ETV Bharat / state

ಆಯುಷ್ಮಾನ್ ಭಾರತ ಕಾರ್ಯಕ್ರಮ: ಡಿಸಿಯಿಂದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕ್ಲಾಸ್​

ಜನರಲ್ಲಿ ಆರೋಗ್ಯದ ಕುರಿತು ಹೇಗೆ ಜಾಗೃತಿ ಮೂಡಿಸಬೇಕೆಂದು, ಆಶಾ ಕಾರ್ಯಕರ್ತರು, ಆಯಾಗಳು ಹಾಗೂ ನರ್ಸ್​ಗಳಿಗೆ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಲಾಸ್​ ತೆಗೆದುಕೊಂಡರು.

author img

By

Published : Sep 15, 2019, 5:06 PM IST

ಲೆಕ್ಚರ್​​

ಬಾಗಲಕೋಟೆ: ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು, ಆಯಾಗಳು ಹಾಗೂ ನರ್ಸ್​ಗಳಿಗೆ ಅಧ್ಯಯನ ಮಾಡಲು ಬಂದವರಿಗೆ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಪಾಠ ಮಾಡುವ ಮೂಲಕ ಗಮನ ಸೆಳೆದರು.

ಆಯುಷ್ಮಾನ್ ಭಾರತ ಕುರಿತು ಜಾಗೃತಿ ಜಾಥ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ಎದುರು ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಡಿಸಿಎಂ ಗೋವಿಂದ ಕಾರಜೋಳ ಚಾಲನೆ ನೀಡಬೇಕಾಗಿತ್ತು. ಆದರೆ, ಸಚಿವರು ಬರುವುದು ತಡವಾಗಿದ್ದರಿಂದ ಜಿಲ್ಲಾಧಿಕಾರಿ ಲೆಕ್ಚರ್ ಕೊಡಲು ಮುಂದಾದ್ರು. ಮೊದಲು ಆಶಾ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸಿ, ಶೌಚಾಲಯ ಹಾಗೂ ಸ್ವಚ್ಛತೆ ಬಗ್ಗೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಬಯಲು ಶೌಚ ಮುಕ್ತ ಮಾಡಲು ಸಾಧ್ಯವಾಗಿಲ್ಲ. ಆಶಾ ಕಾರ್ಯಕರ್ತೆಯರು ಈ ಬಗ್ಗೆ ಹೆಚ್ಚು ಶ್ರಮ ವಹಿಸಬೇಕು ಎಂದು ಕರೆ ನೀಡಿದ್ರು.

ಜಿಲ್ಲಾಧಿಕಾರಿಯಿಂದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಲೆಕ್ಚರ್​​

ನಂತರ ಬಸವೇಶ್ವರ ವಿದ್ಯಾವರ್ಧಕ ಸಂಘದ ನರ್ಸ್​ಗಳು ಮಹಾವಿದ್ಯಾಲಯದ ವಿದ್ಯಾರ್ಥಿನಿಗಳೊಂದಿಗೆ ಚರ್ಚೆ ನಡೆಸುತ್ತಾ, ಕೆಲ ಆರೋಗ್ಯ ವಿಚಾರವಾಗಿ ಪಾಠ ಮಾಡಿದ್ರು. ಪ್ರಾಧ್ಯಾಪಕರಾಗಿ ಪ್ರಶ್ನೆ ಕೇಳುವ ಜೊತೆಗೆ ಉತ್ತರ ನೀಡಿ, ನೀವು ಭವ್ಯ ಭಾರತಕ್ಕೆ ಸಾಕಷ್ಟು ಶ್ರಮ ವಹಿಸಬೇಕು ಎಂದು ತಿಳಿಸಿದ್ರು.

ಬಾಗಲಕೋಟೆ: ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು, ಆಯಾಗಳು ಹಾಗೂ ನರ್ಸ್​ಗಳಿಗೆ ಅಧ್ಯಯನ ಮಾಡಲು ಬಂದವರಿಗೆ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಪಾಠ ಮಾಡುವ ಮೂಲಕ ಗಮನ ಸೆಳೆದರು.

