ETV Bharat / state

ಜಿಲ್ಲಾಧಿಕಾರಿಯಿಂದ ಕಾಮಗಾರಿ ಪರಿಶೀಲನೆ: ಮುಕ್ತಾಯ ಹಂತದಲ್ಲಿ ಮಹತ್ವ ಯೋಜನೆ

author img

By

Published : Jun 19, 2019, 12:10 PM IST

ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ಒಳಚರಂಡಿ ನೀರು ಶುದ್ಧೀಕರಣ ಘಟಕದ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಒಟ್ಟು 180 ಕಿ.ಮೀ ರಸ್ತೆಯಲ್ಲಿ 47 ಕಿ.ಮೀ ನಷ್ಟು ಪೈಪ್‍ಲೈನ್ ಅಳವಡಿಕೆ ಮಾಡಲಾಗಿದೆ. ಇದಕ್ಕೆ 42 ಕೋಟಿ ರೂ. ಖರ್ಚು ಮಾಡಲಾಗಿದೆ. ಮೊದಲ ಹಂತವಾಗಿ ಈ ಯೋಜನೆ ಜಾರಿಗೊಳ್ಳಲಿದ್ದು, ಹಂತ ಹಂತವಾಗಿ ಇಡೀ ನಗರಸಭೆ ವ್ಯಾಪ್ತಿಗೆ ವಿಸ್ತರಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ತಿಳಿಸಿದರು.

ಜಿಲ್ಲಾಧಿಕಾರಿಯಿಂದ ಕಾಮಗಾರಿ ಪರಿಶೀಲನೆ

ಬಾಗಲಕೋಟೆ: ರಬಕವಿ ಬನಹಟ್ಟಿ ನಗರಸಭೆಗೆ ಸಂಬಂಧಿಸಿದ ಒಳಚರಂಡಿ ನೀರು ಶುದ್ಧೀಕರಣ ಘಟಕದ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಮುಂದಿನ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.

ಮದನಮಟ್ಟಿ ರಸ್ತೆಯಲ್ಲಿರುವ ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ನಿನ್ನೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಮತ್ತೊಮ್ಮೆ ತಾಕೀತು ಮಾಡಲಾಗಿದೆ. ಸ್ವಲ್ಪ ವಿಳಂಬವಾದರೂ ಸಹಿತ ಮಹತ್ವದ ಯೋಜನೆಯಾಗಿರುವ ಈ ಕಾಮಗಾರಿ, ಹುಬ್ಬಳ್ಳಿ ನಂತರ ಉತ್ತರ ಕರ್ನಾಟಕದಲ್ಲಿ ಬಳಕೆಯಾಗುತ್ತಿರುವುದು ಬಾಗಲಕೋಟೆ ಜಿಲ್ಲೆಗೆ ಹೆಮ್ಮೆ ತರುವಂತಹದ್ದು. ಪಟ್ಟಣದ ಸೌಂದರ್ಯ ಹಾಗು ಅಭಿವೃದ್ಧಿಗೆ ಈ ಯೋಜನೆ ಸಹಾಯಕಾರಿಯಾಗಲಿದೆ. ಸದ್ಯ ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ಒಟ್ಟು 180 ಕಿ.ಮೀ ರಸ್ತೆಯಲ್ಲಿ 47 ಕಿ.ಮೀ ನಷ್ಟು ಪೈಪ್‍ಲೈನ್ ಅಳವಡಿಕೆ ಮಾಡಲಾಗಿದೆ. ಇದಕ್ಕೆ 42 ಕೋಟಿ ರೂ. ಖರ್ಚು ಮಾಡಲಾಗಿದೆ. ಮೊದಲ ಹಂತವಾಗಿ ಈ ಯೋಜನೆ ಜಾರಿಗೊಳ್ಳಲಿದ್ದು, ಹಂತ ಹಂತವಾಗಿ ಇಡೀ ನಗರಸಭೆ ವ್ಯಾಪ್ತಿಗೆ ವಿಸ್ತರಣೆಯಾಗಲಿದೆ ಎಂದರು.

