ETV Bharat / sports

ಮನೆ ನವೀಕರಣ ವಿಚಾರ: ಕ್ರೀಡಾಪಟು ಪ್ರವೀಣ್​ ಜಾಧವ್​ ಕುಟುಂಬಕ್ಕೆ ನೆರೆಯವರಿಂದ ಬೆದರಿಕೆ

ಮಹಾರಾಷ್ಟ್ರದ ಸತಾರ ಜಿಲ್ಲೆಯ ಸರ್ದೆ ಹಳ್ಳಿಯಲ್ಲಿ ಜಾಧವ್ ಮೊದಲು ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ನಂತರ ಜಾಧವ್ ಪುಣೆಯ​ ಆರ್ಮಿ ಸ್ಪೋರ್ಟ್ಸ್​ ಇನ್​ಸ್ಟಿಟ್ಯೂಟ್​ಗೆ ಸೇರಿದ ನಂತರ, ಮಹಾರಾಷ್ಟ್ರ ಆಗ್ರೋ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಒದಗಿಸಿದ ಭೂಮಿಯಲ್ಲಿ ಶೀಟ್​ ಛಾವಣಿಯೊಂದಿಗೆ ಕಾಂಕ್ರೀಟ್ ಮನೆಯನ್ನು ನಿರ್ಮಿಸಿದರು.

author img

By

Published : Aug 4, 2021, 7:16 PM IST

Indian archer Pravin Jadhav
ಪ್ರವೀಣ್ ಜಾಧವ್​

ಸತಾರ( ಮಹಾರಾಷ್ಟ್ರ): ಆರ್ಚರಿ ವಿಭಾಗದಲ್ಲಿ 2020 ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಪ್ರವೀಣ್​ ಜಾಧವ್ ಅವರ ಕುಟುಂಬ ಮನೆ ನವೀಕರಿಸುವ ವಿಚಾರವಾಗಿ ನೆರೆಯವರಿಂದ ಬೆದರಿಕೆ ಎದುರಿಸುತ್ತಿದೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದ ಸತಾರ ಜಿಲ್ಲೆಯ ಸರ್ದೆ ಹಳ್ಳಿಯಲ್ಲಿ ಜಾಧವ್ ಮೊದಲು ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ನಂತರ ಜಾಧವ್ ಪುಣೆಯ​ ಆರ್ಮಿ ಸ್ಪೋರ್ಟ್ಸ್​ ಇನ್​ಸ್ಟಿಟ್ಯೂಟ್​ಗೆ ಸೇರಿದ ನಂತರ, ಮಹಾರಾಷ್ಟ್ರ ಆಗ್ರೋ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಒದಗಿಸಿದ ಭೂಮಿಯಲ್ಲಿ ಶೀಟ್​ ಛಾವಣಿಯೊಂದಿಗೆ ಕಾಂಕ್ರೀಟ್ ಮನೆಯನ್ನು ನಿರ್ಮಿಸಿದರು.

ಇದೀಗ ಆ ಮನೆಯನ್ನು ನವೀಕರಣ ಮಾಡಲು ಹೊರಟಿರುವುದಕ್ಕೆ ಅಕ್ಕಪಕ್ಕದ ಮನೆಯವರು ಬೆದರಿಕೆ ಒಡ್ಡಿ ತಡೆದಿದ್ದಾರೆ ಎಂದು ​ಜಾಧವ್​ ಟೋಕಿಯೋದಿಂದ ಹಿಂದಿರುಗಿದ ನಂತರ ಆತನ ಕುಟುಂಬದವರು ಆತನಿಗೆ ವಿವಾದದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, ಮನೆಯ ನವೀಕರಣದ ಕುರಿತು ಅವರ ಕುಟುಂಬ ಮತ್ತು ನೆರೆಹೊರೆಯವರ ನಡುವಿನ ವಿವಾದವು ಇದೀಗ ಸ್ಥಳೀಯ ಆಡಳಿತವನ್ನು ತಲುಪಿದೆ ಎಂದು ತಿಳಿದು ಬಂದಿದೆ.

ಪ್ರವೀಣ್ ಜಾಧವ್​ ತಂದೆ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರ ನಮಗೆ ನೀಡಿರುವ ಜಾಗದಲ್ಲಿ ಆ ಮನೆಯನ್ನು ನಿರ್ಮಿಸಿದ್ದೇವೆ. ಆದರೂ ನಮ್ಮ ಅಕ್ಕಪಕ್ಕದ ಮನೆಯವರು ಮನೆಯನ್ನು ನವೀಕರಿಸಲು ಮತ್ತು ಕಟ್ಟಡ ನಿರ್ಮಿಸಲು ವಿರೋಧಿಸುತ್ತಿದ್ದಾರೆ. ಅಲ್ಲದೇ ನೆರೆಹೊರೆಯವರು ನಮ್ಮ ಮನೆಯನ್ನು ಹೊಡೆದು ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ನಾವು ಇಲ್ಲಿ ತೃಪ್ತಿಯಿಂದ ಬದುಕಲು ಸಾಧ್ಯವಾಗದಿದ್ದರೆ, ಈ ಗ್ರಾಮದಲ್ಲಿ ಏಕೆ ವಾಸಿಸಬೇಕು? ಗ್ರಾಮದಲ್ಲಿ ಯಾವುದೇ ಸಹಕಾರವಿಲ್ಲದಿದ್ದರೆ ನಾವು ಬೇರೆ ಸ್ಥಳಕ್ಕೆ ಹೋಗುತ್ತೇವೆ. ಸರ್ಕಾರವು ನಮಗೆ ಭೂಮಿಯನ್ನು ಒದಗಿಸುವ ಬೇರೆ ಯಾವುದೇ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ನಾವು ಸಿದ್ಧರಿದ್ದೇವೆ " ಎಂದು ರಮೇಶ್ ಜಾಧವ್ ಹೇಳಿದ್ದಾರೆ.

