ETV Bharat / state

‘ಗ್ರಾಮ ಸೇವೆ’ ಕಾರ್ಯಕ್ರಮದಡಿ ಮಾಹಿತಿ ಅಭಿಯಾನ.. ನೀಲಾನಗರದಲ್ಲಿ ಹಳ್ಳಿ ವಾಸ್ತವ್ಯ

ಸರ್ಕಾರದ ಹತ್ತು ಹಲವು ಮಹತ್ವದ ಯೋಜನೆಗಳ ಅರಿವನ್ನು ಬೀದಿನಾಟಕ, ಜಾನಪದ ಸಂಗೀತ ಹಾಗೂ ವಿಚಾರ ಸಂಕಿರಣದ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಾರ್ತಾ ಇಲಾಖೆ ಅಧಿಕಾರಿಗಳು ತಾಲೂಕಿನ ನೀಲಾ ನಗರದಲ್ಲಿ ಗುರುವಾರ ಗ್ರಾಮ ವಾಸ್ತವ್ಯ ಮಾಡಿದ್ರು.

author img

By

Published : Dec 20, 2019, 11:12 PM IST

Grama Vastavya Program In Bagalkote
ವಾರ್ತಾ ಇಲಾಖೆಯಿಂದ ನೀಲಾನಗರದಲ್ಲಿ ಗ್ರಾಮ ವಾಸ್ತವ್ಯ

ಬಾಗಲಕೋಟೆ: ಸರ್ಕಾರದ ಹತ್ತು ಹಲವು ಮಹತ್ವದ ಯೋಜನೆಗಳ ಅರಿವನ್ನು ಬೀದಿನಾಟಕ, ಜಾನಪದ ಸಂಗೀತ ಹಾಗೂ ವಿಚಾರ ಸಂಕಿರಣದ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಾರ್ತಾ ಇಲಾಖೆಯಿಂದ ತಾಲೂಕಿನ ನೀಲಾ ನಗರದಲ್ಲಿ ಗುರುವಾರ ಗ್ರಾಮ ವಾಸ್ತವ್ಯ ಮಾಡಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಲಾನಗರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡ ವಿನೂತನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಪಂ ಸದಸ್ಯ ರಂಗನಗೌಡ ಗೌಡರ ಚಾಲನೆ ನೀಡಿದರು. ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು. ಅಲ್ಲದೇ ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಕರೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನೀಲಾನಗರದ ಬಂಜಾರ ಶಕ್ತಿ ಪೀಠದ ಕುಮಾರ ಮಹಾರಾಜರು ಮಾತನಾಡಿ, ಹಳ್ಳಿಯ ಸೊಗಡನ್ನು ಕಾಪಾಡಬೇಕು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡಬಾರದು ಎಂದರು. ಇಂದಿನ ಯುವ ಪೀಳಿಗೆ ದೇಶಿ ಸಂಸ್ಕೃತಿಯನ್ನು ರಕ್ಷಿಸಲು ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಮುಕ್ಯೋಪಾಧ್ಯಾಯ ಎಂ ಬಿ ಪಲ್ಲೇದ, ಸಂಪನ್ಮೂಲ ವ್ಯಕ್ತಿಗಳಾದ ದೇಸಾಯಿ, ಲಮಾಣಿ ಸೇರಿ ಇತರರು ಉಪಸ್ಥಿತರಿದ್ದರು.

