ETV Bharat / state

ಭೋವಿ ವಡ್ಡರ ಸಮಾಜವನ್ನು ಕೈಬಿಡದಂತೆ ಒತ್ತಾಯಿಸಿ ಪತ್ರ ಚಳುವಳಿ - ಸುಪ್ರೀಂ ಕೋಟ್೯ ಆಯೋಗಕ್ಕೆ ಮೀಸಲಾತಿ ಬಗ್ಗೆ ವರದಿ ನೀಡುವಂತೆ ಸೂಚನೆ

ನಮ್ಮದು ಹಿಂದುಳಿದ ಜನಾಂಗವಾಗಿದೆ. ಮನೆ ಕಟ್ಟುವುದು, ಕಲ್ಲು ಒಡೆಯುವ ಕೆಲಸ ಮಾಡುತ್ತಾ ಒಪ್ಪೊತ್ತಿನ ಊಟಕ್ಕೂ ಕೆಲಸಕ್ಕಾಗಿ ಅಲೆಯುತ್ತಾ ಇರುವ ಪರಿಸ್ಥಿತಿ ಇದೆ ಎಂದು ಭೋವಿ ವಡ್ಡರ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಹಲಕುರ್ಕಿ ವಿವರಿಸಿದರು.

letter protest at bhaglkote by bhovi tribes
'ಭೋವಿ ವಡ್ಡರ್' ಜನಾಂಗ
author img

By

Published : Jun 11, 2020, 1:33 PM IST

ಬಾಗಲಕೋಟೆ: ಇಳಕಲ್​​ ತಾಲೂಕಿನ ಗುಡೂರ ಗ್ರಾಮದಲ್ಲಿ ಭೋವಿ ವಡ್ಡರ ಜನಾಂಗವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡದಂತೆ ಸರ್ಕಾರ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿ ಮಹಿಳೆಯರು, ಮಕ್ಕಳು ಪತ್ರ ಚಳುವಳಿ ನಡೆಸಿದ್ದಾರೆ.

ಈಗಾಗಲೇ ಸುಪ್ರೀಂಕೋರ್ಟ್ ಆಯೋಗಕ್ಕೆ ಮೀಸಲಾತಿ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್​ವೈ ಭೋವಿ ವಡ್ಡರ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಂತೆ ಆಯೋಗಕ್ಕೆ ವರದಿ‌ ನೀಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡರು.

ಪತ್ರಚಳುವಳಿ ಮೂಲಕ ಒತ್ತಾಯಿಸಿದ ಮಹಿಳೆಯರು,ಮಕ್ಕಳು

ಮಹಿಳೆಯರು, ಮಕ್ಕಳು ಸೇರಿದಂತೆ ಭೋವಿ ವಡ್ಡರ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಹಲಕುರ್ಕಿ ನೇತೃತ್ವದಲ್ಲಿ ಅಂಚೆ ಪೆಟ್ಟಿಗೆಗೆ ಪತ್ರ ಹಾಕುವ ಮೂಲಕ ಚಳುವಳಿ ನಡೆಸಲಾಯಿತು.

letter protest at bhaglkote by bhovi tribes
ಪತ್ರಚಳುವಳಿಯಲ್ಲಿ ಮಕ್ಕಳು

ಪರಿಶಿಷ್ಟ ಜಾತಿಯ ಮೀಸಲಾತಿಯಿಂದ ತೆಗೆದರೆ ಸರ್ಕಾರದ ಸೌಲಭ್ಯಗಳಿಲ್ಲದೆ ಇನ್ನಷ್ಟು ತೊಂದರೆಪಡುವಂತಹ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಸರ್ಕಾರವು ಆಯೋಗಕ್ಕೆ ಸೂಕ್ತ ವರದಿ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಮಹಾಂತೇಶ ಹಲಕುರ್ಕಿ ಎಚ್ಚರಿಸಿದರು.

ಬಾಗಲಕೋಟೆ: ಇಳಕಲ್​​ ತಾಲೂಕಿನ ಗುಡೂರ ಗ್ರಾಮದಲ್ಲಿ ಭೋವಿ ವಡ್ಡರ ಜನಾಂಗವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡದಂತೆ ಸರ್ಕಾರ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿ ಮಹಿಳೆಯರು, ಮಕ್ಕಳು ಪತ್ರ ಚಳುವಳಿ ನಡೆಸಿದ್ದಾರೆ.

ಈಗಾಗಲೇ ಸುಪ್ರೀಂಕೋರ್ಟ್ ಆಯೋಗಕ್ಕೆ ಮೀಸಲಾತಿ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್​ವೈ ಭೋವಿ ವಡ್ಡರ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಂತೆ ಆಯೋಗಕ್ಕೆ ವರದಿ‌ ನೀಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡರು.

ಪತ್ರಚಳುವಳಿ ಮೂಲಕ ಒತ್ತಾಯಿಸಿದ ಮಹಿಳೆಯರು,ಮಕ್ಕಳು

ಮಹಿಳೆಯರು, ಮಕ್ಕಳು ಸೇರಿದಂತೆ ಭೋವಿ ವಡ್ಡರ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಹಲಕುರ್ಕಿ ನೇತೃತ್ವದಲ್ಲಿ ಅಂಚೆ ಪೆಟ್ಟಿಗೆಗೆ ಪತ್ರ ಹಾಕುವ ಮೂಲಕ ಚಳುವಳಿ ನಡೆಸಲಾಯಿತು.

letter protest at bhaglkote by bhovi tribes
ಪತ್ರಚಳುವಳಿಯಲ್ಲಿ ಮಕ್ಕಳು

ಪರಿಶಿಷ್ಟ ಜಾತಿಯ ಮೀಸಲಾತಿಯಿಂದ ತೆಗೆದರೆ ಸರ್ಕಾರದ ಸೌಲಭ್ಯಗಳಿಲ್ಲದೆ ಇನ್ನಷ್ಟು ತೊಂದರೆಪಡುವಂತಹ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಸರ್ಕಾರವು ಆಯೋಗಕ್ಕೆ ಸೂಕ್ತ ವರದಿ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಮಹಾಂತೇಶ ಹಲಕುರ್ಕಿ ಎಚ್ಚರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.