ETV Bharat / state

ಮದಿರೆಯ ಸಂಗ ಬಿಡಿಸಿ ಮರು ಮದುವೆ ಮಾಡಿಸಿದ ಸಂಸ್ಥೆ!

author img

By

Published : May 27, 2019, 5:13 PM IST

Updated : May 27, 2019, 6:02 PM IST

ಮದ್ಯ ಬಿಟ್ಟಿರುವ ಶಿಬಿರಾರ್ಥಿಗಳಿಗೆ ಅವರ ಕುಟುಂಬದವರನ್ನು ಕರೆಯಿಸಿ, ನವ ವಧುವರರಂತೆ ಶೃಂಗಾರಗೊಳಿಸಿ, ಮತ್ತೊಮ್ಮೆ ಮರು ವಿವಾಹ ಮಾಡಿಸಿದ ವಿಶೇಷ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಮದ್ಯವರ್ಜನ ಶಿಬಿರ

ಬಾಗಲಕೋಟೆ : ಕುಡಿತಕ್ಕೆ ದಾಸರಾಗಿದ್ದವರಿಗೆ ಮದ್ಯಪಾನದಿಂದ ದೂರವಿರಿಸಲು ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದೆ. ಸುಮಾರು 80 ಕ್ಕೂ ಅಧಿಕ ಮದ್ಯ ವ್ಯಸನ ಶಿಬಿರಾರ್ಥಿಗಳು ಈ ಸಂಬಂಧ ತರಬೇತಿ ಪಡೆದು ಅದರಿಂದ ವಿಮುಕ್ತರಾಗಿದ್ದಾರೆ. ಈ ಮೂಲಕ ಅವರು ಹೊಸ ಜೀವನಕ್ಕೆ ಅಣಿಯಾಗಿದ್ದಾರೆ. ಅಂತಹವರಿಗೆ ಅವರ ಕುಟುಂಬದವರನ್ನ ಕರೆಯಿಸಿ ಮರು ಮದುವೆ ಮಾಡಿಸಿ ಸುಗಮ ಬಾಳು ನಡೆಸಲು ಅವಕಾಶ ಕಲ್ಪಿಸಲಾಯಿತು.

ಮದ್ಯವರ್ಜನ ಶಿಬಿರ

7 ದಿನದ ತರಬೇತಿಯ ಕೊನೆ ದಿನವಾದ ಇಂದು ಮದ್ಯದ ಕುಡಿತದಿಂದ ವಿಮುಖರಾದ ಶಿಬಿರಾರ್ಥಿಗಳಿಗೆ ಅವರ ಕುಟುಂಬದವರನ್ನು ಕರೆಯಿಸಿ, ನವ ವಧುವರರಂತೆ ಶೃಂಗಾರಗೊಳಿಸಿ, ಮತ್ತೊಮ್ಮೆ ಮರು ವಿವಾಹ ಮಾಡಿಸಿದರು. ಕುಡಿತದಿಂದ ತಮ್ಮ ಪತ್ನಿಯವರನ್ನು ನಿಂದನೆ ಮಾಡುವ ಪುರುಷರು ಹಾಗೂ ಬೇಸರವಾಗಿರುವ ಪತ್ನಿಯರಿಗೆ ಪರಸ್ಪರ ಹೂಸ ಸಂಬಂಧ ಭಾಂದವ್ಯದ ಬೇಸುಗೆ ಬೇಸೆಯುವ ಮೂಲಕ ಗಮನ ಸೆಳೆಯಲಾಯಿತು.

ಗುಳೇದಗುಡ್ಡ ಕೆಂದೂರ ಸಂಸ್ಥಾನ ಮಠದ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಮರು ಮದುವೆ ಆಗಿರುವ ವಧು ವರರಿಗೆ ಆಶೀರ್ವಚನ ನೀಡಿ, ಸಾಮೂಹಿಕ ವಿವಾಹ ಎಂಬಂತೆ ಭಾಸ ಆಗುತ್ತದೆ ಎಂದು ಸಂತಸ ಹಂಚಿಕೊಂಡರು.

ಬಾಗಲಕೋಟೆ : ಕುಡಿತಕ್ಕೆ ದಾಸರಾಗಿದ್ದವರಿಗೆ ಮದ್ಯಪಾನದಿಂದ ದೂರವಿರಿಸಲು ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದೆ. ಸುಮಾರು 80 ಕ್ಕೂ ಅಧಿಕ ಮದ್ಯ ವ್ಯಸನ ಶಿಬಿರಾರ್ಥಿಗಳು ಈ ಸಂಬಂಧ ತರಬೇತಿ ಪಡೆದು ಅದರಿಂದ ವಿಮುಕ್ತರಾಗಿದ್ದಾರೆ. ಈ ಮೂಲಕ ಅವರು ಹೊಸ ಜೀವನಕ್ಕೆ ಅಣಿಯಾಗಿದ್ದಾರೆ. ಅಂತಹವರಿಗೆ ಅವರ ಕುಟುಂಬದವರನ್ನ ಕರೆಯಿಸಿ ಮರು ಮದುವೆ ಮಾಡಿಸಿ ಸುಗಮ ಬಾಳು ನಡೆಸಲು ಅವಕಾಶ ಕಲ್ಪಿಸಲಾಯಿತು.

