ETV Bharat / state

ನಾಗರಕೆರೆಗೆ ಜಿಲ್ಲಾಧಿಕಾರಿ ಬರುವ ಮುನ್ನವೇ ಸ್ವಚ್ಛತಾ ಕಾರ್ಯ ಕೈಗೊಂಡ ನಗರಸಭೆ

author img

By

Published : Nov 28, 2022, 11:55 AM IST

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಇಂದು ನಾಗರಕೆರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಆದ್ರೆ, ಡಿಸಿ ಬರುವ ಮುನ್ನವೇ ನಗರಸಭೆ ಕೆರೆ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಂಡು ಸತ್ಯವನ್ನು ಮುಚ್ಚಿಡುವ ಯತ್ನ ನಡೆಸಿದೆ ಎಂದು ಪರಿಸರ ಪ್ರೇಮಿ ಚಿದಾನಂದ್ ಆರೋಪಿಸಿದರು.

bangalore rural dc will visit to nagarakere
ಜಿಲ್ಲಾಧಿಕಾರಿ ಬರುವ ಮುನ್ನವೇ ಸ್ವಚ್ಛತಾ ಕಾರ್ಯ ಕೈಗೊಂಡ ನಗರಸಭೆ

ದೊಡ್ಡಬಳ್ಳಾಪುರ: ನಾಗರಕೆರೆ ನೀರು ಕಲುಷಿತಗೊಂಡಿರುವ ಬಗ್ಗೆ ಹಸಿರು ನ್ಯಾಯಪೀಠಕ್ಕೆ ಸಾರ್ವಜನಿಕರೊಬ್ಬರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ನಾಗರಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆದ್ರೆ, ಡಿಸಿ ಬರುವ ಮುಂಚೆಯೇ ನಗರಸಭೆ ತರಾತುರಿಯಲ್ಲಿ ಕೆರೆ ಸ್ವಚ್ಛತಾ ಕಾರ್ಯ ಕೈಗೊಂಡು ಸತ್ಯ ಮರೆಮಾಚುತ್ತಿದೆ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರ ನಗರದ ಹೃದಯ ಭಾಗದಲ್ಲಿರುವ ಕೆರೆ ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಕೆರೆಯಿಂದ ನಗರದ ಸೌಂದರ್ಯಕ್ಕೂ ಒಂದು ಶೋಭೆ ತಂದಿದೆ. ಆದರೆ, ದೊಡ್ಡಬಳ್ಳಾಪುರ ನಗರಸಭೆಯವರು ಒಳಚರಂಡಿ ಪೈಪ್​ಲೈನ್ ಅನ್ನು ಕೆರೆಯ ಅಂಗಳದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕೆರೆಗೆ ಕಲುಷಿತ ನೀರು ಸೇರುತ್ತಿದೆ. ನಗರಸಭೆಯ ಒಳಚರಂಡಿ ವ್ಯವಸ್ಥೆ ಕೆರೆಯನ್ನು ಸಂಪೂರ್ಣವಾಗಿ ಕಲುಷಿತಗೊಳಿಸಿದೆ ಎಂದು ಗಿರೀಶ್ ಎನ್.ಪಿ ಎಂಬುವರು ಚೆನ್ನೈನಲ್ಲಿರುವ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ಬರುವ ಮುನ್ನವೇ ಸ್ವಚ್ಛತಾ ಕಾರ್ಯ ಕೈಗೊಂಡ ನಗರಸಭೆ

ಇದನ್ನೂ ಓದಿ: ದೊಡ್ಡಬಳ್ಳಾಪುರದ ಕೆರೆಯಲ್ಲಿ ಅರ್ಧಂಬರ್ಧ ಕರಗಿದ ಗಣೇಶ ಮೂರ್ತಿಗಳು ಪತ್ತೆ ..ಭಕ್ತರಿಗೆ ಬೇಸರ

