ETV Bharat / state

ಅಂಬೇಡ್ಕರ್ ಜಯಂತಿಯಂದೇ ಸಪ್ತಪದಿ ತುಳಿದ 12 ಜೋಡಿಗಳು! - ಬಾಗಲಕೋಟೆಯಲ್ಲಿ ಅಂಬೇಡ್ಕರ್​ ಜಯಂತಿ ಪ್ರಯುಕ್ತ 12 ಸಾಮೂಹಿಕ ವಿವಾಹ,

ಅಂಬೇಡ್ಕರ್ ಜಯಂತಿಯಂದೇ 12 ಜೋಡಿಗಳು ಸಪ್ತಪದಿ ತುಳಿದಿರುವ ಸನ್ನಿವೇಶ ಬಾಗಲಕೋಟೆ ನಗರದಲ್ಲಿ ನಡೆಯಿತು.

12 couple mass marriage in Ambedkar Jayanti, 12 couple mass marriage in Ambedkar Jayanti at Bagalkot, Bagalkot mass marriage new, ಅಂಬೇಡ್ಕರ್​ ಜಯಂತಿ ಪ್ರಯುಕ್ತ 12 ಸಾಮೂಹಿಕ ವಿವಾಹ, ಬಾಗಲಕೋಟೆಯಲ್ಲಿ ಅಂಬೇಡ್ಕರ್​ ಜಯಂತಿ ಪ್ರಯುಕ್ತ 12 ಸಾಮೂಹಿಕ ವಿವಾಹ, ಬಾಗಲಕೋಟೆ ಸಾಮೂಹಿಕ ವಿವಾಹ,
ಅಂಬೇಡ್ಕರ್ ಜಯಂತಿಯಂದೇ ಸಪ್ತಪದಿ ತುಳಿದ 12 ಜೋಡಿಗಳು
author img

By

Published : Apr 15, 2021, 5:10 AM IST

ಬಾಗಲಕೋಟೆ: ಅಂಬೇಡ್ಕರ ಜಯಂತಿ ಅಂಗವಾಗಿ ನವನಗರದ ಸೆಕ್ಟರ್ ನಂಬರ್​ 49 ರಲ್ಲಿ ಡಿಎಸ್​ಎಸ್ ( ಭೀಮವಾದ) ಸಂಘಟನೆ ವತಿಯಿಂದ ಸಾಮೂಹಿಕ ವಿವಾಹ ಸಮಾರಂಭ ಜರುಗಿತು.

ಡಿಎಸ್​ಎಸ್ ಮುಖಂಡರಾದ ಪರಶುರಾಮ ನೀಲನಾಯಕ ನೇತೃತ್ವದಲ್ಲಿ ಅಂಬೇಡ್ಕರ್ ಹಾಗೂ ಬುದ್ಧ ಮೂರ್ತಿಯನ್ನು ಪೂಜೆ, ಪುರಸ್ಕಾರ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು. ನಂತರ ಬೌದ್ಧಿಕ ಸ್ವಾಮೀಜಿಯವರ ಅವರ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ಜರುಗಿತು.

ಅಂಬೇಡ್ಕರ್ ಜಯಂತಿಯಂದೇ ಸಪ್ತಪದಿ ತುಳಿದ 12 ಜೋಡಿಗಳು

12 ಜೋಡಿಯ ದಂಪತಿಗಳಿಗೆ ಬುದ್ಧ ಮತ್ತು ಅಂಬೇಡ್ಕರ್ ಹಾಗೂ ತಾಮ್ರದ ಚಿಕ್ಕ ಬಿಂದಿಗೆ ಹಾಗೂ ಜಲವನ್ನು ನೀಡುವ ಮೂಲಕ ವಿವಾಹ ಜರುಗಿಸಲಾಯಿತು. ಇದೇ ಸಮಯದಲ್ಲಿ ಅಕ್ಷತಾವನ್ನು‌ ಹಾಕದೆ ಹೂ ಸರ್ಮಪಣೆ ಮಾಡುವ ಮೂಲಕ ದಂಪತಿಗಳಿಗೆ ವಿಶೇಷ ವಾಗಿ ಆಶೀರ್ವಾದ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಪರಶುರಾಮ ‌ನೀಲನಾಯಕ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಮೊಬೈಲ್ ನೀಡುವ ಬದಲು ಪುಸ್ತಕ ನೀಡಿ, ಇದರಿಂದ ಮುಂದುವರೆಯಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಆಶಯದಂತೆ ಗ್ರಾಮದಿಂದ ಹಿಡಿದು ಲೋಕಸಭೆಯವರೆಗೆ ಅಧಿಕಾರ ಹಿಡಿಯುವ ಮೂಲಕ ನಮ್ಮ ಜನಾಂಗ‌ ಮುಂದುವರೆಯಬೇಕು.ಈ‌ ನಿಟ್ಟಿನಲ್ಲಿ ಚುನಾವಣೆ ಸಮಯದಲ್ಲಿ, ಹೆಂಡ, ಹಣ, ಸೀರೆಗಳಿಗೆ ಆಶೆಯ‌ ಪಡದೆ, ಸೂಕ್ತ ವ್ಯಕ್ತಗಳಿಗೆ ಆಯ್ಕೆ ಮಾಡಿ ಎಂದು ಕರೆ ನೀಡಿದರು.

