ETV Bharat / state

ರಾಜಕೀಯಕ್ಕಾಗಿ ಸಚಿವ ತಿಮ್ಮಾಪುರ ಚಿಲ್ಲರೆ ಕೆಲಸ: ಗೋವಿಂದ ಕಾರಜೋಳ

ಬಾಗಲಕೋಟೆ ಜಿಲ್ಲೆಯ ಮುಧೋಳ ಅಭಿವೃದ್ಧಿ ವಿಷಯದಲ್ಲಿ ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ರಾಜಕೀಯಕ್ಕಾಗಿ ಚಿಲ್ಲರೆ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.

author img

By

Published : Jun 26, 2019, 8:05 PM IST

ಗೋವಿಂದ ಕಾರಜೋಳ




ಬಾಗಲಕೋಟೆ: ಜಿಲ್ಲೆಯ ಮುಧೋಳ ಅಭಿವೃದ್ಧಿ ವಿಷಯದಲ್ಲಿ ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ರಾಜಕೀಯಕ್ಕಾಗಿ ಚಿಲ್ಲರೆ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.

ತಿಮ್ಮಾಪುರಗೆ ಸರ್ಕಾರದ ನಿಯಮಗಳ‌ ಜ್ಞಾನವೇ ಇಲ್ಲ. ಮುಧೋಳ ಪಟ್ಟಣದ ಬೈಪಾಸ್ ರಸ್ತೆ, ಕುಡಿಯುವ ನೀರಿನ ಯೋಜನೆ ಸೇರಿದಂತೆ ಇತರ ಅಭಿವೃದ್ಧಿಗಾಗಿ ನಮ್ಮ ಸರ್ಕಾರವಿದ್ದಾಗ 200 ಕೋಟಿ ನೀಡಲಾಗಿದೆ. ಆದರೆ ಇದು ತಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿರುವ ಹಣ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ತಿಮ್ಮಾಪುರಗೆ ಸಾಮಾನ್ಯ ಜ್ಞಾನವೂ ಇಲ್ಲ. ಏಕೆಂದರೆ ಜನರಿಂದ ಆಯ್ಕೆಯಾದ ರಾಜ್ಯದ 224 ಶಾಸಕರು ಬಜೆಟ್​ಗೆ ಒಪ್ಪಿಗೆ ನೀಡಿರುತ್ತಾರೆ. ಈ ಹಣ ಆಯಾ ಕ್ಷೇತ್ರದ ಶಾಸಕರಿಗೆ ಸಂಬಂಧಿಸಿದ್ದು. ಈ ಬಗ್ಗೆ ವಿಧಾನ ಪರಿಷತ್ ಸದಸ್ಯರಾಗಿರುವ ತಿಮ್ಮಾಪುರಗೆ ಮಾಹಿತಿ ಇಲ್ಲ ಎಂದು ವ್ಯಂಗ್ಯವಾಡಿದರು.

ಗೋವಿಂದ ಕಾರಜೋಳ, ಮಾಜಿ ಸಚಿವ

ಇನ್ನು ಕ್ಯಾಬಿನೆಟ್​ನಲ್ಲಿ ಕಾಮಗಾರಿ ಆದೇಶ ಮತ್ತು ಬಿಡುಗಡೆ ಆಗಿರುವ ಪತ್ರವನ್ನು ಬಹಿರಂಗಗೊಳಿಸುವಂತಿಲ್ಲ ಎಂಬ ಕಾನೂನು ಇದೆ. ಆದರೆ ಈ ವಿಷಯದ ಬಗ್ಗೆ ಮಾಹಿತಿ ಇಲ್ಲದ ಸಚಿವರು ಎಲ್ಲರಿಗೂ ಸರ್ಕಾರದ ಕಾಗದ ಪತ್ರ ನೀಡಿದ್ದಾರೆ. ಈ ಸಂಬಂಧ ಯಾರಾದರೂ ನ್ಯಾಯಾಲಯ ಮೊರೆ ಹೋದ್ರೆ ಅವರ ಮಂತ್ರಿ ಸ್ಥಾನ ಹೋಗುತ್ತದೆ ಎಂದರು. ಅಲ್ಲದೆ ಮುಧೋಳ ಮತಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಸಚಿವ ತಿಮ್ಮಾಪುರಗೆ ಸವಾಲು ಹಾಕಿದರು.




