ETV Bharat / state

ಕೂಡಲಸಂಗಮಕ್ಕೆ ಜಲದಿಗ್ಬಂಧನ: ಬಸವಣ್ಣನ ಐಕ್ಯಮಂಟಪ, ಸಂಗಮನಾಥ ದೇವಾಲಯ ಜಲಾವೃತ - kudalasangama flood news

ಕೃಷ್ಣ, ಘಟಪ್ರಭಾ, ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿದ್ದು, ಕೂಡಲಸಂಗಮದಲ್ಲಿರುವ ಬಸವಣ್ಣನ ಐಕ್ಯಮಂಟಪ ಹಾಗೂ ಸಂಗಮನಾಥ ದೇವಾಲಯ ಜಲಾವೃತವಾಗಿವೆ.

ಕೂಡಲಸಂಗಮದಲ್ಲಿ ಪ್ರವಾಹ ಭೀತಿ ಉಂಟಾಗಿದೆ.
author img

By

Published : Oct 23, 2019, 12:22 PM IST

ಬಾಗಲಕೋಟೆ: ಕೃಷ್ಣ, ಘಟಪ್ರಭಾ, ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿರುವ ಕಾರಣ ಜಿಲ್ಲೆಯಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ.

ಕೂಡಲಸಂಗಮದಲ್ಲಿ ಪ್ರವಾಹ

ಬಸವಣ್ಣನವರ ಐಕ್ಯ ಸ್ಥಳವಾಗಿರುವ ಕೂಡಲಸಂಗಮಕ್ಕೆ ಮತ್ತೆ ಜಲದಿಗ್ಬಂಧನ ಉಂಟಾಗಿದೆ. ಸಂಗಮನಾಥ ದೇವಾಲಯವನ್ನು ತ್ರಿವೇಣಿ ನದಿಗಳ ನೀರು ಆವರಿಸಿಕೊಂಡಿದೆ. ‌ದೇವಾಲಯ ಆವರಣದೊಳಕ್ಕೆ ನುಗ್ಗಿ ಬರುತ್ತಿರುವ ನದಿ ನೀರನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಿಬ್ಬಂದಿ ಎರಡು ವಿದ್ಯುತ್​ ಮೋಟಾರ್ ಬಳಸಿ ಹೊರಹಾಕುತ್ತಿದ್ದಾರೆ.

ಇನ್ನು ನದಿಯಲ್ಲಿ ನೀರು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಕಾರಣ ಯಾವುದೇ ಕ್ಷಣದಲ್ಲಾದ್ರೂ ಕೂಡಲಸಂಗಮನಾಥೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗುವ ಸಾಧ್ಯತೆಯಿದೆ. ದೇವಸ್ಥಾನಕ್ಕೆ ಭಕ್ತರ ಪ್ರವೇಶ ಬಂದ್ ಆಗಲಿದೆ. ಸದ್ಯ ಗರ್ಭಗುಡಿಗೂ ನೀರು ನುಗ್ಗುವ ಭೀತಿ ಹಿನ್ನಲೆಯಲ್ಲಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಈಗಾಗಲೇ ದೇವಸ್ಥಾನದ ಹುಂಡಿಯನ್ನು ಸುರಕ್ಷಿತ ಸ್ಥಳದಲ್ಲಿ ತೆಗೆದಿಟ್ಟಿದ್ದಾರೆ.‌ ಜೊತೆಗೆ ದೇವಸ್ಥಾನದ ಸಲಕರಣೆಗಳನ್ನು ಸ್ಥಳಾಂತರಿಸಿದ್ದಾರೆ.

ಪ್ರವಾಹದಿಂದಾಗಿ ಹುನಗುಂದ ತಾಲೂಕಿನ ಕೂಡಲಸಂಗಮ ಗ್ರಾಮ, ಕಜಗಲ್, ಕೆಂಗಲ್, ಹೂವಿನಕೊಪ್ಪ, ವರಗೋಡದಿನ್ನಿ ಗ್ರಾಮಗಳು ಜಲಾವೃತವಾಗಿವೆ. ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲೂ ಕೂಡಲಸಂಗಮದ ಸಂಗಮನಾಥ ದೇವಸ್ಥಾನ ಜಲಾವೃತವಾಗಿತ್ತು.

