ETV Bharat / state

20 ವರ್ಷದ ನಂತರ ತುಂಬಿದ ಕೆರೆಗೆ ಕಂದಾಯ ಸಚಿವರಿಂದ ಬಾಗಿನ - ದೊಡ್ಡಬಳ್ಳಾಪುರದ ಕೊನಘಟ್ಟ ಕೆರೆ

ಕೊನಘಟ್ಟ ಕೆರೆಯ ದಂಡೆಯ ಮೇಲಿನ ಗ್ರಾಮದೇವತೆ ಮಾರ್ಗಾದಾಂಬ ದೇವಿಗೆ ಪೂಜೆ ಸಲ್ಲಿಸಿ, ಎರಡು ದಶಕಗಳ ನಂತರ ತುಂಬಿ ತುಳುಕುತ್ತಿರುವ ಕೆರೆಗೆ ಕಂದಾಯ ಸಚಿವರು ಬಾಗಿನ ಅರ್ಪಿಸಿದರು.

20 ವರ್ಷದ ನಂತರ ತುಂಬಿದ ಕೆರೆಗೆ ಕಂದಾಯ ಸಚಿವರಿಂದ ಬಾಗಿನ
author img

By

Published : Oct 20, 2019, 12:46 PM IST

ದೊಡ್ಡಬಳ್ಳಾಪುರ: ಮಳೆ ಬಾರದೆ 20 ವರ್ಷಗಳಿಂದ ಬರಿದಾಗಿದ್ದ ಜಿಲ್ಲೆಯ ಕೊನಘಟ್ಟ ಕೆರೆ ತುಂಬಿ ಕೋಡಿಬಿದ್ದಿದ್ದು, ಕಂದಾಯ ಸಚಿವ ಆರ್. ಅಶೋಕ್​ ಬಾಗಿನ ಅರ್ಪಿಸಿದರು.

ಕೊನಘಟ್ಟ ಕೆರೆಗೆ ಬಾಗಿನ ಅರ್ಪಿಸಿದ ಕಂದಾಯ ಸಚಿವರು, ಗ್ರಾಮಸ್ಥರು

ಕೊನಘಟ್ಟ ಕೆರೆಯ ದಂಡೆಯ ಮೇಲಿನ ಗ್ರಾಮದೇವತೆ ಮಾರ್ಗಾದಾಂಬ ದೇವಿಗೆ ಪೂಜೆ ಸಲ್ಲಿಸಿ, ಎರಡು ದಶಕಗಳ ನಂತರ ತುಂಬಿ ತುಳುಕುತ್ತಿರುವ ಕೆರೆಗೆ ಸಚಿವರು ಬಾಗಿನ ಅರ್ಪಿಸಿದರು. ಈ ವೇಳೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಗ್ರಾಮಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಸಹಜವಾಗಿ ಪ್ರತಿವರ್ಷ ಜಾತ್ರೆ ವೇಳೆ ಗ್ರಾಮ ದೇವತೆಗೆ ಆರತಿ ಬೆಳಗುತ್ತಿದ್ದ ಗ್ರಾಮದ ಮಹಿಳೆಯರು, ಕೆರೆ ತುಂಬಿದ ಖುಷಿಯಲ್ಲಿ ಗಂಗೆಗೆ ತಂಬಿಟ್ಟು ಆರತಿ ಬೆಳಗಿ, ನಮಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಕಂದಾಯ ಸಚಿವರೊಂದಿಗೆ ಉಸ್ತುವಾರಿ ಸಚಿವ ಆರ್. ಅಶೋಕ್, ಸಂಸದ ಬಿ ಎನ್​ ಬಚ್ಚೇಗೌಡ ಭಾಗಿಯಾಗಿ ಕೆರೆಗೆ ಬಾಗಿನ ಅರ್ಪಿಸಿದರು.

ದೊಡ್ಡಬಳ್ಳಾಪುರ: ಮಳೆ ಬಾರದೆ 20 ವರ್ಷಗಳಿಂದ ಬರಿದಾಗಿದ್ದ ಜಿಲ್ಲೆಯ ಕೊನಘಟ್ಟ ಕೆರೆ ತುಂಬಿ ಕೋಡಿಬಿದ್ದಿದ್ದು, ಕಂದಾಯ ಸಚಿವ ಆರ್. ಅಶೋಕ್​ ಬಾಗಿನ ಅರ್ಪಿಸಿದರು.

