ETV Bharat / state

ಕಾಡುವ ಬಡತನದ ಮಧ್ಯೆ ನರದೌರ್ಬಲ್ಯ.. ಸಹಾಯದ ನಿರೀಕ್ಷೆಯಲ್ಲಿ ನೇಕಾರ ಕುಟುಂಬ

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಶೇಖರ ಹಕ್ಕಲದಡ್ಡಿ ಅವರು ಕಳೆದ ಐದು ವರ್ಷಗಳಿಂದ ನರ ದೌರ್ಬಲ್ಯ ಸಮಸ್ಯೆಯಿಂದ ದಯನೀಯ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.

author img

By

Published : Dec 4, 2022, 10:22 PM IST

ನೇಕಾರ ಕುಟುಂಬ
ನೇಕಾರ ಕುಟುಂಬ

ಬಾಗಲಕೋಟೆ: ಮನೆಯಲ್ಲಿ ಕಾಡುವ ಬಡತನ. ತನ್ನ ಇಬ್ಬರು ಮಕ್ಕಳು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲಾಗದ ಹತಾಶೆ. ಜತೆಯಲ್ಲಿ ನರ ದೌರ್ಬಲ್ಯ ಸಂಬಂಧಿ ಕಾಯಿಲೆಯ ನೋವು. ಇದು ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಶೇಖರ ಹಕ್ಕಲದಡ್ಡಿ ಅವರ ದುಸ್ಥಿತಿ.

ಶೇಖರ ಕಳೆದ ಐದು ವರ್ಷಗಳಿಂದ ನರ ದೌರ್ಬಲ್ಯ ಸಮಸ್ಯೆಯಿಂದ ದಯನೀಯ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ನೇಯ್ಗೆಯನ್ನೇ ನಂಬಿರುವ ಈ ಜೀವಕ್ಕೆ ಇದೀಗ ಕಾಯಿಲೆಯಿಂದ ಬಡಪಾಯಿ ಉದ್ಯೋಗ ಮಾಡಲಾಗದ ಸ್ಥಿತಿಗೆ ತಲುಪಿದ್ದಾರೆ. ನೇಯ್ಗೆ ಮಾಡಲೂ ಸಹ ಬಾರದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವುದು ದಯನೀಯವಾಗಿದೆ.

ಆಸ್ಪತ್ರೆಗೆ ತೆರಳಲೂ ಹಣವಿಲ್ಲ: ಕಾಯಿಲೆಯ ಚಿಕಿತ್ಸೆ ಹೋಗಲಿ, ಆಸ್ಪತ್ರೆಗೆ ತೆರಳಲು ಪ್ರಯಾಣಕ್ಕೆ ಹಣವಿಲ್ಲ. ಅಷ್ಟೋ-ಇಷ್ಟೋ ಕೂಡಿಸಿಟ್ಟ ಹಣವು ಪ್ರಾಥಮಿಕ ಚಿಕಿತ್ಸೆಯಲ್ಲಿಯೇ ಖಾಲಿಯಾಗಿದ್ದು, ತಮ್ಮ ಪತ್ನಿಯೊಂದಿಗೆ, ಇನ್ನೂ ಓದಿನಲ್ಲಿರುವ ಆತನ ಇಬ್ಬರು ಮಕ್ಕಳೊಂದಿಗಿನ ಕುಟುಂಬದ ನೊಗ ಹೊತ್ತಿರುವ ಶೇಖರ ಅವರಿಗೆ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿದೆ. ಇಡೀ ಕುಟುಂಬಕ್ಕೆ ಇವರು ಪ್ರತಿದಿನ ನೇಯ್ಗೆ ಮಾಡುತ್ತಿದ್ದ ವೇತನವೇ ಆಸರೆಯಾಗಿತ್ತು.

