ETV Bharat / state

ಯಲಹಂಕ ರೈಲು ಗಾಲಿ ಮತ್ತು ಅಚ್ಚು ಕಾರ್ಖಾನೆ ಅವರಣದಲ್ಲಿ ಚಿರತೆ ಪ್ರತ್ಯಕ್ಷ

author img

By

Published : Mar 28, 2022, 1:58 PM IST

ಯಲಹಂಕದ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ರೈಲು ಗಾಲಿ ಮತ್ತು ಅಚ್ಚು ಕಾರ್ಖಾನೆ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಇದರಿಂದ ಸ್ಥಳೀಯ ಜನತೆ ಆತಂಕಕ್ಕೊಳಗಾಗಿದೆ.

ಚಿರತೆ
ಚಿರತೆ

ಯಲಹಂಕ : ಯಲಹಂಕದ ರೈಲು ಮತ್ತು ಅಚ್ಚು ಕಾರ್ಖಾನೆಯ ಆವರಣದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಾರ್ಖಾನೆಯ ಹುಲ್ಲುಗಾವಲು ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದ ತಕ್ಷಣವೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಚಿರತೆ ಸೆರೆಗಾಗಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಯಲಹಂಕದ ರೈಲು ಮತ್ತು ಅಚ್ಚು ಕಾರ್ಖಾನೆ ಸುಮಾರು 190 ಎಕರೆ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಹುಲ್ಲುಗಾವಲು ಮತ್ತು ಮರ ಗಿಡಗಳಿವೆ. ಕಳೆದ ಶನಿವಾರ ರಾತ್ರಿ ಹುಲ್ಲುಗಾವಲಿನ ಪ್ರದೇಶದಲ್ಲಿ ಚಿರತೆ ಓಡಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದಾಗಿ ಸ್ಥಳೀಯ ಜನತೆ ಆತಂಕಕ್ಕೊಳಗಾಗಿದೆ.

ಯಲಹಂಕ ರೈಲು ಗಾಲಿ ಮತ್ತು ಅಚ್ಚು ಕಾರ್ಖಾನೆ ಅವರಣದಲ್ಲಿ ಚಿರತೆ ಪ್ರತ್ಯಕ್ಷ

ಇಲ್ಲಿಗೆ ಚಿರತೆ ಹೇಗೆ ಬಂತು? ಎಂಬ ಕುತೂಹಲ ಮೂಡಿದೆ. ಕೆಲವು ಗೂಡ್ಸ್ ಗಾಡಿಗಳು ತಮಿಳುನಾಡಿನ ಕೃಷ್ಣಗಿರಿಯ ಮೂಲಕ ಹಾದು ಬರುತ್ತವೆ. ಈ ವೇಳೆ ಗೂಡ್ಸ್ ಬಾಃನದಲ್ಲಿ ಚಿರತೆ ಅವಿತುಕೊಂಡು ಬಂದಿರುವ ಸಾಧ್ಯತೆ ಇದೆ. ಇನ್ನೊಂದೆಡೆ, ಹೆಸರಘಟ್ಟ ಫಾರ್ಮ್ ಹೌಸ್ ಒಟ್ಟು 3,500 ಎಕರೆ ವಿಸ್ತೀರ್ಣ ಇದ್ದು, ಹುಲ್ಲುಗಾವಲು, ಮರಗಿಡಗಳು ಮತ್ತು ಹೆಸರಘಟ್ಟ ಕೆರೆ ಚಿರತೆ ವಾಸಿಸಲು ಸೂಕ್ತ ಸ್ಥಳ. ಇಲ್ಲಿಂದಲೂ ಸಹ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಬಳಿ ಹೆಜ್ಜೇನು ದಾಳಿ ; ಐವರು ವಿದ್ಯಾರ್ಥಿಗಳಿಗೆ ಗಾಯ

ಯಲಹಂಕ : ಯಲಹಂಕದ ರೈಲು ಮತ್ತು ಅಚ್ಚು ಕಾರ್ಖಾನೆಯ ಆವರಣದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಾರ್ಖಾನೆಯ ಹುಲ್ಲುಗಾವಲು ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದ ತಕ್ಷಣವೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಚಿರತೆ ಸೆರೆಗಾಗಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಯಲಹಂಕದ ರೈಲು ಮತ್ತು ಅಚ್ಚು ಕಾರ್ಖಾನೆ ಸುಮಾರು 190 ಎಕರೆ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಹುಲ್ಲುಗಾವಲು ಮತ್ತು ಮರ ಗಿಡಗಳಿವೆ. ಕಳೆದ ಶನಿವಾರ ರಾತ್ರಿ ಹುಲ್ಲುಗಾವಲಿನ ಪ್ರದೇಶದಲ್ಲಿ ಚಿರತೆ ಓಡಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದಾಗಿ ಸ್ಥಳೀಯ ಜನತೆ ಆತಂಕಕ್ಕೊಳಗಾಗಿದೆ.

ಯಲಹಂಕ ರೈಲು ಗಾಲಿ ಮತ್ತು ಅಚ್ಚು ಕಾರ್ಖಾನೆ ಅವರಣದಲ್ಲಿ ಚಿರತೆ ಪ್ರತ್ಯಕ್ಷ

ಇಲ್ಲಿಗೆ ಚಿರತೆ ಹೇಗೆ ಬಂತು? ಎಂಬ ಕುತೂಹಲ ಮೂಡಿದೆ. ಕೆಲವು ಗೂಡ್ಸ್ ಗಾಡಿಗಳು ತಮಿಳುನಾಡಿನ ಕೃಷ್ಣಗಿರಿಯ ಮೂಲಕ ಹಾದು ಬರುತ್ತವೆ. ಈ ವೇಳೆ ಗೂಡ್ಸ್ ಬಾಃನದಲ್ಲಿ ಚಿರತೆ ಅವಿತುಕೊಂಡು ಬಂದಿರುವ ಸಾಧ್ಯತೆ ಇದೆ. ಇನ್ನೊಂದೆಡೆ, ಹೆಸರಘಟ್ಟ ಫಾರ್ಮ್ ಹೌಸ್ ಒಟ್ಟು 3,500 ಎಕರೆ ವಿಸ್ತೀರ್ಣ ಇದ್ದು, ಹುಲ್ಲುಗಾವಲು, ಮರಗಿಡಗಳು ಮತ್ತು ಹೆಸರಘಟ್ಟ ಕೆರೆ ಚಿರತೆ ವಾಸಿಸಲು ಸೂಕ್ತ ಸ್ಥಳ. ಇಲ್ಲಿಂದಲೂ ಸಹ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಬಳಿ ಹೆಜ್ಜೇನು ದಾಳಿ ; ಐವರು ವಿದ್ಯಾರ್ಥಿಗಳಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.