ETV Bharat / state

'ನನ್ನ ಮಾತು ನೇರ, ಇಲ್ಲದಿದ್ದರೆ ಕರ್ನಾಟಕ ಕಳ್ಳಕಾಕರು, ದರೋಡೆಕೋರರ ಕೈಗೆ ಸಿಕ್ಕಿ ನಾಶವಾಗ್ತಿತ್ತು'

author img

By

Published : May 18, 2022, 12:26 PM IST

ಬೇವೂರ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಶಾಸಕ ಯತ್ನಾಳ್ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದರು.

MLA Basangouda Patil Yatnal
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್

ಬಾಗಲಕೋಟೆ: ನಾವು ನೇರವಾಗಿ ಮಾತನಾಡ್ತೀವಿ ಅನ್ನೋ ಕಾರಣದಿಂದಲೇ ರಾಜ್ಯ ರಾಜಕಾರಣ ಸ್ವಲ್ಪ ಲೆಕ್ಕದಲ್ಲಿದೆ. ಇಲ್ಲವಾದರೆ ಕರ್ನಾಟಕ ಕಳ್ಳಕಾಕರು, ದರೋಡೆಕೋರರ ಕೈಯಲ್ಲಿ ಸಿಕ್ಕಿ ನಾಶವಾಗುತ್ತಿತ್ತು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್​ ಹೇಳಿದರು. ವಿಜಯಪುರದಲ್ಲಿ ನಾನು, ಬಾಗಲಕೋಟೆಯಲ್ಲಿ ಶಾಸಕ ಚರಂತಿಮಠ ಇಬ್ಬರೂ ನೇರವಾಗೇ ಮಾತನಾಡುತ್ತೇವೆ. ಬಾಕಿ ಗೀಕಿ ಇಟ್ಟು ಮಾತನಾಡುವ ಸ್ವಭಾವ ನಮ್ಮದಲ್ಲ ಎಂದರು.


ಇಂದಿನ ರಾಜಕೀಯದಲ್ಲಿ ನೇರವಾಗಿ ಮಾತನಾಡುವ ಪರಿಸ್ಥಿತಿ ಇಲ್ಲ. ಪ್ರಾಮಾಣಿಕವಾಗಿ, ನೇರವಾಗಿ ಮಾತನಾಡಿದ್ರೆ ಸಾಕು, ಏನ್ರಿ ಆತ ಬಹಳ ಡೈರೆಕ್ಟ್ ಮಾತನಾಡ್ತಾನೆ ಅಂತಾರೆ. ಆದರೆ ನಾವು ಡೈರೆಕ್ಟ್ ಆಗಿ ಮಾತನಾಡುತ್ತೇವೆ ಅಂತ ಹೇಳಿಯೇ ರಾಜ್ಯ ರಾಜಕಾರಣ ಸ್ವಲ್ಪ ಲೆಕ್ಕದಲ್ಲಿದೆ‌. ರಾಜಕೀಯದಲ್ಲಿ ಬಕೆಟ್ ಹಿಡಿದು ನಾಟಕ‌ ಮಾಡಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿದ್ದೆ, ಚರಂತಿಮಠ ಮಂತ್ರಿ ಆಗುತ್ತಿದ್ದರು ಎಂದು ಹೇಳಿದರು.

ಇದನ್ನೂ ಓದಿ: ಅಕ್ರಮಕ್ಕೆ ಕುಮ್ಮಕ್ಕು, ಅನುಚಿತ ವರ್ತನೆ: ವಿಜಯನಗರ ಪೊಲೀಸ್ ಕಾನ್ಸ್​​ಟೇಬಲ್ ಸಸ್ಪೆಂಡ್‌

ಬಾಗಲಕೋಟೆ: ನಾವು ನೇರವಾಗಿ ಮಾತನಾಡ್ತೀವಿ ಅನ್ನೋ ಕಾರಣದಿಂದಲೇ ರಾಜ್ಯ ರಾಜಕಾರಣ ಸ್ವಲ್ಪ ಲೆಕ್ಕದಲ್ಲಿದೆ. ಇಲ್ಲವಾದರೆ ಕರ್ನಾಟಕ ಕಳ್ಳಕಾಕರು, ದರೋಡೆಕೋರರ ಕೈಯಲ್ಲಿ ಸಿಕ್ಕಿ ನಾಶವಾಗುತ್ತಿತ್ತು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್​ ಹೇಳಿದರು. ವಿಜಯಪುರದಲ್ಲಿ ನಾನು, ಬಾಗಲಕೋಟೆಯಲ್ಲಿ ಶಾಸಕ ಚರಂತಿಮಠ ಇಬ್ಬರೂ ನೇರವಾಗೇ ಮಾತನಾಡುತ್ತೇವೆ. ಬಾಕಿ ಗೀಕಿ ಇಟ್ಟು ಮಾತನಾಡುವ ಸ್ವಭಾವ ನಮ್ಮದಲ್ಲ ಎಂದರು.


ಇಂದಿನ ರಾಜಕೀಯದಲ್ಲಿ ನೇರವಾಗಿ ಮಾತನಾಡುವ ಪರಿಸ್ಥಿತಿ ಇಲ್ಲ. ಪ್ರಾಮಾಣಿಕವಾಗಿ, ನೇರವಾಗಿ ಮಾತನಾಡಿದ್ರೆ ಸಾಕು, ಏನ್ರಿ ಆತ ಬಹಳ ಡೈರೆಕ್ಟ್ ಮಾತನಾಡ್ತಾನೆ ಅಂತಾರೆ. ಆದರೆ ನಾವು ಡೈರೆಕ್ಟ್ ಆಗಿ ಮಾತನಾಡುತ್ತೇವೆ ಅಂತ ಹೇಳಿಯೇ ರಾಜ್ಯ ರಾಜಕಾರಣ ಸ್ವಲ್ಪ ಲೆಕ್ಕದಲ್ಲಿದೆ‌. ರಾಜಕೀಯದಲ್ಲಿ ಬಕೆಟ್ ಹಿಡಿದು ನಾಟಕ‌ ಮಾಡಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿದ್ದೆ, ಚರಂತಿಮಠ ಮಂತ್ರಿ ಆಗುತ್ತಿದ್ದರು ಎಂದು ಹೇಳಿದರು.

ಇದನ್ನೂ ಓದಿ: ಅಕ್ರಮಕ್ಕೆ ಕುಮ್ಮಕ್ಕು, ಅನುಚಿತ ವರ್ತನೆ: ವಿಜಯನಗರ ಪೊಲೀಸ್ ಕಾನ್ಸ್​​ಟೇಬಲ್ ಸಸ್ಪೆಂಡ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.