ETV Bharat / sports

ಭಾರತವು ಚೆಸ್​ನಲ್ಲಿ ಸುವರ್ಣ ತಲೆಮಾರು ಕಾಣುತ್ತಿದೆ: ವಿಶ್ವನಾಥನ್ ಆನಂದ್ ಮೆಚ್ಚುಗೆ

author img

By ETV Bharat Karnataka Team

Published : Aug 23, 2023, 4:32 PM IST

ಭಾರತದ ಮಾಜಿ ಚೆಸ್ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್ ಆನಂದ್ ಪ್ರತಿಕ್ರಿಯಿಸಿ, ದೇಶದಲ್ಲಿ ಯುವ ಚೆಸ್​ ಆಟಗಾರರು ಹೆಚ್ಚುತ್ತಿದ್ದು, ಸುವರ್ಣ ಪೀಳಿಗೆಯನ್ನು ಕಾಣುತ್ತಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

viswanathan-anand
ವಿಶ್ವನಾಥನ್ ಆನಂದ್

ಚೆನ್ನೈ (ತಮಿಳುನಾಡು): 21 ವರ್ಷದ ನಂತರ ಭಾರತದ ಯುವ ಪ್ರತಿಭೆ ಪ್ರಜ್ಞಾನಂದ ಅವರು ಚೆಸ್ ವಿಶ್ವಕಪ್​ ಫೈನಲ್​ ಪ್ರವೇಶಿಸಿದ್ದಾರೆ. ನಿನ್ನೆ (ಮಂಗಳವಾರ) ನಡೆದ ಮೊದಲ ಪಂದ್ಯ 35 ನಡೆಗಳ ನಂತರ ಡ್ರಾ ಆಗಿತ್ತು. ಈ ಕುರಿತು ಭಾರತ ಮಾಜಿ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್ ಆನಂದ್ ಪ್ರತಿಕ್ರಿಯಿಸಿ, ಭಾರತ ದೇಶವು ಚೆಸ್‌ನಲ್ಲಿ ಸುವರ್ಣ ತಲೆಮಾರು ಕಾಣುತ್ತಿದೆ. ವಿಶ್ವ ವೇದಿಕೆಯಲ್ಲಿ ಹೆಸರು ಮಾಡುವುದರ ಜೊತೆಗೆ ಸಾಕಷ್ಟು ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಹುಟ್ಟುಹಾಕುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಜೆರ್ಬೈಜಾನ್​ನ ಬಾಕುವಿನಲ್ಲಿ ನಡೆಯುತ್ತಿರುವ ಚೆಸ್​ ವಿಶ್ವಕಪ್​ನಲ್ಲಿ 18 ವರ್ಷದ ಪ್ರಜ್ಞಾನಂದ, ವಿಶ್ವದ ನಂಬರ್​ ಶ್ರೇಯಾಂಕಿತ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎದುರಿಸುತ್ತಿದ್ದಾರೆ. ಪ್ರಜ್ಞಾನಂದ ಅವರು ಅಮೆರಿಕದ 3ನೇ ಶ್ರೇಯಾಂಕಿತ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಮವಾರ ನಡೆದ ಸೆಮಿಫೈನಲ್​ನ ಟೈ ಬ್ರೇಕರ್​ನಲ್ಲಿ ಮಣಿಸಿ, ಅಂತಿಮ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಶ್ವನಾಥನ್ ಆನಂದ್, "ಭಾರತದಲ್ಲಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಆಟಗಾರರು 2,700ಕ್ಕೂ ಹೆಚ್ಚು ಎಲೋ ರೇಟಿಂಗ್ ​(Elo Rating) ಹೊಂದಿದ್ದಾರೆ. ನಾನು ಇದನ್ನು ಮುಂಚಿತವಾಗಿ ಹೇಳುತ್ತಿರಬಹುದು. ಆದರೆ ಭಾರತ ಚೆಸ್​ನಲ್ಲಿ ಸುವರ್ಣ ಪೀಳಿಗೆಯನ್ನು ಹುಟ್ಟುಹಾಕುತ್ತಿದೆ. 20 ವಯಸ್ಸಿಗಿಂತ ಕೆಳಗಿನವರು ಈ ಸಾಲಿನಲ್ಲಿರುವುದು ಪ್ರಮುಖ ಅಂಶ. ಮುಂದಿನ 10 ವರ್ಷ ಉನ್ನತ ಮಟ್ಟದ ಚೆಸ್​ ಕಾಣಸಿಗಲಿದೆ. ಇದಕ್ಕಾಗಿ ನಾನು ಸುವರ್ಣ ತಲೆಮಾರು ಎಂದು ಕರೆಯುತ್ತಿದ್ದೇನೆ" ಎಂದರು.

