ETV Bharat / sports

'ಕುಡಿದ ನಶೆಯಲ್ಲಿದ್ದ ಆಟಗಾರನೋರ್ವ ನನ್ನನ್ನು ಬಾಲ್ಕನಿಯಿಂದ ನೇತಾಡಿಸಿದ್ದ': ಕ್ರಿಕೆಟಿಗ ಚಹಲ್

author img

By

Published : Apr 8, 2022, 5:12 PM IST

15ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿರುವ ಯಜುವೇಂದ್ರ ಚಹಲ್ ತಮ್ಮ ಜೀವನದಲ್ಲಿ ನಡೆದಿರುವ ಅಹಿತಕರ ಘಟನೆವೊಂದನ್ನು ಬಿಚ್ಚಿಟ್ಟಿದ್ದಾರೆ.

Yuzvendra Chahal's Shocking Revelation
Yuzvendra Chahal's Shocking Revelation

ಹೈದರಾಬಾದ್​: 15ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ಆರಂಭಗೊಂಡಿದೆ. ಇದರ ಮಧ್ಯೆ ಕೆಲ ಆಟಗಾರರ ಫನ್ನಿ ವಿಡಿಯೋಗಳು ಆಯಾ ಫ್ರಾಂಚೈಸಿಗಳ ಟ್ವಿಟ್ಟರ್​ ಅಕೌಂಟ್​ನಲ್ಲಿ ಹರಿದಾಡ್ತಿವೆ. ಈ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್​ ಸೇರಿಕೊಂಡಿರುವ ಲೆಗ್​ ಸ್ಪಿನ್ನರ್​ ಯಜುವೇಂದ್ರ ಚಹಲ್ ಯಾರಿಗೂ ಗೊತ್ತಿಲ್ಲದ ಸಂಗತಿವೊಂದನ್ನು ಇದೀಗ ಬಿಚ್ಚಿಟ್ಟಿದ್ದಾರೆ.

2013ರಲ್ಲಿ ಮುಂಬೈ ಇಂಡಿಯನ್ಸ್​ ಜೊತೆ ಇದ್ದಾಗ ಕುಡಿದ ಮತ್ತಿನಲ್ಲಿದ್ದ ಆಟಗಾರನೋರ್ವ ತನ್ನನ್ನು ಕಟ್ಟಡದ 15ನೇ ಮಹಡಿಯಿಂದ ನೇತಾಡಿಸಿದ್ದ ಎಂಬ ಅಚ್ಚರಿಯ ವಿಷಯ ಬಿಚ್ಚಿಟ್ಟರು. ಈ ವೇಳೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇನೆಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕೊರಿಯಾ ಓಪನ್​: ಸೆಮಿಫೈನಲ್​ಗೆ ಲಗ್ಗೆ ಹಾಕಿದ ಶ್ರೀಕಾಂತ್, ಸಿಂಧು

ರಾಜಸ್ಥಾನ ರಾಯಲ್ಸ್ ತಂಡದ ಇತರೆ ಆಟಗಾರರಾದ ಆರ್.ಅಶ್ವಿನ್ ಹಾಗೂ ಕರುಣ್ ನಾಯರ್ ಜೊತೆ ಯಜುವೇಂದ್ರ ಚಹಲ್​​ ತಮ್ಮ ಕಮ್​​ಬ್ಯಾಕ್​ ಸ್ಟೋರಿ ವಿವರಿಸುತ್ತಿದ್ದಾಗ ಈ ಘಟನೆ ನೆನೆದಿದ್ದಾರೆ. 'ಈ ಘಟನೆ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ. ಬೆಂಗಳೂರಿನಲ್ಲಿ ಪಂದ್ಯವೊಂದನ್ನು ಆಡಿದ್ದೆವು. ಇದಾದ ಬಳಿಕ ಗೆಟ್​ ಟುಗೆದರ್​​ ಆಯೋಜನೆ ಮಾಡಲಾಗಿತ್ತು. ಈ ವೇಳೆ ಓರ್ವ ಆಟಗಾರ ತುಂಬಾ ಮದ್ಯಪಾನ ಮಾಡಿದ್ದರು. ಅವರು ನನ್ನನ್ನು ಕರೆದುಕೊಂಡು ಹೋಗಿ, ಬಾಲ್ಕನಿಯಲ್ಲಿ ನೇತಾಕಿದ್ದರು. ಆ ವೇಳೆ ಇತರರು ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಇದಾದ ಬಳಿಕ ಹೊರಗಡೆ ಹೋದಾಗ ನಾವು ಎಷ್ಟೊಂದು ಜವಾಬ್ದಾರರಾಗಿರಬೇಕು ಎಂಬುದರ ಬಗ್ಗೆ ನನಗೆ ಮನವರಿಕೆಯಾಯಿತು ಎಂದು ತಿಳಿಸಿರುವ ಚಹಲ್​, ಆಟಗಾರನ ಹೆಸರು ಮಾತ್ರ ರಿವಿಲ್ ಮಾಡಿಲ್ಲ. ಸುಮಾರು 13 ವರ್ಷಗಳ ಕಾಲ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಯಜುವೇಂದ್ರ ಚಹಲ್ ಈ ಸಲದ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್​ ಸೇರಿಕೊಂಡಿದ್ದಾರೆ. ಈವರೆಗೆ ಆಡಿರುವ ಮೂರು ಪಂದ್ಯಗಳಿಂದ ಏಳು ವಿಕೆಟ್ ಪಡೆದುಕೊಂಡು ಗಮನ ಸೆಳೆದಿದ್ದಾರೆ.

