ETV Bharat / state

Bengaluru lady murder.. ಒಂಟಿ ಮಹಿಳೆ ಬರ್ಬರ ಕೊಲೆ.. ಶವ ಸಾಗಿಸಲು ಕೈ ಕಾಲು ಕತ್ತರಿಸಿದ್ರು: ಬನ್ನೇರುಘಟ್ಟ ಪೊಲೀಸರಿಂದ ಬಿಹಾರ ಮೂಲದ ಆರೋಪಿ ಅರೆಸ್ಟ್​

author img

By

Published : Jun 10, 2023, 4:38 PM IST

Updated : Jun 10, 2023, 6:11 PM IST

ಮಹಿಳೆಯನ್ನು ಕೊಲೆ ಮಾಡಿದ ಬಳಿಕ ಮೃತದೇಹದ ಕೈ ಕಾಲು ರುಂಡ ಕತ್ತರಿಸಿದ ಪ್ರಕರಣದ ಆರೋಪಿಯನ್ನು ಬನ್ನೇರುಘಟ್ಟ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Etv Bharatwomen-murder-case-bihar-based-accused-arrested-by-bannerghatta-polic
ಒಂಟಿ ಮಹಿಳೆ ಬರ್ಬರ ಕೊಲೆ ಪ್ರಕರಣ: ಬನ್ನೇರುಘಟ್ಟ ಪೊಲೀಸರಿಂದ ಬಿಹಾರ ಮೂಲದ ಆರೋಪಿ ಬಂಧನ
ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ

ಆನೇಕಲ್(ಬೆಂಗಳೂರು ಗ್ರಾಮಾಂತರ): ರಾಜ್ಯದಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಆರೋಪಿಯ ವಿಚಾರಣೆ ನಡೆಸಿದಾಗ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಬರ್ಬರ ಕೊಲೆ ಪ್ರಕರಣ ಸಂಬಂಧ ಬಿಹಾರ ಮೂಲದ ಕೊಲೆ ಆರೋಪಿಯನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ. ಜೂನ್​ 4ರಂದು ಬಿಹಾರದಲ್ಲಿ ಆರೋಪಿ ಇಂದಲ್ ಕುಮಾರ್‌ನನ್ನು ಪಿಎಸ್​ಐ ಸಿದ್ದನಗೌಡ ವಶಕ್ಕೆ ಪಡೆದು ಜೂ.7ರಂದು ರಾಜ್ಯಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದರು. ಆನೇಕಲ್ ತಾಲೂಕಿನ ಬನ್ನೇರುಘಟ್ಟ ನಿವಾಸಿ ಜನತಾ ಕಾಲೊನಿಯ ಗೀತಮ್ಮ(53) ಮೃತ ಮಹಿಳೆ.

ಈ ಕುರಿತು ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ಜನತಾ ಕಾಲೊನಿಯ ಕಾಂಪೌಂಡು ಸಮೀಪ ಕೈ ಕಾಲು ರುಂಡ ಕತ್ತರಿಸಿ ದೇಹ ಎಸೆದಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೊಲೆಯಾದ ಗೀತಮ್ಮ ಮನೆಯಲ್ಲಿ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ​ ರಾಜ್ಯದ ಯುವಕರು ಬಾಡಿಗೆ ಇದ್ದರು. ಆ ಯುವಕರು ಮೂರ್ನಾಲ್ಕು ದಿನಗಳಿಂದ ಕಾಣಿಸುತ್ತಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ತನಿಖೆಯನ್ನು ಮಾಡಲಾಗಿ ಆರೋಪಿಗಳು ಬಿಹಾರ​ ರಾಜ್ಯದಲ್ಲಿ ಇದ್ದಾರೆ ಎಂಬುದು ತಿಳಿದಿತ್ತು.

