ETV Bharat / state

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋಕೆ ಅಯೋಗ್ಯವಾದ ವ್ಯಕ್ತಿ: ಕೆ ಎಸ್ ಈಶ್ವರಪ್ಪ ವಾಗ್ದಾಳಿ

author img

By

Published : Oct 15, 2022, 9:05 AM IST

ಯಾರು ಸಿದ್ದು ಬಳಿ ಹೋಗ್ತಾರೋ ಅವರೆಲ್ಲಾ ಭಸ್ಮಾಸುರ ಆಗಿದ್ದಾರೆ. ಆದರೆ, ಈ ಭಸ್ಮಾಸುರ ಬಿಜೆಪಿಯಿಂದಲೇ ಸುಟ್ಟು ಹೋಗ್ತಾರೆ. ಮೋದಿ ವಿಶ್ವನಾಯಕ. ಅಂಥವರ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡ್ತಿದ್ದಾರೆ. ಮೋದಿಯವರನ್ನು ಎಲ್ಲ ರಾಷ್ಟ್ರಗಳು ಹೊಗಳುವಾಗ ಈ ಕಿಂಚಿತ್ ಸಿದ್ದರಾಮಯ್ಯ ಏಕವಚನದಲ್ಲಿ ಕರೆಯುತ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

eshwarappa
ಕೆ ಎಸ್ ಈಶ್ವರಪ್ಪ

ಬಾಗಲಕೋಟೆ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋಕೆ ಅಯೋಗ್ಯವಾದ ವ್ಯಕ್ತಿ. ನಾನು ಮಾತ್ರ ಸತ್ಯ ಹರಿಶ್ಚಂದ್ರನ ಮೊಮ್ಮಗ, ನನ್ನ ಬಿಟ್ಟರೆ ಇನ್ಯಾರೂ ರಾಜಕಾರಣಿಗಳೇ ಇಲ್ಲ ಅಂತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ನೀವು ಎಷ್ಟು ಪಕ್ಷ ಮುಗಿಸಿ ಬಂದವರು. ನಿಮ್ಮ ಜೊತೆ ಬಂದ ನಾಯಕರಾದ ಮೇಟಿ ಅವರನ್ನ ಯಾಕೆ ಬಿಟ್ರಿ. ಚಿಮ್ಮನಕಟ್ಟಿಗೆ ಕೈ ಕೊಟ್ರಿ. ರೇವಣ್ಣನನ್ನು ಎರಡು ದಿನ ಮಂತ್ರಿ ಮಾಡಿ ಯಾಕೆ ಬಿಟ್ರಿ. ವಿಶ್ವನಾಥ್, ರೇವಣ್ಣನನ್ನ ಕಾಂಗ್ರೆಸ್​ಗೆ ತಂದು ಮೋಸ ಮಾಡಿದ್ದೀರಿ. ಅವರ ಪಕ್ಷದವರನ್ನೇ ಬಿಡದ ಭಸ್ಮಾಸುರ ಈ ಸಿದ್ದರಾಮಯ್ಯ ಎಂದು ಕಿಡಿ ಕಾರಿದರು.

ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ

ಯಾರು ಸಿದ್ದು ಬಳಿ ಹೋಗ್ತಾರೋ ಅವರೆಲ್ಲಾ ಭಸ್ಮಾಸುರ ಆಗಿದ್ದಾರೆ. ಆದರೆ, ಈ ಭಸ್ಮಾಸುರ ಬಿಜೆಪಿಯಿಂದಲೇ ಸುಟ್ಟು ಹೋಗ್ತಾರೆ. ಮೋದಿ ವಿಶ್ವನಾಯಕ. ಅಂಥವರ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡ್ತಿದ್ದಾರೆ. ಮೋದಿಯವರನ್ನು ಎಲ್ಲ ರಾಷ್ಟ್ರಗಳು ಹೊಗಳುವಾಗ ಈ ಕಿಂಚಿತ್ ಸಿದ್ದರಾಮಯ್ಯ ಏಕವಚನದಲ್ಲಿ ಕರೆಯುತ್ತಾರೆ. ಅದನ್ನು ನೋಡಿದಾಗ ನನಗೂ ಸಿದ್ದರಾಮಯ್ಯರಿಗೆ 'ಅವರು' ಅಂತ ಕರೆಯೋಕೆ ನಾಚಿಕೆಯಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಹುಲ್ ತಾಯಿ ಶೂ ಲೇಸ್ ಕಟ್ಟಿದ್ದು ಭಾರತ ಜೋಡೋದ ಉತ್ತಮ ಕೆಲಸ: ಈಶ್ವರಪ್ಪ