ಸಹಾಯದ ನಿರೀಕ್ಷೆಯಲ್ಲಿ ನೇಕಾರ ಕುಟುಂಬ

ಸ್ವಂತ ದುಡಿಮೆಯೇ ಆಧಾರ: ಇದೀಗ ಅದೂ ದೊರಕದ ಕಾರಣ ತುತ್ತು ಊಟಕ್ಕೂ ಪರಿತಪಿಸುವಂತಾಗಿ, ಕುಟುಂಬಕ್ಕೆ ಸ್ವಂತ ದುಡಿಮೆಯೇ ಆಧಾರವಾಗಿತ್ತು. ಕೆಲ ವರ್ಷಗಳಿಂದ ಯಾವುದೇ ಉತ್ಪನ್ನವಿಲ್ಲದೆ ಕುಟುಂಬ ಕಂಗಾಲಾಗಿದೆ. ಇಬ್ಬರು ಮಕ್ಕಳು ಶಾಲೆಗೆ ತೆರಳುತ್ತಿದ್ದು, ಕುಟುಂಬಕ್ಕೆ ಆಧಾರವೇ ಇಲ್ಲವಾಗಿದೆ. ಹೀಗಿದ್ದಾಗ ಈ ವ್ಯಕ್ತಿಯ ಚಿಕಿತ್ಸೆ ಮಾತ್ರ ಗಗನಕುಸುಮವಾಗಿದ್ದು, ತಿಂಗಳಿಂದ ತಿಂಗಳಿಗೆ ಇವರ ಶರೀರ ಚಿಕಿತ್ಸೆಯಿಲ್ಲದೆ ಕ್ಷೀಣಿಸುತ್ತಿರುವುದು ದುರಂತ.

ಸರ್ಕಾರ ಅಥವಾ ಸಹಕಾರಿ ಕ್ಷೇತ್ರದಿಂದ ಈ ಬಡ ಕುಟುಂಬಕ್ಕೆ ಆಸ್ಪತ್ರೆ ವೆಚ್ಚಕ್ಕೆ ಅಥವಾ ಚಿಕಿತ್ಸೆಯ ಅನುಕೂಲಕ್ಕೆ ಸಹಾಯ ಮಾಡಲಿಚ್ಛಿಸುವವರು 98809-56216 ನಂಬರನ್ನು ಸಂಪರ್ಕಿಸಬಹುದು.

ಓದಿ: ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಬ್ರಾಂಕೈಟಿಸ್ ಕುರಿತು ಮಹತ್ವದ ಸಂಶೋಧನೆ.. ಏನು ಹೇಳುತ್ತೆ ವರದಿ!

ಬಾಗಲಕೋಟೆ: ಮನೆಯಲ್ಲಿ ಕಾಡುವ ಬಡತನ. ತನ್ನ ಇಬ್ಬರು ಮಕ್ಕಳು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲಾಗದ ಹತಾಶೆ. ಜತೆಯಲ್ಲಿ ನರ ದೌರ್ಬಲ್ಯ ಸಂಬಂಧಿ ಕಾಯಿಲೆಯ ನೋವು. ಇದು ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಶೇಖರ ಹಕ್ಕಲದಡ್ಡಿ ಅವರ ದುಸ್ಥಿತಿ.

ಶೇಖರ ಕಳೆದ ಐದು ವರ್ಷಗಳಿಂದ ನರ ದೌರ್ಬಲ್ಯ ಸಮಸ್ಯೆಯಿಂದ ದಯನೀಯ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ನೇಯ್ಗೆಯನ್ನೇ ನಂಬಿರುವ ಈ ಜೀವಕ್ಕೆ ಇದೀಗ ಕಾಯಿಲೆಯಿಂದ ಬಡಪಾಯಿ ಉದ್ಯೋಗ ಮಾಡಲಾಗದ ಸ್ಥಿತಿಗೆ ತಲುಪಿದ್ದಾರೆ. ನೇಯ್ಗೆ ಮಾಡಲೂ ಸಹ ಬಾರದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವುದು ದಯನೀಯವಾಗಿದೆ.

