ETV Bharat / state

ದೇವನಹಳ್ಳಿ ಕ್ರೀಡಾಂಗಣದಲ್ಲಿ ಕಾರ್​ ರೇಸ್: ಧೂಳಿಗೆ ಕಂಗೆಟ್ಟ ಜನ, ಅಧಿಕಾರಿಗಳ ವಿರುದ್ಧ ಆಕ್ರೋಶ

author img

By

Published : Jan 29, 2023, 10:37 AM IST

ಕೊಟ್ಯಂತರ ರೂಪಾಯಿ ಖರ್ಚು ಮಾಡಿ ದೇವನಹಳ್ಳಿ ತಾಲೂಕಿನಲ್ಲಿ ನಿರ್ಮಿಸಿರುವ ಕ್ರೀಡಾಂಗಣದಲ್ಲಿ ಬೆಂಗಳೂರು ಮೋಟೊ ಸ್ಪೊರ್ಟ್ ವತಿಯಿಂದ ಕಾರ್​ ರೇಸ್ ಆಯೋಜಿಸಲಾಗಿದೆ.

car race
ಕಾರು​ ರೇಸ್ ಆಯೋಜನೆ
ದೇವನಹಳ್ಳಿ ತಾಲೂಕು ಕ್ರೀಡಾಂಗಣದಲ್ಲಿ ಕಾರ್ ರೇಸ್‌

ದೇವನಹಳ್ಳಿ: ಇತ್ತೀಚೆಗಷ್ಟೇ ಇಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಹೊಸ ಕ್ರೀಡಾಂಗಣದಲ್ಲಿ ಕ್ರಿಕೆಟ್​, ಕಬಡ್ಡಿ, ಖೋ ಖೋ, ವಾಲಿಬಾಲ್‌ನಂತಹ ಆಟಗಳಿಗೆ ಅನುಮತಿ ನೀಡುವ ಬದಲು ಕಾರ್ ರೇಸ್​ಗೆ ಕ್ರೀಡಾ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಇಲ್ಲಿನ ಪರಿಸರ ಧೂಳುಮಯವಾಗಿದೆ. ಸಮೀಪದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಮೊಟೊ ಸ್ಪೋರ್ಟ್ ವತಿಯಿಂದ ಇಂಡಿಯನ್​ ನ್ಯಾಷನಲ್​ ಆಟೋಕ್ರಾಸ್​ ಚಾಂಪಿಯನ್​ಷಿಪ್​ ಕಾರ್ ರೇಸ್​ ಆಯೋಜಿಸಲಾಗಿದೆ. ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಈ ರೇಸ್​ ನಡೆಯುತ್ತಿದೆ. ನಾಗಾಲ್ಯಾಂಡ್, ಕೋಲ್ಕತಾ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್​, ಕೇರಳದಿಂದ 60 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಮೂರು ದಿನಗಳ ಕಾಲ ಆಯೋಜಿಸಿರುವ ರೇಸ್​ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೂ ನಡೆಯುತ್ತಿದೆ. ಅದರಲ್ಲೂ, ಬೆಂಗಳೂರಿನ ಟೆಕ್ಕಿಗಳು ಸೇರಿದಂತೆ ಕಾರ್‌ ರೇಸ್‌ಪ್ರಿಯರು ಸ್ಥಳಕ್ಕೆ ಆಗಮಿಸಿ ಎಂಜಾಯ್​ ಮಾಡುತ್ತಿದ್ದಾರೆ.

ಇದನ್ನೂ ಓದಿ; ಕಾರು ಮೂರು ಪಲ್ಟಿಯಾದ್ರೂ ಛಲಬಿಡದ ಚಾಲಕ: ಎದೆ ಝಲ್ ಎನ್ನುವ ದೃಶ್ಯ

ಆಕ್ರೋಶ: "ಕಳೆದ ತಿಂಗಳ ಹಿಂದಷ್ಟೇ ಕೊಟ್ಯಂತರ ರೂ. ಬಂಡವಾಳ ಹಾಕಿ ತಾಲೂಕು ಕ್ರೀಡಾಂಗಣದಲ್ಲಿ ಪಿಚ್​ ಸಿದ್ಧಪಡಿಸಲಾಗಿದೆ. ಇದರಲ್ಲೀಗ ಕಾರ್‌ ರೇಸ್‌ ಸ್ಪರ್ಧಿಗಳು ಧೂಳೆಬ್ಬಿಸುತ್ತಿದ್ದಾರೆ. ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆ ಇದ್ದು, ರೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಧಿಕ ಧೂಳಿನಿಂದ ಪರಿಸರಕ್ಕೂ ಹಾನಿಯಾಗುತ್ತಿದೆ. ಕೂಡಲೇ ಅನುಮತಿ ಕೊಟ್ಟಿರುವ ಅಧಿಕಾರಿಗಳು ರೇಸ್​ ನಿಲ್ಲಿಸಬೇಕು" ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Auto Expo 2023: ಒಂದು ಸಾರಿ ಚಾರ್ಜ್‌ ಮಾಡಿದರೆ 700 ಕಿಮೀ ಕ್ರಮಿಸಬಹುದು, ಇದು ಮಾದರಿಯ ಎಲೆಕ್ಟ್ರಿಕ್ ವಾಹನಗಳ ಕಾನ್ಸೆಪ್ಟ್

"ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕ್ರೀಡಾಂಗಣದ ಟ್ರಾಕ್​ ರೆಡಿ ಮಾಡಿದ್ದೇವೆ. ರೇಸ್​ ನಡೆಸುವ ಕುರಿತು ಬೆಂಗಳೂರು ಮೊಟೊಸ್ಪೋರ್ಟ್ ಅನುಮತಿ ಪಡೆದಿದೆ. ಕ್ರೀಡಾಂಗಣ ಹಾಳಾಗದಂತೆ ನೋಡಿಕೊಳ್ತೇವೆ" ಎಂದು ರೇಸ್ ಆಯೋಜಕರಾದ ಉಮೇಶ್ ಪಾಂಡೆ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ 1000 ಕಾರು ರೇಸ್​.. ತುಮಕೂರಲ್ಲಿ ಧೂಳೆಬ್ಬಿಸಿದ ಸ್ಪರ್ಧೆ, ಪ್ರೇಕ್ಷಕರು ಖುಷ್​

ದೇವನಹಳ್ಳಿ ತಾಲೂಕು ಕ್ರೀಡಾಂಗಣದಲ್ಲಿ ಕಾರ್ ರೇಸ್‌

ದೇವನಹಳ್ಳಿ: ಇತ್ತೀಚೆಗಷ್ಟೇ ಇಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಹೊಸ ಕ್ರೀಡಾಂಗಣದಲ್ಲಿ ಕ್ರಿಕೆಟ್​, ಕಬಡ್ಡಿ, ಖೋ ಖೋ, ವಾಲಿಬಾಲ್‌ನಂತಹ ಆಟಗಳಿಗೆ ಅನುಮತಿ ನೀಡುವ ಬದಲು ಕಾರ್ ರೇಸ್​ಗೆ ಕ್ರೀಡಾ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಇಲ್ಲಿನ ಪರಿಸರ ಧೂಳುಮಯವಾಗಿದೆ. ಸಮೀಪದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಮೊಟೊ ಸ್ಪೋರ್ಟ್ ವತಿಯಿಂದ ಇಂಡಿಯನ್​ ನ್ಯಾಷನಲ್​ ಆಟೋಕ್ರಾಸ್​ ಚಾಂಪಿಯನ್​ಷಿಪ್​ ಕಾರ್ ರೇಸ್​ ಆಯೋಜಿಸಲಾಗಿದೆ. ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಈ ರೇಸ್​ ನಡೆಯುತ್ತಿದೆ. ನಾಗಾಲ್ಯಾಂಡ್, ಕೋಲ್ಕತಾ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್​, ಕೇರಳದಿಂದ 60 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಮೂರು ದಿನಗಳ ಕಾಲ ಆಯೋಜಿಸಿರುವ ರೇಸ್​ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೂ ನಡೆಯುತ್ತಿದೆ. ಅದರಲ್ಲೂ, ಬೆಂಗಳೂರಿನ ಟೆಕ್ಕಿಗಳು ಸೇರಿದಂತೆ ಕಾರ್‌ ರೇಸ್‌ಪ್ರಿಯರು ಸ್ಥಳಕ್ಕೆ ಆಗಮಿಸಿ ಎಂಜಾಯ್​ ಮಾಡುತ್ತಿದ್ದಾರೆ.

ಇದನ್ನೂ ಓದಿ; ಕಾರು ಮೂರು ಪಲ್ಟಿಯಾದ್ರೂ ಛಲಬಿಡದ ಚಾಲಕ: ಎದೆ ಝಲ್ ಎನ್ನುವ ದೃಶ್ಯ

ಆಕ್ರೋಶ: "ಕಳೆದ ತಿಂಗಳ ಹಿಂದಷ್ಟೇ ಕೊಟ್ಯಂತರ ರೂ. ಬಂಡವಾಳ ಹಾಕಿ ತಾಲೂಕು ಕ್ರೀಡಾಂಗಣದಲ್ಲಿ ಪಿಚ್​ ಸಿದ್ಧಪಡಿಸಲಾಗಿದೆ. ಇದರಲ್ಲೀಗ ಕಾರ್‌ ರೇಸ್‌ ಸ್ಪರ್ಧಿಗಳು ಧೂಳೆಬ್ಬಿಸುತ್ತಿದ್ದಾರೆ. ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆ ಇದ್ದು, ರೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಧಿಕ ಧೂಳಿನಿಂದ ಪರಿಸರಕ್ಕೂ ಹಾನಿಯಾಗುತ್ತಿದೆ. ಕೂಡಲೇ ಅನುಮತಿ ಕೊಟ್ಟಿರುವ ಅಧಿಕಾರಿಗಳು ರೇಸ್​ ನಿಲ್ಲಿಸಬೇಕು" ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Auto Expo 2023: ಒಂದು ಸಾರಿ ಚಾರ್ಜ್‌ ಮಾಡಿದರೆ 700 ಕಿಮೀ ಕ್ರಮಿಸಬಹುದು, ಇದು ಮಾದರಿಯ ಎಲೆಕ್ಟ್ರಿಕ್ ವಾಹನಗಳ ಕಾನ್ಸೆಪ್ಟ್

"ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕ್ರೀಡಾಂಗಣದ ಟ್ರಾಕ್​ ರೆಡಿ ಮಾಡಿದ್ದೇವೆ. ರೇಸ್​ ನಡೆಸುವ ಕುರಿತು ಬೆಂಗಳೂರು ಮೊಟೊಸ್ಪೋರ್ಟ್ ಅನುಮತಿ ಪಡೆದಿದೆ. ಕ್ರೀಡಾಂಗಣ ಹಾಳಾಗದಂತೆ ನೋಡಿಕೊಳ್ತೇವೆ" ಎಂದು ರೇಸ್ ಆಯೋಜಕರಾದ ಉಮೇಶ್ ಪಾಂಡೆ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ 1000 ಕಾರು ರೇಸ್​.. ತುಮಕೂರಲ್ಲಿ ಧೂಳೆಬ್ಬಿಸಿದ ಸ್ಪರ್ಧೆ, ಪ್ರೇಕ್ಷಕರು ಖುಷ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.