ಇನ್ನು ಮನೆ ಮಾಲಿಕರು ಸಹ ಈ ಯೋಜನೆಗೆ ಪೂರಕವಾಗಿ ಆಯಾ ಚರಂಡಿ ಪೈಪ್‍ಲೈನ್ ಅಳವಡಿಕೆಗೆ ಸಹಕರಿಸಬೇಕು. ಮನೆಯ ಶೌಚಾಲಯ, ಡ್ರೈನೇಜ್ ಸೇರಿದಂತೆ ಹಲವಾರು ಯೋಜನೆಗಳಿಗೆ ಇದು ಲಾಭದಾಯಕವಾಗಿದ್ದು, ಸಾವಿರಾರು ರೂ.ಗಳಷ್ಟು ಹಣವನ್ನು ಕುಟುಂಬಗಳಿಂದ ಉಳಿತಾಯ ಮಾಡುವ ಯೋಜನೆ ಇದಾಗಿದೆ. ನಗರಸಭೆಯ ಸಹಭಾಗಿತ್ವದಲ್ಲಿ ಜನತೆಯ ಸಹಕಾರದಿಂದ ಈಗಾಗಲೇ 47 ಕಿ.ಮೀ. ನಷ್ಟು ವ್ಯಾಪ್ತಿಯಲ್ಲಿ ಸುಮಾರು 300 ಸಾವಿರ ಕುಟುಂಬಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.

ಈ ವೇಳೆ ಜಮಖಂಡಿ ಉಪ ವಿಭಾಗಾಧಿಕಾರಿ ವಿಕ್ರಂ, ಯೋಜನಾ ಅಭಿವೃದ್ಧಿ ಅಧಿಕಾರಿ ವಿಜಯ ಮೆಕ್ಕಳಕಿ, ತೇರದಾಳ ವಿಶೇಷ ತಹಶೀಲ್ದಾರ ಮೆಹಬೂಬಿ, ರಬಕವಿ ಬನಹಟ್ಟಿ ಗ್ರೇಡ್ 2 ತಹಶೀಲ್ದಾರ ಎಸ್.ಬಿ ಕಾಂಬಳೆ, ಪೌರಾಯುಕ್ತ ಆರ್.ಎಂ ಕೊಡಗೆ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ರಾಘವೇಂದ್ರ ಕುಲಕರ್ಣಿ, ಎಸ್.ಎಸ್ ಹತ್ತಿ, ಬಿ.ಆರ್ ಶರಣಪ್ಪನವರ, ಸುರೇಶ ಪರಕಾಳೆ, ಸದಾಶಿವ ಉಂಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಾಗಲಕೋಟೆ: ರಬಕವಿ ಬನಹಟ್ಟಿ ನಗರಸಭೆಗೆ ಸಂಬಂಧಿಸಿದ ಒಳಚರಂಡಿ ನೀರು ಶುದ್ಧೀಕರಣ ಘಟಕದ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಮುಂದಿನ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.