ಯುವ ಮುಖಂಡರಾದ ಸಂತೋಷ ಹೊಕ್ರಾಣಿ ಸೇರಿದಂತೆ ದಲಿತ ಸಂಘಟನೆಯ ‌ಮುಖಂಡರು‌ ಭಾಗವಹಿಸಿ ನೂತನ ದಂಪತಿಗಳಿಗೆ ಶುಭಕೋರಿದರು.

ಬಾಗಲಕೋಟೆ: ಅಂಬೇಡ್ಕರ ಜಯಂತಿ ಅಂಗವಾಗಿ ನವನಗರದ ಸೆಕ್ಟರ್ ನಂಬರ್​ 49 ರಲ್ಲಿ ಡಿಎಸ್​ಎಸ್ ( ಭೀಮವಾದ) ಸಂಘಟನೆ ವತಿಯಿಂದ ಸಾಮೂಹಿಕ ವಿವಾಹ ಸಮಾರಂಭ ಜರುಗಿತು.

ಡಿಎಸ್​ಎಸ್ ಮುಖಂಡರಾದ ಪರಶುರಾಮ ನೀಲನಾಯಕ ನೇತೃತ್ವದಲ್ಲಿ ಅಂಬೇಡ್ಕರ್ ಹಾಗೂ ಬುದ್ಧ ಮೂರ್ತಿಯನ್ನು ಪೂಜೆ, ಪುರಸ್ಕಾರ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು. ನಂತರ ಬೌದ್ಧಿಕ ಸ್ವಾಮೀಜಿಯವರ ಅವರ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ಜರುಗಿತು.

ಅಂಬೇಡ್ಕರ್ ಜಯಂತಿಯಂದೇ ಸಪ್ತಪದಿ ತುಳಿದ 12 ಜೋಡಿಗಳು

12 ಜೋಡಿಯ ದಂಪತಿಗಳಿಗೆ ಬುದ್ಧ ಮತ್ತು ಅಂಬೇಡ್ಕರ್ ಹಾಗೂ ತಾಮ್ರದ ಚಿಕ್ಕ ಬಿಂದಿಗೆ ಹಾಗೂ ಜಲವನ್ನು ನೀಡುವ ಮೂಲಕ ವಿವಾಹ ಜರುಗಿಸಲಾಯಿತು. ಇದೇ ಸಮಯದಲ್ಲಿ ಅಕ್ಷತಾವನ್ನು‌ ಹಾಕದೆ ಹೂ ಸರ್ಮಪಣೆ ಮಾಡುವ ಮೂಲಕ ದಂಪತಿಗಳಿಗೆ ವಿಶೇಷ ವಾಗಿ ಆಶೀರ್ವಾದ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಪರಶುರಾಮ ‌ನೀಲನಾಯಕ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಮೊಬೈಲ್ ನೀಡುವ ಬದಲು ಪುಸ್ತಕ ನೀಡಿ, ಇದರಿಂದ ಮುಂದುವರೆಯಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಆಶಯದಂತೆ ಗ್ರಾಮದಿಂದ ಹಿಡಿದು ಲೋಕಸಭೆಯವರೆಗೆ ಅಧಿಕಾರ ಹಿಡಿಯುವ ಮೂಲಕ ನಮ್ಮ ಜನಾಂಗ‌ ಮುಂದುವರೆಯಬೇಕು.ಈ‌ ನಿಟ್ಟಿನಲ್ಲಿ ಚುನಾವಣೆ ಸಮಯದಲ್ಲಿ, ಹೆಂಡ, ಹಣ, ಸೀರೆಗಳಿಗೆ ಆಶೆಯ‌ ಪಡದೆ, ಸೂಕ್ತ ವ್ಯಕ್ತಗಳಿಗೆ ಆಯ್ಕೆ ಮಾಡಿ ಎಂದು ಕರೆ ನೀಡಿದರು.

ಯುವ ಮುಖಂಡರಾದ ಸಂತೋಷ ಹೊಕ್ರಾಣಿ ಸೇರಿದಂತೆ ದಲಿತ ಸಂಘಟನೆಯ ‌ಮುಖಂಡರು‌ ಭಾಗವಹಿಸಿ ನೂತನ ದಂಪತಿಗಳಿಗೆ ಶುಭಕೋರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.