ನನಗೂ ಅದಕ್ಕಿಂತ ಕೆಟ್ಟ ಪದ ಬರುತ್ತೇ. ನಾನು ಅದೇ ಜಾತಿಯವನು. ನನ್ನ ಪಾರ್ಟಿ ನಮಗೆ ಕೊಟ್ಟಿರೋ ಸಂಸ್ಕಾರ ಮತ್ತು ವಿಪಕ್ಷದಲ್ಲಿ ಇರುವವರಿಗೆ ಏಕವಚನದಲ್ಲಿ ಮಾತನಾಡಲು ಇಷ್ಟಪಡೋದಿಲ್ಲ. ಒಳ್ಳೆಯ ಮಾತಾಡಿ ಅಂತ ಸ್ನೇಹಿತನಾಗಿ ಹೇಳಲು ಬಯಸುತ್ತೇನೆ ಎಂದು ಕೆ ಎಸ್​ ಈಶ್ವರಪ್ಪ ತಿಳಿ ಹೇಳಿದರು.

ಇದೇ ಸಮಯದಲ್ಲಿ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯಗೆ ಗತಿ ಇಲ್ಲ. ನಾವ್ಯಾಕೆ ಅವರ ಹಿಂದೆ ಹೋಗೋಣ. ಚಾಮುಂಡಿಯಲ್ಲಿ ಸೋಲ್ತಿನಿ ಅಂತ ಗೊತ್ತಾಗಿ ಬಾದಾಮಿಗೆ ಬಂದರು ಎಂದರು.

ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕಣಕ್ಕೆ ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನ ನೀವೆಲ್ಲಾ ತೀರ್ಮಾನ ಮಾಡಿರಬೇಕು. ನಾನು ಬರುವ ಮುನ್ನ ನೀವೆಲ್ಲಾ (ಮಾಧ್ಯಮದವರು) ತೀರ್ಮಾನ ಮಾಡಿರಬೇಕು ಎಂದು ಹ್ಯಾಸ ಚಟಾಕಿ ಹಾರಿಸಿದರು.

ಇದನ್ನೂ ಓದಿ: ಯಾವ ಆರ್​ಎಸ್​ಎಸ್​ನವರೂ ಗೂಂಡಾಗಳ ಬೆದರಿಕೆಗೆ ಹೆದರಲ್ಲ: ಕೆ ಎಸ್ ಈಶ್ವರಪ್ಪ ಟಾಂಗ್​