ಬಾಗಲಕೋಟೆ: ಜಿಲ್ಲೆಯ ಮುಧೋಳ ಅಭಿವೃದ್ಧಿ ವಿಷಯದಲ್ಲಿ ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ರಾಜಕೀಯಕ್ಕಾಗಿ ಚಿಲ್ಲರೆ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.

ತಿಮ್ಮಾಪುರಗೆ ಸರ್ಕಾರದ ನಿಯಮಗಳ‌ ಜ್ಞಾನವೇ ಇಲ್ಲ. ಮುಧೋಳ ಪಟ್ಟಣದ ಬೈಪಾಸ್ ರಸ್ತೆ, ಕುಡಿಯುವ ನೀರಿನ ಯೋಜನೆ ಸೇರಿದಂತೆ ಇತರ ಅಭಿವೃದ್ಧಿಗಾಗಿ ನಮ್ಮ ಸರ್ಕಾರವಿದ್ದಾಗ 200 ಕೋಟಿ ನೀಡಲಾಗಿದೆ. ಆದರೆ ಇದು ತಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿರುವ ಹಣ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ತಿಮ್ಮಾಪುರಗೆ ಸಾಮಾನ್ಯ ಜ್ಞಾನವೂ ಇಲ್ಲ. ಏಕೆಂದರೆ ಜನರಿಂದ ಆಯ್ಕೆಯಾದ ರಾಜ್ಯದ 224 ಶಾಸಕರು ಬಜೆಟ್​ಗೆ ಒಪ್ಪಿಗೆ ನೀಡಿರುತ್ತಾರೆ. ಈ ಹಣ ಆಯಾ ಕ್ಷೇತ್ರದ ಶಾಸಕರಿಗೆ ಸಂಬಂಧಿಸಿದ್ದು. ಈ ಬಗ್ಗೆ ವಿಧಾನ ಪರಿಷತ್ ಸದಸ್ಯರಾಗಿರುವ ತಿಮ್ಮಾಪುರಗೆ ಮಾಹಿತಿ ಇಲ್ಲ ಎಂದು ವ್ಯಂಗ್ಯವಾಡಿದರು.

ಗೋವಿಂದ ಕಾರಜೋಳ, ಮಾಜಿ ಸಚಿವ

ಇನ್ನು ಕ್ಯಾಬಿನೆಟ್​ನಲ್ಲಿ ಕಾಮಗಾರಿ ಆದೇಶ ಮತ್ತು ಬಿಡುಗಡೆ ಆಗಿರುವ ಪತ್ರವನ್ನು ಬಹಿರಂಗಗೊಳಿಸುವಂತಿಲ್ಲ ಎಂಬ ಕಾನೂನು ಇದೆ. ಆದರೆ ಈ ವಿಷಯದ ಬಗ್ಗೆ ಮಾಹಿತಿ ಇಲ್ಲದ ಸಚಿವರು ಎಲ್ಲರಿಗೂ ಸರ್ಕಾರದ ಕಾಗದ ಪತ್ರ ನೀಡಿದ್ದಾರೆ. ಈ ಸಂಬಂಧ ಯಾರಾದರೂ ನ್ಯಾಯಾಲಯ ಮೊರೆ ಹೋದ್ರೆ ಅವರ ಮಂತ್ರಿ ಸ್ಥಾನ ಹೋಗುತ್ತದೆ ಎಂದರು. ಅಲ್ಲದೆ ಮುಧೋಳ ಮತಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಸಚಿವ ತಿಮ್ಮಾಪುರಗೆ ಸವಾಲು ಹಾಕಿದರು.