ಗಿರೀಶ್ ಅವರ ಅರ್ಜಿಯನ್ನು ಕೈಗೆತ್ತಿಕೊಂಡ ಹಸಿರು ಪೀಠ, ನಾಗರಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಹಾಗಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಇಂದು ನಾಗರಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆದ್ರೆ, ಡಿಸಿ ಬರುವ ಮುನ್ನವೇ ನಗರಸಭೆ ಕೆರೆಯ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಂಡು ಸತ್ಯವನ್ನು ಮುಚ್ಚಿಡುವ ಯತ್ನ ನಡೆಸಿದೆ ಎಂದು ಪರಿಸರ ಪ್ರೇಮಿ ಚಿದಾನಂದ್ ಆರೋಪಿಸಿದರು.

ದೊಡ್ಡಬಳ್ಳಾಪುರ: ನಾಗರಕೆರೆ ನೀರು ಕಲುಷಿತಗೊಂಡಿರುವ ಬಗ್ಗೆ ಹಸಿರು ನ್ಯಾಯಪೀಠಕ್ಕೆ ಸಾರ್ವಜನಿಕರೊಬ್ಬರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ನಾಗರಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆದ್ರೆ, ಡಿಸಿ ಬರುವ ಮುಂಚೆಯೇ ನಗರಸಭೆ ತರಾತುರಿಯಲ್ಲಿ ಕೆರೆ ಸ್ವಚ್ಛತಾ ಕಾರ್ಯ ಕೈಗೊಂಡು ಸತ್ಯ ಮರೆಮಾಚುತ್ತಿದೆ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರ ನಗರದ ಹೃದಯ ಭಾಗದಲ್ಲಿರುವ ಕೆರೆ ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಕೆರೆಯಿಂದ ನಗರದ ಸೌಂದರ್ಯಕ್ಕೂ ಒಂದು ಶೋಭೆ ತಂದಿದೆ. ಆದರೆ, ದೊಡ್ಡಬಳ್ಳಾಪುರ ನಗರಸಭೆಯವರು ಒಳಚರಂಡಿ ಪೈಪ್​ಲೈನ್ ಅನ್ನು ಕೆರೆಯ ಅಂಗಳದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕೆರೆಗೆ ಕಲುಷಿತ ನೀರು ಸೇರುತ್ತಿದೆ. ನಗರಸಭೆಯ ಒಳಚರಂಡಿ ವ್ಯವಸ್ಥೆ ಕೆರೆಯನ್ನು ಸಂಪೂರ್ಣವಾಗಿ ಕಲುಷಿತಗೊಳಿಸಿದೆ ಎಂದು ಗಿರೀಶ್ ಎನ್.ಪಿ ಎಂಬುವರು ಚೆನ್ನೈನಲ್ಲಿರುವ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ಬರುವ ಮುನ್ನವೇ ಸ್ವಚ್ಛತಾ ಕಾರ್ಯ ಕೈಗೊಂಡ ನಗರಸಭೆ

ಇದನ್ನೂ ಓದಿ: ದೊಡ್ಡಬಳ್ಳಾಪುರದ ಕೆರೆಯಲ್ಲಿ ಅರ್ಧಂಬರ್ಧ ಕರಗಿದ ಗಣೇಶ ಮೂರ್ತಿಗಳು ಪತ್ತೆ ..ಭಕ್ತರಿಗೆ ಬೇಸರ

ಗಿರೀಶ್ ಅವರ ಅರ್ಜಿಯನ್ನು ಕೈಗೆತ್ತಿಕೊಂಡ ಹಸಿರು ಪೀಠ, ನಾಗರಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಹಾಗಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಇಂದು ನಾಗರಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆದ್ರೆ, ಡಿಸಿ ಬರುವ ಮುನ್ನವೇ ನಗರಸಭೆ ಕೆರೆಯ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಂಡು ಸತ್ಯವನ್ನು ಮುಚ್ಚಿಡುವ ಯತ್ನ ನಡೆಸಿದೆ ಎಂದು ಪರಿಸರ ಪ್ರೇಮಿ ಚಿದಾನಂದ್ ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.