ಮದ್ಯವರ್ಜನ ಶಿಬಿರ

7 ದಿನದ ತರಬೇತಿಯ ಕೊನೆ ದಿನವಾದ ಇಂದು ಮದ್ಯದ ಕುಡಿತದಿಂದ ವಿಮುಖರಾದ ಶಿಬಿರಾರ್ಥಿಗಳಿಗೆ ಅವರ ಕುಟುಂಬದವರನ್ನು ಕರೆಯಿಸಿ, ನವ ವಧುವರರಂತೆ ಶೃಂಗಾರಗೊಳಿಸಿ, ಮತ್ತೊಮ್ಮೆ ಮರು ವಿವಾಹ ಮಾಡಿಸಿದರು. ಕುಡಿತದಿಂದ ತಮ್ಮ ಪತ್ನಿಯವರನ್ನು ನಿಂದನೆ ಮಾಡುವ ಪುರುಷರು ಹಾಗೂ ಬೇಸರವಾಗಿರುವ ಪತ್ನಿಯರಿಗೆ ಪರಸ್ಪರ ಹೂಸ ಸಂಬಂಧ ಭಾಂದವ್ಯದ ಬೇಸುಗೆ ಬೇಸೆಯುವ ಮೂಲಕ ಗಮನ ಸೆಳೆಯಲಾಯಿತು.

ಗುಳೇದಗುಡ್ಡ ಕೆಂದೂರ ಸಂಸ್ಥಾನ ಮಠದ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಮರು ಮದುವೆ ಆಗಿರುವ ವಧು ವರರಿಗೆ ಆಶೀರ್ವಚನ ನೀಡಿ, ಸಾಮೂಹಿಕ ವಿವಾಹ ಎಂಬಂತೆ ಭಾಸ ಆಗುತ್ತದೆ ಎಂದು ಸಂತಸ ಹಂಚಿಕೊಂಡರು.