ಸಿದ್ದರಾಮಯ್ಯಗೆ ಆತ್ಮಸ್ಥೈರ್ಯ ಇಲ್ಲ: ಶಾಸಕನಾದವನು ಕ್ಷೇತ್ರದಲ್ಲಿ ಜನರ ಮನಸ್ಸು ಗೆಲ್ಲೋಕೆ ಆಗದೇ, ಚುನಾವಣೆಯಲ್ಲಿ ಸೋತು ಇನ್ನೊಂದು ಕ್ಷೇತ್ರಕ್ಕೆ ಹೋದ್ರೆ ಅದು ಒಳ್ಳೆಯದಲ್ಲ. ಬೇಕಾದಷ್ಟು ಜನ ಹೋಗಿರಬಹುದು, ಯಾಕೆ ಚಾಮುಂಡಿ ಬಿಟ್ರಿ, ಈಗ ಬಾದಾಮಿ ಯಾಕೆ ಬಿಡ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ, ನಾನು ಜನರ ವಿಶ್ವಾಸ ತೆಗೆದುಕೊಂಡು ಗೆಲ್ಲುತ್ತೇನೆ ಅಂತ ನಿಮಗೆ ಆತ್ಮಸ್ಥೈರ್ಯ ಇಲ್ಲ. ಸೋತ ಚಾಮುಂಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿ ವಿಶ್ವಾಸ ಗಳಿಸ್ತೀನಿ ಅನ್ನೋ ಭಾವನೆ ಇಲ್ಲ. ಅದನ್ನ ಬಿಟ್ಟು ಕ್ಷೇತ್ರಗಳನ್ನ ಹುಡುಕುತ್ತಾ ಹೋಗುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಇಂತಹ ದಯನೀಯ ಸ್ಥಿತಿ ಬರಬಾರದು ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಯಾತ್ರೆಯ ಜನಕರೇ ಬಿಜೆಪಿಯವರು. ರಾಮ ಮಂದಿರ ಕಟ್ಟೋಕೆ ಯಾತ್ರೆ ಮಾಡಿದ್ವಿ. ರಾಹುಲ್ ಮಾಡುವ ಯಾತ್ರೆಗೆ ಟೀಕೆ ಮಾಡಲ್ಲ, ಸ್ವಾಗತ ಮಾಡ್ತೇನೆ. ಟಿಕೆಟ್ ಬೇಕಾದ್ರೆ ಯಾತ್ರೆಗೆ 5 ಸಾವಿರ ಜನ ಕರೆ ತರಬೇಕು ಅಂತಿದ್ದಾರೆ ಡಿಕೆಶಿ. ಆರ್.ವಿ.ದೇಶಪಾಂಡೆ ನನ್ನ ಕೈಯಲ್ಲಿ ಆಗಲ್ಲ ಅಂದ್ರು. ಇದು ಕಾಂಗ್ರೆಸ್ ಪರಿಸ್ಥಿತಿ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ನಿರ್ನಾಮ: ಅಧಿಕಾರದ ಆಸೆಗೆ ಭಾರತಾಂಬೆ ದೇಶವನ್ನೇ ಒಡೆದವರು ಇವರು. ದೇಶದಲ್ಲಿ ಕಾಂಗ್ರೆಸ್ ಇದೆ ಅಂತ ತೋರಿಸೋಕೆ ಭಾರತ್ ಜೋಡೋ ಯಾತ್ರೆ ಮಾಡ್ತಿದ್ದಾರೆ. ಕಾಂಗ್ರೆಸ್ ನಿರ್ನಾಮವಾಗಿದೆ, ಭೂತ ಕನ್ನಡಿ ಹಿಡಿದು ಹುಡುಕಬೇಕಾಗಿದೆ. ಕಾಂಗ್ರೆಸ್ ಜೋಡೋ ಯಾತ್ರೆಯಿಂದ ಮತ್ತೊಮ್ಮೆ ದೇಶದ ಜನರನ್ನ ಮೂರ್ಖರನ್ನಾಗಿಸುವ ಪ್ರಯತ್ನ ಮಾಡ್ತಿದ್ದಾರೆ. ಈ ದೇಶದ ಜನ ಅಷ್ಟು ಮೂರ್ಖರಲ್ಲ. ಜನರು ಕಾಂಗ್ರೆಸನವರನ್ನೇ ಮೂರ್ಖರನ್ನಾಗಿ ಮಾಡಿ ಮೂಲೆಗೆ ತಳ್ಳಿದ್ದಾರೆ. ಸಚಿವ ಸ್ಥಾನಕ್ಕಾಗಿ ನಾನು ಬಿಜೆಪಿಯಲ್ಲಿ ಇಲ್ಲ. ಕೇಂದ್ರ ನಾಯಕರು ಮಾಡೋದಿದ್ರೆ ಮಾಡ್ತಾರೆ, ಇಲ್ಲದಿದ್ರೆ ಇಲ್ಲ ಎಂದರು.

