಸ್​ ಮತ್ತು ಬೈಕ್​ ನಡುವೆ ಮುಖಾಮುಖಿ ಡಿಕ್ಕಿ: ನವ ವಿವಾಹಿತ ಸಾವು

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಕುಡಿದು ಬಂದು ನಿತ್ಯ ಕಿರುಕುಳ‌ ಕೊಡುತ್ತಿದ್ದ ಮಗನನ್ನು ತಂದೆಯೊಬ್ಬ ಡಂಬಲ್ಸ್​​ನಿಂದ ಹೊಡೆದು ಹತ್ಯೆಗೈದಿರುವ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವಾಲಪುರ ಗ್ರಾಮದಲ್ಲಿ ನಡೆದಿದೆ. ತ್ಯಾಗರಾಜ(38) ತಂದೆಯಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು,ಮುನಿಸ್ವಾಮಿ ಮಗನನ್ನು ಕೊಲೆ ಮಾಡಿದ ಆರೋಪಿ.

ಮೃತ ತ್ಯಾಗರಾಜ ಪ್ರತಿ ನಿತ್ಯ ಕುಡಿದು ಬಂದು ತಂದೆ ಮುನಿಸ್ವಾಮಿ ಜೊತೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಮುನಿಸ್ವಾಮಿ ಮಗಳ ಮನೆಗೆ ಬಂದು ಆಶ್ರಯ ಪಡೆದಿದ್ದ. ಬಳಿಕ ಅಲ್ಲಿಗೂ ಬಂದು ಹಣ ಕೊಡುವಂತೆ ಮುನಿಸ್ವಾಮಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇದರಿಂದ ರೋಸಿ ಹೋದ ಮುನಿಸ್ವಾಮಿ ಡಂಬಲ್ಸ್ ನಿಂದ ಹೊಡೆದು ತ್ಯಾಗರಾಜನನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಅಲ್ಲದೇ ಮೃತ ತ್ಯಾಗರಾಜ್ ಈ ಹಿಂದೆ ತಂದೆಗೆ ಹಲವು ಬಾರಿ ಹಲ್ಲೇ ನಡೆಸಿದ್ದನಂತೆ. ಅಲ್ಲದೆ ತಂದೆ ತಾಯಿ ಕೂಲಿ ಮಾಡಿ ತಂದ ಹಣವನ್ನು ಕಸಿದುಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಸದ್ಯ ಕೊಲೆ‌ ಮಾಡಿದ ಮುನಿಸ್ವಾಮಿ ಪೊಲೀಸರಿಗೆ ಶರಣಾಗಿದ್ದು,ಘಟನೆ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬಸ್​ ಮತ್ತು ಬೈಕ್​ ನಡುವೆ ಮುಖಾಮುಖಿ ಡಿಕ್ಕಿ: ನವ ವಿವಾಹಿತ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.