ಆಯುಷ್ಮಾನ್ ಭಾರತ ಕುರಿತು ಜಾಗೃತಿ ಜಾಥ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ಎದುರು ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಡಿಸಿಎಂ ಗೋವಿಂದ ಕಾರಜೋಳ ಚಾಲನೆ ನೀಡಬೇಕಾಗಿತ್ತು. ಆದರೆ, ಸಚಿವರು ಬರುವುದು ತಡವಾಗಿದ್ದರಿಂದ ಜಿಲ್ಲಾಧಿಕಾರಿ ಲೆಕ್ಚರ್ ಕೊಡಲು ಮುಂದಾದ್ರು. ಮೊದಲು ಆಶಾ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸಿ, ಶೌಚಾಲಯ ಹಾಗೂ ಸ್ವಚ್ಛತೆ ಬಗ್ಗೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಬಯಲು ಶೌಚ ಮುಕ್ತ ಮಾಡಲು ಸಾಧ್ಯವಾಗಿಲ್ಲ. ಆಶಾ ಕಾರ್ಯಕರ್ತೆಯರು ಈ ಬಗ್ಗೆ ಹೆಚ್ಚು ಶ್ರಮ ವಹಿಸಬೇಕು ಎಂದು ಕರೆ ನೀಡಿದ್ರು.

ಜಿಲ್ಲಾಧಿಕಾರಿಯಿಂದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಲೆಕ್ಚರ್​​

ನಂತರ ಬಸವೇಶ್ವರ ವಿದ್ಯಾವರ್ಧಕ ಸಂಘದ ನರ್ಸ್​ಗಳು ಮಹಾವಿದ್ಯಾಲಯದ ವಿದ್ಯಾರ್ಥಿನಿಗಳೊಂದಿಗೆ ಚರ್ಚೆ ನಡೆಸುತ್ತಾ, ಕೆಲ ಆರೋಗ್ಯ ವಿಚಾರವಾಗಿ ಪಾಠ ಮಾಡಿದ್ರು. ಪ್ರಾಧ್ಯಾಪಕರಾಗಿ ಪ್ರಶ್ನೆ ಕೇಳುವ ಜೊತೆಗೆ ಉತ್ತರ ನೀಡಿ, ನೀವು ಭವ್ಯ ಭಾರತಕ್ಕೆ ಸಾಕಷ್ಟು ಶ್ರಮ ವಹಿಸಬೇಕು ಎಂದು ತಿಳಿಸಿದ್ರು.