ಕುರುಬರ ಎಸ್​ಟಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಕುರುಬರನ್ನ ಎಸ್​ಟಿಗೆ ಸೇರಿಸಬೇಕು ಅಂತ ಪೂಜ್ಯ ನಿರಂಜನ ಸ್ವಾಮೀಜಿಗಳು ಹೋರಾಟ ಮಾಡಿದ್ದಾರೆ. ಅದಾದ ನಂತರ ಸರ್ಕಾರ ಕುಲಶಾಸ್ತ್ರ ಅಧ್ಯಯನಕ್ಕೆ ಕೊಟ್ಟಿದೆ. ಅಂತಿಮ ರೂಪದಲ್ಲಿ ಅಧ್ಯಯನದ ವರದಿ ಬರೋದಿದೆ. ಅದು ಬಂದ ನಂತರ ಆ ಕಡೆ ಗಮನ ಕೊಡ್ತೀವಿ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ ಅಂದರು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಪ್ರತಿತಂತ್ರವಾಗಿ ಬಿಜೆಪಿಯಿಂದ ಬೃಹತ್ ಒಬಿಸಿ ಸಮಾವೇಶ

40 ಪರ್ಸೆಂಟ್​ ಕಮಿಷನ್ ವಿಚಾರವಾಗಿ ಪತ್ರಕರ್ತರ ಮೇಲೆ ಕೆಂಡಮಂಡಲಾದ ಈಶ್ವರಪ್ಪನವರು, ಶೇ 40ರಷ್ಟು ಕಮಿಷನ್​ ಅನ್ನೋದೆಲ್ಲ ಸುಳ್ಳು ಎಂದರು. ಎಷ್ಟು ಪರ್ಸೆಂಟ್ ನಡಿತಾ ಇದೆ ಎನ್ನುವ ಪ್ರಶ್ನೆಗೆ ಸಿಡಿಮಿಡಿಗೊಂಡು ಇದು ಮಾನ ಮರ್ಯಾದೆ ಇಲ್ಲದೇ ಇರೋರು ಕೇಳುವ. ಅವರಿಗಂತೂ(ಕೆಂಪಣ್ಣ) ಜ್ಞಾನ ಇಲ್ಲ. ನೀವು ಮೈಮೇಲೆ ಜ್ಞಾನ ಇಟ್ಟುಕೊಳ್ಳಬೇಕು. ಅವರು (ಕೆಂಪಣ್ಣ) ಕಾಂಗ್ರೆಸ್ ನಿಂದ ದುಡ್ಡು ತಿಂದು ಹೇಳಿಕೆ ಕೊಡ್ತಿರೋದು. ಆರೋಪ ಮಾಡಬೇಕಾದ್ರೆ ದಾಖಲೆ ಇರಬೇಕು ಎಂದರು.

ಬಾಗಲಕೋಟೆ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋಕೆ ಅಯೋಗ್ಯವಾದ ವ್ಯಕ್ತಿ. ನಾನು ಮಾತ್ರ ಸತ್ಯ ಹರಿಶ್ಚಂದ್ರನ ಮೊಮ್ಮಗ, ನನ್ನ ಬಿಟ್ಟರೆ ಇನ್ಯಾರೂ ರಾಜಕಾರಣಿಗಳೇ ಇಲ್ಲ ಅಂತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ನೀವು ಎಷ್ಟು ಪಕ್ಷ ಮುಗಿಸಿ ಬಂದವರು. ನಿಮ್ಮ ಜೊತೆ ಬಂದ ನಾಯಕರಾದ ಮೇಟಿ ಅವರನ್ನ ಯಾಕೆ ಬಿಟ್ರಿ. ಚಿಮ್ಮನಕಟ್ಟಿಗೆ ಕೈ ಕೊಟ್ರಿ. ರೇವಣ್ಣನನ್ನು ಎರಡು ದಿನ ಮಂತ್ರಿ ಮಾಡಿ ಯಾಕೆ ಬಿಟ್ರಿ. ವಿಶ್ವನಾಥ್, ರೇವಣ್ಣನನ್ನ ಕಾಂಗ್ರೆಸ್​ಗೆ ತಂದು ಮೋಸ ಮಾಡಿದ್ದೀರಿ. ಅವರ ಪಕ್ಷದವರನ್ನೇ ಬಿಡದ ಭಸ್ಮಾಸುರ ಈ ಸಿದ್ದರಾಮಯ್ಯ ಎಂದು ಕಿಡಿ ಕಾರಿದರು.

ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ

ಯಾರು ಸಿದ್ದು ಬಳಿ ಹೋಗ್ತಾರೋ ಅವರೆಲ್ಲಾ ಭಸ್ಮಾಸುರ ಆಗಿದ್ದಾರೆ. ಆದರೆ, ಈ ಭಸ್ಮಾಸುರ ಬಿಜೆಪಿಯಿಂದಲೇ ಸುಟ್ಟು ಹೋಗ್ತಾರೆ. ಮೋದಿ ವಿಶ್ವನಾಯಕ. ಅಂಥವರ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡ್ತಿದ್ದಾರೆ. ಮೋದಿಯವರನ್ನು ಎಲ್ಲ ರಾಷ್ಟ್ರಗಳು ಹೊಗಳುವಾಗ ಈ ಕಿಂಚಿತ್ ಸಿದ್ದರಾಮಯ್ಯ ಏಕವಚನದಲ್ಲಿ ಕರೆಯುತ್ತಾರೆ. ಅದನ್ನು ನೋಡಿದಾಗ ನನಗೂ ಸಿದ್ದರಾಮಯ್ಯರಿಗೆ 'ಅವರು' ಅಂತ ಕರೆಯೋಕೆ ನಾಚಿಕೆಯಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಹುಲ್ ತಾಯಿ ಶೂ ಲೇಸ್ ಕಟ್ಟಿದ್ದು ಭಾರತ ಜೋಡೋದ ಉತ್ತಮ ಕೆಲಸ: ಈಶ್ವರಪ್ಪ

ನನಗೂ ಅದಕ್ಕಿಂತ ಕೆಟ್ಟ ಪದ ಬರುತ್ತೇ. ನಾನು ಅದೇ ಜಾತಿಯವನು. ನನ್ನ ಪಾರ್ಟಿ ನಮಗೆ ಕೊಟ್ಟಿರೋ ಸಂಸ್ಕಾರ ಮತ್ತು ವಿಪಕ್ಷದಲ್ಲಿ ಇರುವವರಿಗೆ ಏಕವಚನದಲ್ಲಿ ಮಾತನಾಡಲು ಇಷ್ಟಪಡೋದಿಲ್ಲ. ಒಳ್ಳೆಯ ಮಾತಾಡಿ ಅಂತ ಸ್ನೇಹಿತನಾಗಿ ಹೇಳಲು ಬಯಸುತ್ತೇನೆ ಎಂದು ಕೆ ಎಸ್​ ಈಶ್ವರಪ್ಪ ತಿಳಿ ಹೇಳಿದರು.

ಇದೇ ಸಮಯದಲ್ಲಿ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯಗೆ ಗತಿ ಇಲ್ಲ. ನಾವ್ಯಾಕೆ ಅವರ ಹಿಂದೆ ಹೋಗೋಣ. ಚಾಮುಂಡಿಯಲ್ಲಿ ಸೋಲ್ತಿನಿ ಅಂತ ಗೊತ್ತಾಗಿ ಬಾದಾಮಿಗೆ ಬಂದರು ಎಂದರು.

ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕಣಕ್ಕೆ ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನ ನೀವೆಲ್ಲಾ ತೀರ್ಮಾನ ಮಾಡಿರಬೇಕು. ನಾನು ಬರುವ ಮುನ್ನ ನೀವೆಲ್ಲಾ (ಮಾಧ್ಯಮದವರು) ತೀರ್ಮಾನ ಮಾಡಿರಬೇಕು ಎಂದು ಹ್ಯಾಸ ಚಟಾಕಿ ಹಾರಿಸಿದರು.