ಇದೇ ವೇಳೆ ಆನಂದ್, ತಮ್ಮ ಕಾಲದ ಚೆಸ್​ಗೂ ಈಗಿನ ಆಟಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ ಎಂದಿದ್ದಾರೆ. "ನಾನು ಬಹಳ ಸಮಯದಿಂದ ಈ ಪಂದ್ಯಾವಳಿಯಲ್ಲಿ ಏಕೈಕ ಭಾರತೀಯನಾಗಿದ್ದೆ. ಹಾಗಾಗಿ ಇದನ್ನು ನನ್ನ ಅನುಭವಕ್ಕೆ ಹೋಲಿಸಲಾಗದು. ನಾನು ನನ್ನ ಅನುಭವಗಳನ್ನು ವಿಶೇಷವಾಗಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಂಚಿಕೊಳ್ಳುತ್ತೇನೆ. ಆದರೆ, ಚೆಸ್ ಈಗ ತುಂಬಾ ಬದಲಾಗಿದೆ".

"ಈಗ ಕಂಪ್ಯೂಟರ್​ ಮೂಲಕ ಎಲ್ಲವೂ ಸರಳವಾಗಿದೆ. ನಮ್ಮ ಒಂದು ಚಲನೆಯ ನಂತರ ಕ್ಷಣದ ಬಿಡುವೂ ಸಿಗದೆ ಪ್ರತಿ ಚಲನೆ ಆಗಿರುತ್ತದೆ. ಹೀಗಾಗಿ ಆಲೋಚನೆಯ ರೀತಿ ಬದಲಾಗಿದೆ. ನನ್ನ ಅನುಭವವೂ ಇದರೊಂದಿಗೆ ಹೆಚ್ಚು ಹೋಲಿಕೆ ಆಗುವುದಿಲ್ಲ. ಯೋಚಿಸುವುದನ್ನು ಹೇಳಿಕೊಡಬಹುದು, ಆದರೆ ಈ ಸಮಯಕ್ಕೆ ಅದು ಅಷ್ಟು ಸೂಕ್ತವಾಗಿರುವುದಿಲ್ಲ" ಎಂದಿದ್ದಾರೆ.

ಇಂದಿನ ವಿಶ್ವಕಪ್ ಫೈನಲ್​ ಪಂದ್ಯ: ಅಜೆರ್ಬೈಜಾನ್​ನಲ್ಲಿ ನಡೆಯುತ್ತಿರುವ ಚೆಸ್​ ವಿಶ್ವಕಪ್​ನಲ್ಲಿ ಭಾರತ ಪ್ರಜ್ಞಾನಂದ ಅವರು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ಅವರನ್ನು ಇಂದು ಎರಡನೇ ಪಂದ್ಯದಲ್ಲಿ ಎದುರಿಸುತ್ತಿದ್ದಾರೆ. ಇಂದಿನ ಪಂದ್ಯವೂ ಡ್ರಾ ಆದಲ್ಲಿ ನಾಳೆ ಟೈ ಬ್ರೇಕರ್​ ಸ್ಪರ್ಧೆ ನಡೆಯಲಿದೆ. (ಪಿಟಿಐ)

