ದೊಡ್ಡಬಳ್ಳಾಪುರ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಇಂದು ಹುಂಡಿ ಹಣ ಎಣಿಕೆ ನಡೆದಿದ್ದು, ಡಿಸೆಂಬರ್ ತಿಂಗಳೊಂದರಲ್ಲೇ 65,53,684 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜು ಮತ್ತು ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರಾದ ಜಿ.ಜೆ. ಹೇಮಾವತಿ ಮತ್ತು ದೇವಾಲಯದ ಪ್ರಧಾನ ಆರ್ಚಕರಾದ ಸುಬ್ರಮಣ್ಯ ಸ್ವಾಮಿಯವರ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು.
ಹುಂಡಿಯಲ್ಲಿ 19,600 ರೂಪಾಯಿ ಮೌಲ್ಯದ 4 ಗ್ರಾಂ ಚಿನ್ನ ಮತ್ತು 9,800 ರೂಪಾಯಿ ಮೌಲ್ಯದ 2 ಕೆ.ಜಿ ಬೆಳ್ಳಿ ಸೇರಿ 65 ಲಕ್ಷಕ್ಕೂ ಹೆಚ್ಚು ಕಾಣಿಕೆ ಸಂಗ್ರಹ್ರವಾಗಿದೆ.
ಇದನ್ನೂ ಓದಿ: ಕುಟುಂಬದ ಓರ್ವ ಸದಸ್ಯ, ಸಿಬ್ಬಂದಿಗೆ ಕೋವಿಡ್: ಪ್ರತ್ಯೇಕ ವಾಸದಲ್ಲಿ ಪ್ರಿಯಾಂಕ ಗಾಂಧಿ