ಕೊನಘಟ್ಟ ಕೆರೆಗೆ ಬಾಗಿನ ಅರ್ಪಿಸಿದ ಕಂದಾಯ ಸಚಿವರು, ಗ್ರಾಮಸ್ಥರು

ಕೊನಘಟ್ಟ ಕೆರೆಯ ದಂಡೆಯ ಮೇಲಿನ ಗ್ರಾಮದೇವತೆ ಮಾರ್ಗಾದಾಂಬ ದೇವಿಗೆ ಪೂಜೆ ಸಲ್ಲಿಸಿ, ಎರಡು ದಶಕಗಳ ನಂತರ ತುಂಬಿ ತುಳುಕುತ್ತಿರುವ ಕೆರೆಗೆ ಸಚಿವರು ಬಾಗಿನ ಅರ್ಪಿಸಿದರು. ಈ ವೇಳೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಗ್ರಾಮಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಸಹಜವಾಗಿ ಪ್ರತಿವರ್ಷ ಜಾತ್ರೆ ವೇಳೆ ಗ್ರಾಮ ದೇವತೆಗೆ ಆರತಿ ಬೆಳಗುತ್ತಿದ್ದ ಗ್ರಾಮದ ಮಹಿಳೆಯರು, ಕೆರೆ ತುಂಬಿದ ಖುಷಿಯಲ್ಲಿ ಗಂಗೆಗೆ ತಂಬಿಟ್ಟು ಆರತಿ ಬೆಳಗಿ, ನಮಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಕಂದಾಯ ಸಚಿವರೊಂದಿಗೆ ಉಸ್ತುವಾರಿ ಸಚಿವ ಆರ್. ಅಶೋಕ್, ಸಂಸದ ಬಿ ಎನ್​ ಬಚ್ಚೇಗೌಡ ಭಾಗಿಯಾಗಿ ಕೆರೆಗೆ ಬಾಗಿನ ಅರ್ಪಿಸಿದರು.

Intro:20 ವರ್ಷದ ನಂತರ ತುಂಬಿದ ಕೆರೆಗೆ ಕಂದಾಯ ಸಚಿವರಿಂದ ಬಾಗಿನ.

ಕೋಡಿ ಬಿದ್ದ ಕೆರೆಗೆ ಮಹಿಳೆಯರಿಂದ ಆರತಿ

ಕೆರೆಯ ಅಂದ ಹೆಚ್ಚಿಸಿದ ತೆಪೋತ್ಸವ
Body:ದೊಡ್ಡಬಳ್ಳಾಪುರ : ಬಯಲು ಸೀಮೆಯಲ್ಲಿ ಮಳೆ ಇಲ್ಲದೆ ಒಣಗಿದ ಕೆರೆಗಳು ಕಾಣ್ತಾ ಇದ್ವು. ಆದರೆ ಈ ಬಾರಿ ಕೆರೆಗಳ ದೃಶ್ಯವೇ ಬದಲಾಗಿದೆ. ಉತ್ತಮ ಮಳೆಯಿಂದಾಗಿ ಕೆರೆಗಳು ಕೋಡಿ ಬಿದ್ದಿವೆ. 20 ವರ್ಷಗಳ ಕೊನಘಟ್ಟ ಕೆರೆ ತುಂಬಿ ಹರಿದಿದ್ದು.. ಕೋಡಿಬಿದ್ದ ಕೆರೆಗೆ ಕಂದಾಯ ಸಚಿವ ಆರ್ ಬಾಗಿನ ಅರ್ಪಿಸಿದರು..

ಕೆರೆಯ ದಂಡೆಯ ಮೇಲೆ ಗ್ರಾಮದೇವತೆ ದೇವಾಲಯ… ಎರಡು ದಶಕಗಳ ನಂತರ ತುಂಬಿ ತುಳುಕುತ್ತಿರುವ ಕೆರೆ..ತುಂಬಿದ ಕೆರೆಗೆ ಗ್ರಾಮದ ಮಹಿಳೆಯರಿಂದ ಆರತಿ ಸೇವೆ..ಕೆರೆಯಲ್ಲಿ ತೆಲಾಡುತ್ತಿರುವ ಹೂವಿನಿಂದ ಅಲಂಕೃತಗೊಂಡ ತೆಪ್ಪ..ಹೌದು ಇಂದು ಕೆರೆಯ ದಂಡೆಯ ಮೇಲೆ ಗ್ರಾಮಸ್ಥರು ಸಂಭ್ರಮ ಸಡಗರದಿಂದ ಓಡಾಡುತ್ತಿದ್ದರು ಅದಕ್ಕೆ ಕಾರಣವಾಗಿದ್ದು 20 ವರ್ಷಗಳ ನಂತರ ತುಂಬಿದ ಕೊನಘಟ್ಟ ಕೆರೆ.