ಬಾಗಲಕೋಟೆ: ಕೃಷ್ಣ, ಘಟಪ್ರಭಾ, ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿರುವ ಕಾರಣ ಜಿಲ್ಲೆಯಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ.

ಕೂಡಲಸಂಗಮದಲ್ಲಿ ಪ್ರವಾಹ

ಬಸವಣ್ಣನವರ ಐಕ್ಯ ಸ್ಥಳವಾಗಿರುವ ಕೂಡಲಸಂಗಮಕ್ಕೆ ಮತ್ತೆ ಜಲದಿಗ್ಬಂಧನ ಉಂಟಾಗಿದೆ. ಸಂಗಮನಾಥ ದೇವಾಲಯವನ್ನು ತ್ರಿವೇಣಿ ನದಿಗಳ ನೀರು ಆವರಿಸಿಕೊಂಡಿದೆ. ‌ದೇವಾಲಯ ಆವರಣದೊಳಕ್ಕೆ ನುಗ್ಗಿ ಬರುತ್ತಿರುವ ನದಿ ನೀರನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಿಬ್ಬಂದಿ ಎರಡು ವಿದ್ಯುತ್​ ಮೋಟಾರ್ ಬಳಸಿ ಹೊರಹಾಕುತ್ತಿದ್ದಾರೆ.

ಇನ್ನು ನದಿಯಲ್ಲಿ ನೀರು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಕಾರಣ ಯಾವುದೇ ಕ್ಷಣದಲ್ಲಾದ್ರೂ ಕೂಡಲಸಂಗಮನಾಥೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗುವ ಸಾಧ್ಯತೆಯಿದೆ. ದೇವಸ್ಥಾನಕ್ಕೆ ಭಕ್ತರ ಪ್ರವೇಶ ಬಂದ್ ಆಗಲಿದೆ. ಸದ್ಯ ಗರ್ಭಗುಡಿಗೂ ನೀರು ನುಗ್ಗುವ ಭೀತಿ ಹಿನ್ನಲೆಯಲ್ಲಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಈಗಾಗಲೇ ದೇವಸ್ಥಾನದ ಹುಂಡಿಯನ್ನು ಸುರಕ್ಷಿತ ಸ್ಥಳದಲ್ಲಿ ತೆಗೆದಿಟ್ಟಿದ್ದಾರೆ.‌ ಜೊತೆಗೆ ದೇವಸ್ಥಾನದ ಸಲಕರಣೆಗಳನ್ನು ಸ್ಥಳಾಂತರಿಸಿದ್ದಾರೆ.

ಪ್ರವಾಹದಿಂದಾಗಿ ಹುನಗುಂದ ತಾಲೂಕಿನ ಕೂಡಲಸಂಗಮ ಗ್ರಾಮ, ಕಜಗಲ್, ಕೆಂಗಲ್, ಹೂವಿನಕೊಪ್ಪ, ವರಗೋಡದಿನ್ನಿ ಗ್ರಾಮಗಳು ಜಲಾವೃತವಾಗಿವೆ. ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲೂ ಕೂಡಲಸಂಗಮದ ಸಂಗಮನಾಥ ದೇವಸ್ಥಾನ ಜಲಾವೃತವಾಗಿತ್ತು.

