ETV Bharat / state

ಅನಾಥ ಹೆಣ್ಣು ಶಿಶುವಿನ ಪಾಲಕರ ಪತ್ತೆಗಾಗಿ ಮಾಹಿತಿ ನೀಡಲು ಮನವಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಬಾದಾಮಿ ತಾಲೂಕಿನ ಕಾತರಕಿ ಗ್ರಾಮದ ರಂಗಪ್ಪ ತಳವಾರ ಎಂಬುವರ ಹೊಲದಲ್ಲಿ ಅಕ್ಟೋಬರ್​ 16 ರಂದು ಅನಾಥ ಹೆಣ್ಣು ಶಿಶು ದೊರಕಿದ್ದು, ಮಗುವಿಗೆ ಸಂಬಂಧಿಸಿದವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ಹೊರಡಿಸಲಾಗಿದೆ.

infant
ಶಿಶು
author img

By

Published : Nov 6, 2020, 7:28 PM IST

ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನಡೆಯುವ ಅಮೂಲ್ಯ (ಪಿ) ಸರ್ಚ ಸ್ವದೇಶಿ ದತ್ತು ಸ್ವೀಕಾರ ಕೇಂದ್ರಕ್ಕೆ ಅನಾಥ ಹೆಣ್ಣು ಶಿಶುವನ್ನು ನೀಡಲಾಗಿದೆ.

ಈ ಶಿಶು ಬಾದಾಮಿ ತಾಲೂಕಿನ ಕಾತರಕಿ ಗ್ರಾಮದ ರಂಗಪ್ಪ ತಳವಾರ ಎಂಬುವರ ಹೊಲದಲ್ಲಿ ಅಕ್ಟೋಬರ್​ 16 ರಂದು ದೊರೆತಿದೆ. ಶಿಶುಗೆ 15 ದಿನಗಳಾಗಿದ್ದು, ಗೋಧಿ ಬಣ್ಣ, 1.6 ಕೆ.ಜಿ ತೂಕವಿದ್ದು, ಮಗುವಿಗೆ ಸಂಬಂಧಿಸಿದವರು ಪತ್ರಿಕೆಯಲ್ಲಿ ಪ್ರಕಟವಾದ 60 ದಿನಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ತ್ರೀಶಕ್ತಿ ಭವನ, ಸೆಕ್ಟರ ನಂ.4, ನವನಗರ, ಬಾಗಲಕೋಟೆ ದೂ.ಸಂ.08354-235345 ಇವರನ್ನು ಭೇಟಿ ಮಾಡಬೇಕಾಗಿ ತಿಳಿಸಿದೆ.

ಇಲ್ಲದಿದ್ದರೆ ಮಗುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆ ಮಾಡಲಾಗುತ್ತದೆ. ಈ ಕುರಿತು ಬದಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನಡೆಯುವ ಅಮೂಲ್ಯ (ಪಿ) ಸರ್ಚ ಸ್ವದೇಶಿ ದತ್ತು ಸ್ವೀಕಾರ ಕೇಂದ್ರಕ್ಕೆ ಅನಾಥ ಹೆಣ್ಣು ಶಿಶುವನ್ನು ನೀಡಲಾಗಿದೆ.

ಈ ಶಿಶು ಬಾದಾಮಿ ತಾಲೂಕಿನ ಕಾತರಕಿ ಗ್ರಾಮದ ರಂಗಪ್ಪ ತಳವಾರ ಎಂಬುವರ ಹೊಲದಲ್ಲಿ ಅಕ್ಟೋಬರ್​ 16 ರಂದು ದೊರೆತಿದೆ. ಶಿಶುಗೆ 15 ದಿನಗಳಾಗಿದ್ದು, ಗೋಧಿ ಬಣ್ಣ, 1.6 ಕೆ.ಜಿ ತೂಕವಿದ್ದು, ಮಗುವಿಗೆ ಸಂಬಂಧಿಸಿದವರು ಪತ್ರಿಕೆಯಲ್ಲಿ ಪ್ರಕಟವಾದ 60 ದಿನಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ತ್ರೀಶಕ್ತಿ ಭವನ, ಸೆಕ್ಟರ ನಂ.4, ನವನಗರ, ಬಾಗಲಕೋಟೆ ದೂ.ಸಂ.08354-235345 ಇವರನ್ನು ಭೇಟಿ ಮಾಡಬೇಕಾಗಿ ತಿಳಿಸಿದೆ.

ಇಲ್ಲದಿದ್ದರೆ ಮಗುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆ ಮಾಡಲಾಗುತ್ತದೆ. ಈ ಕುರಿತು ಬದಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.