ಫ್ಲೋ….

ವರ್ಷಗಳ ನಂತರ ಕೆರೆ ತುಂಬಿದ್ದು ಸಹಜವಾಗಿ ಗ್ರಾಮಸ್ಥರ ಖುಷಿಗೆ ಕಾರಣವಾಗಿತ್ತು. ಇನ್ನೂ ಗ್ರಾಮದ ಮಹಿಳೆಯರು ಆರತಿ ತಂಬಿಟ್ಟು ಮಾಡ್ಕೊಂಡ್ ಬಂದು ಗಂಗಾಮಾತೆ ಆರತಿ ಬೆಳಗಿದರು.. ಕೆರೆಯ ದಂಡೆಯ ಮೇಲಿರುವ ಮಾರ್ಗಾದಾಂಬ ದೇವಿಗೆ ಪ್ರತಿವರ್ಷ ಜಾತ್ರೆ ವೇಳೆ ಗ್ರಾಮ ದೇವತೆಗೆ ಆರತಿ ಬೆಳಗುತ್ತಿದ್ದ ಮಹಿಳೆಯರು ತುಂಬಿದ ಕೆರೆಗೆ ನಮನ ಸಲ್ಲಿಸುವ ಕಾರಣಕ್ಕೆ ಗಂಗಾಮಾತೆಗೂ ಆರತಿ ಬೆಳಗಿದರು

ಬೈಟ್: ಮಂಜುಳಾ, ಆರತಿ ಹೊತ್ತ ಮಹಿಳೆ

ಇನ್ನೂ ಕಾರ್ಯಕ್ರಮದ ಮೆರುಗನ್ನ ಮತ್ತಷ್ಟು ಹೆಚ್ಚಿಸಿದ್ದು ಕಂದಾಯ ಸಚಿವ ಮತ್ತು ಉಸ್ತುವಾರಿ ಸಚಿವ ಆರ್ ಅಶೋಕ್ ಬಾಗಿನ ಅರ್ಪಿಸಲು ಬಂದಿದ್ದು. ಸಚಿವರ ಜೊತೆ ಸಂಸದ ಬಚ್ಚೇಗೌಡ ಸೇರಿದಂತೆ ಅಧಿಕಾರಿಗಳು ತುಂಬಿದ ಕೆರೆಗೆ ಬಾಗಿನ ಅರ್ಪಿಸಿದರು.. ಹೂವಿನಿಂದ ಅಲಂಕೃತಗೊಂಡ ತೆಪ್ಪದಲ್ಲಿ ಹೂ ಹಣ್ಣು ಇಟ್ಟು ಕೆರೆಗೆ ಬೀಡಲಾಯಿತು.. ಕೆರೆಯಲ್ಲಿ ತೆಲುತ್ತಿದ್ದ ತೆಪ್ಪ ಕೆರೆಯ ಅಂದವನ್ನು ಹೆಚ್ಚಿಸಿತ್ತು..

ಫ್ಲೋ....

ಸದಾ ಮಳೆಯ ಕೊರತೆಯಿಂದ ಬಯಲುಸೀಮೆಯ ಕೆರೆಗಳು ನೀರಿಲ್ಲದೆ ಬಣಗುಡುತ್ತಿದ್ದವು.. ಈ ವರ್ಷ ಉತ್ತಮ ಮಳೆ ಕೆರೆಗಳು ತುಂಬಿ ಹರಿಯುವಂತೆ ಮಾಡಿದೆ.. ಇನ್ನೂ ಕೆಲವೇ ದಿನಗಳಲ್ಲಿ ಎತ್ತಿನಹೊಳೆ ನೀರು ಬಯಲು ಸೀಮೆಗೆ ಹರಿಯಲ್ಲಿದ್ದು ಬಯಲುಸೀಮೆ ಹಸಿರಿನಿಂದ ಕಂಗೊಳಿಸಲಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.