ETV Bharat / sports

ಒಡಿಶಾ ಸರ್ಕಾರ ನನಗೆ ಅವಮಾನ ಮಾಡ್ತಿದೆ: ಅಥ್ಲೀಟ್‌ ದ್ಯುತಿ ಚಾಂದ್ ಆರೋಪ

author img

By

Published : Jul 17, 2020, 4:42 PM IST

ಕ್ರೀಡಾಪಟು​ ದ್ಯುತಿ ಚಾಂದ್​ ಹಾಗೂ ಒಡಿಶಾ ಸರ್ಕಾರದ ನಡುವಿನ ವೈಮನಸ್ಯ ಮುಂದುವರೆದಿದೆ.

Dutee Chand
Dutee Chand

ಭುವನೇಶ್ವರ: ಏಷ್ಯನ್​ ಗೇಮ್ಸ್​​ನಲ್ಲಿ ಪದಕ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದ ಅಥ್ಲೀಟ್​​ ದ್ಯುತಿ ಚಾಂದ್​, ತರಬೇತಿ ವೆಚ್ಚ ಭರಿಸಲು ಬೇರೆ ದಾರಿಯಿಲ್ಲದೇ ತಮ್ಮಲ್ಲಿರುವ ಬೆಲೆ ಬಾಳುವ ಬಿಎಂಡಬ್ಲು ಕಾರು ಮಾರಾಟ ಮಾಡಲು ನಿರ್ಧರಿಸಿದ್ದರು.

Dutee Chand
ದ್ಯುತಿ ಚಾಂದ್​ ದೈಹಿಕ ಕಸರತ್ತು

ಈ ವಿಚಾರ ಅಲ್ಲಿನ ಸರ್ಕಾರ ಹಾಗೂ ದ್ಯುತಿ ಚಾಂದ್​ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಒಡಿಶಾ ಸರ್ಕಾರ 2005ರಿಂದ ಇಲ್ಲಿಯವರೆಗೆ ದ್ಯುತಿ ಚಾಂದ್​​ ಅವರಿಗೆ ತರಬೇತಿಗಾಗಿ 4.09 ಕೋಟಿ ರೂ ಖರ್ಚು ಮಾಡಿದ್ದು, ಜೊತೆಗೆ 3 ಕೋಟಿ ರೂ ನಗದು ಬಹುಮಾನವನ್ನೂ ನೀಡಿದೆ ಎಂದು ಹೇಳಿತ್ತು. ಒಡಿಶಾ ಕಲ್ಲಿದ್ದಲು ಕಾರ್ಪೋರೇಷನ್​​ನಲ್ಲಿ ಗ್ರೂಪ್​​-ಎ ಹುದ್ದೆಯನ್ನೂ ನೀಡಿ, ಈ ಮೂಲಕ 84,604 ರೂ ವೇತನ ಪಡೆದುಕೊಳ್ಳುತ್ತಿದ್ದಾರೆ ಎಂದು ವಿವರ ನೀಡಿತ್ತು.

Dutee Chand
ಅಥ್ಲೀಟ್​ ದ್ಯುತಿ ಚಾಂದ್​

ಈ ವಿಷಯವನ್ನಿಟ್ಟುಕೊಂಡು ಪ್ರತಿಕ್ರಿಯಿಸಿರುವ ಅಥ್ಲೀಟ್​, ಒಡಿಶಾ ಸರ್ಕಾರ ನನಗೆ ಅವಮಾನ ಮಾಡ್ತಿದ್ದು, ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌​ ತರಬೇತಿಗೆ ನನಗೆ ಹಣದ ಅವಶ್ಯಕತೆ ಇದ್ದ ಕಾರಣ ಬಿಎಂಡಬ್ಲ್ಯೂ ಕಾರು ಮಾರಾಟ ಮಾಡಲು ನಿರ್ಧರಿಸಿದ್ದೆ. ಈ ವಿಷಯವನ್ನು ಫೇಸ್​ಬುಕ್​​ನಲ್ಲಿ ಹಾಕಿಕೊಂಡಿದ್ದೆ. ಆದರೆ ಅದು ವಿವಾದದ ರೂಪ ಪಡೆದುಕೊಳ್ಳುತ್ತಿದ್ದಂತೆ ನನ್ನ ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದ ಮಾಹಿತಿ ಡಿಲೀಟ್​ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