ಇದನ್ನು ಆಧರಿಸಿ ಬನ್ನೇರುಘಟ್ಟ ಪೊಲೀಸ್​ ಠಾಣೆಯ ಪಿಎಸ್​ಐ ಸಿದ್ದನಗೌಡ ಮತ್ತು ಅವರ ತಂಡ ಬಿಹಾರದ ರಾಜ್ಯದ ಔರಂಗಾಬಾದ್​ನ ಒಂದು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಇಂದಲ್ ಕುಮಾರ್‌ ಎಂಬ ಆರೋಪಿಯನ್ನು ಬಂಧಿಸಲು ಮುಂದಾಗುತ್ತಾರೆ. ಅ ಸಮಯದಲ್ಲಿ ಆತನ ಬೆಂಬಲಿಗರು ಮತ್ತು ಸ್ಥಳೀಯರು ಆರೋಪಿಯನ್ನು ಬಂಧಿಸುವಾಗ ಪ್ರತಿರೋಧ ತೋರುತ್ತಾರೆ. ಅಷ್ಟಾದರೂ ನಮ್ಮ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ಆತನನ್ನು ಬಂಧಿಸಿ ಅಲ್ಲಿನ ಸ್ಥಳೀಯ ಕೋರ್ಟ್​ಗೆ ಹಾಜರುಪಡಿಸಿ, ಅಲ್ಲಿಂದ ಬನ್ನೇರುಘಟ್ಟ ಪೊಲೀಸ್​ ಠಾಣೆಗೆ ಕರೆತರಲಾಗಿದೆ ಎಂದರು.

ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಒಟ್ಟು 7 ಜನ ಆರೋಪಿತರು ಕೊಲೆಯಾದ ಗೀತಮ್ಮ ಮನೆಯಲ್ಲಿ ಮತ್ತು ಅಲ್ಲೇ ಪಕ್ಕ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಮುಖ್ಯ ಆರೋಪಿ ಪಂಕಜ್​​ ಕುಮಾರ್​ ಬಹಳಷ್ಟು ವರ್ಷಗಳಿಂದ ಗೀತಮ್ಮ ಮನೆಯಲ್ಲಿ ವಾಸವಾಗಿದ್ದ ಎಂದು ತಿಳಿಸಿದರು.

ಈತ ಗೀತಮ್ಮನೊಂದಿಗೆ ಅನ್ಯೋನ್ಯವಾಗಿದ್ದರಿಂದ ಬಾಡಿಗೆ ಮನೆಗಳನ್ನು ನನ್ನ ಹೆಸರಿಗೆ ಬರೆದುಕೊಡು ಎಂದು ಪೀಡಿಸುತ್ತಿದ್ದ. ಇದಕ್ಕೆ ಒಪ್ಪದ ಗೀತಮ್ಮರನ್ನು ಮೇ 27ರಂದು ಪಂಕಜ್​ ಎಂಬುವವನು ಇತರರೊಂದಿಗೆ ಸೇರಿಕೊಂಡು ಮೊಬೈಲ್ ವೈರ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಇಲ್ಲಿಯೇ ಬಿಟ್ಟರೇ, ಎಲ್ಲರಿಗೂ ವಿಷಯ ತಿಳಿಯುತ್ತದೆ ಎಂದು ಮೃತ ದೇವಹವನ್ನು ಯಾರಿಗೂ ಗುರುತು ಸಿಗದಂತೆ ಮಾಡಿ, ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ ಎಂದು ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಇದರ ಭಾಗವಾಗಿ ದೇಹವನ್ನು ಬೇರೆಡೆಗೆ ಇಡಿಯಾಗಿ ಸಾಗಿಸಲು ಕಷ್ಟವಾಗುವುದರಿಂದ ಆಕ್ಸೆಲ್ ಬ್ಲೇಡ್​ನಿಂದ ತಲೆ, ಕೈ ಕಾಲುಗಳನ್ನು ಬೇರ್ಪಡಿಸಿ ಬೇರೆ ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ದೇಹ ತುಂಬ ಭಾರವಾಗಿದ್ದರಿಂದ ಅದನ್ನು ಸಮೀಪದ ಕಾಂಪೌಂಡ್​ ಬಳಿ ಎಸೆದು ಅಲ್ಲಿಂದ ಅವರು ಪರಾರಿಯಾಗಿರುತ್ತಾರೆ ಎಂದು ತಿಳಿಸಿದರು. ಬನ್ನೇರುಘಟ್ಟ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಉಮಾಶಂಕರ್ ನೇತೃತ್ವದ ತಂಡ​, ಎಎಸ್​ಪಿ ಮತ್ತು ಡಿವೈಎಸ್​ಪಿ ಮಾರ್ಗದರ್ಶನದಲ್ಲಿ ಪ್ರಕರಣವನ್ನು ತ್ವರಿತವಾಗಿ ಭೇದಿಸುವಲ್ಲಿ ಯಶಸ್ವಿಯಾಗಿದೆ. ಇವರಿಗೆ ಬೆಂಗಳೂರು ಜಿಲ್ಲಾ ಪೊಲೀಸ್​ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿ, ಪ್ರಶಂಸನಾ ಪತ್ರವನ್ನು ನೀಡಲಾಗುತ್ತದೆ ಎಂದು ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಇದನ್ನೂ ಓದಿ: ಡೇಟಿಂಗ್ ಆ್ಯಪ್​ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಯುವತಿಗೆ ವಂಚನೆ: ಆರೋಪಿ ಬಂಧನ

ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ

ಆನೇಕಲ್(ಬೆಂಗಳೂರು ಗ್ರಾಮಾಂತರ): ರಾಜ್ಯದಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಆರೋಪಿಯ ವಿಚಾರಣೆ ನಡೆಸಿದಾಗ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಬರ್ಬರ ಕೊಲೆ ಪ್ರಕರಣ ಸಂಬಂಧ ಬಿಹಾರ ಮೂಲದ ಕೊಲೆ ಆರೋಪಿಯನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ. ಜೂನ್​ 4ರಂದು ಬಿಹಾರದಲ್ಲಿ ಆರೋಪಿ ಇಂದಲ್ ಕುಮಾರ್‌ನನ್ನು ಪಿಎಸ್​ಐ ಸಿದ್ದನಗೌಡ ವಶಕ್ಕೆ ಪಡೆದು ಜೂ.7ರಂದು ರಾಜ್ಯಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದರು. ಆನೇಕಲ್ ತಾಲೂಕಿನ ಬನ್ನೇರುಘಟ್ಟ ನಿವಾಸಿ ಜನತಾ ಕಾಲೊನಿಯ ಗೀತಮ್ಮ(53) ಮೃತ ಮಹಿಳೆ.

ಈ ಕುರಿತು ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ಜನತಾ ಕಾಲೊನಿಯ ಕಾಂಪೌಂಡು ಸಮೀಪ ಕೈ ಕಾಲು ರುಂಡ ಕತ್ತರಿಸಿ ದೇಹ ಎಸೆದಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೊಲೆಯಾದ ಗೀತಮ್ಮ ಮನೆಯಲ್ಲಿ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ​ ರಾಜ್ಯದ ಯುವಕರು ಬಾಡಿಗೆ ಇದ್ದರು. ಆ ಯುವಕರು ಮೂರ್ನಾಲ್ಕು ದಿನಗಳಿಂದ ಕಾಣಿಸುತ್ತಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ತನಿಖೆಯನ್ನು ಮಾಡಲಾಗಿ ಆರೋಪಿಗಳು ಬಿಹಾರ​ ರಾಜ್ಯದಲ್ಲಿ ಇದ್ದಾರೆ ಎಂಬುದು ತಿಳಿದಿತ್ತು.

ಇದನ್ನು ಆಧರಿಸಿ ಬನ್ನೇರುಘಟ್ಟ ಪೊಲೀಸ್​ ಠಾಣೆಯ ಪಿಎಸ್​ಐ ಸಿದ್ದನಗೌಡ ಮತ್ತು ಅವರ ತಂಡ ಬಿಹಾರದ ರಾಜ್ಯದ ಔರಂಗಾಬಾದ್​ನ ಒಂದು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಇಂದಲ್ ಕುಮಾರ್‌ ಎಂಬ ಆರೋಪಿಯನ್ನು ಬಂಧಿಸಲು ಮುಂದಾಗುತ್ತಾರೆ. ಅ ಸಮಯದಲ್ಲಿ ಆತನ ಬೆಂಬಲಿಗರು ಮತ್ತು ಸ್ಥಳೀಯರು ಆರೋಪಿಯನ್ನು ಬಂಧಿಸುವಾಗ ಪ್ರತಿರೋಧ ತೋರುತ್ತಾರೆ. ಅಷ್ಟಾದರೂ ನಮ್ಮ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ಆತನನ್ನು ಬಂಧಿಸಿ ಅಲ್ಲಿನ ಸ್ಥಳೀಯ ಕೋರ್ಟ್​ಗೆ ಹಾಜರುಪಡಿಸಿ, ಅಲ್ಲಿಂದ ಬನ್ನೇರುಘಟ್ಟ ಪೊಲೀಸ್​ ಠಾಣೆಗೆ ಕರೆತರಲಾಗಿದೆ ಎಂದರು.

ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಒಟ್ಟು 7 ಜನ ಆರೋಪಿತರು ಕೊಲೆಯಾದ ಗೀತಮ್ಮ ಮನೆಯಲ್ಲಿ ಮತ್ತು ಅಲ್ಲೇ ಪಕ್ಕ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಮುಖ್ಯ ಆರೋಪಿ ಪಂಕಜ್​​ ಕುಮಾರ್​ ಬಹಳಷ್ಟು ವರ್ಷಗಳಿಂದ ಗೀತಮ್ಮ ಮನೆಯಲ್ಲಿ ವಾಸವಾಗಿದ್ದ ಎಂದು ತಿಳಿಸಿದರು.

ಈತ ಗೀತಮ್ಮನೊಂದಿಗೆ ಅನ್ಯೋನ್ಯವಾಗಿದ್ದರಿಂದ ಬಾಡಿಗೆ ಮನೆಗಳನ್ನು ನನ್ನ ಹೆಸರಿಗೆ ಬರೆದುಕೊಡು ಎಂದು ಪೀಡಿಸುತ್ತಿದ್ದ. ಇದಕ್ಕೆ ಒಪ್ಪದ ಗೀತಮ್ಮರನ್ನು ಮೇ 27ರಂದು ಪಂಕಜ್​ ಎಂಬುವವನು ಇತರರೊಂದಿಗೆ ಸೇರಿಕೊಂಡು ಮೊಬೈಲ್ ವೈರ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಇಲ್ಲಿಯೇ ಬಿಟ್ಟರೇ, ಎಲ್ಲರಿಗೂ ವಿಷಯ ತಿಳಿಯುತ್ತದೆ ಎಂದು ಮೃತ ದೇವಹವನ್ನು ಯಾರಿಗೂ ಗುರುತು ಸಿಗದಂತೆ ಮಾಡಿ, ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ ಎಂದು ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಇದರ ಭಾಗವಾಗಿ ದೇಹವನ್ನು ಬೇರೆಡೆಗೆ ಇಡಿಯಾಗಿ ಸಾಗಿಸಲು ಕಷ್ಟವಾಗುವುದರಿಂದ ಆಕ್ಸೆಲ್ ಬ್ಲೇಡ್​ನಿಂದ ತಲೆ, ಕೈ ಕಾಲುಗಳನ್ನು ಬೇರ್ಪಡಿಸಿ ಬೇರೆ ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ದೇಹ ತುಂಬ ಭಾರವಾಗಿದ್ದರಿಂದ ಅದನ್ನು ಸಮೀಪದ ಕಾಂಪೌಂಡ್​ ಬಳಿ ಎಸೆದು ಅಲ್ಲಿಂದ ಅವರು ಪರಾರಿಯಾಗಿರುತ್ತಾರೆ ಎಂದು ತಿಳಿಸಿದರು. ಬನ್ನೇರುಘಟ್ಟ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಉಮಾಶಂಕರ್ ನೇತೃತ್ವದ ತಂಡ​, ಎಎಸ್​ಪಿ ಮತ್ತು ಡಿವೈಎಸ್​ಪಿ ಮಾರ್ಗದರ್ಶನದಲ್ಲಿ ಪ್ರಕರಣವನ್ನು ತ್ವರಿತವಾಗಿ ಭೇದಿಸುವಲ್ಲಿ ಯಶಸ್ವಿಯಾಗಿದೆ. ಇವರಿಗೆ ಬೆಂಗಳೂರು ಜಿಲ್ಲಾ ಪೊಲೀಸ್​ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿ, ಪ್ರಶಂಸನಾ ಪತ್ರವನ್ನು ನೀಡಲಾಗುತ್ತದೆ ಎಂದು ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಇದನ್ನೂ ಓದಿ: ಡೇಟಿಂಗ್ ಆ್ಯಪ್​ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಯುವತಿಗೆ ವಂಚನೆ: ಆರೋಪಿ ಬಂಧನ

Last Updated : Jun 10, 2023, 6:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.