ETV Bharat / state

'ಅರೆರೆ..ಕೊರೊನಾ ಬಂದೈತಿ, ಪುಣ್ಯಕ್ಕೆ ಉಳಿಗಾಲ ಎಲ್ಲೈತಿ': ಪೊಲೀಸ್​ ಸಿಬ್ಬಂದಿಯ ಜಾಗೃತಿ ಹಾಡು ಕೇಳಿ..

author img

By

Published : May 27, 2021, 8:00 AM IST

ಕೋವಿಡ್ ಜಾಗೃತಿ ಹಾಡು ಹಾಡುವ ಮೂಲಕ ಬಾಗಲಕೋಟೆಯ ಸಂಚಾರಿ ಪೊಲೀಸ್ ಸಿಬ್ಬಂದಿ ಗಮನ ಸೆಳೆದಿದ್ದಾರೆ. ಈ ಹಾಡಲ್ಲಿರುವ ಜಾಗೃತಿ ಸಂದೇಶವನ್ನರಿಯಿರಿ..

Covid Awareness song
ಕೋವಿಡ್ ಜಾಗೃತಿ ಹಾಡು

ಬಾಗಲಕೋಟೆ: ಕೋವಿಡ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದ ಸಂಚಾರಿ ಪೊಲೀಸ್ ಸಿಬ್ಬಂದಿ ಹಾಡು ಹಾಡಿದ್ದಾರೆ. ಈ ಮೂಲಕ ಸಾಂಕ್ರಾಮಿಕ ರೋಗದ ಕುರಿತಾಗಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

ಸಂಚಾರಿ ಪೊಲೀಸ್ ಸಿಬ್ಬಂದಿ‌ ಭಾಸ್ಕರ ಕಮ್ಮಾರ್ ಅವರು ಜಾನಪದ‌ ಶೈಲಿಯ ಕೋವಿಡ್ ಜಾಗೃತಿ ಹಾಡು ಹಾಡಿದ್ದಾರೆ. ನಾಟಕ‌ ಕವಿ ಎಸ್. ಹೆಚ್ ಶೇಬಣ್ಣನವರು ಈ ಹಾಡಿಗೆ ಸಾಹಿತ್ಯ ರಚನೆ ಮಾಡಿದ್ದಾರೆ.

ಸಂಚಾರಿ ಪೊಲೀಸ್ ಹಾಡಿರುವ ಕೋವಿಡ್ ಜಾಗೃತಿ ಹಾಡು

ಈ ಸುದ್ದಿಯನ್ನೂ ಓದಿ: ಕೋವಿಡ್ ಸೋಂಕಿತರ ಜೊತೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ರೇಣುಕಾಚಾರ್ಯ ದಂಪತಿ... ವಿಡಿಯೋ

ಕೋವಿಡ್ ಜಾಗೃತಿಯ ಜೊತೆಗೆ ಮುಂಚೂಣಿ ಕಾರ್ಯಕರ್ತರಾದ ವೈದ್ಯರು, ಪೊಲೀಸ್​ ಸಿಬ್ಬಂದಿಗೆ ಗೌರವ ಸಲ್ಲಿಸುವ ಪ್ರಯತ್ನವನ್ನೂ ಈ ಮೂಲಕ ಮಾಡಲಾಗಿದೆ. ಹಾಡು ಹಾಡಲು ಭಾಸ್ಕರ್​ ಕಮ್ಮಾರ್ ಅವರಿಗೆ ನಗರದ ಸ್ಟುಡಿಯೋ ಮಾಲೀಕ ಕೃಷ್ಣ ಅಂಬಿಗರ್​ ಕೂಡ ಸಹಕಾರ ನೀಡಿದ್ದಾರೆ.

ಬಾಗಲಕೋಟೆ: ಕೋವಿಡ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದ ಸಂಚಾರಿ ಪೊಲೀಸ್ ಸಿಬ್ಬಂದಿ ಹಾಡು ಹಾಡಿದ್ದಾರೆ. ಈ ಮೂಲಕ ಸಾಂಕ್ರಾಮಿಕ ರೋಗದ ಕುರಿತಾಗಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

ಸಂಚಾರಿ ಪೊಲೀಸ್ ಸಿಬ್ಬಂದಿ‌ ಭಾಸ್ಕರ ಕಮ್ಮಾರ್ ಅವರು ಜಾನಪದ‌ ಶೈಲಿಯ ಕೋವಿಡ್ ಜಾಗೃತಿ ಹಾಡು ಹಾಡಿದ್ದಾರೆ. ನಾಟಕ‌ ಕವಿ ಎಸ್. ಹೆಚ್ ಶೇಬಣ್ಣನವರು ಈ ಹಾಡಿಗೆ ಸಾಹಿತ್ಯ ರಚನೆ ಮಾಡಿದ್ದಾರೆ.

ಸಂಚಾರಿ ಪೊಲೀಸ್ ಹಾಡಿರುವ ಕೋವಿಡ್ ಜಾಗೃತಿ ಹಾಡು

ಈ ಸುದ್ದಿಯನ್ನೂ ಓದಿ: ಕೋವಿಡ್ ಸೋಂಕಿತರ ಜೊತೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ರೇಣುಕಾಚಾರ್ಯ ದಂಪತಿ... ವಿಡಿಯೋ

ಕೋವಿಡ್ ಜಾಗೃತಿಯ ಜೊತೆಗೆ ಮುಂಚೂಣಿ ಕಾರ್ಯಕರ್ತರಾದ ವೈದ್ಯರು, ಪೊಲೀಸ್​ ಸಿಬ್ಬಂದಿಗೆ ಗೌರವ ಸಲ್ಲಿಸುವ ಪ್ರಯತ್ನವನ್ನೂ ಈ ಮೂಲಕ ಮಾಡಲಾಗಿದೆ. ಹಾಡು ಹಾಡಲು ಭಾಸ್ಕರ್​ ಕಮ್ಮಾರ್ ಅವರಿಗೆ ನಗರದ ಸ್ಟುಡಿಯೋ ಮಾಲೀಕ ಕೃಷ್ಣ ಅಂಬಿಗರ್​ ಕೂಡ ಸಹಕಾರ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.