Dutee Chand
ತನ್ನ ಬಿಎಂಡಬ್ಲು ಕಾರ್‌ ಜೊತೆ ಅಥ್ಲೀಟ್‌ ದ್ಯುತಿ ಚಾಂದ್​

ಒಡಿಶಾ ಸರ್ಕಾರ ಮಾತ್ರ ನನಗೆ ಸಹಾಯ ಮಾಡ್ತಿಲ್ಲ. ಬೇರೆ ಕಂಪನಿಗಳು ಕೂಡ ನನಗೆ ಆರ್ಥಿಕವಾಗಿ ಸಹಾಯ ಮಾಡ್ತಿವೆ. ಆದರೆ ಬೇರೆ ಯಾವುದೇ ಸರ್ಕಾರ ಅಥ್ಲೀಟ್​ಗಳಿಗೆ ನೀಡುವ ಹಣದ ಬಗ್ಗೆ ಮಾಹಿತಿ ನೀಡಲ್ಲ. ಒಡಿಶಾ ಸರ್ಕಾರ ಈ ಕೆಲಸ ಮಾಡಿದೆ ಎಂದು ತಿಳಿಸಿದ್ದಾರೆ.

ಹಿಮಾ ದಾಸ್​, ನೀರಜ್​ ಚೋಪ್ರಾ ಹಾಗೂ ಅಭಿನವ್​ ಬಿಂದ್ರಾ ಕೂಡ ದೇಶವನ್ನು ಪ್ರತಿನಿಧಿಸಿದ್ದು, ಅವರಿಗೆ ನೀಡಿರುವ ಹಣದ ಬಗ್ಗೆ ಇಲ್ಲಿಯವರೆಗೆ ಮಾಹಿತಿ ನೀಡಿಲ್ಲ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲು ನನಗೆ ಹಣ ಬೇಕಾಗಿದೆ. ಅದಕ್ಕಾಗಿ ನಾನು ರಾಜ್ಯ ಸರ್ಕಾರದ ಬಳಿ ಹಣ ನೀಡುವಂತೆ ಕೇಳಿಕೊಂಡಿಲ್ಲ. ಕೋವಿಡ್​ ವಿರುದ್ಧ ದೇಶ ಹೋರಾಟ ನಡೆಸಿರುವ ಸಂದರ್ಭದಲ್ಲಿ ನಾನು ಸರ್ಕಾರದ ಬಳಿ ಹಣ ಕೇಳುವುದು ಸರಿ ಇರಲ್ಲ ಎಂಬ ಉದ್ದೇಶದಿಂದ ಕಾರು ಮಾರಾಟ ಮಾಡಲು ಮುಂದಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಭುವನೇಶ್ವರ: ಏಷ್ಯನ್​ ಗೇಮ್ಸ್​​ನಲ್ಲಿ ಪದಕ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದ ಅಥ್ಲೀಟ್​​ ದ್ಯುತಿ ಚಾಂದ್​, ತರಬೇತಿ ವೆಚ್ಚ ಭರಿಸಲು ಬೇರೆ ದಾರಿಯಿಲ್ಲದೇ ತಮ್ಮಲ್ಲಿರುವ ಬೆಲೆ ಬಾಳುವ ಬಿಎಂಡಬ್ಲು ಕಾರು ಮಾರಾಟ ಮಾಡಲು ನಿರ್ಧರಿಸಿದ್ದರು.

Dutee Chand
ದ್ಯುತಿ ಚಾಂದ್​ ದೈಹಿಕ ಕಸರತ್ತು

ಈ ವಿಚಾರ ಅಲ್ಲಿನ ಸರ್ಕಾರ ಹಾಗೂ ದ್ಯುತಿ ಚಾಂದ್​ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಒಡಿಶಾ ಸರ್ಕಾರ 2005ರಿಂದ ಇಲ್ಲಿಯವರೆಗೆ ದ್ಯುತಿ ಚಾಂದ್​​ ಅವರಿಗೆ ತರಬೇತಿಗಾಗಿ 4.09 ಕೋಟಿ ರೂ ಖರ್ಚು ಮಾಡಿದ್ದು, ಜೊತೆಗೆ 3 ಕೋಟಿ ರೂ ನಗದು ಬಹುಮಾನವನ್ನೂ ನೀಡಿದೆ ಎಂದು ಹೇಳಿತ್ತು. ಒಡಿಶಾ ಕಲ್ಲಿದ್ದಲು ಕಾರ್ಪೋರೇಷನ್​​ನಲ್ಲಿ ಗ್ರೂಪ್​​-ಎ ಹುದ್ದೆಯನ್ನೂ ನೀಡಿ, ಈ ಮೂಲಕ 84,604 ರೂ ವೇತನ ಪಡೆದುಕೊಳ್ಳುತ್ತಿದ್ದಾರೆ ಎಂದು ವಿವರ ನೀಡಿತ್ತು.