ಇದನ್ನೂ ಓದಿ: ಯಾವ ಆರ್​ಎಸ್​ಎಸ್​ನವರೂ ಗೂಂಡಾಗಳ ಬೆದರಿಕೆಗೆ ಹೆದರಲ್ಲ: ಕೆ ಎಸ್ ಈಶ್ವರಪ್ಪ ಟಾಂಗ್​

ಸಿದ್ದರಾಮಯ್ಯಗೆ ಆತ್ಮಸ್ಥೈರ್ಯ ಇಲ್ಲ: ಶಾಸಕನಾದವನು ಕ್ಷೇತ್ರದಲ್ಲಿ ಜನರ ಮನಸ್ಸು ಗೆಲ್ಲೋಕೆ ಆಗದೇ, ಚುನಾವಣೆಯಲ್ಲಿ ಸೋತು ಇನ್ನೊಂದು ಕ್ಷೇತ್ರಕ್ಕೆ ಹೋದ್ರೆ ಅದು ಒಳ್ಳೆಯದಲ್ಲ. ಬೇಕಾದಷ್ಟು ಜನ ಹೋಗಿರಬಹುದು, ಯಾಕೆ ಚಾಮುಂಡಿ ಬಿಟ್ರಿ, ಈಗ ಬಾದಾಮಿ ಯಾಕೆ ಬಿಡ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ, ನಾನು ಜನರ ವಿಶ್ವಾಸ ತೆಗೆದುಕೊಂಡು ಗೆಲ್ಲುತ್ತೇನೆ ಅಂತ ನಿಮಗೆ ಆತ್ಮಸ್ಥೈರ್ಯ ಇಲ್ಲ. ಸೋತ ಚಾಮುಂಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿ ವಿಶ್ವಾಸ ಗಳಿಸ್ತೀನಿ ಅನ್ನೋ ಭಾವನೆ ಇಲ್ಲ. ಅದನ್ನ ಬಿಟ್ಟು ಕ್ಷೇತ್ರಗಳನ್ನ ಹುಡುಕುತ್ತಾ ಹೋಗುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಇಂತಹ ದಯನೀಯ ಸ್ಥಿತಿ ಬರಬಾರದು ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಯಾತ್ರೆಯ ಜನಕರೇ ಬಿಜೆಪಿಯವರು. ರಾಮ ಮಂದಿರ ಕಟ್ಟೋಕೆ ಯಾತ್ರೆ ಮಾಡಿದ್ವಿ. ರಾಹುಲ್ ಮಾಡುವ ಯಾತ್ರೆಗೆ ಟೀಕೆ ಮಾಡಲ್ಲ, ಸ್ವಾಗತ ಮಾಡ್ತೇನೆ. ಟಿಕೆಟ್ ಬೇಕಾದ್ರೆ ಯಾತ್ರೆಗೆ 5 ಸಾವಿರ ಜನ ಕರೆ ತರಬೇಕು ಅಂತಿದ್ದಾರೆ ಡಿಕೆಶಿ. ಆರ್.ವಿ.ದೇಶಪಾಂಡೆ ನನ್ನ ಕೈಯಲ್ಲಿ ಆಗಲ್ಲ ಅಂದ್ರು. ಇದು ಕಾಂಗ್ರೆಸ್ ಪರಿಸ್ಥಿತಿ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ನಿರ್ನಾಮ: ಅಧಿಕಾರದ ಆಸೆಗೆ ಭಾರತಾಂಬೆ ದೇಶವನ್ನೇ ಒಡೆದವರು ಇವರು. ದೇಶದಲ್ಲಿ ಕಾಂಗ್ರೆಸ್ ಇದೆ ಅಂತ ತೋರಿಸೋಕೆ ಭಾರತ್ ಜೋಡೋ ಯಾತ್ರೆ ಮಾಡ್ತಿದ್ದಾರೆ. ಕಾಂಗ್ರೆಸ್ ನಿರ್ನಾಮವಾಗಿದೆ, ಭೂತ ಕನ್ನಡಿ ಹಿಡಿದು ಹುಡುಕಬೇಕಾಗಿದೆ. ಕಾಂಗ್ರೆಸ್ ಜೋಡೋ ಯಾತ್ರೆಯಿಂದ ಮತ್ತೊಮ್ಮೆ ದೇಶದ ಜನರನ್ನ ಮೂರ್ಖರನ್ನಾಗಿಸುವ ಪ್ರಯತ್ನ ಮಾಡ್ತಿದ್ದಾರೆ. ಈ ದೇಶದ ಜನ ಅಷ್ಟು ಮೂರ್ಖರಲ್ಲ. ಜನರು ಕಾಂಗ್ರೆಸನವರನ್ನೇ ಮೂರ್ಖರನ್ನಾಗಿ ಮಾಡಿ ಮೂಲೆಗೆ ತಳ್ಳಿದ್ದಾರೆ. ಸಚಿವ ಸ್ಥಾನಕ್ಕಾಗಿ ನಾನು ಬಿಜೆಪಿಯಲ್ಲಿ ಇಲ್ಲ. ಕೇಂದ್ರ ನಾಯಕರು ಮಾಡೋದಿದ್ರೆ ಮಾಡ್ತಾರೆ, ಇಲ್ಲದಿದ್ರೆ ಇಲ್ಲ ಎಂದರು.