ಹೈದರಾಬಾದ್​: 15ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ಆರಂಭಗೊಂಡಿದೆ. ಇದರ ಮಧ್ಯೆ ಕೆಲ ಆಟಗಾರರ ಫನ್ನಿ ವಿಡಿಯೋಗಳು ಆಯಾ ಫ್ರಾಂಚೈಸಿಗಳ ಟ್ವಿಟ್ಟರ್​ ಅಕೌಂಟ್​ನಲ್ಲಿ ಹರಿದಾಡ್ತಿವೆ. ಈ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್​ ಸೇರಿಕೊಂಡಿರುವ ಲೆಗ್​ ಸ್ಪಿನ್ನರ್​ ಯಜುವೇಂದ್ರ ಚಹಲ್ ಯಾರಿಗೂ ಗೊತ್ತಿಲ್ಲದ ಸಂಗತಿವೊಂದನ್ನು ಇದೀಗ ಬಿಚ್ಚಿಟ್ಟಿದ್ದಾರೆ.

2013ರಲ್ಲಿ ಮುಂಬೈ ಇಂಡಿಯನ್ಸ್​ ಜೊತೆ ಇದ್ದಾಗ ಕುಡಿದ ಮತ್ತಿನಲ್ಲಿದ್ದ ಆಟಗಾರನೋರ್ವ ತನ್ನನ್ನು ಕಟ್ಟಡದ 15ನೇ ಮಹಡಿಯಿಂದ ನೇತಾಡಿಸಿದ್ದ ಎಂಬ ಅಚ್ಚರಿಯ ವಿಷಯ ಬಿಚ್ಚಿಟ್ಟರು. ಈ ವೇಳೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇನೆಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕೊರಿಯಾ ಓಪನ್​: ಸೆಮಿಫೈನಲ್​ಗೆ ಲಗ್ಗೆ ಹಾಕಿದ ಶ್ರೀಕಾಂತ್, ಸಿಂಧು

ರಾಜಸ್ಥಾನ ರಾಯಲ್ಸ್ ತಂಡದ ಇತರೆ ಆಟಗಾರರಾದ ಆರ್.ಅಶ್ವಿನ್ ಹಾಗೂ ಕರುಣ್ ನಾಯರ್ ಜೊತೆ ಯಜುವೇಂದ್ರ ಚಹಲ್​​ ತಮ್ಮ ಕಮ್​​ಬ್ಯಾಕ್​ ಸ್ಟೋರಿ ವಿವರಿಸುತ್ತಿದ್ದಾಗ ಈ ಘಟನೆ ನೆನೆದಿದ್ದಾರೆ. 'ಈ ಘಟನೆ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ. ಬೆಂಗಳೂರಿನಲ್ಲಿ ಪಂದ್ಯವೊಂದನ್ನು ಆಡಿದ್ದೆವು. ಇದಾದ ಬಳಿಕ ಗೆಟ್​ ಟುಗೆದರ್​​ ಆಯೋಜನೆ ಮಾಡಲಾಗಿತ್ತು. ಈ ವೇಳೆ ಓರ್ವ ಆಟಗಾರ ತುಂಬಾ ಮದ್ಯಪಾನ ಮಾಡಿದ್ದರು. ಅವರು ನನ್ನನ್ನು ಕರೆದುಕೊಂಡು ಹೋಗಿ, ಬಾಲ್ಕನಿಯಲ್ಲಿ ನೇತಾಕಿದ್ದರು. ಆ ವೇಳೆ ಇತರರು ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಇದಾದ ಬಳಿಕ ಹೊರಗಡೆ ಹೋದಾಗ ನಾವು ಎಷ್ಟೊಂದು ಜವಾಬ್ದಾರರಾಗಿರಬೇಕು ಎಂಬುದರ ಬಗ್ಗೆ ನನಗೆ ಮನವರಿಕೆಯಾಯಿತು ಎಂದು ತಿಳಿಸಿರುವ ಚಹಲ್​, ಆಟಗಾರನ ಹೆಸರು ಮಾತ್ರ ರಿವಿಲ್ ಮಾಡಿಲ್ಲ. ಸುಮಾರು 13 ವರ್ಷಗಳ ಕಾಲ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಯಜುವೇಂದ್ರ ಚಹಲ್ ಈ ಸಲದ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್​ ಸೇರಿಕೊಂಡಿದ್ದಾರೆ. ಈವರೆಗೆ ಆಡಿರುವ ಮೂರು ಪಂದ್ಯಗಳಿಂದ ಏಳು ವಿಕೆಟ್ ಪಡೆದುಕೊಂಡು ಗಮನ ಸೆಳೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.