ಬಾಗಲಕೋಟೆ : ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುಂದಿನ ಒಂದು ವಾರ ಬಂದ್ ಇರುವುದರಿಂದ ಜಮಖಂಡಿ ಪಟ್ಟಣದಲ್ಲಿ ನಾಳೆ ನಡೆಯಬೇಕಿದ್ದ ಕೃಷಿ ಸಿರಿಧಾನ್ಯ ಮೇಳ ರದ್ದಾಗಿದೆ.
ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಇತರ ಗಣ್ಯರು ಭಾಗವಹಿಸಬೇಕಿತ್ತು. ಎರಡು ದಿನದ ಸಿರಿಧಾನ್ಯ ಮೇಳದ ಪ್ರದರ್ಶನವೂ ಸೇರಿ ಇತರ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನ ರದ್ದ ಮಾಡಲಾಗಿದೆ.