ಬಾಗಲಕೋಟೆ: ಸರ್ಕಾರದ ಹತ್ತು ಹಲವು ಮಹತ್ವದ ಯೋಜನೆಗಳ ಅರಿವನ್ನು ಬೀದಿನಾಟಕ, ಜಾನಪದ ಸಂಗೀತ ಹಾಗೂ ವಿಚಾರ ಸಂಕಿರಣದ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಾರ್ತಾ ಇಲಾಖೆಯಿಂದ ತಾಲೂಕಿನ ನೀಲಾ ನಗರದಲ್ಲಿ ಗುರುವಾರ ಗ್ರಾಮ ವಾಸ್ತವ್ಯ ಮಾಡಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಲಾನಗರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡ ವಿನೂತನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಪಂ ಸದಸ್ಯ ರಂಗನಗೌಡ ಗೌಡರ ಚಾಲನೆ ನೀಡಿದರು. ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು. ಅಲ್ಲದೇ ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಕರೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನೀಲಾನಗರದ ಬಂಜಾರ ಶಕ್ತಿ ಪೀಠದ ಕುಮಾರ ಮಹಾರಾಜರು ಮಾತನಾಡಿ, ಹಳ್ಳಿಯ ಸೊಗಡನ್ನು ಕಾಪಾಡಬೇಕು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡಬಾರದು ಎಂದರು. ಇಂದಿನ ಯುವ ಪೀಳಿಗೆ ದೇಶಿ ಸಂಸ್ಕೃತಿಯನ್ನು ರಕ್ಷಿಸಲು ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಮುಕ್ಯೋಪಾಧ್ಯಾಯ ಎಂ ಬಿ ಪಲ್ಲೇದ, ಸಂಪನ್ಮೂಲ ವ್ಯಕ್ತಿಗಳಾದ ದೇಸಾಯಿ, ಲಮಾಣಿ ಸೇರಿ ಇತರರು ಉಪಸ್ಥಿತರಿದ್ದರು.

Intro:AnchorBody:‘ಗ್ರಾಮ ಸೇವೆ’ ಕಾರ್ಯಕ್ರಮದಡಿ ಮಾಹಿತಿ ಅಭಿಯಾನ
ವಾರ್ತಾ ಇಲಾಖೆಯಿಂದ ನೀಲಾನಗರದಲ್ಲಿ ಗ್ರಾಮ ವಾಸ್ತವ್ಯ