Intro:Anchor


Body:ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರಿಗೆ,ಆಯಾಗಳಿಗೆ ಹಾಗೂ ನರ್ಸಿಂಗ್ ಅಧ್ಯಾಯನ ಮಾಡಲು ಬಂದಿರುವ ವಿದ್ಯಾರ್ಥಿಗಳಿಗೆ ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿ ಆರ್,ರಾಮಚಂದ್ರನ್ ಪಾಠ ಮಾಡುವ ಮೂಲಕ ಗಮನ ಸೆಳೆದರು .
ರವಿವಾರ ರಜೆ ಇದ್ದರೂ ಕೆಲ ಸಮಯ ವಿದ್ಯಾರ್ಥಿಗಳು ಪಾಠ ಕೇಳಿ ಮಾಹಿತಿ ವಿನಿಮಯ ಮಾಡಿಕೊಂಡರು.
ಆಯ್ಯುಷ್ಮಾನ್ ಭಾರತ ಜಾಗೃತ ಮೂಡಿಸುವ ಜಾಥಾ ಕಾರ್ಯಕ್ರಮ ಕ್ಕೆ ಜಿಲ್ಲಾಡಳಿತ ಭನವ ಎದುರು ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ಕ್ಕೆ ಡಿಸಿಎಂ ಗೋವಿಂದ ಕಾರಜೋಳ ಚಾಲನೆ ನೀಡಬೇಕಾಗಿತ್ತು.ಆದರೆ ಸಚಿವರ ತಡವಾಗಿ ಆಗಮಿಸಿದ ಮಾಹಿತಿ ತಿಳಿದಕೊಂಡ ಜಿಲ್ಲಾಧಿಕಾರಿ, ಲೆಕ್ಚರ್ ಕೂಡಲು ಮುಂದಾದರು.ಮೊದಲು ಆಶಾ ಕಾರ್ಯಕರ್ತೆ ಜೊತೆಗೆ ಚರ್ಚೆ ನಡೆಸಿ,ಶೌಚಾಲಯ ಹಾಗೂ ಸ್ವಚ್ಚತೆ ಬಗ್ಗೆ ಗ್ರಾಮ ಮಟ್ಟದಲ್ಲಿ ಜಾಗೃತ ಮೂಡಿಸುವಂತೆ ತಿಳಿಸಿದರು. ಸ್ವಾತಂತ್ರ ಸಿಕ್ಕ ಇಷ್ಟು ವರ್ಷಗಳಾದರೂ ಬಯಲು ಶೌಚ ಮುಕ್ತ ಮಾಡಲು ಸಾಧ್ಯವಾಗಿಲ್ಲ. ಆಶಾ ಕಾರ್ಯಕರ್ತೆ ಯರು ಹೆಚ್ಚು ಶ್ರಮ ವಹಿಸಬೇಕು ಎಂದು ಕರೆ ನೀಡಿದರು.
ನಂತರ ಬಸವೇಶ್ವರ ವಿದ್ಯಾವರ್ಧಕ ಸಂಘದ ನರ್ಸಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿನಿ ಗಳೊಂದಿಗೆ ಚರ್ಚೆ ನಡೆಸುತ್ತಾ,ಕೆಲ ಆರೋಗ್ಯ ವಿಚಾರವಾಗಿ ಪಾಠ ಮಾಡಿದರು.ಪ್ರಾಧ್ಯಾಪಕರಾಗಿ ಪ್ರಶ್ನೆ ಕೇಳುವ ಜೊತೆಗೆ ಉತ್ತರ ನೀಡಿ,ನೀವು ಭವ್ಯ ಭಾರತಕ್ಕೆ ಸಾಕಷ್ಟು ಶ್ರಮ ವಹಿಸಬೇಕು ಎಂದು ತಿಳಿಸಿದರು.
ಇದೇ ಸಮಯದಲ್ಲಿ ಆರೋಗ್ಯ ಇಲಾಖೆ ಸಹಾಯಕಿರ ಜೊತೆ ಮಾತುಕತೆ ನಡೆಸಿ,ಸರ್ಕಾರದ ಯೋಜನೆಗಳ ಬಗ್ಗೆ ಮಕ್ಕಳಿಗೆ ನೀಡುವ ಡ್ರಾಫ್ಸ್ ಯಾವವು,ಎಷ್ಟು ವಯಸ್ಸಿನ ಮಕ್ಕಳಿಗೆ ಪೋಲಿಯೋ ಸೇರಿದಂತೆ ಇತರ ಹನಿಗಳು ನೀಡುವ ಮತ್ತು ಚುಚ್ಚುಮದ್ದು ಕೂಡುವ ಮಾಹಿತಿಯನ್ನು ಪಡೆದುಕೊಂಡು,ನೀವು ತಾಯಿಂದರು ಇದ್ದಂತೆ ಎಲ್ಲ ಮಕ್ಕಳನ್ನು ಪೌಷ್ಟಿಕಾಹಾರ ಜೊತೆಗೆ ಆರೋಗ್ಯ ಕರ ಬೆಳೆವಣಿಗೆಗೆ ಲಕ್ಷ ವಹಿಸಬೇಕು ಎಂದು ತಿಳಿಸಿದರು.
ಡಿಸಿಎಂ ಗೋವಿಂದ ಕಾರಜೋಳ ಬರುವ ಮುಂಚೆ ಇಷ್ಟೇಲ್ಲಾ ಲೆಕ್ಚರ್ ನೀಡಿ,ಜಿಲ್ಲಾಧಿಕಾರಿ, ಕಾರಜೋಳ ಅವರ ಆಗಮನ ದಿಂದ ಪಾಠ ಮುಗಿಸಿ ಕಾರ್ಯಕ್ರಮ ಕ್ಕೆ ನಿಂತರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯತ ಮುಖ್ಯಕಾರ್ಯಾ ನಿರ್ವಹಣಾಧಿಕಾರಿ ವಿಕ್ರಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಅನಿಲ ದೇಸಾಯಿ ಮತ್ತು ಜಿಲ್ಲಾ ಸರ್ಜನ್ ಪ್ರಕಾಶ ಬಿರಾದಾರ ಸೇರಿದಂತೆ ಇತರರು ಹಾಜರಿದ್ದರು.


Conclusion:ಈ ಟಿ ವಿ,ಭಾರತ,ಬಾಗಲಕೋಟೆ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.