ಮದನಮಟ್ಟಿ ರಸ್ತೆಯಲ್ಲಿರುವ ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ನಿನ್ನೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಮತ್ತೊಮ್ಮೆ ತಾಕೀತು ಮಾಡಲಾಗಿದೆ. ಸ್ವಲ್ಪ ವಿಳಂಬವಾದರೂ ಸಹಿತ ಮಹತ್ವದ ಯೋಜನೆಯಾಗಿರುವ ಈ ಕಾಮಗಾರಿ, ಹುಬ್ಬಳ್ಳಿ ನಂತರ ಉತ್ತರ ಕರ್ನಾಟಕದಲ್ಲಿ ಬಳಕೆಯಾಗುತ್ತಿರುವುದು ಬಾಗಲಕೋಟೆ ಜಿಲ್ಲೆಗೆ ಹೆಮ್ಮೆ ತರುವಂತಹದ್ದು. ಪಟ್ಟಣದ ಸೌಂದರ್ಯ ಹಾಗು ಅಭಿವೃದ್ಧಿಗೆ ಈ ಯೋಜನೆ ಸಹಾಯಕಾರಿಯಾಗಲಿದೆ. ಸದ್ಯ ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ಒಟ್ಟು 180 ಕಿ.ಮೀ ರಸ್ತೆಯಲ್ಲಿ 47 ಕಿ.ಮೀ ನಷ್ಟು ಪೈಪ್‍ಲೈನ್ ಅಳವಡಿಕೆ ಮಾಡಲಾಗಿದೆ. ಇದಕ್ಕೆ 42 ಕೋಟಿ ರೂ. ಖರ್ಚು ಮಾಡಲಾಗಿದೆ. ಮೊದಲ ಹಂತವಾಗಿ ಈ ಯೋಜನೆ ಜಾರಿಗೊಳ್ಳಲಿದ್ದು, ಹಂತ ಹಂತವಾಗಿ ಇಡೀ ನಗರಸಭೆ ವ್ಯಾಪ್ತಿಗೆ ವಿಸ್ತರಣೆಯಾಗಲಿದೆ ಎಂದರು.

ಇನ್ನು ಮನೆ ಮಾಲಿಕರು ಸಹ ಈ ಯೋಜನೆಗೆ ಪೂರಕವಾಗಿ ಆಯಾ ಚರಂಡಿ ಪೈಪ್‍ಲೈನ್ ಅಳವಡಿಕೆಗೆ ಸಹಕರಿಸಬೇಕು. ಮನೆಯ ಶೌಚಾಲಯ, ಡ್ರೈನೇಜ್ ಸೇರಿದಂತೆ ಹಲವಾರು ಯೋಜನೆಗಳಿಗೆ ಇದು ಲಾಭದಾಯಕವಾಗಿದ್ದು, ಸಾವಿರಾರು ರೂ.ಗಳಷ್ಟು ಹಣವನ್ನು ಕುಟುಂಬಗಳಿಂದ ಉಳಿತಾಯ ಮಾಡುವ ಯೋಜನೆ ಇದಾಗಿದೆ. ನಗರಸಭೆಯ ಸಹಭಾಗಿತ್ವದಲ್ಲಿ ಜನತೆಯ ಸಹಕಾರದಿಂದ ಈಗಾಗಲೇ 47 ಕಿ.ಮೀ. ನಷ್ಟು ವ್ಯಾಪ್ತಿಯಲ್ಲಿ ಸುಮಾರು 300 ಸಾವಿರ ಕುಟುಂಬಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.

ಈ ವೇಳೆ ಜಮಖಂಡಿ ಉಪ ವಿಭಾಗಾಧಿಕಾರಿ ವಿಕ್ರಂ, ಯೋಜನಾ ಅಭಿವೃದ್ಧಿ ಅಧಿಕಾರಿ ವಿಜಯ ಮೆಕ್ಕಳಕಿ, ತೇರದಾಳ ವಿಶೇಷ ತಹಶೀಲ್ದಾರ ಮೆಹಬೂಬಿ, ರಬಕವಿ ಬನಹಟ್ಟಿ ಗ್ರೇಡ್ 2 ತಹಶೀಲ್ದಾರ ಎಸ್.ಬಿ ಕಾಂಬಳೆ, ಪೌರಾಯುಕ್ತ ಆರ್.ಎಂ ಕೊಡಗೆ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ರಾಘವೇಂದ್ರ ಕುಲಕರ್ಣಿ, ಎಸ್.ಎಸ್ ಹತ್ತಿ, ಬಿ.ಆರ್ ಶರಣಪ್ಪನವರ, ಸುರೇಶ ಪರಕಾಳೆ, ಸದಾಶಿವ ಉಂಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.