ಬಾಗಲಕೋಟೆ-- ಸರ್ಕಾರದ ಹತ್ತು ಹಲವು ಮಹತ್ವದ
ಯೋಜನೆಗಳ ಅರಿವನ್ನು ಬೀದಿನಾಟಕ, ಜಾನಪದ ಸಂಗೀತ ಹಾಗೂ ವಿಚಾರ ಸಂಕಿರಣದ ಮೂಲಕ
ಸಾರ್ವಜನಿಕರ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಾರ್ತಾ ಇಲಾಖೆಯಿಂದ ತಾಲೂಕಿನ
ನೀಲಾನಗರದಲ್ಲಿ ಗುರುವಾರ ಗ್ರಾಮ ವಾಸ್ತವ್ಯ ಮಾಡಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಲಾನಗರ ಗ್ರಾಮದ
ದುರ್ಗಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡ ವಿನೂತನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿ.ಪಂ
ಸದಸ್ಯ ರಂಗನಗೌಡ ಗೌಡರ ಚಾಲನೆ ನೀಡಿದರು. ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂ
ದಿದ್ದು, ಈ ಯೋಜನೆಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಮೂಲಕ ಕಾರ್ಯಕ್ರಮ
ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು. ಅಲ್ಲದೇ ಸರಕಾರದ ಯೋಜನೆಗಳ ಸದುಪಯೋಗಕ್ಕೆ ಕರೆ
ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನೀಲಾನಗರದ ಬಂಜಾರ ಶಕ್ತಿ ಪೀಠದ ಕುಮಾರ
ಮಹಾರಾಜರು ಮಾತನಾಡಿ ಹಳ್ಳಿಯ ಸೊಗಡನ್ನು ಕಾಪಾಡಬೇಕು. ನಮ್ಮ ಸಂಸ್ಕøತಿ, ಪರಂಪರೆಯನ್ನು
ಉಳಿಸಿ ಬೆಳೆಸುವ ಕೆಲಸವಾಗಬೇಕು. ಪಾಶ್ಚಾತ್ಯ ಸಂಸ್ಕøತಿ ಅನುಕರಣೆ ಮಾಡಬಾರದು ಎಂದರು. ಇಂದಿನ
ಯುವ ಪೀಳಿಗೆ ದೇಶಿ ಸಂಸ್ಕøತಿಯನ್ನು ರಕ್ಷಿಸಲು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸರಕಾರ 100 ದಿನಗಳನ್ನು ಪೂರೈಸಿ ಮುನ್ನಡೆಸುತ್ತಿರುವ ಹಿನ್ನಲೆಯಲ್ಲಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ದಿನ ನೂರು ಸಾಧನೆ ನೂರಾರು ಎಂಬ
ಪುಸ್ತಕಗಳನ್ನು ಬಿಡುಗಡೆಗೊಳಿಸಿ ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷ ರಮೇಶ ಕುರಿಗಾರ, ಸರಕಾರಿ ಪ್ರೌಢಶಾಲೆಯ
ಮುಕ್ಯೋಪಾದ್ಯಾಯ ಎಂ.ಬಿ.ಪಲ್ಲೇದ, ಸಂಪನ್ಮೂಲ ವ್ಯಕ್ತಿಗಳಾದ ದೇಸಾಯಿ, ಲಮಾಣಿ ಸೇರಿದಂತೆ
ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾ ವಾರ್ತಾಧಿಕಾರಿ ಸ್ವಾಗತಿಸಿ ವಂದಿಸಿದರು.
ನಂತರ ಕೆರೂರಿನ ಬನಶಂಕರಿ ಬೀದಿನಾಟಕ ಕಲಾತಂಡ ಹಾಗೂ ಸಂಗನಬಸಯ್ಯ ವೀರಯ್ಯ
ಹಿರೇಮಠ ಜಾನಪದ ಕಲಾತಂಡಗಳ ಮೂಲಕ ಸರಕಾರದ ವಿವಿಧ ಯೋಜನಾ ಕಾರ್ಯಕ್ರಮಗಳ ಬಗ್ಗೆ
ಅರಿವು ಮೂಡಿಸಿದ್ದು ಎಲ್ಲರ ಗಮನ ಸೆಳೆಯಿತು. ವಿವಿಧ ಕಲಾತಂಡಗಳು ತಮ್ಮ ಕಲೆ ಹಾಗೂ
ಸಂಗೀತದ ಮೂಲಕ ರೈತರ ಹಿತಕ್ಕಾಗಿ ಜಾರಿಗೆ ತರಲಾದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ
ಯೋಜನೆಯಡಿ ಕೇಂದ್ರ ಸರಕಾರದಿಂದ 6 ಸಾವಿರ ರೂ. ಹಾಗೂ ರಾಜ್ಯ ಸರಕಾರದಿಂದ 4 ಸಾವಿರ
ರೂ. ಸೇರಿ ಒಟ್ಟು 10 ಸಾವಿರ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ
ಯೋಜನೆ ಬಗ್ಗೆ ಅರಿವು ಮೂಡಿಸಿದರು.
ಇದರ ಜೊತೆಗೆ ನೇಕಾರರ ಸಾಲ ಮನ್ನಾ ಯೋಜನೆ, ನೆಲಜನ ಸಂರಕ್ಷಣೆ, ಕೆರೆ ಅಭಿವೃದ್ದಿ, ಕೃಷಿ
ಹೊಂಡ ನಿರ್ಮಾಣ, ನೀರು ಸಂಗ್ರಹಣೆ, ಶಿಕ್ಷಣ, ಪರಿಸರ ರಕ್ಷಣೆ ಹಾಗೂ ಸಾಮಾಜಿಕ ಭದ್ರತೆ
ಯೋಜನೆಯಡಿ ಮಾಶಾಸನ, ಶೌಚಾಲಯಗಳ ಬಳಕೆ, ಆರೋಗ್ಯ ಸೇರಿದಂತೆ ಹಲವು ವಿಷಯಗಳ
ಬಗ್ಗೆಯೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. Conclusion:ETV-Bharat-Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.