ಇದನ್ನೂ ಓದಿ: ಚೆಸ್‌ ವಿಶ್ವಕಪ್‌ ಫೈನಲ್‌: ಪ್ರಜ್ಞಾನಂದ vs ಕಾರ್ಲ್‌ಸನ್ ಮೊದಲ ಪಂದ್ಯ ಡ್ರಾ, ನಾಳೆ 2ನೇ ಫೈಟ್​

ಚೆನ್ನೈ (ತಮಿಳುನಾಡು): 21 ವರ್ಷದ ನಂತರ ಭಾರತದ ಯುವ ಪ್ರತಿಭೆ ಪ್ರಜ್ಞಾನಂದ ಅವರು ಚೆಸ್ ವಿಶ್ವಕಪ್​ ಫೈನಲ್​ ಪ್ರವೇಶಿಸಿದ್ದಾರೆ. ನಿನ್ನೆ (ಮಂಗಳವಾರ) ನಡೆದ ಮೊದಲ ಪಂದ್ಯ 35 ನಡೆಗಳ ನಂತರ ಡ್ರಾ ಆಗಿತ್ತು. ಈ ಕುರಿತು ಭಾರತ ಮಾಜಿ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್ ಆನಂದ್ ಪ್ರತಿಕ್ರಿಯಿಸಿ, ಭಾರತ ದೇಶವು ಚೆಸ್‌ನಲ್ಲಿ ಸುವರ್ಣ ತಲೆಮಾರು ಕಾಣುತ್ತಿದೆ. ವಿಶ್ವ ವೇದಿಕೆಯಲ್ಲಿ ಹೆಸರು ಮಾಡುವುದರ ಜೊತೆಗೆ ಸಾಕಷ್ಟು ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಹುಟ್ಟುಹಾಕುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಜೆರ್ಬೈಜಾನ್​ನ ಬಾಕುವಿನಲ್ಲಿ ನಡೆಯುತ್ತಿರುವ ಚೆಸ್​ ವಿಶ್ವಕಪ್​ನಲ್ಲಿ 18 ವರ್ಷದ ಪ್ರಜ್ಞಾನಂದ, ವಿಶ್ವದ ನಂಬರ್​ ಶ್ರೇಯಾಂಕಿತ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎದುರಿಸುತ್ತಿದ್ದಾರೆ. ಪ್ರಜ್ಞಾನಂದ ಅವರು ಅಮೆರಿಕದ 3ನೇ ಶ್ರೇಯಾಂಕಿತ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಮವಾರ ನಡೆದ ಸೆಮಿಫೈನಲ್​ನ ಟೈ ಬ್ರೇಕರ್​ನಲ್ಲಿ ಮಣಿಸಿ, ಅಂತಿಮ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಶ್ವನಾಥನ್ ಆನಂದ್, "ಭಾರತದಲ್ಲಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಆಟಗಾರರು 2,700ಕ್ಕೂ ಹೆಚ್ಚು ಎಲೋ ರೇಟಿಂಗ್ ​(Elo Rating) ಹೊಂದಿದ್ದಾರೆ. ನಾನು ಇದನ್ನು ಮುಂಚಿತವಾಗಿ ಹೇಳುತ್ತಿರಬಹುದು. ಆದರೆ ಭಾರತ ಚೆಸ್​ನಲ್ಲಿ ಸುವರ್ಣ ಪೀಳಿಗೆಯನ್ನು ಹುಟ್ಟುಹಾಕುತ್ತಿದೆ. 20 ವಯಸ್ಸಿಗಿಂತ ಕೆಳಗಿನವರು ಈ ಸಾಲಿನಲ್ಲಿರುವುದು ಪ್ರಮುಖ ಅಂಶ. ಮುಂದಿನ 10 ವರ್ಷ ಉನ್ನತ ಮಟ್ಟದ ಚೆಸ್​ ಕಾಣಸಿಗಲಿದೆ. ಇದಕ್ಕಾಗಿ ನಾನು ಸುವರ್ಣ ತಲೆಮಾರು ಎಂದು ಕರೆಯುತ್ತಿದ್ದೇನೆ" ಎಂದರು.