ಇದನ್ನು ಓದಿ:Tokyo Olympics: ಮಹಿಳಾ ಹಾಕಿಯಲ್ಲೂ 'ಗೋಲ್ಡ್'​ ಕನಸು ಭಗ್ನ..ಇನ್ನು ಕಂಚಿಗಾಗಿ ಸೆಣಸಾಟ!

ಸತಾರ( ಮಹಾರಾಷ್ಟ್ರ): ಆರ್ಚರಿ ವಿಭಾಗದಲ್ಲಿ 2020 ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಪ್ರವೀಣ್​ ಜಾಧವ್ ಅವರ ಕುಟುಂಬ ಮನೆ ನವೀಕರಿಸುವ ವಿಚಾರವಾಗಿ ನೆರೆಯವರಿಂದ ಬೆದರಿಕೆ ಎದುರಿಸುತ್ತಿದೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದ ಸತಾರ ಜಿಲ್ಲೆಯ ಸರ್ದೆ ಹಳ್ಳಿಯಲ್ಲಿ ಜಾಧವ್ ಮೊದಲು ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ನಂತರ ಜಾಧವ್ ಪುಣೆಯ​ ಆರ್ಮಿ ಸ್ಪೋರ್ಟ್ಸ್​ ಇನ್​ಸ್ಟಿಟ್ಯೂಟ್​ಗೆ ಸೇರಿದ ನಂತರ, ಮಹಾರಾಷ್ಟ್ರ ಆಗ್ರೋ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಒದಗಿಸಿದ ಭೂಮಿಯಲ್ಲಿ ಶೀಟ್​ ಛಾವಣಿಯೊಂದಿಗೆ ಕಾಂಕ್ರೀಟ್ ಮನೆಯನ್ನು ನಿರ್ಮಿಸಿದರು.

ಇದೀಗ ಆ ಮನೆಯನ್ನು ನವೀಕರಣ ಮಾಡಲು ಹೊರಟಿರುವುದಕ್ಕೆ ಅಕ್ಕಪಕ್ಕದ ಮನೆಯವರು ಬೆದರಿಕೆ ಒಡ್ಡಿ ತಡೆದಿದ್ದಾರೆ ಎಂದು ​ಜಾಧವ್​ ಟೋಕಿಯೋದಿಂದ ಹಿಂದಿರುಗಿದ ನಂತರ ಆತನ ಕುಟುಂಬದವರು ಆತನಿಗೆ ವಿವಾದದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, ಮನೆಯ ನವೀಕರಣದ ಕುರಿತು ಅವರ ಕುಟುಂಬ ಮತ್ತು ನೆರೆಹೊರೆಯವರ ನಡುವಿನ ವಿವಾದವು ಇದೀಗ ಸ್ಥಳೀಯ ಆಡಳಿತವನ್ನು ತಲುಪಿದೆ ಎಂದು ತಿಳಿದು ಬಂದಿದೆ.

ಪ್ರವೀಣ್ ಜಾಧವ್​ ತಂದೆ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರ ನಮಗೆ ನೀಡಿರುವ ಜಾಗದಲ್ಲಿ ಆ ಮನೆಯನ್ನು ನಿರ್ಮಿಸಿದ್ದೇವೆ. ಆದರೂ ನಮ್ಮ ಅಕ್ಕಪಕ್ಕದ ಮನೆಯವರು ಮನೆಯನ್ನು ನವೀಕರಿಸಲು ಮತ್ತು ಕಟ್ಟಡ ನಿರ್ಮಿಸಲು ವಿರೋಧಿಸುತ್ತಿದ್ದಾರೆ. ಅಲ್ಲದೇ ನೆರೆಹೊರೆಯವರು ನಮ್ಮ ಮನೆಯನ್ನು ಹೊಡೆದು ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ನಾವು ಇಲ್ಲಿ ತೃಪ್ತಿಯಿಂದ ಬದುಕಲು ಸಾಧ್ಯವಾಗದಿದ್ದರೆ, ಈ ಗ್ರಾಮದಲ್ಲಿ ಏಕೆ ವಾಸಿಸಬೇಕು? ಗ್ರಾಮದಲ್ಲಿ ಯಾವುದೇ ಸಹಕಾರವಿಲ್ಲದಿದ್ದರೆ ನಾವು ಬೇರೆ ಸ್ಥಳಕ್ಕೆ ಹೋಗುತ್ತೇವೆ. ಸರ್ಕಾರವು ನಮಗೆ ಭೂಮಿಯನ್ನು ಒದಗಿಸುವ ಬೇರೆ ಯಾವುದೇ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ನಾವು ಸಿದ್ಧರಿದ್ದೇವೆ " ಎಂದು ರಮೇಶ್ ಜಾಧವ್ ಹೇಳಿದ್ದಾರೆ.

ಇದನ್ನು ಓದಿ:Tokyo Olympics: ಮಹಿಳಾ ಹಾಕಿಯಲ್ಲೂ 'ಗೋಲ್ಡ್'​ ಕನಸು ಭಗ್ನ..ಇನ್ನು ಕಂಚಿಗಾಗಿ ಸೆಣಸಾಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.