ಆಸ್ಪತ್ರೆಗೆ ತೆರಳಲೂ ಹಣವಿಲ್ಲ: ಕಾಯಿಲೆಯ ಚಿಕಿತ್ಸೆ ಹೋಗಲಿ, ಆಸ್ಪತ್ರೆಗೆ ತೆರಳಲು ಪ್ರಯಾಣಕ್ಕೆ ಹಣವಿಲ್ಲ. ಅಷ್ಟೋ-ಇಷ್ಟೋ ಕೂಡಿಸಿಟ್ಟ ಹಣವು ಪ್ರಾಥಮಿಕ ಚಿಕಿತ್ಸೆಯಲ್ಲಿಯೇ ಖಾಲಿಯಾಗಿದ್ದು, ತಮ್ಮ ಪತ್ನಿಯೊಂದಿಗೆ, ಇನ್ನೂ ಓದಿನಲ್ಲಿರುವ ಆತನ ಇಬ್ಬರು ಮಕ್ಕಳೊಂದಿಗಿನ ಕುಟುಂಬದ ನೊಗ ಹೊತ್ತಿರುವ ಶೇಖರ ಅವರಿಗೆ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿದೆ. ಇಡೀ ಕುಟುಂಬಕ್ಕೆ ಇವರು ಪ್ರತಿದಿನ ನೇಯ್ಗೆ ಮಾಡುತ್ತಿದ್ದ ವೇತನವೇ ಆಸರೆಯಾಗಿತ್ತು.

ಸಹಾಯದ ನಿರೀಕ್ಷೆಯಲ್ಲಿ ನೇಕಾರ ಕುಟುಂಬ

ಸ್ವಂತ ದುಡಿಮೆಯೇ ಆಧಾರ: ಇದೀಗ ಅದೂ ದೊರಕದ ಕಾರಣ ತುತ್ತು ಊಟಕ್ಕೂ ಪರಿತಪಿಸುವಂತಾಗಿ, ಕುಟುಂಬಕ್ಕೆ ಸ್ವಂತ ದುಡಿಮೆಯೇ ಆಧಾರವಾಗಿತ್ತು. ಕೆಲ ವರ್ಷಗಳಿಂದ ಯಾವುದೇ ಉತ್ಪನ್ನವಿಲ್ಲದೆ ಕುಟುಂಬ ಕಂಗಾಲಾಗಿದೆ. ಇಬ್ಬರು ಮಕ್ಕಳು ಶಾಲೆಗೆ ತೆರಳುತ್ತಿದ್ದು, ಕುಟುಂಬಕ್ಕೆ ಆಧಾರವೇ ಇಲ್ಲವಾಗಿದೆ. ಹೀಗಿದ್ದಾಗ ಈ ವ್ಯಕ್ತಿಯ ಚಿಕಿತ್ಸೆ ಮಾತ್ರ ಗಗನಕುಸುಮವಾಗಿದ್ದು, ತಿಂಗಳಿಂದ ತಿಂಗಳಿಗೆ ಇವರ ಶರೀರ ಚಿಕಿತ್ಸೆಯಿಲ್ಲದೆ ಕ್ಷೀಣಿಸುತ್ತಿರುವುದು ದುರಂತ.

ಸರ್ಕಾರ ಅಥವಾ ಸಹಕಾರಿ ಕ್ಷೇತ್ರದಿಂದ ಈ ಬಡ ಕುಟುಂಬಕ್ಕೆ ಆಸ್ಪತ್ರೆ ವೆಚ್ಚಕ್ಕೆ ಅಥವಾ ಚಿಕಿತ್ಸೆಯ ಅನುಕೂಲಕ್ಕೆ ಸಹಾಯ ಮಾಡಲಿಚ್ಛಿಸುವವರು 98809-56216 ನಂಬರನ್ನು ಸಂಪರ್ಕಿಸಬಹುದು.

ಓದಿ: ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಬ್ರಾಂಕೈಟಿಸ್ ಕುರಿತು ಮಹತ್ವದ ಸಂಶೋಧನೆ.. ಏನು ಹೇಳುತ್ತೆ ವರದಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.