ಇದೇ ವೇಳೆ ಆನಂದ್, ತಮ್ಮ ಕಾಲದ ಚೆಸ್​ಗೂ ಈಗಿನ ಆಟಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ ಎಂದಿದ್ದಾರೆ. "ನಾನು ಬಹಳ ಸಮಯದಿಂದ ಈ ಪಂದ್ಯಾವಳಿಯಲ್ಲಿ ಏಕೈಕ ಭಾರತೀಯನಾಗಿದ್ದೆ. ಹಾಗಾಗಿ ಇದನ್ನು ನನ್ನ ಅನುಭವಕ್ಕೆ ಹೋಲಿಸಲಾಗದು. ನಾನು ನನ್ನ ಅನುಭವಗಳನ್ನು ವಿಶೇಷವಾಗಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಂಚಿಕೊಳ್ಳುತ್ತೇನೆ. ಆದರೆ, ಚೆಸ್ ಈಗ ತುಂಬಾ ಬದಲಾಗಿದೆ".

"ಈಗ ಕಂಪ್ಯೂಟರ್​ ಮೂಲಕ ಎಲ್ಲವೂ ಸರಳವಾಗಿದೆ. ನಮ್ಮ ಒಂದು ಚಲನೆಯ ನಂತರ ಕ್ಷಣದ ಬಿಡುವೂ ಸಿಗದೆ ಪ್ರತಿ ಚಲನೆ ಆಗಿರುತ್ತದೆ. ಹೀಗಾಗಿ ಆಲೋಚನೆಯ ರೀತಿ ಬದಲಾಗಿದೆ. ನನ್ನ ಅನುಭವವೂ ಇದರೊಂದಿಗೆ ಹೆಚ್ಚು ಹೋಲಿಕೆ ಆಗುವುದಿಲ್ಲ. ಯೋಚಿಸುವುದನ್ನು ಹೇಳಿಕೊಡಬಹುದು, ಆದರೆ ಈ ಸಮಯಕ್ಕೆ ಅದು ಅಷ್ಟು ಸೂಕ್ತವಾಗಿರುವುದಿಲ್ಲ" ಎಂದಿದ್ದಾರೆ.

ಇಂದಿನ ವಿಶ್ವಕಪ್ ಫೈನಲ್​ ಪಂದ್ಯ: ಅಜೆರ್ಬೈಜಾನ್​ನಲ್ಲಿ ನಡೆಯುತ್ತಿರುವ ಚೆಸ್​ ವಿಶ್ವಕಪ್​ನಲ್ಲಿ ಭಾರತ ಪ್ರಜ್ಞಾನಂದ ಅವರು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ಅವರನ್ನು ಇಂದು ಎರಡನೇ ಪಂದ್ಯದಲ್ಲಿ ಎದುರಿಸುತ್ತಿದ್ದಾರೆ. ಇಂದಿನ ಪಂದ್ಯವೂ ಡ್ರಾ ಆದಲ್ಲಿ ನಾಳೆ ಟೈ ಬ್ರೇಕರ್​ ಸ್ಪರ್ಧೆ ನಡೆಯಲಿದೆ. (ಪಿಟಿಐ)

ಇದನ್ನೂ ಓದಿ: ಚೆಸ್‌ ವಿಶ್ವಕಪ್‌ ಫೈನಲ್‌: ಪ್ರಜ್ಞಾನಂದ vs ಕಾರ್ಲ್‌ಸನ್ ಮೊದಲ ಪಂದ್ಯ ಡ್ರಾ, ನಾಳೆ 2ನೇ ಫೈಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.