ETV Bharat / state

ಮೊಹರಂ ಆಚರಿಸಿ ಭಾವೈಕ್ಯತೆ ಮೆರೆದ ಬಾಗಲಕೋಟೆ ಜನ

author img

By

Published : Aug 19, 2021, 11:04 PM IST

Updated : Aug 19, 2021, 11:28 PM IST

ಬಾಗಲಕೋಟೆ ತಾಲೂಕಿನ ಹಿರೆ ಶೇಲ್ಲಿಕೇರಿ ಗ್ರಾಮದಲ್ಲಿಯೂ ಮೊಹರಂ ಆಚರಣೆ ಮಾಡಲಾಯಿತು. ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಹೆಜ್ಜೆ ಮೇಳ ಹಾಗೂ ಮೊಹರಂ ಹಬ್ಬದ ಹಾಡುಗಳನ್ನು ಹಾಡಿ ಗಮನ ಸೆಳೆಯಲಾಯಿತು.

muharram
ಮೊಹರಂ

ಬಾಗಲಕೋಟೆ: ಮೊಹರಂ ಹಬ್ಬವು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಈ ಮಧ್ಯೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಹಬ್ಬವು ಗಮನ ಸೆಳೆಯಿತು. ಮಸೀದಿಯಲ್ಲಿ ಆಕರ್ಷಣೀಯ ರಾಮ-ಸೀತೆ, ಲಕ್ಷ್ಮಣ, ಹನುಮಂತ ವೇಷಧಾರಿಗಳು ಹಾಗೂ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಿ ಭಾವೈಕ್ಯತೆ ಸಾರಿದ್ದಾರೆ.

ಹಿಂದೂ-ಮುಸ್ಲಿಂ ಜನಾಂಗದವರು ಒಗ್ಗಟ್ಟಿನಿಂದ ಪ್ರತಿ ವರ್ಷ ವಿಶೇಷವಾಗಿ ಹಬ್ಬವನ್ನು ಆಚರಣೆ ಮಾಡುವ ಮೂಲಕ‌ ಗಮನ ಸೆಳೆಯುತ್ತಾರೆ. ಈ ಹಿನ್ನೆಲೆ
ಮಸೀದಿಯಲ್ಲಿ ದೀಪಾಲಂಕಾರ ಮಧ್ಯೆ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಿ, ಅದಕ್ಕೂ ವಿದ್ಯುತ್ ದೀಪದ ಅಲಂಕಾರ ಮಾಡಿದ್ದಾರೆ.

ತಾರತಮ್ಯ ಮರೆತು ಅನ್ಯೋನ್ಯತೆಯ ಸಂದೇಶ ಸಾರಿದ್ದಾರೆ. ಇದರ ಜೊತೆಗೆ ಹಿರೆ ಶೇಲ್ಲಿಕೇರಿ ಗ್ರಾಮದಲ್ಲಿಯೂ ಮೊಹರಂ ಹಬ್ಬದ ಆಚರಣೆ ಜೋರಾಗಿತ್ತು. ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಹೆಜ್ಜೆ ಮೇಳ ಹಾಗೂ ಮೊಹರಂ ಹಬ್ಬದ ಹಾಡುಗಳನ್ನು ಹಾಡಿ ಗಮನ ಸೆಳೆಯಲಾಯಿತು.

ಭಾವೈಕ್ಯತೆಯ ಮೊಹರಂ

ಹಬ್ಬದ ನಿಮಿತ್ತ ರಾತ್ರಿ ಇಡೀ ಕಾಲಿಗೆ ಗೆಜ್ಜೆ ಹಾಕಿ ಹಾಡುತ್ತ ಕುಣಿಯುತ್ತಾ ಭಜನೆ ಮಾಡುವುದು ಇಲ್ಲಿನ ವಿಶೇಷ. ಜಾನಪದ ಗೀತೆ, ಸಂಸ್ಕೃತ ಹೆಜ್ಜೆ ಮೇಳ ಸಹ ನಡೆಸಲಾಗುತ್ತದೆ. ನಂತರ ಅಗ್ನಿ ಕೆಂಡದಲ್ಲಿ ಹಾಯ್ದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹಿಂದೂ-ಮುಸ್ಲಿಂ ಎಂಬ ಬೇಧ-ಭಾವ ಇಲ್ಲದೆ ಈ ಹಬ್ಬವನ್ನು ಆಚರಿಸುತ್ತಾರೆ.

ಬಾದಾಮಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಭಕ್ತ ಸಮೂಹ ಕೆಂಡ ಹಾಯುವ ವೇಳೆ ಯುವಕನೋರ್ವ ಬಿದ್ದು ಪಾರಾದ ಘಟನೆ ಸಹ ನಡೆದಿದೆ. ಆತನನ್ನು ತಕ್ಷಣ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ಓದಿ: ಸಭೆ ಸಮಾರಂಭ ನಡೆಸುವ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ: ಡಿಕೆಶಿ ಕಿಡಿ

ಬಾಗಲಕೋಟೆ: ಮೊಹರಂ ಹಬ್ಬವು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಈ ಮಧ್ಯೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಹಬ್ಬವು ಗಮನ ಸೆಳೆಯಿತು. ಮಸೀದಿಯಲ್ಲಿ ಆಕರ್ಷಣೀಯ ರಾಮ-ಸೀತೆ, ಲಕ್ಷ್ಮಣ, ಹನುಮಂತ ವೇಷಧಾರಿಗಳು ಹಾಗೂ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಿ ಭಾವೈಕ್ಯತೆ ಸಾರಿದ್ದಾರೆ.

ಹಿಂದೂ-ಮುಸ್ಲಿಂ ಜನಾಂಗದವರು ಒಗ್ಗಟ್ಟಿನಿಂದ ಪ್ರತಿ ವರ್ಷ ವಿಶೇಷವಾಗಿ ಹಬ್ಬವನ್ನು ಆಚರಣೆ ಮಾಡುವ ಮೂಲಕ‌ ಗಮನ ಸೆಳೆಯುತ್ತಾರೆ. ಈ ಹಿನ್ನೆಲೆ
ಮಸೀದಿಯಲ್ಲಿ ದೀಪಾಲಂಕಾರ ಮಧ್ಯೆ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಿ, ಅದಕ್ಕೂ ವಿದ್ಯುತ್ ದೀಪದ ಅಲಂಕಾರ ಮಾಡಿದ್ದಾರೆ.

ತಾರತಮ್ಯ ಮರೆತು ಅನ್ಯೋನ್ಯತೆಯ ಸಂದೇಶ ಸಾರಿದ್ದಾರೆ. ಇದರ ಜೊತೆಗೆ ಹಿರೆ ಶೇಲ್ಲಿಕೇರಿ ಗ್ರಾಮದಲ್ಲಿಯೂ ಮೊಹರಂ ಹಬ್ಬದ ಆಚರಣೆ ಜೋರಾಗಿತ್ತು. ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಹೆಜ್ಜೆ ಮೇಳ ಹಾಗೂ ಮೊಹರಂ ಹಬ್ಬದ ಹಾಡುಗಳನ್ನು ಹಾಡಿ ಗಮನ ಸೆಳೆಯಲಾಯಿತು.

ಭಾವೈಕ್ಯತೆಯ ಮೊಹರಂ

ಹಬ್ಬದ ನಿಮಿತ್ತ ರಾತ್ರಿ ಇಡೀ ಕಾಲಿಗೆ ಗೆಜ್ಜೆ ಹಾಕಿ ಹಾಡುತ್ತ ಕುಣಿಯುತ್ತಾ ಭಜನೆ ಮಾಡುವುದು ಇಲ್ಲಿನ ವಿಶೇಷ. ಜಾನಪದ ಗೀತೆ, ಸಂಸ್ಕೃತ ಹೆಜ್ಜೆ ಮೇಳ ಸಹ ನಡೆಸಲಾಗುತ್ತದೆ. ನಂತರ ಅಗ್ನಿ ಕೆಂಡದಲ್ಲಿ ಹಾಯ್ದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹಿಂದೂ-ಮುಸ್ಲಿಂ ಎಂಬ ಬೇಧ-ಭಾವ ಇಲ್ಲದೆ ಈ ಹಬ್ಬವನ್ನು ಆಚರಿಸುತ್ತಾರೆ.

ಬಾದಾಮಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಭಕ್ತ ಸಮೂಹ ಕೆಂಡ ಹಾಯುವ ವೇಳೆ ಯುವಕನೋರ್ವ ಬಿದ್ದು ಪಾರಾದ ಘಟನೆ ಸಹ ನಡೆದಿದೆ. ಆತನನ್ನು ತಕ್ಷಣ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ಓದಿ: ಸಭೆ ಸಮಾರಂಭ ನಡೆಸುವ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ: ಡಿಕೆಶಿ ಕಿಡಿ

Last Updated : Aug 19, 2021, 11:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.