Intro:AnchorBody: ಕೃಷ್ಣ, ಘಟಪ್ರಭಾ, ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿರುವ ಕಾರಣ ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಇದರಿಂದ ಧಾರ್ಮಿಕ ಕ್ಷೇತ್ರ ಹಾಗೂ ಅಣ್ಣ ಬಸವಣ್ಣನವರ ಐಕ್ಯ ಸ್ತಳವಾಗಿರುವ ಕೂಡಲಸಂಗಮ ದಲ್ಲಿ ಮತ್ತೆ ಜಲದಿಗ್ಬಂಧನ ಉಂಟಾಗಿದೆ.ಕೂಡಲಸಂಗಮೇಶ್ವರ ನಿಗೆ ದೇವಾಲಯವನ್ನು ತ್ರಿವೇಣಿ ನದಿಗಳ ನೀರು ಆವರಿಸಿಕೊಂಡಿದೆ. ‌ದೇವಾಲಯ ಆವರಣದೊಳಕ್ಕೆ ಬರುತ್ತಿರುವ ನದಿ ನೀರನ್ನು ಕೂಡಲಸಂಗಮ ಅಭಿವೃದ್ದಿ ಮಂಡಳಿಯ ಸಿಬ್ಬಂದಿ ಎರಡು ಮೋಟಾರ್ ಗಳನ್ನು ಬಳಸಿ ನೀರು ಹೊರಹಾಕುತ್ತಿದ್ದಾರೆ. ಇನ್ನು ನದಿಯಲ್ಲಿ ನೀರು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಕಾರಣ ಯಾವುದೇ ಕ್ಷಣದಲ್ಲಾದ್ರೂ ಕೂಡಲಸಂಗಮನಾಥೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತ ಆಗುವ ಸಾಧ್ಯತೆ ಇದೆ.‌ ದೇವಸ್ಥಾನದ ಆವರಣದೊಳಕ್ಕೆ ನದಿ ನೀರು ಬರುತ್ತಿರುವುದರಿಂದ ಭಕ್ತರ ಪ್ರವೇಶ ಬಂದ್ ಆಗುವ ಸಾಧ್ಯತೆ ಇದೆ. ಸದ್ಯ ಗರ್ಭಗುಡಿಗೂ ನೀರು ನುಗ್ಗುವ ಭೀತಿ ಹಿನ್ನಲೆಯಲ್ಲಿ ಅಭಿವೃದ್ದಿ ಮಂಡಳಿ ಅಧಿಕಾರಿಗಳು ಈಗಾಗಲೇ ದೇವಸ್ಥಾನದ ಹುಂಡಿ ತೆಗೆದಿಟ್ಟಿದ್ದಾರೆ.‌ಜೊತೆಗೆ ದೇವಸ್ಥಾನದ ಸಲಕರಣೆಗಳನ್ನು ಸ್ಥಳಾಂತರ ಮಾಡಿದ್ದಾರೆ. ಪ್ರವಾಹದಿಂದಾಗಿ ಹುನಗುಂದ ತಾಲೂಕಿನ ಕೂಡಲಸಂಗಮ ಗ್ರಾಮ, ಕಜಗಲ್, ಕೆಂಗಲ್, ಹೂವಿನಕೊಪ್ಪ, ವರಗೋಡದಿನ್ನಿ ಗ್ರಾಮಗಳು ಜಲಾವೃತವಾಗಿವೆ. ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿ ಉಂಟಾದ ಪ್ರವಾಹ ಸಂದರ್ಭದಲ್ಲೂ ತ್ರಿವೇಣಿ ಸಂಗಮ ಕೂಡಲಸಂಗಮದ ಸಂಗಮನಾಥ ದೇವಸ್ಥಾನ ಜಲಾವೃತ ಆಗಿತ್ತು.ಈಗ ಮತ್ತೆ ಪ್ರವಾಹ ಆಗುತ್ತಿರುವ ಹಿನ್ನಲೆ ಭಕ್ತರು ಹಾಗೂ ಗ್ರಾಮಸ್ತರು ಆತಂಕಗೊಂಡಿದ್ದಾರೆ.ಕೃಷ್ಣಾ,ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಯ ಪಾತ್ರದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿರುವ ಹಿನ್ನಲೆ ಆಲಮಟ್ಟಿ ಜಲಾಶಯ ಆಣೆಕಟ್ಟು ನಿಂದ ನೀರು ಬಿಡುಗಡೆ ಮಾಡುತ್ತಿರುವ ಹಿನ್ನಲೆ ಕೂಡಲಸಂಗಮ ದಲ್ಲಿ ದೇವಾಲಯ ಹಾಗೂ ಗ್ರಾಮದಲ್ಲಿ ನೀರು ನುಗ್ಗಿ ತೊಂದರೆ ಉಂಟಾಗುತ್ತಿದೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.