ಕುರುಬರ ಎಸ್​ಟಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಕುರುಬರನ್ನ ಎಸ್​ಟಿಗೆ ಸೇರಿಸಬೇಕು ಅಂತ ಪೂಜ್ಯ ನಿರಂಜನ ಸ್ವಾಮೀಜಿಗಳು ಹೋರಾಟ ಮಾಡಿದ್ದಾರೆ. ಅದಾದ ನಂತರ ಸರ್ಕಾರ ಕುಲಶಾಸ್ತ್ರ ಅಧ್ಯಯನಕ್ಕೆ ಕೊಟ್ಟಿದೆ. ಅಂತಿಮ ರೂಪದಲ್ಲಿ ಅಧ್ಯಯನದ ವರದಿ ಬರೋದಿದೆ. ಅದು ಬಂದ ನಂತರ ಆ ಕಡೆ ಗಮನ ಕೊಡ್ತೀವಿ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ ಅಂದರು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಪ್ರತಿತಂತ್ರವಾಗಿ ಬಿಜೆಪಿಯಿಂದ ಬೃಹತ್ ಒಬಿಸಿ ಸಮಾವೇಶ

40 ಪರ್ಸೆಂಟ್​ ಕಮಿಷನ್ ವಿಚಾರವಾಗಿ ಪತ್ರಕರ್ತರ ಮೇಲೆ ಕೆಂಡಮಂಡಲಾದ ಈಶ್ವರಪ್ಪನವರು, ಶೇ 40ರಷ್ಟು ಕಮಿಷನ್​ ಅನ್ನೋದೆಲ್ಲ ಸುಳ್ಳು ಎಂದರು. ಎಷ್ಟು ಪರ್ಸೆಂಟ್ ನಡಿತಾ ಇದೆ ಎನ್ನುವ ಪ್ರಶ್ನೆಗೆ ಸಿಡಿಮಿಡಿಗೊಂಡು ಇದು ಮಾನ ಮರ್ಯಾದೆ ಇಲ್ಲದೇ ಇರೋರು ಕೇಳುವ. ಅವರಿಗಂತೂ(ಕೆಂಪಣ್ಣ) ಜ್ಞಾನ ಇಲ್ಲ. ನೀವು ಮೈಮೇಲೆ ಜ್ಞಾನ ಇಟ್ಟುಕೊಳ್ಳಬೇಕು. ಅವರು (ಕೆಂಪಣ್ಣ) ಕಾಂಗ್ರೆಸ್ ನಿಂದ ದುಡ್ಡು ತಿಂದು ಹೇಳಿಕೆ ಕೊಡ್ತಿರೋದು. ಆರೋಪ ಮಾಡಬೇಕಾದ್ರೆ ದಾಖಲೆ ಇರಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.