Intro:Anchor


Body:ಮದ್ಯ ವ್ಯಸನಿಗಳು,ಕುಡಿತ ಚಟವನ್ನು ಬಿಡಿಸುವ ಉದ್ದೇಶ ದಿಂದ ಮರು ವಿವಾಹ ಮಾಡುವ ಮೂಲಕ ನೂತನ ಜೀವನ ಸಾಗಿಸುವಂತೆ ಪ್ರೇರೇಪಣೆ ನೀಡಲಾಯಿತು..
ಇಂತಹ ವಿಶೇಷ ಕಾರ್ಯಕ್ರಮಬಾಗಲಕೋಟೆ ನವನಗರದಲ್ಲಿರುವ ನೀಲಕಂಠೇಶ್ವರ ಸಾಂಸ್ಕೃತಿಕ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಸಿ ಟ್ರಸ್ಟ್‌ ,ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಸಂಸ್ಥೆ ಗಳ ಸಂಯೋಜನೆ ಯಲ್ಲಿ 1340 ನೇ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಬಾಗಲಕೋಟೆ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಆಗಮಿಸಿದ ಸುಮಾರು 80 ಕ್ಕೂ ಅಧಿಕ ಮದ್ಯ ವ್ಯಸನ ಶಿಬಿರಾರ್ಥಿಗಳಿಗೆ ಒಂದು ವಾರ ಕಾಲ ತರಬೇತಿ ನೀಡಲಾಗಿದೆ.ಬೆಳ್ಳಿಗೆ 5 ಗಂಟೆಯಿಂದಲೇ ಪ್ರಾರಂಭ ಆಗುವ ಶಿಬಿರವನ್ನು ರಾತ್ರಿಯ ವರೆಗೆ ನಡೆಸಲಾಗುತ್ತದೆ. ವ್ಯಾಯಾಮ,ಯೋಗ,ವಠಾರ ಸ್ವಚ್ಚತಾ, ಶ್ರಮದಾನ,ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಹಾಗೂ ಕೌಟುಂಬಿಕ ಸಲಹೆ ಸೇರಿದಂತೆ ಕೆಲ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ವ್ಯಸನ ಮುಕ್ತರನ್ನಾಗಿ ಮಾಡಲಾಗುತ್ತದೆ.
ಮೇ 20 ರಿಂದ ಪ್ರಾರಂಭವಾಗಿರುವ ಈ ಶಿಬಿರವು ಮೇ 27 ರಂದು ಸಮಾರೋಪಗೊಂಡಿತು.ಕೊನೆಯ ದಿನದ ಹಿನ್ನಲೆ ಮದ್ಯ ಬಿಟ್ಟಿರುವ ಶಿಬಿರಾರ್ಥಿಗಳಿಗೆ ಅವರ ಕುಟುಂಬದವರನ್ನು ಕರೆಯಿಸಿ,ನವ ವಧುವರರಂತೆ ಶೃಂಗಾರ ಮಾಡಿ,ಮತ್ತೊಮ್ಮೆ ಮರು ವಿವಾಹ ಮಾಡಿಸಿದರು. ಎಲ್ಲರಿಗೂ ಅರಿಷನ,ಕುಂಕುಮ ಹಚ್ಚಿ ನೂತನ ಬಟ್ಟೆಯನ್ನು ನೀಡಿ,ಶೃಂಗಾರಗೊಳಿಸಿದ್ದರು.ಕುಡಿತ ದಿಂದ ತಮ್ಮ ಪತ್ನಿಯವರನ್ನು ನಿಂದನೆ ಮಾಡುವ ಪುರುಷರು ಹಾಗೂ ಬೇಸರವಾಗಿರುವ ಪತ್ನಿಯರಿಗೆ ಪರಸ್ಪರ ಹೂಸ ಸಂಬಂದ ಭಾಂದವ್ಯದ ಬೇಸುಗೆ ಬೇಸೆಯುವ ಮೂಲಕ ಗಮನ ಸೆಳೆಯಿತು.
ಗುಳೇದಗುಡ್ಡ ಕೆಂದೂರ ಸಂಸ್ಥಾನ ಮಠದ ಒಪ್ಪತ್ತೇಶ್ವರ ಮಹಾಸ್ವಾಮಿಗಳು,ಮರು ಮದುವೆ ಆಗಿರುವ ವಧು ವರರಿಗೆ ಆರ್ಶಿವಚನ ನೀಡಿ,ಸಾಮೂಹಿಕ ವಿವಾಹ ಎಂಬಂತೆ ಭಾಸ ಆಗುತ್ತದೆ ಎಂದು ಸಂತಹ ಹಂಚಿಕೊಂಡರು.ಇನ್ನೂ ಮುಂದೆ ಕುಡಿತ ಚಟಕ್ಕೆ ದಾಸರಾಗದೇ ಒಳ್ಳೆಯ ಸಂಸಾರ‌ ನಡೆಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಹೈದ್ರಾಬಾದ್ ಕರ್ನಾಟಕದ ಪ್ರಾದೇಶಿಕ ನಿರ್ದೇಶಕರಾದ ಪಿ.ಕೆ.ಪುರುಷೋತ್ತಮ ಮಾತನಾಡಿ,ಇಲ್ಲಿ ನಡೆಸಿರುವದು 1340 ನೇ ಶಿಬಿರ,ಈ ಶಿಬಿರದಲ್ಲಿ ಭಾಗವಹಿಸಿದವರು ನೂರು ದಿನಗಳ ಕಾಲ ಮದ್ಯ ವ್ಯಸನ ಮಾಡದೇ ಇದ್ದವರನ್ನು ಧರ್ಮಸ್ಥಳ ಮುಖ್ಯಾಧಿಕಾರಿ ವೀರೇಂದ್ರ ಹೆಗ್ಗಡೆ ಭೇಟ್ಟಿ ಮಾಡಿ,ಸನ್ಮಾನಿಸಿಲಾಗುತ್ತದೆ.ಆದ್ದರಿಂದ ಎಲ್ಲರೂ ಆತ್ಮವಿಶ್ವಾಸ ದಿಂದ ಚಟದಿಂದ ದೂರು ಇರಬೇಕು ಎಂದು ತಿಳಿಸಿದರು.
ಇದೇ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹನಮಂತ ನಿರಾಣಿ ಹಾಗೂ ಮಾಜಿ ಶಾಸಕರಾದ ಪಿ.ಎಚ್.ಪೂಜಾರ ಮಾತನಾಡಿ,ಸರ್ಕಾರ ಮಾಡದೇ ಇರುವ ಕೆಲಸವನ್ನು ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ ಯವರು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು..




Conclusion:ಆನಂದ
ಈ ಟಿ ವಿ,ಭಾರತ್,ಬಾಗಲಕೋಟೆ..
Last Updated : May 27, 2019, 6:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.