ಬೆಂಗಳೂರು: ದೇವನಹಳ್ಳಿಯ ಇತಿಹಾಸಪ್ರಸಿದ್ದ ವೇಣುಗೋಪಾಲಸ್ವಾಮಿ ಲಕ್ಷ ದೀಪೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಕಳೆದ ಎಂಟು ದಿನಗಳಿಂದ ದೀಪೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಭಕ್ತ ಸಾಗರವೇ ಹರಿದು ಬರುತ್ತಿದೆ. ಇಂದು ಇಡೀ ರಾತ್ರಿ ವೇಣುಗೋಪಾಲಸ್ವಾಮಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನ ಅಕ್ಕಪಕ್ಕ ಜಿಲ್ಲೆಗಳಿಂದ ಭಕ್ತರು ಸ್ವಾಮಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಪಟ್ಟಣದ ಬೀದಿಗಳನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರ ಮಾಡಲಾಗಿದ್ದು ಕಣ್ಮನ ಸೆಳೆಯುತ್ತಿದೆ. ವೇಣುಗೋಪಾಲಸ್ವಾಮಿಗೆ ವಜ್ರಖಚಿತ ಆಭರಣಗಳಿಂದ ಅಲಂಕಾರ ಮಾಡಲಾಗಿದೆ. ಪಟ್ಟಣದ ಚೌಕದಲ್ಲಿ ತೇರಿನ ಪಲ್ಲಕ್ಕಿ ಆರ್ಕಷಣೆಯ ಕೇಂದ್ರಬಿಂದುವಾಗಿತ್ತು. ರಾತ್ರಿ 8 ಗಂಟೆಗೆ ವಿಶೇಷ ಬಾಣ ಬಿರುಸಿನ ಶೋ ಆಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ : ವಿದ್ಯುತ್ ದೀಪಾಲಂಕಾರ.. ಕಂಗೊಳಿಸಿದ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ನಿಜಗಲ್ಲು ಸಿದ್ದರಬೆಟ್ಟ