ಬಾಗಲಕೋಟೆ: ಆಯುಷ್ ಇಲಾಖೆ ವತಿಯಿಂದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ 150 ಆಯುಷ್ ಔಷಧಿ ಕಿಟ್ಗಳನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಅವರ ಸಮ್ಮುಖದಲ್ಲಿ ಇಂದು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಲ್ಲಣ್ಣ ತೋಟದ ಮಾತನಾಡಿ, ಆಯುಷ್ ಔಷಧಿಗಳ ಮಹತ್ವ ಹಾಗೂ ಅದರಿಂದಾಗುವ ಲಾಭಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಜೊತೆಗೆ ಕೊರೊನಾ ತಡೆಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಹಿರಿಯ ವೈದ್ಯಾಧಿಕಾರಿ ಡಾ. ಚಂದ್ರಕಾಂತ ರಕ್ಕಸಗಿ ಮಾತನಾಡಿ, ಆಯುಷ್ ಔಷಧಿಗಳಾದ ಸಂಶಮನಿ ವಟಿ, ಆಯುರ್ವೇದ-250 ಮಿ.ಗ್ರಾಂ ಮಾತ್ರೆಗಳು ಹಾಗೂ ಅರ್ಕ್ ಎ ಅಜೀಬ್(ಯುನಾನಿ) ಔಷಧಿಗಳನ್ನು ತೆಗೆದುಕೊಳ್ಳುವ ರೀತಿ ಹಾಗೂ ಉಪಯೋಗ ಕುರಿತು ತಿಳಿಸಿಕೊಟ್ಟರು.
ಹೋಮಿಯೋಪತಿ ವೈದ್ಯಾಧಿಕಾರಿ ಡಾ. ಕವಿತಾ ಅಮಾಸಿ, ಇವರು ಆಯುಷ್ ಔಷಧಿಯಾದ ಅರ್ಸೇನಿಕ್ ಅಲ್ಬಂ-30 (ಹೋಮಿಯೊಪತಿ) ಮಾತ್ರೆಗಳು ಸೇವಿಸುವ ರೀತಿ, ಅದರಿಂದಾಗುವ ಲಾಭಗಳ ಬಗ್ಗೆ ತಿಳಿಸಿಕೊಟ್ಟರು.