Intro:Anchor


Body:ಮುಧೋಳ ಅಭಿವೃದ್ದಿ ವಿಷಯದಲ್ಲಿ ಸಕ್ಕರೆ ಸಚಿವ ಆರ್ ಬಿ ತಿಮ್ಮಾಪೂರ ಅವರು ರಾಜಕೀಯ ಕ್ಕಾಗಿ ಚಿಲ್ಲರೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರದ ನಿಯಮ ಗಳ‌ ಜ್ಞಾನ ವೇ ಇಲ್ಲಾ ಎಂದು ಬಿಜೆಪಿ ಪಕ್ಷದ ಮುಖಂಡ,ಮಾಜಿ ಸಚಿವ,ಹಾಲಿ ಶಾಸಕರಾದ ಗೋವಿಂದ ಕಾರಜೋಳ ಸಚಿವ ತಿಮ್ಮಾಪೂರ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಬಾಗಲಕೋಟೆ ನಗರದ ಪ್ರೇಸ್ ಕಬ್ಲ್ ನಲ್ಲಿ ಮಾತನಾಡುತ್ತಾ, ಮುಧೋಳ ಪಟ್ಟಣದ ಬಾಯ್ ಪಾಸ್ ರಸ್ತೆ, ಕುಡಿಯುವ ನೀರಿನ ಯೋಜನೆ ಸೇರಿದಂತೆ ಇತರ ಅಭಿವೃದ್ಧಿ ಗಾಗಿ ಸರ್ಕಾರ 200 ಕೋಟಿ ನೀಡಿದೆ.ಆದರೆ ಇದು ತಮ್ಮ ಸರ್ಕಾರದ ಅವಧಿ ಬಿಡುಗಡೆ ಆಗಿರುವ ಹಣ ಎಂದು ಹೇಳುತ್ತಿರುವ ಸಚಿವ ತಿಮ್ಮಾಪೂರ ಅವರಿಗೆ ಸಾಮಾನ್ಯ ಜ್ಞಾನ ಇಲ್ಲ.ಏಕೆಂದರೆ ಜನರಿಂದ ಆಯ್ಕೆಯಾದ ರಾಜ್ಯದ 224 ಶಾಸಕರು ಸೇರಿಕೊಂಡು ಬಜೆಟ್‌ ಗೆ ಒಪ್ಪಿಗೆ ನೀಡಿರುತ್ತದೆ.ಅದಕ್ಕೆ ಆಯಾ ಕ್ಷೇತ್ರದ ಶಾಸಕರಿಗೆ ಸಂಬಂಧಿಸಿದೆ.ಆದರೆ ಇದು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿರುವ ತಿಮ್ಮಾಪೂರ ಅವರಿಗೆ ಮಾಹಿತಿ ಇಲ್ಲ ಎಂದು ವ್ಯಂಗ್ಯವಾಡಿದ ಕಾರಜೋಳ ಅವರು,ಕ್ಯಾಬಿನೆಟ್ ದಲ್ಲಿ ಕಾಮಗಾರಿ ಆದೇಶ ಮತ್ತು ಬಿಡುಗಡೆ ಆಗಿರುವ ಪತ್ರವನ್ನು ಬಹಿರಂಗ ಕೂಡುವಂತಿಲ್ಲ ಎಂಬ ಕಾನೂನು ಇದೆ.ಆದರೆ ಈ ವಿಷಯ ಬಗ್ಗೆ ಮಾಹಿತಿ ಇಲ್ಲದ ಸಚಿವರು ಎಲ್ಲರಿಗೂ ಸರ್ಕಾರದ ಕಾಗದಪತ್ರ ನೀಡಿದ್ದಾರೆ. ಈ ಸಂಭಂದ ಯಾರಾದರೂ ನ್ಯಾಯಾಲಯ ಕ್ಕೆ ಹೋದರೆ ತಿಮ್ಮಾಪೂರ ಅವರ ಮಂತ್ರಿ ಸ್ಥಾನ ಹೋಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾರಜೋಳ,ಮುಧೋಳ ಮತಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯದಲ್ಲಿ ಬಹಿರಂಗ ಚರ್ಚೆ ಗೆ ಬರುವಂತೆ ಸಚಿವ ತಿಮ್ಮಾಪೂರ ಗೆ ಸವಾಲ್ ಹಾಕಿದರು.ಮುಧೋಳ ತಾಲೂಕಿನ ಯಾವುದೇ ಗ್ರಾಮದಲ್ಲಿ ಎಲ್ಲರ ಸಮ್ಮುಖದಲ್ಲಿ ಯೇ ಅಭಿವೃದ್ಧಿ ವಿಷಯ ಚರ್ಚೆ ಆಗಲಿ,ವಿನಾಕಾರಣ ಸುಳ್ಳು ಆರೋಪ ಮಾಡಬೇಡಿ.ಇನ್ನು‌ ಮುಂದೆ ಸಚಿವರು ಮಾಡುವ ಯಾವುದೇ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Conclusion:ಈ ಟಿವಿ, ಭಾರತ,ಬಾಗಲಕೋಟೆ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.