Dutee Chand
ಅಥ್ಲೀಟ್​ ದ್ಯುತಿ ಚಾಂದ್​

ಈ ವಿಷಯವನ್ನಿಟ್ಟುಕೊಂಡು ಪ್ರತಿಕ್ರಿಯಿಸಿರುವ ಅಥ್ಲೀಟ್​, ಒಡಿಶಾ ಸರ್ಕಾರ ನನಗೆ ಅವಮಾನ ಮಾಡ್ತಿದ್ದು, ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌​ ತರಬೇತಿಗೆ ನನಗೆ ಹಣದ ಅವಶ್ಯಕತೆ ಇದ್ದ ಕಾರಣ ಬಿಎಂಡಬ್ಲ್ಯೂ ಕಾರು ಮಾರಾಟ ಮಾಡಲು ನಿರ್ಧರಿಸಿದ್ದೆ. ಈ ವಿಷಯವನ್ನು ಫೇಸ್​ಬುಕ್​​ನಲ್ಲಿ ಹಾಕಿಕೊಂಡಿದ್ದೆ. ಆದರೆ ಅದು ವಿವಾದದ ರೂಪ ಪಡೆದುಕೊಳ್ಳುತ್ತಿದ್ದಂತೆ ನನ್ನ ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದ ಮಾಹಿತಿ ಡಿಲೀಟ್​ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

Dutee Chand
ತನ್ನ ಬಿಎಂಡಬ್ಲು ಕಾರ್‌ ಜೊತೆ ಅಥ್ಲೀಟ್‌ ದ್ಯುತಿ ಚಾಂದ್​

ಒಡಿಶಾ ಸರ್ಕಾರ ಮಾತ್ರ ನನಗೆ ಸಹಾಯ ಮಾಡ್ತಿಲ್ಲ. ಬೇರೆ ಕಂಪನಿಗಳು ಕೂಡ ನನಗೆ ಆರ್ಥಿಕವಾಗಿ ಸಹಾಯ ಮಾಡ್ತಿವೆ. ಆದರೆ ಬೇರೆ ಯಾವುದೇ ಸರ್ಕಾರ ಅಥ್ಲೀಟ್​ಗಳಿಗೆ ನೀಡುವ ಹಣದ ಬಗ್ಗೆ ಮಾಹಿತಿ ನೀಡಲ್ಲ. ಒಡಿಶಾ ಸರ್ಕಾರ ಈ ಕೆಲಸ ಮಾಡಿದೆ ಎಂದು ತಿಳಿಸಿದ್ದಾರೆ.

ಹಿಮಾ ದಾಸ್​, ನೀರಜ್​ ಚೋಪ್ರಾ ಹಾಗೂ ಅಭಿನವ್​ ಬಿಂದ್ರಾ ಕೂಡ ದೇಶವನ್ನು ಪ್ರತಿನಿಧಿಸಿದ್ದು, ಅವರಿಗೆ ನೀಡಿರುವ ಹಣದ ಬಗ್ಗೆ ಇಲ್ಲಿಯವರೆಗೆ ಮಾಹಿತಿ ನೀಡಿಲ್ಲ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲು ನನಗೆ ಹಣ ಬೇಕಾಗಿದೆ. ಅದಕ್ಕಾಗಿ ನಾನು ರಾಜ್ಯ ಸರ್ಕಾರದ ಬಳಿ ಹಣ ನೀಡುವಂತೆ ಕೇಳಿಕೊಂಡಿಲ್ಲ. ಕೋವಿಡ್​ ವಿರುದ್ಧ ದೇಶ ಹೋರಾಟ ನಡೆಸಿರುವ ಸಂದರ್ಭದಲ್ಲಿ ನಾನು ಸರ್ಕಾರದ ಬಳಿ ಹಣ ಕೇಳುವುದು ಸರಿ ಇರಲ್ಲ ಎಂಬ ಉದ್ದೇಶದಿಂದ ಕಾರು ಮಾರಾಟ ಮಾಡಲು ಮುಂದಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.